ಎಲ್ಲ ಕನ್ನಡಿಗರು ಅಭಿಮಾನಪೂರ್ವಕವಾಗಿ ನಿಸ್ಸಂಶಯವಾಗಿ ಒಪ್ಪಿ ಕೊಳ್ಳಬೇಕಾದ ವಿಚಾರ.
On Mon, Nov 4, 2019, 11:30 PM Girisha T P <[email protected] wrote: > > ---------- Forwarded message --------- > From: Girish T P <[email protected]> > Date: Mon, 4 Nov 2019, 23:17 > Subject: ಕನ್ನಡ ನಾಡಿನ ಶಾಲಾ ಶಿಕ್ಷಣದಲ್ಲಿ ಕನ್ನಡವೇ ಕಲಿಕಾ ಮಾಧ್ಯಮವಾಗಬೇಕು. > To: <[email protected]>, <[email protected]>, > girish t p <[email protected]>, <[email protected]>, < > [email protected]>, <[email protected]> > > > *ಹಿರಿಯರಲ್ಲಿ ಗೌರವಪೂರ್ವಕ, ಸ್ನೇಹಿತರಲ್ಲಿ ಪ್ರೀತಿಪೂರ್ವಕ ನಮನಗಳು.* > > ನನ್ನ ಮನದಾಳದ ಮಾತುಗಳನ್ನು ಸಾವಧಾನದಿಂದ ಓದಬೇಕೆಂಬ ಸವಿನಯ, ವಿನಮ್ರತೆಯಿಂದ > ವಿನಂತಿಸಿಕೊಳ್ಳುತ್ತಾ ಕಾಗುಣಿತ ದೋಷಗಳಿದ್ದಲ್ಲಿ ಸಹಿಸಿಕೊಳ್ಳಿ, ಹೇಳಿದರೆ > ತಿದ್ದಿಕೊಳ್ಳುವೆ. > > *ಕನ್ನಡ ನಾಡಿನ ಶಾಲಾ ಶಿಕ್ಷಣದಲ್ಲಿ ಕಲಿಕಾ ಮಾಧ್ಯಮವಾಗಿ ಕನ್ನಡವೇ ಅಗತ್ಯ ನಿತ್ಯ ಸತ್ಯ* > > ಸತ್ಯ ಯಾವಾಗಲೂ ಕಹಿಯೇ... > ಆದರೆ ಸತ್ಯವನ್ನು ಒಪ್ಪಿಕೊಂಡು ಸತ್ಯದ ದಾರಿಯಲ್ಲಿ ನಡೆಯುತ್ತಾ ಖಂಡಿತವಾಗಿ ಕಾಲಕ್ರಮೇಣ > ಸತ್ಯದ ಹಾದಿ ಸಿಹಿಯ ಹಾದಿಯಾಗುವುದರಲ್ಲಿ ಸಂದೇಹವಿಲ್ಲ. > > ಈಗ ನಾ ಹೇಳ ಹೊರಟಿರುವುದು ತೀರಾ ಹೊಸ ವಿಚಾರವೊಂತು ಅಲ್ಲ. > > ಪ್ರತಿಯೊಂದು ನಾಡಿನಾಲ್ಲಿಯೂ ಆಯಾಯಾ ನಾಡಿನ ಭಾಷೆಯೇ ಅಲ್ಲಿಯ ಶಾಲಾ ಶಿಕ್ಷಣದಲ್ಲಿ ಕಲಿಕೆಯ > ಮಾಧ್ಯಮವಾಗಬೇಕು ಎಂಬುದನ್ನು ಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಕುವೆಂಪುರವರಿಂದ > ಹಿಡಿದು ನಾಡಿನ ಆನೇಕ ಸಾಹಿತಿಗಳು, ಜನಪರ-ಜೀವಪರ ನೈಜ್ಯ ಕಾಳಜಿಯುಳ್ಳ ರಾಜಕಾರಣಿಗಳು, > ವಿದ್ವಾಂಸರು, ಸಿ ಎನ್ನ್ ಆರ್ ರಾವ್ ರಂತಹ ವಿಜ್ಞಾನಿಗಳು ಸೇರಿದಂತೆ ಇನ್ನೂ ಆನೇಕರು, > ಶಿಕ್ಷಣ ತಜ್ಞರು ಹಾಗೂ ಸ್ವಾತಂತ್ರ್ಯ ಪೂರ್ವದಿಂದಲೂ ಮೈಸೂರು ಸಂಸ್ಥಾನದ ದಿವಾನ್ ಮಿರ್ಜಾ > ಇಸ್ಮಾಯಿಲ್ ರವರು ಸಹ ಶಾಲಾ ಶಿಕ್ಷಣದಲ್ಲಿ ಆಯಾಯ ನಾಡಿನ ಭಾಷೆಯೇ ಕಲಿಕಾ ಮಾಧ್ಯಮವಾಗಬೇಕು > ಎಂಬುದನ್ನು ಮನೋ ವೈಜ್ಞಾನಿಕವಾಗಿ ಸಾಂಸ್ಕೃತಿಕವಾಗಿ ಪ್ರತಿಪಾದಿಸುತ್ತಾ ಬಂದಿದ್ದಾರೆ. > > ಕಲಿಕಾ ಮಾಧ್ಯಮವಾಗಿ ಆಯಾಯ ನಾಡಿನ ಭಾಷೆಯೇ ಇರಬೇಕು ಎಂಬುದರ ಬಗ್ಗೆ ಬಲಪಂಥೀಯರು ಮತ್ತು > ಎಡಪಂಥೀಯರು, ಸಮಾಜವಾದಿಗಳು ಸಹ ಸಮಾನವಾದ ಅಭಿಪ್ರಾಯ ಹೊಂದಿದ್ದಾರೆ. > > ಬಹುತೇಕ ವಿಚಾರಗಳಿಗೆ ಸಂಬಂದಿಸಿದಂತೆ ತದ್ವಿರುದ್ಧ ನಿಲುವುಳ್ಳ ನಮ್ಮ ನಾಡಿನ ಕೆಲ > ಸಾಹಿತಿಗಳು ಕನ್ನಡ ಮಾಧ್ಯಮದ ವಿಚಾರ ಬಂದಾಗ ಸಮಾನ ನಿಲುವುಳ್ಳರಾಗಿದ್ದೂ ಈ ವಿಚಾರವಾಗಿ ಸಭೆ > ಸಮಾರಂಭಗಳಲ್ಲಿ ಜೊತೆಯಾಗಿ ಭಾಗವಹಿಸಿದ್ದಾರೆ. > > ನಮ್ಮ ನಾಡಿನ ಆನೇಕ ಮಠಗಳ ಸ್ವಾಮೀಜಿಯವರು ಸಹ ನಾಡಿನ ಭಾಷೆಯೇ ಕಲಿಕಾ ಮಾಧ್ಯಮವಾಗಿರಬೇಕು > ಎಂಬುದನ್ನು ಪ್ರತಿಪಾದಿಸುತ್ತಾರೆ. > > ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಶ್ರೀಮಠ ಕಳೆದ ೧೬ ವರ್ಷಗಳಿಂದ ನವಂಬರ್ ಮಾಹೆಯ ಒಂದು > ಅಥವಾ ಎರಡನೇ ತಾರೀಖಿನಿಂದ ಕನ್ನಡ ರಾಜ್ಯೋತ್ಸವದ ಜೊತೆಗೆ ರಾಷ್ಟ್ರೀಯ ನಾಟಕೋತ್ಸವವನ್ನು ಸಹ > ಆಚರಿಸಿಕೊಂಡು ಬರುತ್ತಿದೆ. ಇದರ ರೂವಾರಿಗಳಾದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ > ಸ್ವಾಮೀಜಿಯವರು ಕನ್ನಡ ನಾಡಿನ ಶಾಲಾ ಶಿಕ್ಷಣದಲ್ಲಿ ಕನ್ನಡವೇ ಕಲಿಕೆಯ ಮಾಧ್ಯಮವಾಗಬೇಕು > ಎಂಬುದನ್ನು ಎಲ್ಲರಿಗೂ ಅರ್ಥವಾಗುವಂತೆ ಸರಳ ಸಾಮಾನ್ಯವಾದ ಭಾಷೆಯಲ್ಲಿಯೇ > ಕಲಿಕೆಯ ಹೆಜ್ಜೆಗಳು ಎಂಬ ಕೃತಿಯನ್ನು ರಚಿಸಿದ್ದಾರೆ. > ೨೦೧೯ನೇ ಸಾಲಿನ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಂದರ್ಭದಲ್ಲಿಯೂ(೦೨/೧೧/೨೦೧೯) > ಸ್ವಾಮೀಜಿಯವರು ಕನ್ನಡ ಮಾಧ್ಯಮದಲ್ಲಿಯ ಕಲಿಕೆಯ ಅಗತ್ಯತೆಯನ್ನು ಪ್ರತಿಪಾದಿಸುತ್ತಾ ಆಂಗ್ಲ > ಮಾಧ್ಯಮದ ಕಲಿಕೆಯ ಕುರುಡು ವ್ಯಾಮೋಹಿಗಳಾಗಿರುವ ಸರ್ಕಾರವನ್ನು, ಸಾರ್ವಜನಿಕರನ್ನು, > ನ್ಯಾಯಾಲಯವನ್ನು ಎಚ್ಚರಿಸಿದ್ದಾರೆ. > > ನಮ್ಮ ಕನ್ನಡ ನಾಡಿನ ಶಾಲಾ ಶಿಕ್ಷಣದಲ್ಲಿ ಕನ್ನಡವೇ ಮಾಧ್ಯಮವಾಗಿರಬೇಕೆಂದು ಪ್ರತಿಪಾದಿಸುವ > ಯಾರೂ ಸಹ ಆಂಗ್ಲ ಭಾಷೆಯ ಕಲಿಕೆಯ ವಿರೋಧಿಗಳಲ್ಲ. ಅಷ್ಟು ಮಾತ್ರವಲ್ಲದೇ ಜಾಗತೀಕ > ಸವಾಲುಗಳನ್ನು, ವಿಷಮ ಪರಿಸ್ಥಿತಿಯನ್ನು ಎದುರಿಸಲು ಇಂಗ್ಲೀಷ್ ಅನ್ನು ಒಂದು ಸಂವಹನ ಸಂಪರ್ಕ > ಭಾಷೆಯನ್ನಾಗಿ ಸಮರ್ಪಕವಾಗಿ ಕಲಿತು ಕಲಿಸುವುದನ್ನು ಪ್ರತಿಪಾದಿಸುತ್ತಾರೆ. > > ಸ್ವತಃ ಕನ್ನಡ ಮಾಧ್ಯಮದಲ್ಲಿಯೇ ಕಲಿತು > ವಿಜ್ಞಾನದ ಪದವೀಧರರಾಗಿರುವ ಚಾಮರಾಜನಗರದ ದೀನಬಂಧು ಆಶ್ರಮದ ಸ್ಥಾಪಕರು ಮತ್ತು ಈಗ ಗೌರವ > ಕಾರ್ಯದರ್ಶಿಗಳಾಗಿರುವ ಪ್ರೋ. ಜಿ.ಎಸ್. ಜಯದೇವರು ಚಾಮರಾಜನಗರದ ಜೆ.ಎಸ್.ಎಸ್. ಪದವಿ > ಕಾಲೇಜಿನಲ್ಲಿ ಸುಮಾರು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಪ್ರಾಣಿಶಾಸ್ತ್ರವನ್ನು > ತರಗತಿಗಳಲ್ಲಿ ಬೋಧಿಸಿದವರು. > > ಕನ್ನಡ ಮಾಧ್ಯಮವೇ ಶಾಲಾ ಶಿಕ್ಷಣದ ಕಲಿಕಾ ಮಾಧ್ಯಮವಾಗಬೇಕು ಎನ್ನುವ ಬಗ್ಗೆ > ಜಯದೇವಣ್ಣನವರ ಹಾದಿ ಉಳಿದವರಿಗಿಂತ ಬಲು ಭಿನ್ನ. > ೧೯೯೮ರಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಸುವ ದೀನಬಂಧು ಪ್ರಾಥಮಿಕ ಶಾಲೆಯನ್ನು ಜಯದೇವಣ್ಣನವರು > ತೆರೆದರು. > ದೀನಬಂಧು ಪ್ರಾಥಮಿಕ ಶಾಲೆಯೂ ಪ್ರೌಢಶಾಲೆಯಾಗಿ ವಿಸ್ತರಣೆಗೊಂಡು > ಪ್ರಸ್ರುತ ೨೦೧೯-೨೦ನೇ ಶೈಕ್ಷಣಿಕ ವರ್ಷದಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪ್ರೌಢಶಾಲಾ > ಹಂತದವರೆಗೆ ೪೪೭ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. > ದೀನಬಂಧು ಶಾಲೆಗಿಂತ, ಜಯದೇವಣ್ಣನವರಿಗಿಂತ ಉತ್ತಮ ಉದಾಹರಣೆ ಬೇಕೆ?? > ಒಳ್ಳೆಯದು ಮಾಡುವ ನಿಷ್ಕಳಂಕ ಮನಸ್ಸು, ಚಾರಿತ್ಯ, ಕೈಂಕರ್ಯವೊಂದಿದ್ದರೆ ಸಾರ್ಥಕವಾದ ಸಾಧನೆ > ಸಾಧ್ಯ ಎನ್ನವುದಕ್ಕೆ ದೀನಬಂಧು ಶಾಲೆಯ ಯಶೋಗಾಥಯೇ ಕಾರಣ. > > ದೀನಬಂಧು ಆಶ್ರಮದಲ್ಲಿ ಬೆಳೆದ, ಕನ್ನಡ ಮಾಧ್ಯಮದಲ್ಲಿಯೇ ಪದವಿ ಕಲಿತು ಮುಂದೆ ಆಂಗ್ಲ > ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಪ್ರಸ್ತುತ Decan Herald ಪತ್ರಿಕೆಯಲ್ಲಿ > ಉಪಸಂಪಾದಕರಾಗಿರುವ ಶ್ರೀ ಚಿರಂಜೀವಿ ರವರ ಜೀವಾನನುಭವೇ ಅಧ್ಯಯನಯೋಗ್ಯ. > > ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಕಲಿತು ನಾಡಿನ ಆನೇಕ ಸ್ತರಗಳಲ್ಲಿ ಸೇವೆಗಳಲ್ಲಿ > ತೊಡಗಿಸಿಕೊಂಡಿರುವ ನಮ್ಮ ಜಯದೇವಣ್ಣ ಸೇರಿದಂತೆ, ವೃತಿಯಲ್ಲಿ ಆಂಗ್ಲ ಪ್ರಾಧ್ಯಾಪಕರು > ಪ್ರವೃತಿಯಿಂದ ನಾಡಿನ ಭಾಷೆಯ ಸಾಹಿತಿಗಳಾಗಿರುವ ಆನೇಕರ ಆಂಗ್ಲ ಭಾಷೆಯ ಮೇಲಿನ ಸದೃಢ ಜ್ಞಾನದ > ಬಗ್ಗೆ ನಾನು ಮಾತಾಡಲು ಬಹಳ ಅಲ್ಪ ನಾನು. > > ಅಮೇರಿಕಾದ ಸಂಶೋಧನೆಯೊಂದು "ಯಾವ ಮಗು ತನ್ನ ಮಾತೃಭಾಷೆಯನ್ನು ಸದೃಢವಾಗಿ ಕಲಿತು, ತನ್ನ > ಮಾತೃಭಾಷೆಯ ಸಹಾಯದ ಮೂಲಕ ಇತರ ಭಾಷೆಗಳನ್ನು ಕಲಿಯಲು ಹೊರಡುತ್ತದೆಯೋ ಆಗ ಇತರ ಭಾಷೆಗಳನ್ನು > ಅತ್ಯಂತ ಸುಲಲಿತವಾಗಿ ಕಲಿಯುತ್ತದೆ" ಎಂದು ಹೇಳುತ್ತದೆ. > ಈ ಮಾತನ್ನು ಸುಮಾರು ೩೦ಕ್ಕೂ ಹೆಚ್ಚು ಮುದ್ರಣಗಳನ್ನು ಕಂಡಿರುವ, ಕನ್ನಡದ ಮೂಲಕ ಇಂಗ್ಲೀಷ್ > ಅನ್ನು ಕಲಿಯಲು, ಕಲಿಸಲು ಸಹಾಯಕವಾಗಿರುವ Applied English Courseನ ಪುಸ್ತಕ ಹಿಂಬದಿ > ರಕ್ಷಾ ಪುಟದಲ್ಲಿ ಪ್ರಕಟಿಸಲಾಗಿದೆ. > ಈ ಮಹತ್ವದ ಕೃತಿಯ ಕರ್ತೃ ಹಾಸನ ಆಕಾಶವಾಣಿಯಲ್ಲಿ ಉದ್ಯೋಗಿಯಾಗಿರುವ ಬೇದ್ರೆ ಎನ್ ಮಂಜುನಾಥ್ > ರವರು. > > ಶಾಲಾ ಶಿಕ್ಷಣ ಹೇಗಿರಬೇಕು ಎಂಬುದರ ಕುರಿತು ನಾ ಹೇಳುವುದಕ್ಕಿಂತ ದೀನಬಂಧು ಸಂಸ್ಥೆಯು > ಹೊರತರುವ ಅನುಭವ ಎಂಬ ಹೆಸರಿನ ಮಾಸಪತ್ರಿಕೆಯಲ್ಲಿ ಜಯದೇವಣ್ಣನವರ ಸಂಪಾದಕೀಯವೊಂದನ್ನು ಈ > ಲೇಖನದೊಟ್ಟಿಗೆ ಹಂಚಿಕೊಳ್ಳುವೆ. > > ಹೆಸರಿಗೆ ಮಾತ್ರ ಸೇವಾ ಕ್ಷೇತ್ರಗಳೆಂದು ಕರೆಯಲ್ಪಡುವ ಆರೋಗ್ಯ ಮತ್ತು ಶಿಕ್ಷಣ > ಕ್ಷೇತ್ರಗಳಿಂತ ಆರ್ಥಿಕವಾಗಿ ಅತ್ಯಂತ ಲಾಭದಾಯಕವಾದ ಬೇರೆ ಕ್ಷೇತ್ರಗಳಿಲ್ಲ. > > ನಾಡಿನ ನಡೆದಾಡುವ ದೇವರು ಎಂದು ಕರೆಯಲ್ಪಡುತ್ತಿದ್ದ ತುಮಕೂರಿನ ಡಾ. ಸಿದ್ಧಗಂಗಾ ಶ್ರೀಗಳು > ಲಿಂಗೈಕ್ಯರಾದಾಗ ಕೇಳು ಬರುತ್ತಿದ್ದ ಮಾತೊಂದನ್ನು ಗಮನಿಸಬೇಕು. ಶ್ರೀಗಳು ಮನಸ್ಸು > ಮಾಡಿದ್ದರೆ ಎಂದೋ ಒಂದು ಮೆಡಿಕಲ್ ಕಾಲೇಜನ್ನು ತೆರೆಯಬಹುದಿತ್ತು. ಆದರೆ ಶ್ರೀಗಳು ಪ್ರಾಥಮಿಕ > ಮತ್ತು ಪ್ರೌಢಶಿಕ್ಷಣ ಪಸರಿಸುವ ಕಡೆಗೆ ತಮ್ಮ ತನು ಮನ ವನ್ನು ಸಮರ್ಪಿಸಿಕೊಂಡವರು. > ಅವರ ಸೇವಾ ತತ್ಪರತೆ ಬಗ್ಗೆ ನುಡಿಯಲು ನಮ್ಮ ನೈತಿಕತೆ ನೀತಿಯುತವಾಗಿರಬೇಕು. > > ಆದರೆ ಇವತ್ತಿನ ಶಾಲಾ ಶಿಕ್ಷಣದ ಮತ್ತು ಪೋಷಕರ ಉದ್ದೇಶವಾದರೂ ಏನೂ..?? > > ಮಗು, ದುಬಾರಿ ಸರಕುಗಳನ್ನು ಕೊಳ್ಳುವ ಶಕ್ತಿ ಪಡೆಯುವ ಮತ್ತೊಂದು ಸರಕಷ್ಟೇ. > > ಆಂಗ್ಲಮಾಧ್ಯಮದ ಶಾಲೆಯಲ್ಲಿ ಚೆನ್ನಾಗಿ ಕಲಿತು ಒಳ್ಳೆಯ ಅಂಕಗಳಿಸಿ, ಉತ್ತಮವಾದ ವೃತ್ತಿಪರ > ಪದವಿಯೊಂದನ್ನು ಗಳಿಸಿ ಕೈತುಂಬಾ ಸಂಬಳ ಬರುವ ಕೆಲಸಕ್ಕೆ ಸೇರುವುದು, ವಿದೇಶಗಳಲ್ಲಿ ದುಡಿದು > ದುಬಾರಿ ಹಣ ಸಂಪಾದಿಸುವುದು. > ಸುಖಲೋಲುಪ್ತರಾಗುವುದು. > ಪರಧನ ಪರಸ್ತ್ರೀ ಪರಪುರುಷ ವ್ಯಾಮೋಹಿಗಳು, ಭೋಗಿಗಳು ಆಗುವುದು. > > ಜನ್ಮ ನೀಡಿದ ತಾಯಿ, ಸ್ವಂತಿಕೆ ಬೆಳೆಸಿಕೊಳ್ಳಲು ಅಡಿಯಾದ ತಾಯಿನುಡಿ ಮತ್ತು ತಾಯಿನಾಡನ್ನು > ಮರೆಯುವುದು. > > ಸಂಪತ್ತನ್ನು ಕೂಡಿಡುತ್ತಾ ಒಟ್ಟಿಗೆ ಆಡಿ ಬೆಳೆದ ಸಹೋದರ ಸಹೋದರಿಯರ ಕಷ್ಟ-ಸುಖಗಳಲ್ಲಿ > ಭಾಗಿಯಾಗದೇ ಒಂಟಿಯಾಗಿ ಉಳಿಯುವುದು. > > ಸ್ನೇಹಿತರ ಬಂಧು ಬಳಗದವರಿಂದ ಅಂತರ ಕಾಯ್ದುಕೊಳ್ಳುವುದು. > > ಜನ್ಮನೀಡಿದ ತಾಯಿ-ತಂದೆ > ಸಾಕು ಬೆಳೆಸಿದ ಸ್ವಂತ ಊರು, ಸಮುದಾಯ, > ಕಲಿತ ಶಾಲೆ, ಕಲಿಸಿದ ಗುರುಗಳನ್ನು > ಒಟ್ಟಿಗೆ ಕೂಡಿ ಆಡಿ ಬೆಳೆದ, ನೋವು ನಲಿವು ಹಂಚಿಕೊಂಡ ಸ್ನೇಹಿತರನ್ನು ಮರೆತು > ಹೊರಗೆ ಸಾಧಕನೆಂಬ ತೋರಿಕೆಯ ಹುಸಿನಗುವಿನ, ಆದರೆ ಒಳಗೊಳಗೆ ಬೇಗುದಿಯಲ್ಲಿರುವ ಅತೃಪ್ತ > ಆತ್ಮದಂತಿರುವ ಬಾಳುವೆ ನಡೆಸುವುದು. > > ಅದಕ್ಕಲ್ಲವೇ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು. > > ನೆಲೆಮೂಲ ಸಂಸ್ಕೃತಿ ಮತ್ತು ಜೀವನ ಶೈಲಿಯಿಂದ ದೂರವುಳಿದು ಸ್ವಂತಿಕೆಯಿಲ್ಲದ ಒಂದು ಭೋಗ > ಸಾಧನವಾಗುವುದು. > > ಇವತ್ತಿನ ಸಂಪತ್ತಿನ ಅಸಮಾನ ಹಂಚಿಕೆಗೆ ಇಂದಿನ ಶಿಕ್ಷಣ ಪದ್ಧತಿಯೇ ಕಾರಣ. > ಸಿರಿವಂತ ಮತ್ತಷ್ಟೂ ಸಿರಿವಂತ, > ಬಡವ ಮತ್ತಷ್ಟೂ ಬಡವನಾಗಲಿಕ್ಕೆ ಇವತ್ತಿನ ಅನ್ಯರನ್ನು ಅನುಕರಿಸಲು ಉದ್ದೀಪನಗೊಳಿಸುವ > ಕೃತ್ರಿಮ ಶಿಕ್ಷಣ ಪದ್ಧತಿಯೇ ಕಾರಣ. > ಅಸಲೀಗೆ ಇದನ್ನು ಶಿಕ್ಷಣ ಪದ್ಧತಿಯೆಂದು ಪರಿಗಣಿಸಲಾಗದು. > ಜಾಗತೀಕ ಮಾರುಕಟ್ಟೆಯಲ್ಲಿ ಒಂದು ಸಾಧನವಾಗಿ ಚಲಾವಣೆಯಾಗಲು ಬೇಕಾದ ಆತ್ಮಬಲ, ಹೃದಯವಿಲ್ಲದ > ಒಂದು ಯಂತ್ರದಂತೆ. > > ಇವತ್ತಿನ ಶಿಕ್ಷಣ ತನ್ನ ಮನ ತನ್ನನ್ನು ಮೆಚ್ಚುವುದಕ್ಕಿಂತಲೂ ಅನ್ಯರನ್ನು, > ಹೊರಗಿನವರನ್ನು,ಜಗತ್ತನ್ನು ಮೆಚ್ಚಿಸುವ ಸಲುವಾಗಿ ಹೋರಾಡುವ ಸಲುವಾಗಿ ಆಂತರಿಕ > ಪ್ರೇರಣೆಯಿಲ್ಲದ ಬಾಹ್ಯ ಸೆಳೆತೆಗಳೆ ಸೆಲೆಯಾಗಿರುವ ನಾಟಕೀಯ ರಂಗ. > > ಅಂದಾಗೇ ಎಲ್ಲರೂ ತ್ಯಾಗಮಯಿಗಳಾಗಬೇಕಿಲ್ಲ. > ತ್ಯಾಗಿಯಾಗುವುದು ಅಸಂಬದ್ಧ. > > ತ್ಯಾಗ ಮತ್ತು ಭೋಗಗಳೆರಡೂ ಅತಿರೇಕದವು, ಅವನತಿಯ ಅವಾಸಾನಕ್ಕೆ ದೂಡುವಂತಹವು. > > ನನ್ನನ್ನು ನಾನು ಅರಿಯಲು ಸಹಾಯಕವಾಗದ ಶಿಕ್ಷಣ ಅದೆಂತಹ ಶಿಕ್ಷಣ?? > ನನ್ನನ್ನು ನಾನೇ ಅರಿಯಲು ಸಾಧ್ಯವಾದರೆ ಮಾತ್ರ ಅನ್ಯರನ್ನು ಜಗತ್ತನ್ನು ಅರಿಯಲು ಸಾಧ್ಯ. > ನಾನ್ಯಾರು ಎಂಬುದನ್ನು ನನ್ನೊಳಗೆ ಪ್ರಶ್ನಿಸಿಕೊಳ್ಳುವ ಉತ್ತರ ಕಂಡುಕೊಳ್ಳುವ > ಸತ್ಯಾನ್ವೇಷಣೆಯ ಪ್ರಕ್ರಿಯೆಗೆ ಇಂಬು ಕೊಡುವಂತೆ ಇರಬೇಕು ನಮ್ಮ ಶಿಕ್ಷಣ ಪದ್ಧತಿ. > > ಲೌಕಿಕ ಅಲೌಕಿಕಗಳೆರೆಡರ ಸಮಾಗಮವಾಗಬೇಕು ಶಿಕ್ಷಣ ನೀಡಿಕೆಯ ಕ್ರಮ. > > ಒಂದಷ್ಟೂ ಸಮಯ ಎಲ್ಲರೂ ಮೌನವಹಿಸಬೇಕಾದ ಕಾಲಘಟ್ಟವಿದು. > > ************************** > > ಈಗ ಒಂದಿಷ್ಟೂ ಪ್ರಾಯೋಗಿಕ ಹಂತಕ್ಕೆ ಬರೋಣಾ. > ಒಂದು ತುಲನಾತ್ಮಕ ಅಧ್ಯಯನಕ್ಕೆ ಸಿದ್ಧವಾಗೋಣಾ. > ಇದನ್ನು ನೀವುಗಳೇ ನಿಮ್ಮ ಹಂತದಲ್ಲಿ ಮಾಡಿಕೊಳ್ಳಬಹುದು. > > ಇತ್ತೀಚೆಗೆ ನಾನು, ನನ್ನ ಕೆಲ ಸ್ನೇಹಿತರು, ಬಂಧುಗಳು ಪರಿಚಯಸ್ಥರು ಅವರವರ ಜೀವನ > ಶೈಲಿಯಲ್ಲಿ ವೈಯಕ್ತಿಕ ಬದುಕಿನಲ್ಲಿ ಮತ್ತು ವೃತ್ತಿಪರ ಬದುಕಿನಲ್ಲಿ ತನ್ನ > ಸುತ್ತಮುತ್ತಲಿನವರೊಂದಿಗೆ ಹೇಗೆ ವ್ಯವಹರಿಸುತ್ತಾರೆ, ಸಾಮರಸ್ಯದಿಂದ ಎಲ್ಲರೊಂದಿಗೆ > ಬೆರೆಯುತ್ತಾ ತಾವಂದುಕೊಂಡ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಾ, ಸಮಚಿತ್ತದಿಂದ > ವರ್ತಿಸುತ್ತಾ ಜೀವನದಲ್ಲಿ ಯಶಸ್ವಿ ಎನಿಸಿಕೊಂಡಿದ್ದಾರೆ ಎಂಬುದನ್ನು ಕೂಲಕುಂಷವಾಗಿ > ವೀಕ್ಷಿಸುತ್ತಾ ವಿಶ್ಲೇಷಿಸುತ್ತಾ ಹೋದರೆ ಅಚ್ಚರಿಯೂ ಸಂತಸವೂ ಆಗುತ್ತದೆ. > > ಯಾವ ಮಗುವಿನ/ವ್ಯಕ್ತಿಯ ಬಾಲ್ಯ ಸಮೃದ್ಧವಾಗಿರುತ್ತದೆಯೋ ಆ ಮಗು/ವ್ಯಕ್ತಿಯ ಮುಂದಿನ ಜೀವನವೂ > ಅಷ್ಟೇ ಸಮೃದ್ಧವಾಗಿರುತ್ತದೆ. > > ನಮ್ಮ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳು ಶಾಲಾ ಶಿಕ್ಷಣ ಮುಗಿಸಿದ ನಂತರ > ಉದ್ಯೋಗ ಪಡೆಯುವಲ್ಲಿ ಮತ್ತು ಉದ್ಯೋಗ ಆರಂಭಿಸಿದ ಪ್ರಾರಂಭದ ದಿನಗಳಲ್ಲಿ ಸಮಾಜದಲ್ಲಿ > ಹೊಂದಿಕೊಳ್ಳಲು ವ್ಯವಹರಿಸಲು ಸ್ವಲ್ಪಮಟ್ಟಿಗೆ ಸಮಸ್ಯೆ ಎದುರಿಸುತ್ತಾರೆ. > ಆದರೆ ದಿನಕಳೆದಂತೆ ನಿಜಜೀವನದಲ್ಲಿ ಇವರೇ ಚಾಂಪಿಯನ್ ಗಳು. > ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಇವರ ಸಮಾಜಿಕ ಸಂಬಂಧಗಳು ಅತ್ಯುತ್ತಮವಾಗಿ ಜನರ ನಡುವೆ > ಸ್ನೇಹಪರವಾಗಿ ವರ್ತಿಸುತ್ತಾ ಎಂತಹ ವಿಷಮ ಕ್ಲಿಷ್ಟಕರ ಸನ್ನಿವೇಶಗಳನ್ನು ನಿಭಾಯಿಸುವ ಜೀವನ > ಕೌಶಲ್ಯ ಬೆಳೆಸಿಕೊಳ್ಳುತ್ತಾ ಹೋಗುತ್ತಾರೆ. > ಸಂಪತ್ತಿನ ಗಳಿಕೆ ಕಡಿಮೆಯೇ ಇರಬಹುದು. > ಆದರೆ ಸಂತೃಪ್ತ ಜೀವನ ನಡೆಸುವ ಕಲೆ ಶೈಲಿ ಕರಗತ ಮಾಡಿಕೊಂಡವರು. > > ಬೇರೆಯವರ ಕಷ್ಟಸುಖಗಳಿಗೆ ಧ್ವನಿಯಾಗುವ, > ಸಾಮಾಜಿಕ ಸಮಸ್ಯೆಗಳಿಗೆ, ನಾಡಿನ ಕುಂದುಕೊರತೆಗಳನ್ನು ಪರಿಹರಿಸುವ, > ಆಶಕ್ತರಿಗೆ, ಧ್ವನಿಇಲ್ಲದವರಿಗೆ ಧ್ವನಿಯಾಗುವ ಸಾಮಾಜಿಕ ಸಂತ್ಕಪನವನ್ನು ಮೈಗೂಡಿಸಿಕೊಂಡ > ಮಾತೃಹೃದಯಿ ಮತ್ತು ನಿಜಾರ್ಥದ ಮನುಷ್ಯತ್ವದ ಮನಸ್ಸುಳ್ಳವರಾಗಿರುತ್ತಾರೆ. > > ಒರ್ವ ಹೃದಯ ಸಿರಿವಂತಿಕೆ ಇರುವ ನಾ ಅತ್ಯಂದ ಹತ್ತಿರದಿಂದ ಬಲ್ಲ, ಅಸಾಮಾನ್ಯ ಶಕ್ತಿಯುಳ್ಳ > ಸಾಮಾನ್ಯ ವ್ಯಕ್ತಿಯೊಬ್ಬರನ್ನು ಸ್ಮರಿಸುತ್ತೇನೆ. > ಪ್ರಸ್ತುತ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮಧ್ಯಾಹ್ನ ಉಪಾಹಾರ > ಯೋಜನೆಯಲ್ಲಿ ಅಕ್ಷರ ದಾಸೋಹ ಕಛೇರಿಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ > ಶ್ರೀ ಗಣೇಶ್ ಟಿ.ಎಸ್. > ಇವರು ಸರ್ಕಾರಿ ಕನ್ನಡ ಮಾಧ್ಯಮದಲ್ಲಿ ಕಲಿತವರು. ತಮ್ಮ ಶಿಕ್ಷಣ ಪೂರ್ಣಗೊಳಿಸಿದ ನಂತರ > ಸುಮಾರು ದಶಕದ ಕಾಲ ಪೋಲಿಸ್ ಇಲಾಖೆಯಲ್ಲಿ ಪೇದೆಯಾಗಿದ್ದವರು. ನಂತರ ಸರ್ಕಾರಿ ಪ್ರೌಢಶಾಲಾ > ಮುಖ್ಯಶಿಕ್ಷಕರಾಗಿ ನೇಮಕಗೊಂಡು ಕೊಪ್ಪ ತಾಲ್ಲೂಕಿನ ಲೋಕನಾಥಪುರದಲ್ಲಿ ಮೂರು ವರ್ಷಗಳ ಕಾಲ > ಮತ್ತು ಕಡೂರು ತಾಲ್ಲೂಕಿನ ಸೋಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಐದು ವರ್ಷಗಳ ಕಾಲ > ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. > ಇವರೆನೂ ನಾಡಿನಾದ್ಯಂತ ಪರಿಚಿತರಾದವರಲ್ಲ. ಆದರೆ ನಮ್ಮ ಇಲಾಖೆಯಲ್ಲಿ, ನಮ್ಮ > ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಚಿತರಾದವರು. > ಅಪ್ಪಟ ಮಾನವೀಯ ಅಂತಃಕರಣವುಳ್ಳ ಸರ್ಕಾರಿ ಸೇವಕ. > ತಾವು ಕೆಲಸ ಮಾಡಿದ ಸ್ಥಳಗಳೆಲ್ಲಾ ತಮ್ಮ ಛಾಪು ಮೂಡಿಸಿದವರು. > ಎಲ್ಲರ ಮೆಚ್ಚುಗೆಗೆ, ಪ್ರಶಂಸೆಗೆ, ಪ್ರೀತಿಗೆ ಪಾತ್ರರಾದವರು. > ಮಾತು-ಕೃತಿ ನಡೆ-ನುಡಿಯ ಸಾಮ್ಯತೆ ಸಾಧಿಸಿದವರು. > ಎಲ್ಲರೊಂದಿಗೂ ಬೆರೆಯುತ್ತಿದ್ದರೂ ಸತ್ಯದ ಹಾದಿ ಬಿಟ್ಟವರಲ್ಲ. > ಇವರೊಂದು ಉದಾಹರಣೆ. > > ಇದಕ್ಕೆ ತದ್ವಿರುದ್ಧವಾಗಿ ನಮ್ಮ ನೆಲೆಮೂಲ, ಜನಪದ ಸಂಸ್ಕೃತಿಯಿಂದ ಹೊರತಾದ ಶಿಕ್ಷಣ > ಸಂಸ್ಥೆಗಳಲ್ಲಿ, ಆಂಗ್ಲ ಮಾಧ್ಯಮದಲ್ಲಿ ಕಲಿತ ಮಕ್ಕಳ ಮುಂದಿನ ಬದುಕೇ ವಿಭಿನ್ನ. > ಬಹುಮುಖ್ಯವಾಗಿ ಇವರ ಶಾಲಾ ಶಿಕ್ಷಣ ಮುಗಿದ ನಂತರ ಅತ್ಯುತ್ತಮ ಉದ್ಯೋಗಗಳನ್ನು > ದೊರಕಿಸಿಕೊಳ್ಳುತ್ತಾರೆ. > ತುಂಬಾ ಒಳ್ಳೆಯ ಎನ್ನಬಹುದಾದ ಆದಾಯವನ್ನು ಕೂಡ ಸಂಪಾದಿಸುತ್ತಾರೆ. > ಆದರೆ ದಿನಕಳೆದಂತೆ ಇವರುಗಳಿಗೆ ಜನರ ನಡುವಿನ ಹೊಂದಾಣಿಕೆಯ ಬದುಕು ಸಾಧ್ಯವಾಗದೇ > ಜನರಿಂದ(ಬಂಧು ಬಳಗ) ದೂರವುಳಿಯುತ್ತಾರೆ. > > ಕಾರ್ಪೋರೆಟ್ ಜಗತ್ತಿನಲ್ಲಿ ಹಲವಾರು ಸಹಸ್ರಾರು ಸಿರಿವಂತರಿದ್ದಾರೆ. > > ಆದರೆ ಸುಧಾಮೂರ್ತಿ, ಅಜೀಂಪ್ರೇಮ್ ಜೀ ಮತ್ತು ರತನ್ ಟಾಟಾ ತರಹದವರು ಎಷ್ಟು ಮಂದಿ > ಇದ್ದಾರೆ. > > ಒಂದು ಸಂದರ್ಶನದಲ್ಲಿ ರತನ್ ಟಾಟಾ ರವರಿಗೆ ಮುಖೇಶ್ ಅಂಬಾನಿಗೂ ತಮಗೂ ಯಾವ ರೀತಿಯ ಸಂಬಂಧ > ಎಂದು ಕೇಳಿದಾಗ, ಅಂಬಾನಿಯವರು Businessesman ಮತ್ತು ನಾನು Industrialist ಎಂದು > ಗುರುತಿಸುತ್ತಾರೆ. > > ಒರ್ವ ಬ್ಯುಸಿನೆಸ್ ಮೆನ್ ಗೂ, ಇಂಡಸ್ಟ್ರೀಯಲಿಸ್ಟ್ ಗೂ ಇರುವ ವತ್ಯಾಸವನ್ನು ಅವರಿಬ್ಬರ > ಜೀವನ ಶೈಲಿ ಮತ್ತು ಜೀವನ ದೃಷ್ಟಿಕೋನದಿಂದಲೇ ಮನಗಾಣಬಹುದು. > > ಬಂಧುಗಳೇ.. > ತಮ್ಮ ಮನದಾಳದಿಂದ ಅಲೋಚಿಸಿ. > ಕೆಲವರು ಉತ್ತಮ ಕನ್ನಡ ಮಾಧ್ಯಮದ ಶಾಲೆಗಳಿಲ್ಲದ ಕಾರಣ ಅನಿವಾರ್ಯವಾಗಿ ಆಂಗ್ಲ ಮಾಧ್ಯಮದ > ಶಾಲೆಗಳಿಗೆ ಜೋತು ಬೀಳುತ್ತಿದ್ದೇವೆಂಬ ಸತ್ಯವಲ್ಲದ ಅಸಹಾಯಕ ನಿರಾಶಾದಾಯಕ > ನುಡಿಗಳನ್ನಾಡುತ್ತಾರೆ. > > ನಾವು ಒಳಹೊಕ್ಕದೇ ಯಾವುದು ಸುಧಾರಿಸುವುದಿಲ್ಲ. > ಒಟ್ಟಾಗಿ ಹೋಗುವ ಮನಸ್ಸಿಲ್ಲದಿರುವುದೇ ನಮ್ಮ ನೆಲಮೂಲ ಜನಪದ ಜೀವಪರ ನಿಲುವುಳ್ಳ ಸರ್ಕಾರಿ > ಶಾಲೆಗಳು ಅನಾಕರ್ಷವಾಗಿ ಕಾಣುತ್ತಿರಬಹುದು. > > ಆದರೆ ಇದು ಖಂಡಿತವಾಗಿ ಸಂಪೂರ್ಣ ಸತ್ಯವಲ್ಲ. > ನಮ್ಮ ನಾಡಿನಲ್ಲಿ ಹಲವಾರು ಉತ್ತಮ ಗುಣಮಟ್ಟದ ಸರ್ಕಾರಿ ಶಾಲೆಗಳಿವೆ. > ಅವುಗಳನ್ನು ಗುರುತಿಸಿ, ಅವುಗಳ ಶಾಲಾ ಪ್ರಕ್ತಿಯೆಯಲ್ಲಿ ಇಡೀ ಸಮುದಾಯವೆಲ್ಲವೂ ಒಟ್ಟಾಗಿ > ಒಗ್ಗಟ್ಟಾಗಿ ಭಾಗವಹಿಸಿದರೆ ನಮ್ಮ ತನ ಉಳಿಯುತ್ತದೆ. > ನಿಜದ ಬಾಳುವೆ, ಅರ್ಥಪೂರ್ಣ ಬದುಕು ನಮ್ಮದಾಗುತ್ತದೆ. > > ನಾಡು-ನುಡಿ, ನಾಡಿನ ಸಂಸ್ಕ್ರತೀಯ ಬಗ್ಗೆ ಹೃದಯದಿಂದ ಚಿಂತಿಸೋಣಾ, ಅಲೋಚಿಸೋಣಾ, > ಸಂವಾದಿಸೋಣಾ, ವರ್ತಿಸೋಣಾ. > > ಸಿರಿಗನ್ನಡಂ ಗೆಲ್ಗೆ-ಸಿರಿಗನ್ನಡಂ ಬಾಳ್ಗೆ. > > ಪ್ರೀತಿಪೂರ್ವಕ ನಮನಗಳೊಂದಿಗೆ ವಂದನೆಗಳು. > > -ಗಿರೀಶ್ ಟಿ ಪಿ. > ಶಿಕ್ಷಕರು, ಸ.ಪ್ರೌ.ಶಾಲೆ. ಹಾದಿಕೆರೆ, ತರೀಕೆರೆ ತಾ. > ___________________________________________________ > ನನಗೆ ಇದು ಬರೆಯಲು ಕಾರಣ ಅಥವಾ ಒಳಸೆಳೆತ ಯಾವುದಂದ್ರೆ.. > > ಇವತ್ತು ಕನ್ನಡ ಮಾಧ್ಯದಲ್ಲಿ ಕಲಿಯುತ್ತಿರುವ ಮಕ್ಕಳನ್ನು ಸ್ವತಃ ಅವರ ಪೋಷಕರೇ > ಕೀಳರಿಮೆಯಿಂದ ನೋಡುವಂತಾಗಿದೆ. > ಇನ್ನೂ ಸ್ನೇಹಿತರು, ಬಂಧುಗಳು, ಸಮುದಾಯ, ಸಮಾಜ..ಇಡೀ ವ್ಯವಸ್ಥೆ....??? > > ನಮ್ಮ ಪ್ರೌಢಶಾಲೆಯಲ್ಲಿ ಅವಳಿ-ಜವಳಿಯಾದ ಅಣ್ಣ ತಂಗಿ ಒಂದೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. > > ಆದರೆ ಹುಡುಗಿ ಆಂಗ್ಲ ಮಾಧ್ಯಮದಲ್ಲಿ > ಹುಡುಗ ಕನ್ನಡ ಮಾಧ್ಯಮದಲ್ಲಿ. > > ಹುಡುಗಿ ಚೆನ್ನಾಗಿ ಓದುತ್ತಾಳೆ ಅದಕ್ಕೆ ಆಂಗ್ಲ ಮಾಧ್ಯಮ. > ಹುಡುಗ........ ಅದಕ್ಕೆ ಕನ್ನಡ ಮಾಧ್ಯಮ.. > > ಅದೃಷ್ಟವಾಶತ್ ನಮ್ಮ ಶಾಲೆಯಲ್ಲಿ ಯಾರೂ ಸಹ ಆತನನ್ನು ಕೀಳಾಗಿ ಯಾರೂ ನೋಡುತ್ತಿಲ್ಲ. > ಮಿಗಿಲಾಗಿ ನಮ್ಮ ಶಿಕ್ಷಕರು ಅವನಲ್ಲಿರುವ ನಾಯಕತ್ವ ಗುಣಕ್ಕೆ ಕಲಾ ಗುಣಕ್ಕೆ ನೀರೆರದು > ಆತ್ಮವಿಶ್ವಾಸವುಳ್ಳ ವಿದ್ಯಾರ್ಥಿಯಾಗಿ ಜೀವಂತವಿರಿಸಿದ್ದಾರೆ... > > ಆದರೆ ನಾಡಿನ ಉಳಿದ ಕನ್ನಡಮ್ಮನ ಮಕ್ಕಳ ಕತೆ....?? > > ಈ ತೊಳಲಾಟದಿಂದ ಹೊರಬರಲು ಬರೆಯಬೇಕಾಯಿತು... > > ನನ್ನ ಅಣ್ಣ LKG ಯಿಂದ ೧೦ನೇ ವರೆಗೂ ಆಂಗ್ಲ ಮಾಧ್ಯಮದಲ್ಲಿ ಕಲಿತದ್ದೂ.. > > ಆದರೆ ನಮ್ಮ ಇಡೀ ಬಂಧು ಬಳಗದ ಮಕ್ಕಳೆಲ್ಲರಿಗಿಂತಲೂ ಕ್ರೀಡೆಯಲ್ಲಿ ಚುರುಕಾಗಿದ್ದ, > ಬಹುಮಾನ ಗಳಿಸುತ್ತಿದ್ದ ನನ್ನಣ್ಣ ಈ ಅನೈತಿಕ ಪರೀಕ್ಷಾ ನಿಯಮಗಳಿಗೆ ಬಲಿಯಾಗಿ SSLC ನಲ್ಲಿ > ಎಲ್ಲಾ ವಿಷಯಗಳಲ್ಲಿಯೂ ಉತ್ತೀರ್ಣನಾಗಿರಲಿಲ್ಲ. > ಪರೀಕ್ಷಾ ಸಮಯಕ್ಕೆ ಪ್ರೀತಿಯ ತಾತ ಸಹ ತೀರಿಕೊಂಡಿದ್ರು. > ಆದರೆ ನನ್ನಣ್ಣ ಜೀವನದಲ್ಲಿ ಫೇಲ್ ಆಗಿಲ್ಲ. > > ಆದರೆ ಎಳವೆಯಲ್ಲಿ ಅವನ ಮನದ ಮೇಲಾದ ಗಾಯಗಳು....????? > > ಎಳವೆಯಲ್ಲಿ ತೀರಾ ಮಂದವೆಂದು(ಈಗಲೂ ಮಂದ-ಎಮ್ಮೆ ನ್ನನ್ನಿಷ್ಟದ ಪ್ರಾಣಿ) > ಗುರುತಿಸಿಕೊಂಡಿದ್ದ ನಾನು, ಮನೆಯಲ್ಲಿದ್ದ ಮಕ್ಕಳೆಲ್ಲರೂ ಕಾನ್ವೆಂಟ್ ನ ಆಂಗ್ಲ > ಮಾಧ್ಯಮದಲ್ಲಿ ಕಲಿಯುತ್ತಿರುವಾಗ ನಾನು ಕನ್ನಡ ಮಾಧ್ಯದಮದ ಸರ್ಕಾರಿ ಶಾಲೆಯಲ್ಲಿ > ಕಲಿಯುತ್ತಿದ್ದೆ > > ಈಗ ಎಲ್ಲವೂ ಸುಂದರ ಎನಿಸುತ್ತಿದೆ. > > ಆದರೆ ಕನ್ನಡ ನಾಡಿನಲ್ಲಿ ಕನ್ನಡದ ಮಕ್ಕಳು ಕೀಳರಿಮೆಯಿಂದ ಕೊರಗಬಾರದು. > > ಸರ್ಕಾರ ಕನ್ನಡ ಮಾಧ್ಯಮದ ಶಾಲೆಗಳನ್ನೇ ಅತ್ಯುತ್ತಮ ಗುಣಮಟ್ಟದ ಶಾಲೆಗಳನ್ನಾಗಿ ಪರವರ್ತಿಸುವ > ಪ್ರಮಾಣಿಕ ಪ್ರಯತ್ನ ಮಾಡಲಿ. > ಒಂದು ಭಾಷೆಯನ್ನಾಗಿ ಆಂಗ್ಲ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸಲಿ. > > ನಮ್ಮ ಶಿಕ್ಷಕರು ಸೇರಿದಂತೆ ಎಲ್ಲಾ ಅಧಿಕಾರಿಗಳು, ಸರ್ಕಾರಿ ನೌಕರರು ಮಿಗಿಲಾಗಿ > ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕಲಿಸಲಿ. > > ಜೈ ಕರ್ನಾಟಕ... > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To view this discussion on the web, visit > https://groups.google.com/d/msgid/kannadastf/CAKtQ_cybofTGuwaGJU0NwidyJz4UP6RhN573RRRhTMoK9V5%3Dog%40mail.gmail.com > <https://groups.google.com/d/msgid/kannadastf/CAKtQ_cybofTGuwaGJU0NwidyJz4UP6RhN573RRRhTMoK9V5%3Dog%40mail.gmail.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CAC-rR8vqttT2RH6drMfE5q3a51%3DF_xQgNouA5B6iMWf04U5usA%40mail.gmail.com.
