ಸಮೀರ ಅವರೇ ಪಂ. ರೇವಣಾರಾಧ್ಯರು ತಿಳಿಸಿರುವ ಸಂಕ್ರಾತಿ ಹಬ್ಬದ ವಿಶೇಷತೆ,ಮಹತ್ವಗಳ ವಿಚಾರವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಹಾಗೂ ಸಂಕ್ರಾತಿ ಹಬ್ಬದ ಶುಭಾಶಯಗಳು. On Jan 14, 2018 12:15 PM, "Sameera samee" <mehak.sa...@gmail.com> wrote:
> *ಮಕರ ಸಂಕ್ರಮಣ ನಿರ್ಣಯ* > > ದಿನಾಂಕ *14-01-2018* ಭಾನುವಾರ *ಧನುರ್ಮಾಸ ಸಮಾಪ್ತಿ* ಹಾಗೂ *ಭೋಗಿ* ಹಬ್ಬವನ್ನು > ಆಚರಿಸಿ.ಈ ದಿನವೇ *ಪ್ರದೋಷ ಸಹ*ಬಂದಿದೆ ಬಹಳ ವಿಶೇಷ *ಶಿವನಿಗೆ* ಪ್ರದೋಷ ಕಾಲದಲ್ಲಿ > ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. > > ದಿನಾಂಕ *14-01-2018* ಭಾನುವಾರ *ಮಧ್ಯಾಹ್ನ 2:00* ಗಂಟೆಯಿಂದ *ಉತ್ತರಾಯಣ ಪುಣ್ಯ* > ಆರಂಭವಾಗುತ್ತದೆ. > > ದಿನಾಂಕ *15-01-2018* ರಂದು *ಸೋಮವಾರ ಬೆಳಿಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ* > ಉತ್ತರಾಯಣ ಪರ್ವಪುಣ್ಯ ಕಾಲ ಇರುವುದರಿಂದ *ನದಿ ಸ್ನಾನ,* *ತಿಲದಾನ* *ತಿಲ ತರ್ಪಣ* > *ತಿಲಭಕ್ಷಣ* *ತಿಲ ತರ್ಪಣ ದಿಗಳಿಂದ *ಸುಖ ಸೌಖ್ಯ* > > ಆದ್ದರಿಂದ ಮಕರ ಸಂಕ್ರಮಣವನ್ನು ಸೋಮವಾರ ದಿವಸವೇ ಮಾಡಬೇಕು. > ಸಡಗರದ ಮಕರ ಸಂಕ್ರಮಣ 2018; ಎಳ್ಳು-ಬೆಲ್ಲ ತಿಂದು ಒಳ್ಳೇ ಮಾತನಾಡಿ. > ನಮ್ಮ ಋಷಿಮುನಿಗಳ ಪ್ರಕಾರ ಆರು ವೇದಗಳಲ್ಲಿ ಜ್ಯೋತಿಷ್ಯವು ಒಂದು. ಜ್ಯೋತಿಷ್ಯವನ್ನು ವೇದಗಳ > ಕಣ್ಣೆಂದು ಗುರುತಿಸುತ್ತಾರೆ. ವೇದಗಳ ಕಾಲದಿಂದಲೂ ಶುಭ ಕಾರ್ಯಗಳಿಗೆ ಮೂಹೂರ್ತಾದಿ ಕಾಲವನ್ನು > ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ ಎಲ್ಲವನ್ನು ಸೂರ್ಯನ ಚಲನದಿಂದ > ನಿರ್ಧರಿಸುತ್ತಿದ್ದರು. ಸೂರ್ಯನು ಒಂದು ರಾಶಿಯಲ್ಲಿ ಒಂದು ತಿಂಗಳು ಇರುತ್ತಾನೆ. > ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಾಂತಿ ಕಾಲ > ಎನ್ನುವರು. (ಅವುಗಳು ಮೇಷ ಸಂಕ್ರಾಂತಿ-ವಿಷುವತ್ ಪುಣ್ಯಕಾಲ, ವೃಷಭ ಸಂಕ್ರಾಂತಿ- ವಿಷ್ಣುಪಾದ > ಪುಣ್ಯಕಾಲ, ಮಿಥುನ ಸಂಕ್ರಾಂತಿ -ಸಾಡೆಸಾತಿ ಪುಣ್ಯಕಾಲ, ಕಟಕ ಸಂಕ್ರಾಂತಿ, ದಕ್ಷಿಣಾಯನ > ಪುಣ್ಯಕಾಲ, ಸಿಂಹ ಸಂಕ್ರಾಂತಿ-ವಿಷ್ಣುಪಾದ ಪುಣ್ಯಕಾಲ, ಕನ್ಯಾ ಸಂಕ್ರಾಂತಿ -ಸಾಡೆಸಾ > ಪುಣ್ಯಕಾಲ, ತುಲಾ ಸಂಕ್ರಾಂತಿ-ವಿಷುವತ್ ಪುಣ್ಯಕಾಲ, ವೃಶ್ಚಿಕ ಸಂಕ್ರಾಂತಿ-ವಿಷ್ಣುಪಾದ > ಪುಣ್ಯಕಾಲ, ಧನಸ್ಸು ಸಂಕ್ರಾಂತಿ -ಸಾಡೆಸಾತಿ ಪುಣ್ಯಕಾಲ, ಮಕರ ಸಂಕ್ರಾಂತಿ-ಉತ್ತರಾಯಣ > ಪುಣ್ಯಕಾಲ, ಕುಂಭ ಸಂಕ್ರಾಂತಿ-ವಿಷ್ಣಪಾದ ಪುಣ್ಯಕಾಲ, ಮೀನ ಸಂಕ್ರಾಂತಿ -ಸಾಡೆಸಾತಿ > ಪುಣ್ಯಕಾಲವೆಂದು ಪ್ರಸಿದ್ದಿಯಗಿದೆ ) > ವಿಷ್ಣುಪಾದ, ಸಾಡೆಸಾತಿ, ವಿಷ್ಣವತ್, ದಕ್ಷಿಣಾಯನ- ಉತ್ತರಾಯಣ ಪುಣ್ಯಕಾಲಗಳು ಎಂದು > ವಿಂಗಡಿಸಿರುವರು. ಅವುಗಳಲ್ಲಿ ವಿಷ್ಣುಪಾದಕ್ಕಿಂತಲೂ ಸಾಡೆಸಾತಿ ಪುಣ್ಯಕಾಲ ಶ್ರೇಷ್ಠವಾಗಿದೆ. > ಸಾಡೆಸಾತಿಕ್ಕಿಂತಲೂ ವಿಷುವತ್ ಪುಣ್ಯಕಾಲ ಶ್ರೇಷ್ಠವಾಗಿದೆ. ವಿಷುವತ್ ಪುಣ್ಯಕಾಲಕ್ಕಿಂತಲೂ > ಆಯನ ಪುಣ್ಯಕಾಲ ಶ್ರೇಷ್ಠವಾಗಿದೆ. ಅದರಲೂ ದಕ್ಷಿಣಾಯನ ಕಾಲಕ್ಕಿಂತಲೂ ಉತ್ತರಾಯಣ ಕಾಲ > ಶ್ರೇಷ್ಠವಾಗಿದೆ. ಅಂದರೆ ಸೂರ್ಯ ಮಕರ ರಾಶಿಗೆ ಬರುವ ಪುಣ್ಯಕಾಲ ಶ್ರೇಷ್ಠ. > ಉತ್ತರ ಎಂಬ ಪದಕ್ಕೆ ಶ್ರೇಷ್ಠ ಎಂಬ ಅರ್ಥವಿದ್ದು ಇದನ್ನು ಶ್ರೇಷ್ಠವಾದ ದಾರಿ ಎಂದೂ ಕೂಡಾ > ಅರ್ಥೈಸಬಹುದು ಇದರ ಬಗ್ಗೆ ಭಗವದ್ಗೀತೆಯ 8ನೇ ಅಧ್ಯಾಯದ 24ನೇ ಶ್ಲೋಕದಲ್ಲಿ ಈ ರೀತಿ > ಉಲ್ಲೇಖವಿದೆ. > > ಅಗ್ನಿ ಜ್ಯೋರ್ತಿರ್ ಅಹ:ಶುಕ್ಲ:ಷಣ್ವೈಸ ಉತ್ತರಾಯಣಂ | > ತತ್ರ ಪ್ರಯತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾ: || > > ಅಂದರೆ ಈ ಕಾಲದಲ್ಲಿ ಎಲ್ಲಾ ಕಾರ್ಯಗಳು ಹೆಚ್ಚು ಶ್ರೇಯಸ್ಕರವಾಗಿ ನಡೆಯುವುದು. ಸ್ವರ್ಗದ > ಬಾಗಿಲು ತೆರೆದಿರುವುದು. ಮುಕ್ತಿಯನ್ನು ಹೊಂದಲಿರುವ ಸೂತ್ರದ ಬಗ್ಗೆ ಈ ಶ್ಲೋಕದಲ್ಲಿ > ವಿವರಿಸಲಾಗಿದೆ. ಅರ್ಥಾತ್, ಅಗ್ನಿ, ಜ್ಯೋತಿ, ಹಗಲು ಶುಕ್ಲ ಪಕ್ಷ ಉತ್ತರಾಯಣದ ಆರು > ತಿಂಗಳುಗಳಲ್ಲಿ ಬ್ರಹ್ಮವಿದರಾದ ದೂಗಿಗಳ ಪ್ರಾಣಗಳು ಬ್ರಹ್ಮದಲ್ಲಿ ವಿಲೀನವಾಗುವುದು. ಇದು > ಮುಕ್ತಿಯ ಕಡೆಗಿರುವ ಯಾತ್ರೆಯಾಗಿದೆ. > > ಮಹಾಭಾರತದಲ್ಲಿ ಇಚ್ಛಾ ಮರಣಿಯಾಗಿದ್ದ ಭೀಷ್ಮರು ಈ ಉತ್ತರಾಯಣಕ್ಕಾಗಿ ಕಾದಿದ್ದರು. ಮನುಷ್ಯರ > ಒಂದು ವರ್ಷವು ದೇವತೆಗಳ ಒಂದು ದಿನಕ್ಕೆ ಸಮ. ಆ ದಿನ ಹಗಲು-ರಾತ್ರಿಯನ್ನು ಒಳಗೊಂಡಿರುತ್ತದೆ. > ಭೂಮಿಯಲ್ಲಿ ದಕ್ಷಿಣಾಯನವಿದ್ದಾಗ ದೇವಲೋಕದಲ್ಲಿ ರಾತ್ರಿ. ದೇವತೆಗಳು > ನಿದ್ರಿಸುತ್ತಿರುತ್ತಾರೆ. ಪಿತೃಗಳ ಜಾಗೃತರಾಗಿರುತ್ತಾರೆ. ಹಾಗಾಗಿ ಈ ಅವಧಿ ಪಿತೃಯನ ನಮಗೆ > ಉತ್ತರಾಯಣವಾದಾಗ ದೇವತೆಗಳಿಗೆ ಹಗಲು . ಅವರು ಜಾಗೃತವಾಗಿರುವ ಕಾಲ ಹಾಗಾಗಿ ಉತ್ತರಾಯಣದಲ್ಲಿ > ಸ್ವರ್ಗದ ಬಾಗಿಲು ತೆರೆದಿರುವುದರಿಂದ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ. > ಆದ್ದರಿಂದ ಭೀಷ್ಮರು ಉತ್ತರಾಯಣ ಬರುವವರಿಗೂ ಜೀವ ಹಿಡಿದಿದ್ದರು. > > ಖಗೋಳಶಾಸ್ತ್ರದ ಪ್ರಕಾರ: > ಸಾಮಾನ್ಯವಾಗಿ ಸೂರ್ಯೋದಯ ಪೂರ್ವದಲ್ಲಿ, ಸೂರ್ಯಾಸ್ತಮಾನ ಪಶ್ಚಿಮದಲ್ಲಿ ಎಂದು ಹೇಳುವುದಾದರೂ > ಯಾವುದೇ ಸ್ಥಳದಲ್ಲಿ ಕರಾರುವಕ್ಕಾಗಿ ಪೂರ್ವದಲ್ಲೇ ಸೂರ್ಯೋದಯ. ಪಶ್ಚಿಮದಲ್ಲೇ > ಸೂರ್ಯಾಸ್ತಮಾನವಾಗುವುದು ವರ್ಷದಲ್ಲಿ ಎರಡೇ ದಿನಗಳಂದು. ಆ ದಿನಗಳನ್ನು ಈಕ್ವಿನಾಕ್ಸ್ ಎಂದು > ಕರೆಯುತ್ತಾರೆ. ಅಂದು ಹಗಲು-ಇರಳು ಸಮವಾಗಿರುವುದು ವರ್ಷದ ಉಳಿದ ದಿನಗಳಲ್ಲಿ ಹಗಲಿರುಳುಗಳ > ಪಾಲು ಸಮವಾಗಿರುವುದಿಲ್ಲ. > > ಈಕ್ವಿನಾಕ್ಸ್ ದಿವಸಗಳ ಹೊರತಾಗಿ ಸೂರ್ಯನ ಉದಯ ಪೂರ್ವದ ಬಲಕ್ಕೆ (ಉತ್ತರಕ್ಕೆ) ಅಥವಾ > ಎಡಕ್ಕೆ (ದಕ್ಷಿಣಕ್ಕೆ) ಆಗುತ್ತದೆ. ಸೂರ್ಯನು 6 ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುವ > ಕಾರಣ ಅದನ್ನು ಉತ್ತರಾಯಣ ಕಾಲ ಎನ್ನುವರು. ವಾತಾವರಣದಲ್ಲಿ ಬದಲಾವಣೆಗಳಾಗುತ್ತದೆ.ಹಗಲಿನ > ಅವಧಿ ಹೆಚ್ಚು ಇರಳಿನ ಅವಧಿ ಕಡಿಮೆಯಗುತ್ತಾ ಹೋಗುತ್ತದೆ. ಚಳಿಯೂ ಕಡಿಮೆಯಗುತ್ತಾ ಹೋಗಿ > ವಾತಾವರಣ ಉಲ್ಲಾಸದಾಯಕವಾಗಿರುತ್ತದೆ. ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ > ಸಂಕ್ರಾಂತಿ ಬರುವುದು. > > ಆಚರಣೆ: > ಸೂರ್ಯದೇವನು ತನ್ನ ಏಳು ಕುದುರೆಗಳಿಂದ ಎಳೆಯಲ್ಪಡುವ ಭವ್ಯ ರಥದಲ್ಲಿ ಮಕರ ರಾಶಿಗೆ > ಪ್ರವೇಶಿಸುವ ಕಾಲವೇ ಮಕರ ಸಂಕ್ರಾಂತಿ ಹಬ್ಬ. ಸಂಕ್ರಾಂತಿಯ ನಾಯಕ ಬೆಳಕು ನೀಡುವ > ಸೂರ್ಯನಾದರೆ. ನಾಯಕಿ ಸಸ್ಯ ಬೆಳೆಯಲು ಅನುವು ಮಾಡುವ ಭೂಮಿತಾಯಿ. ಹಾಗೂ ವ್ಯವಸಾಯಕ್ಕೆ ಸಹಾಯ > ಮಾಡುವ ದನಕರು. ಯಂತ್ರಗಳು ಪೋಷಕ ನಟರು. ಸಂಕ್ರಾಂತಿ ಹಬ್ಬದ ಹಿಂದಿನ ದಿನವೇ ಭೋಗಿ ಹಬ್ಬ, > ಅಂದು ಹಳೆಯದನ್ನು ತೊರೆದು ಹೊಸದನ್ನು ಪಡೆದು ಸಂತೋಷಗೊಂಡು ಸಡಗರದಿಂದ ಮನೆಯನ್ನು > ಶುದ್ದಿಗೊಳಿಸುವುದು. ಮನೆ ಮಂದಿ ಎಲ್ಲಾ ಎಳ್ಳು ಎಣ್ಣೆ ಸ್ನಾನ ಮಾಡಿ ನೂತನ ವಸ್ತ್ರಗಳನ್ನು > ಧರಿಸುವುದು. ಅಂದು ಅಕ್ಕಿ ರೊಟ್ಟಿ, ಸಿಹಿ ಕುಂಬಳಕಾಯಿ ಪಲ್ಯ, ಮನೆ ಅವರೆಕಾಯಿ ಪಲ್ಯ > ಭೋಜನದಲ್ಲಿ ಪ್ರಮುಖವಾಗಿರುವುದು. > > ಸಂಕ್ರಾಂತಿ ಹಬ್ಬಕ್ಕೆ ಪ್ರತ್ಯೇಕವಾದ ಯಾವುದೇ ಪೂಜಾವಿಧಾನ ವ್ರತವಿಲ್ಲ. ಒಂದು ವಾರದಿಂದಲೇ > ಮಹಿಳೆಯರು ಸಡಗರದಿಂದ ತಯಾರಿಸಿದ ಸಕ್ಕರೆ ಅಚ್ಚು, ಹುರಿದ ಬಿಳಿ ಎಳ್ಳು ,ಸಿಪ್ಪೆತೆಗೆದ > ಕಡಲೇಕಾಯಿ ಬೀಜ, ಬೆಲ್ಲ ಕೊಬ್ಬರಿ, ಹುರಿಗಡಲೆ ಈ ಐದು ಸಾಮಗ್ರಿಗಳನ್ನು ಸರಿಯಾದ > ಪ್ರಮಾಣದಲ್ಲಿ ಮಿಶ್ರಮಾಡಿ ದೇವರಿಗೆ ಕಬ್ಬು, ಬಾಳೆಹಣ್ಣುಗಳ ಜೊತೆ ನೈವೇದ್ಯ ಮಾಡುವರು ಹಾಗೂ > ಹೊಸ ಧಾನ್ಯ , ಎಳ್ಳು, ಕುಂಬಳಕಾಯಿ, ಹತ್ತಿ ಸಜ್ಜೆ ,ವಸ್ತ್ರವನ್ನು ಪುರೋಹಿತರಿಗೆ ಕೊಟ್ಟು > ನಮಸ್ಕಾರ ಮಾಡಿ ಅವರ ಅಶೀರ್ವಾದ ಪಡೆಯುತ್ತಾರೆ. ದನಕರುಗಳನ್ನು ವಿಶೇಷವಾಗಿ ಸಿಂಗರಿಸಿ > ಮನೆಯಲ್ಲಿ ಮಾಡಿದ ವಿಶೇಷ ತಿನಿಸುಗಳನ್ನು ಅವುಗಳಿಗೆ ತಿನ್ನಿಸುತ್ತಾರೆ. ವೈಭವದ > ಮೆರವಣಿಗೆಯಲ್ಲಿ ಅವುಗಳನ್ನು ಊರೆಲ್ಲಾ ತಿರುಗಾಡಿಸುತ್ತಾರೆ. ವರ್ಷವಿಡೀ ರೈತನೊಂದಿಗೆ > ಬಿಡುವಿಲ್ಲದೆ ದುಡಿದ ಆ ಪ್ರಾಣಿಗಳಿಗೆ ಒಂದೆರಡು ದಿನಗಳು ವಿರಾಮವೂ ದೊರೆಯುತ್ತದೆ. ಈ ರೀತಿ > ದನಕರುಗಳಿಗೂ ಗೌರವ ನೀಡುವರು. ಮನೆಯ ಹಿರಿಯರು (ತಂದೆ ಅಥವಾ ತಾಯಿ ಇಲ್ಲದವರು) > ಪಿತೃದೇವತೆಗಳಿಗೆ ಪರ್ವಕಾಲದಲ್ಲಿ ಎಳ್ಳನಿಂದ ತರ್ಪಣ ನೀಡುವು ಅಂದಿನ ವಿಶೇಷ ಕಾರ್ಯಗಳಲ್ಲಿ > ಒಂದು. > > ಕೆಲವು ಪ್ರದೇಶಗಳಲ್ಲಿ ಪವಿತ್ರ ಸ್ಥಳಗಳಾದ ಪ್ರಯಾಗ, ಹರಿದ್ವಾರ್ , ಉಜ್ಜೈನಿ, ನಾಸಿಕ > ಮೂದಲಾದೆಡೆಗಳಲ್ಲಿ ವಿಶೇಷ ಮೇಳಗಳು ನಡೆಯುತ್ತದೆ. 12 ವರುಷಕ್ಕೊಮ್ಮೆ ಬರುವ ಕುಂಭಮೇಳ > ಹರಿದ್ವಾರದಲ್ಲಿ ನಡೆಯುತ್ತದೆ. > > > ಎಳ್ಳಿನ ವಿಶೇಷತೆ: > ಸಂಕ್ರಾಂತಿಯ ಆಚರಣೆಯಲ್ಲಿ ಎಳ್ಳು ಬೆಲ್ಲದ ಸೇವನೆಯು ಆರೋಗ್ಯಕರವಾಗಿರುತ್ತದೆ. ಎಳ್ಳಿಗೆ > ಶಾಖವನ್ನು ಮಾಡುವ ಶಕ್ತಿಯಿರುವುದರಿಂದಲೇ ಚಳಿಗಾಲದಲ್ಲಿ ಇದರ ಸೇವನೆ ಉತ್ತಮ. ಬರಿಯ ಎಳ್ಳು > ಸೇವನೆಯು ಕಫ, ಪಿತ್ತ ರೋಗವೃದ್ದಿಗೆ ಕಾರಣವಾಗುವುದರಿಂದ ಎಳ್ಳಿನೊಡನೆ ಹುರಿದ ಕಡಲೆ ಬೀಜ > ,ಕೊಬ್ಬರಿ, ಬೆಲ್ಲವನ್ನು ಸೇವಿಸಲಾಗುತ್ತದೆ. ಹಾಗೂ ಹವಾಮಾನದಲ್ಲಿ ನಿಧಾನವಾಗಿ ಉಷ್ಣತೆ > ಹೆಚ್ಚುತ್ತಾ ಹೋಗುವುದರಿಂದ ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಏರುಪೇರು ಮಾಡುತ್ತದೆ. ಹೃದಯದ > ಬಡಿತ ಹಾಗೂ ರಕ್ತ ಚಲನೆ ಹೆಚ್ಚುತ್ತದೆ. ಇದನ್ನು ಹತೋಟಿಯಲ್ಲಿಡಲು ಬೋರೆ ಹಣ್ಣು ಔಷಧಿ ರೀತಿ > ಕೆಲಸ ಮಾಡುತ್ತದೆ. ಜಡ್ಡು ಆಲಸ್ಯಗಳನ್ನು ದೂರ ಮಾಡುತ್ತದೆ. > > ನಮ್ಮ ಹಿರಿಯರು ತುಂಬ ಬುದ್ದಿವಂತರು ಯವ ಋತುವಿನಲ್ಲಿ ಯಾವ ಯಾವ ಆಹಾರ ದೇಹಕ್ಕೆ ಅವಶ್ಯಕ > ಎಂದು ಅರಿತು ಹಬ್ಬಹರಿದಿನಗಳ ಮೂಲಕ ಆರೋಗ್ಯದ ದೃಷ್ಟಿಯಿಂದ ವೈಜ್ಞಾನಿಕವಾಗಿಯೂ ಹಬ್ಬ ಆಚರಣೆ > ಮಾಡುವುದರ ಹಿಂದಿನ ಗುಟ್ಟು. ನಮ್ಮ ಬಾಳಲ್ಲೂ ಕತ್ತಲೆ ಹೋಗಿ ಹೊಸ ಬೆಳಕು ಬರಲಿ ಎಂದು ಹರಸುವ. > ವೇ. ಪಂಡಿತ ರೇವಣ್ಣಾರಾಧ್ಯರು ಶ್ರೀರಾಂಪುರ ಮೈಸೂರು > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.