ಬದುಕಿಗೆ  ಗಾಂಭೀರ್ಯದ ಕ್ಷಣದಲ್ಲಿ ವಿವೇಕಯುತ ನಿರ್ಧಾರ /ವರ್ತನೆ,   ಹಾಗು ತಿಳಿ ಹಾಸ್ಯ
ಎರಡೂ ಬೇಕು.  ಬಲು ಅರ್ಥಪೂರ್ಣವಾಗಿದೆ.  ಮಹಾಭಾರತದ ಉತ್ತಮ ಪ್ರಸಂಗವೊಂದನ್ನು ಎಲ್ಲರಿಗೆ
ನೆನಪುಮಾಡಿದ್ದಿರಿ .
ಧನ್ಯವಾದಗಳು ಮೇಡಂ

2017-01-09 10:24 GMT+05:30 Sameera samee <[email protected]>:

> ಶ್ರೀಕೃಷ್ಣಾಯನಮ
>
>
> ಮಹಾಭಾರತ ಯುದ್ಧದ ನಂತರ ಎಲ್ಲಾ ಕಾರ್ಯಗಳೂ ಮುಗಿದು ಶ್ರೀಕೃಷ್ಣ ತನ್ನರಮನೆಗೆ ಬಂದಾಗ ದೇವಿ
> ರುಕ್ಮಿಣಿ ಪತಿಯನ್ನು ಎದುರ್ಗೊಂಡು ಈ ರೀತಿ ಪ್ರಶ್ನಿಸುತ್ತಾಳೆ. " ಪಿತಾಮಹ ಭೀಷ್ಮರು ಮತ್ತು
> ಗುರು ದ್ರೋಣರು ಅಷ್ಟು ಪ್ರಾಮಾಣಿಕರೂ ಸಜ್ಜನರೂ ಆಗಿದ್ದರೂ ಸಹ ಅವರು ಕೊಲ್ಲಲ್ಪಟ್ಟರು,
> ಮತ್ತು ನೀನೂ ಅದರ ಭಾಗವಾಗಿದ್ದೆ‌. ಯಾಕೆ ಹೀಗೆ ? "
>
> ಕೇಶವ ತನ್ನ ಎಂದಿನ ಮುಗುಳ್ನಗೆಯೊಂದಿಗೆ ಪತ್ನಿಯ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು
> ಪ್ರಯತ್ನಿಸುತ್ತಾನೆ. ಆದರೆ ರುಕ್ಮಿಣೀದೇವಿ ಒತ್ತಾಯಿಸಿದಾಗ ಗಂಭೀರವಾಗಿ ಉತ್ತರಿಸುತ್ತಾನೆ.
> " ಸಂಶಯವೇ ಇಲ್ಲ, ಅವರಿಬ್ಬರೂ ಜೀವನದುದ್ದಕ್ಕೂ ಸಜ್ಜನಿಕೆ, ಪ್ರಾಮಾಣಿಕತೆಯ ಪರಮಾವಧಿಯನ್ನು
> ತಲುಪಿದವರು. ಆದರೆ ಅವರು ಮಾಡಿದ ಒಂದು ತಪ್ಪು ಅವರ ಎಲ್ಲಾ ಪುಣ್ಯ, ಪ್ರಾಮಾಣಿಕತೆಯನ್ನು
> ನಾಶಮಾಡಿತು. "
>
> ರುಕ್ಮಿಣೀದೇವಿ :- ಏನದು ? ಯಾವ ತಪ್ಪು ?
>
> ಶ್ರೀಕೃಷ್ಣ :-  " ಒಬ್ಬ ಸ್ತ್ರೀ ಅಸಹಾಯಕಳಾಗಿ ಮಾನಭಂಗಕ್ಕೆ ಒಳಗಾಗುತ್ತಿದ್ದ
> ಸಂದರ್ಭದಲ್ಲಿ ಆ ಸಭೆಯಲ್ಲಿ ಆ ಇಬ್ಬರೂ ಹಿರಿಯರೆನಿಸಿಕೊಂಡವರು ಉಪಸ್ಥಿತರಿದ್ದರು. ಆ
> ಹೀನಕೃತ್ಯವನ್ನು ನಡೆಯದಂತೆ ತಡೆಯುವ ಎಲ್ಲಾ ಅಧಿಕಾರವೂ ಸಾಮರ್ಥವೂ ಅವರಿಗಿತ್ತು‌. ಆದರೂ
> ಅವರು ತಡೆಯಲಿಲ್ಲ, ಬದಲಿಗೆ ನಿಸ್ಸಹಾಯಕರಂತೆ ಕುಳಿತರು. ಇದೊಂದೇ ಅಪರಾಧ ಅವರ ಎಲ್ಲ
> ಪುಣ್ಯವನ್ನೂ ಪ್ರಾಮಾಣಿಕತೆಯನ್ನೂ ನಾಶ ಮಾಡಿತು. "
>
> ರುಕ್ಮಿಣೀದೇವಿ :- " ಸರಿ, ಮತ್ತೆ ಕರ್ಣ? "
> ಕರ್ಣನ ದಾನಶೂರತೆ ಎಲ್ಲರಿಗೂ ಗೊತ್ತಿರುವಂಥದ್ದೇ. ಅವನ ಮನೆಬಾಗಿಲಿಗೆ ಯಾರೇ ಬಂದರೂ
> ಬರಿಕೈಯಲ್ಲಿ ಹಿಂದಿರುಗುತ್ತಿರಲಿಲ್ಲ. ಇಂಥವನು ಏಕೆ ಕೊಲ್ಲಿಸಿದೆ ? "
>
> ಕೇಶವ :- " ಹೌದು, ಕರ್ಣನ ಮನೆಯಿಂದ ಯಾರೊಬ್ಬರೂ ಬರಿಕೈಯಿಂದ ಹಿಂತಿರುಗಿಲ್ಲ. ಆದರೆ ಬಾಲಕ
> ಅಭಿಮನ್ಯು ಇಂಥಾ ಅತಿರಥ ಮಹಾರಥರಿರುವ ಸೇನೆಯ ವಿರುದ್ಧ ಏಕಾಂಗಿಯಾಗಿ ಯಶಸ್ವೀ ಹೋರಾಟ ನಡೆಸಿ,
> ಕೊನೆಗೆ ಸಾಯುವ ಸ್ಥಿತಿ ತಲುಪಿದಾಗ ಹತ್ತಿರದಲ್ಲೇ ಇದ್ದ ಕರ್ಣನಲ್ಲಿ ನೀರು ಕೇಳಿದ. ಕರ್ಣನ
> ಬಳಿಯಲ್ಲೇ ಒಂದು ಹಳ್ಳದಲ್ಲಿ ಸ್ವಚ್ಛವಾದ ಕುಡಿಯುವ ನೀರಿತ್ತು. ದುರ್ಯೋಧನನ ಸ್ನೇಹಬಂಧಕ್ಕೆ
> ಸಿಲುಕಿದ ಕರ್ಣ ಸಾಯುತ್ತಿರುವ ವ್ಯಕ್ತಿಗೆ ನೀರು ಕೊಡಲಿಲ್ಲ‌. ದಾನಶೂರತೆಯಿಂದ ಜೀವನಪರ್ಯಂತ
> ತಾನು ಗಳಿಸಿದ ಪುಣ್ಯವನ್ನು ತನ್ನ ಕೈಯಾರೆ ನಾಶಮಾಡಿಕೊಂಡ. ಕೊನೆಗೆ ಅದೇ ಹಳ್ಳದಲ್ಲಿ ರಥದ
> ಚಕ್ರ ಸಿಲುಕಿ ಕರ್ಣ ಕೊಲ್ಲಲ್ಪಟ್ಟ. "
> ನಮ್ಮ ಒಂದೇ ಒಂದು ನಿರ್ಲಕ್ಷ್ಯದ ಪ್ರಮಾದ ನಮ್ಮ ಎಲ್ಲಾ ಪುಣ್ಯಗಳನ್ನೂ ನಾಶ ಮಾಡಬಲ್ಲುದು.
> ಜೀವನಪರ್ಯಂತ ನಾವು ಗಳಿಸಿದ ಎಲ್ಲಾ ಗೌರವವನ್ನು ಮಣ್ಣುಮುಕ್ಕಿಸಬಹುದು.
>
> ಅಭಿವೃದ್ಧಿಯ ಪಥದಲ್ಲಿ ಕರ್ಮಯೋಗದ ಒಂದು ಸಣ್ಣ ಉದಾಹರಣೆಯಿದು. ಆದ್ದರಿಂದ ಪಾಪಪುಣ್ಯಗಳ
> ಸರಿಯಾದ ಅರಿವಿನೊಂದಿಗೆ ಕರ್ಮಗಳನ್ನು ಆಚರಿಸೋಣ ಮತ್ತು ಅದನ್ನು ಪರಮಪುರುಷನ ಪದತಲದಲ್ಲಿ
> ಅರ್ಪಿಸೋಣ. ಆ ಮೂಲಕ ಭಗವಂತನ ಕಾರುಣ್ಯ ಪಡೆಯೋಣ
>
> ನಕ್ಕು ಬಿಡಿ. ಜೀವನದಲ್ಲಿ ಸ್ವಲ್ಪ ಇರಲಿ ಹಾಸ್ಯ
> ಅತಿಯಾದರೆ ಅಮೃೃತವೂ ವಿಷ.
>
> ಒಬ್ಬೊಬ್ಬರ ಹೆಂಡತಿಯರು ಹೇಗೇಗೆ ತಮ್ಮ ತಮ್ಮ ಗಂಡನ ಜೊತೆ ಜಗಳವಾಡುತ್ತಾರೆ ಗೊತ್ತಾ…!!
> ಪೈಲೆಟ್ ನ ಹೆಂಡತಿ:
> ಜಾಸ್ತಿ ಮೇಲೆ ಹಾರಬೇಡಿ
>
> ಟೀಚರ್ ನ ಹೆಂಡತಿ:
> ನನಗೆ ಪಾಠ ಕಲಿಸಬೇಡಿ
>
> ಪೈಂಟರ್ ನ ಹೆಂಡತಿ:
> ನನಗೆ ಬಣ್ಣ ಹಚ್ಚಬೇಡಿ
>
> ದೋಬಿಯ ಹೆಂಡತಿ:
> ಜಾಸ್ತಿ ವದರಬೇಡಿ
>
> ಆಕ್ಟರ್ ನ ಹೆಂಡತಿ:
> ಸುಮ್ನೆ ನಾಟಕ ಆಡಬೇಡಿ
>
> ಡೆಂಟಿಸ್ಟ್ ನ ಹೆಂಡತಿ:
> ಜಾಸ್ತಿ ಮಾತನಾಡುದ್ರೆ ಹಲ್ಲು ಮುರಿದು ಹೋಗುತ್ತೆ
>
> ಚಾರ್ಟರ್ಡ್ ಅಕೌಂಟೆಂಟ್ ಹೆಂಡತಿ:
> ಲೆಕ್ಕ ಮಾಡಿ ಮಾತಾಡಿ
>
> ಇಂಜಿನಿಯರ್ ನ ಹೆಂಡತಿ:
> ಎಲ್ಲಾ ಪಾರ್ಟ್ ಸಪರೇಟ್ ಆಗುತ್ತೆ
>
> ಆರ್ಕಿಟೆಕ್ಟ್ ನ ಹೆಂಡತಿ:
> ಸರಿಯಾಗಿ ಇದ್ದರೆ ಸರಿ ಇಲ್ಲದಿದ್ದರೆ ಮುಖದ ಡಿಸೈನ್ ಚೇಂಜ್ ಮಾಡಿ ಬಿಡ್ತಿನಿ.
>
> ಲಾಯರ್ ನ ಹೆಂಡತಿ:
> ಹೆಚ್ಚು ವಾದ ಮಾಡಬೇಡಿ, ನೀವು ಹೇಳೋದನ್ನು ಕೇಳೋಕೆ ನಾನೇನೂ ನಿಮ್ಮ ಜಡ್ಜ್ ಅಲ್ಲ
>
> ಡ್ರೈವರ್ ನ ಹೆಂಡತಿ:
> ನಿಮ್ಮ ಮಾತಿಗೆ ಸ್ವಲ್ಪ ಬ್ರೇಕ್ ಹಾಕಿ
>
> ರಾಜಕಾರಣಿಗಳ ಹೆಂಡತಿ:
> ಹೆಚ್ಚು ಆಶ್ವಾಸನೆ ಕೊಡಬೇಡಿ
>
> ಹಂಗ್ ಇರಲಿ ಪರವಾಗಿಲ್ಲ
> ಆದರೆ
>
> ಮಾರ್ಕೆಟಿಂಗ್ ನವರ ಹೆಂಡತಿ:
> ಜಾಸ್ತಿ ಮಾತಾಡುದ್ರೆ OLX ನಲ್ಲಿ ಮಾರಿ ಬಿಡ್ತಿನಿ.
> ನಗಿರಿ.. ನಗಿಸಿರಿ..‌..
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAP9Vewo0QiURwjzjmy2fh_CZHjMp5jwye_GErriKVtehe0uzxw%
> 40mail.gmail.com
> <https://groups.google.com/d/msgid/kannadastf/CAP9Vewo0QiURwjzjmy2fh_CZHjMp5jwye_GErriKVtehe0uzxw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>



-- 
*ಸುಂದರೇಶ ಮೂರ್ತಿ. ಟಿ . ವಿ *
                                            *ಶಿಕ್ಷಕರು *
ಸರ್ಕಾರಿ ಪ್ರೌಢ ಶಾಲೆ  ಲಕ್ಷ್ಮೀ ಸಾಗರ ,
ಪಾಂಡವಪುರ ತಾಲೂಕು , ಮಂಡ್ಯ  ಜಿಲ್ಲೆ .

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CADDbdW0A6tyW%2Ba9BnMikdbxm%2BAvy2%3DxwgzTzUHNyHf1ZuqYQLQ%40mail.gmail.com.
For more options, visit https://groups.google.com/d/optout.

Reply via email to