G On Jan 26, 2016 2:53 PM, "karunesh sajjan" <[email protected]> wrote:
> Useful information. Thanks > On Jan 26, 2016 6:25 AM, "Eranna Eras" <[email protected]> wrote: > >> ವಂದೇ ಮಾತರಂ… >> ಸುಜಲಾಂ ಸುಫಲಾಂ ಮಲಯಜ ಶೀತಲಾಂ >> ಸಸ್ಯ ಶ್ಯಾಮಲಾಂ ಮಾತರಂ >> ವಂದೇ ಮಾತರಂ…. >> >> “ಗಣರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು” >> >> ಗಣರಾಜ್ಯೋತ್ಸವದ ಬಗ್ಗೆ ಮಾಹಿತಿ ನಿಮಗಾಗಿ ಇಲ್ಲಿ…(Wikipedia ದಿಂದ ಕದ್ದಿದ್ದು) >> ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ ೨೬ ರ೦ದು ಆಚರಿಸಲಾಗುವ ದಿನಾಚರಣೆ. ಭಾರತೀಯ >> ಸ೦ವಿಧಾನ ಜಾರಿಗೆ ಬ೦ದು ಭಾರತ ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರ೦ದು. ಇದರ ಪ್ರಯುಕ್ತ ಈ >> ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯ೦ತ ಸರ್ಕಾರಿ ರಜಾ >> ದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು >> ಹಮ್ಮಿಕೊಳ್ಳುವುದು೦ಟು. ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಪೇರಿ >> ನಡೆಯುತ್ತದೆ. >> ಇತಿಹಾಸ >> >> ಆಗಸ್ಟ್ ೧೫ ೧೯೪೭ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು ಡಾ. ಅಂಬೇಡ್ಕರ್ ಅವರ >> ನೇತೃತ್ವದಲ್ಲಿ ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು >> ಪ್ರತಿಯನ್ನು ತಯಾರಿಸಿ ನವೆಂಬರ್ ೪ ೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು. ಅನೇಕ ಪರಿಶೀಲನೆ >> ಮತ್ತು ತಿದ್ದುಪಡಿಗಳ ನಂತರ ಜನವರಿ ೨೬ ೧೯೫೦ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ >> ಸ್ವಾತ೦ತ್ರ್ಯ ಚಳುವಳಿಯಲ್ಲಿ ಜನವರಿ ೨೬, ೧೯೩೦ ರ೦ದು ಭಾರತ ರಾಷ್ಟ್ರೀಯ ಕಾ೦ಗ್ರೆಸ್ ಪೂರ್ಣ >> ಸ್ವರಾಜ್ಯದ ಧ್ಯೇಯವನ್ನು ಹಾಕಿಕೊ೦ಡಿತ್ತು. ಲಾಹೋರ್ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ >> ಈ ನಿರ್ಧಾರವನ್ನು ತೆಗೆದುಕೊ೦ಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎ೦ದು >> ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತ೦ತ್ರ್ಯಾನ೦ತರ ಭಾರತದ ಸ೦ವಿಧಾನವನ್ನು ಈ >> ದಿನದ೦ದೇ ಜಾರಿಗೆ ತರಲಾಯಿತು. >> >> ಏನಿದು ಗಣರಾಜ್ಯ? ಎಂದು ಪೂರ್ತಿ ದಿನ ತಲೆ ಕೆಡೆಸಿಕೊಂಡು ಕೊನೆಗೆ ಗೂಗಲ್ ದೇವರ ಮೊರೆ >> ಹೋದೆ. ಭಾರತದ ಸಂವಿಧಾನ (the Covnstitution of India) ಅಸ್ತಿತ್ವಕ್ಕೆ ಬಂದ ಸಲುವಾಗಿ >> ಭಾರತೀಯರು ಕಳೆದ ೬೭ ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ರಾಷ್ಟ್ರೀಯ ಹಬ್ಬ ಜನವರಿ ೨೬ >> ಗಣರಾಜ್ಯೋತ್ಸವ ನಮಗೆಲ್ಲರಿಗೂ ತಿಳಿದಿರುವಂಥಹುದೇ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದ >> ವಿದ್ಯಾರ್ಥಿಯಾಗಿದ್ದ ನನಗೆ ಸಾರ್ವಜನಿಕ ಆಡಳಿತ/ ರಾಜ್ಯಶಾಸ್ತ್ರದ ಗಣರಾಜ್ಯ ಪದದ ನಿಜವಾದ >> ಅರ್ಥ ಅಷ್ಟಾಗಿ ಇಲ್ಲ. ಆ ಕುತೂಹಲದಿಂದಲೇ ಸ್ವಲ್ಪ ಸಮಯ ಹೊಂದಿಸಿಕೊಂಡು ವಿಕಿಯಾದಿಯಾಗಿ >> ಗೂಗಲಿಸಿ ಒಂದಿಷ್ಟು ಮಾಹಿತಿ ಕಲೆ ಹಾಕಿದೆ, ಅವುಗಳನ್ನೇ ಇಲ್ಲಿ ರಾಶಿ ಹಾಕಲು ಹೊರಟಿರುವೆನು. >> >> ಅಮೇರಿಕಾದ ಎರಡು ರಾಜಕೀಯ ಪಕ್ಷಗಳೆಂದರೆ ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕ್ >> ಪಕ್ಷಗಳು. ಅವೆರಡರ ತತ್ವ ಸಿದ್ಧಾಂತಗಳು ತದ್ವಿರುದ್ಧವಾದವುಗಳೇ. ಆದರೆ ನಮ್ಮ ಭಾರತ >> ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕ್ ರಾಷ್ಟ್ರ (ಪ್ರಜಾಪ್ರಭುತ್ವ ಮತ್ತು ಗಣರಾಜ್ಯ). >> ಪ್ರಜಾಪ್ರಭುತ್ವವೆಂದರೆ ಎಲ್ಲರಿಗೂ ತಿಳಿದಿರುವಂತೆ " ಜನರಿಂದ, ಜನರಿಗಾಗಿ, ಜನರಿಂದಲೇ >> ನಡೆಯುವ ಸರ್ಕಾರ", ಅಂದರೆ ಜನರ ಒಳಿತಿಗಾಗಿ ಶ್ರಮಿಸುವ ಚುನಾಯಿತ ಪ್ರತಿನಿಧಿಗಳ ಆಡಳಿತ >> ಮತ್ತು ಯಾವುದೇ ಸಂದರ್ಭದಲ್ಲಿ ಚುನಾಯಿಸಿದ ಮತದಾರರಿಗೆ ತಮ್ಮ ಪ್ರತಿನಿಧಿಯನ್ನು ವಿರೋಧಿಸುವ >> / ಜನಪ್ರತಿನಿಧಿಯು ಜಾರಿಗೆ ತಂದ ಕಾನೂನುಗಳನ್ನು ತಡೆಹಿಡಿಯುವ ಅಧಿಕಾರವಿರುತ್ತದೆ. ಸರಕಾರ >> ಜನರ ಶ್ರೇಯೋಭಿವೃದ್ಧಿಗಾಗಿ ದುಡಿಯಬೇಕು ಹೊರತಾಗಿ ಜನರನ್ನು ತಮ್ಮ ಇಷ್ಟಾರ್ಥಕ್ಕಾಗಿ >> ಬಳಸಿಕೊಳ್ಳುವುದು ಡೆಮಾಕ್ರೆಸಿಯ ಅಪಹಾಸ್ಯವೇ ಸರಿ. ಗಣರಾಜ್ಯವೆಂದರೆ ಒಂದು ಸಂವಿಧಾನ ಅಥವಾ >> ಆಳ್ವಿಕೆಗೆ (ಸರಕಾರಕ್ಕೆ) ಒಳಪಟ್ಟೆರುವಂಥದ್ದು ಆಡಳಿತ ವಂಶ ಪಾರಂಪರ್ಯವಾಗಿರದೆ ಅಧಿಕಾರ >> ಚುನಾಯಿತ ಜನಪ್ರತಿನಿಧಿಗಳ ಆಯ್ಕೆ ಮತ್ತವರ ಆಯ್ಕೆಯಿಂದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ >> (ಸಂವಿಧಾನದ ಒಡೆಯ) ಚುನಾವಣೆ. (A republic is a form of government in which the >> country is considered a "public matter" (Latin: res publica), not the >> private concern or property of the rulers, and where offices of state are >> subsequently directly or indirectly elected or appointed rather than >> inherited ). ಆದರೆ ಸದ್ಯದ/ ಮುಂದಿನ ಪರಿಸ್ಥಿತಿಗಳನ್ನು ಗಮನಿಸಿದರೆ ಎರಡೂ ಪದಗಳು ತಮ್ಮ >> ನಿಜಾರ್ಥಗಳನ್ನು ಕಳೆದುಕೊಂಡು ಸಂವಿಧಾನದ ಪರಿಭಾಷೆಯನ್ನೇ ಬದಲಿಸಲು ಹೊರಟಿರುವುದು ಭಾರತ >> ಸಂವಿಧಾನದ ದುರಂತವೇ ಸರಿ. >> >> ಆಗಷ್ಟ್ ೧೫-೧೯೪೭ರ್ಂದು ಪಾಕಿಸ್ಥಾನವೆಂಬ ದಾಯಾದಿಯೊಂದಿಗೆ ಭಾರತ ಸ್ವತಂತ್ರ ದೇಶವಾಗಿ ರೂಪ >> ತಾಳಿತಾದರೂ, ಭಾರತ ಸರ್ಕಾರದ ಕಾಯಿದೆಯೊಂದಿಗೆ ಪಂಡಿತ್ ಜವಹರಲಾಲ್ ನೆಹರು ನೇತೃತ್ವದಲ್ಲಿ >> ಆಡಳಿತ ನಡೆಸುವ ಅನಿವಾರ್ಯತೆ ಎದುರಾಗಿತ್ತು. ದೇಶ ಸ್ವತಂತ್ರವಾಗಿದ್ದರೂ ಬ್ರಿಟಿಷರ ಕಾಯಿದೆ >> ಕಾನೂನುಗಳು ಜಾರಿಯಲ್ಲಿದ್ದವು. ಅಂದಿನವರೆಗೂ ಭಾರತ ಕಿಂಗ್ ಜಾರ್ಜ್ ೬ ಮತ್ತು ಲಾರ್ಡ್ ಮೌಂಟ್ >> ಬ್ಯಾಟನ್ ರ ಅಡಿಯಾಳಾಗಿತ್ತು. ಅದಕ್ಕಾಗಿ ಆಗಷ್ಟ್ ೨೮-೧೯೪೭ರಂದು ಡಾ. ಬಿ. ಆರ್. ಅಂಬೇಡ್ಕರ್ >> ನೇತೃತ್ವದಲ್ಲಿ ಸಂವಿಧಾನ ರಚನೆಗಾಗಿ ಕರಡು ಸಮಿತಿಯನ್ನು ರಚಿಸಲಾಯಿತು. ಆ ಸಮಿತಿಯು ನವೆಂಬರ್ >> ೪-೧೯೪೭ರಂದೇ ಭಾರತದ ಸ0ಸತ್ತಿನಲ್ಲಿ ಕರಡು ಸಂವಿಧಾನವನ್ನು ಮಂಡಿಸಲಾಯಿತು. >> ಆದರೂ ಅಸೆಂಬ್ಲಿಯ ೩೦೮ ಸದಸ್ಯರ ಸುಮಾರು ೧೬೬ ದಿನಗಳ ಚರ್ಚೆಯ ಅನಂತರ ಅನೇಕ ಬದಲಾವಣೆ, >> ಸೇರ್ಪಡೆಗಳ ನಂತರ ಅಂದರೆ ೨ ವರ್ಷ ೧೧ ತಿಂಗಳು ೧೮ ದಿನಗಳ ತರುವಾಯ ನವೆಂಬರ್ ೨೬-೧೯೪೯ರಂದು >> ಎರಡು ಭಾಷೆಗಳಲ್ಲಿ ಭಾರತೀಯ ಸಂವಿಧಾನ (Constitution of India) ಸರ್ವಸಮ್ಮತವಾಗಿ >> ಅನುಮೋದಿಸಲ್ಪಟ್ಟಿತು. ೧೯೩೦ ಜನವರಿ ೨೬ ರ ಲಾಹೋರಿನ ಸಂಪೂರ್ಣ ಸ್ವರಾಜ್ಯದ ಸವಿ ನೆನಪಿಗಾಗಿ >> ಇನ್ನೆರಡು ತಿಂಗಳುಗಳ ನಂತರ ಭಾರತ ತನ್ನದೇ ಆದ ಸ್ವಂತ ಸಂವಿಧಾನದೊಂದಿಗೆ ಭಾರತ ಗಣರಾಜ್ಯವಾಗಿ >> ಕರೆಯಲ್ಪಟ್ಟಿತು. >> ಈ ಸಂವಿಧಾನವು ಬೇರೆ ಬೇರೆ ರಾಷ್ಟ್ರಗಳ ಸಂವಿಧಾನಗಳ ಕೂಲಂಕಷ ಅಧ್ಯಯನದ ಫಲವಾಗಿ >> ರಚಿಸಲ್ಪಟ್ಟ ವಿಶ್ವದ ಅತಿ ದೊಡ್ಡ ಅತ್ಯುತ್ತಮ ಕಾಯಿದೆಗಳ ಭಂಡಾರವಾಗಿದ್ದು, ಇದರಲ್ಲಿ ೩೯೭ >> ಆರ್ಟಿಕಲ್ಸ್ ಮತ್ತು ೧೨ ಶೆಡ್ಯೂಲ್ಸ್ ಗಳು ಪ್ರತಿಯೋರ್ವ ಭಾರತೀಯನ ಸ್ವಾತಂತ್ರ್ಯದ ರಕ್ಷಣೆಗೆ >> ಕಟಿ ಬದ್ಧವಾದವುಗಳು. ಬ್ರಿಟನ್ನಿನ "ಸಂಸತ್ ಸ್ವರೂಪದ ಸರಕಾರ", ಅಮೇರಿಕಾದ "ಸರ್ವೋಚ್ಛ >> ನ್ಯಾಯಾಂಗ ವ್ಯವಸ್ಥೆ", ಕೆನೆಡಾದ "ಕೇಂದ್ರೀಕೃತ ಫೆಡೆರಲ್ ರಾಜ್ಯ ಸ್ವರೂಪದ ಸರಕಾರ", >> ಐರ್ಲೆಂಡಿನ "ನಿರ್ದೇಶಾತ್ಮಕ ತತ್ವಗಳು (directive principles of state policy), >> ಆಸ್ಟ್ರೇಲಿಯಾದ "ಸಮಕಾಲೀನ ಮತ್ತು ಪರಸ್ಪರ ಸಹಕಾರದ ಆಡಳಿತ ಹಂಚಿಕೆ", ಜಪಾನಿನ "ನ್ಯಾಯ ಬದ್ಧ >> ಪೋಲೀಸ್ ವ್ಯವಸ್ಥೆ" ಮುಂತಾದ ಅಂಶಗಳು ಭಾರತದ ಸಂವಿಧಾನದ ವಿಶ್ವರೂಪದ ಅಂಗವಾಗಿವೆ. ಹೀಗೆ >> ಬೇರೆ ಬೇರೆ ಸಂವಿಧಾನಗಳ ಒಳ್ಳೆಯ ಅಂಶಗಳೆಲ್ಲವನ್ನೂ ತನ್ನಲ್ಲಿ ಅಡಕ ಮಾಡಿಕೊಂಡಿರುವ ಈ >> ಸಂಗ್ರಹವು ಎಲ್ಲಾ ಮಾನವೀಯ ನಾಗರೀಕ ನೀತಿ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಎಂದಿಗೂ >> ಹಿಂದೇಟು ಹಾಕಿಲ್ಲ. >> ಸಂವಿಧಾನದೊಂದಿಗೇ ಭಾರತೀಯರಿಗೆ ಉಡುಗೊರೆಯಾಗಿ ದೊರೆತದ್ದು ತಮ್ಮ ಹಕ್ಕು ಮತ್ತು >> ಕರ್ತವ್ಯಗಳು. ಇಂದಿಗೂ ಪ್ರತಿ ಭಾರತೀಯನ ಹೃದಯ ಮತ್ತು ಮನಸ್ಸಿನಲ್ಲಿ ತನ್ನ ದೇಶ ಮತ್ತು ತನ್ನ >> ಜನಗಳ ಬಗ್ಗೆ ಮಮಕಾರ ಉಳಿದಿದ್ದರೆ ಅದು ಕೇವಲ ಮೇಲಿನ ಮೂರು ಅಂಶಗಳಿಂದಲೇ ಎನ್ನಬಹುದು. ಭಾರತ >> ಸಂವಿಧಾನ ದೇಶದ ಆಡಳಿತವನ್ನು ಕೇಂದ್ರೀಕೃತ ರಾಜ್ಯ ಸರಕಾರವೆಂಬ ವ್ಯವಸ್ಥೆಯನ್ನು ಕೊಡುಗೆಯಾಗಿ >> ಸುಲಲಿತ ಆಡಳಿತವನ್ನು ಗುರಿಯಾಗಿರಿಸಿ ಅಳವಡಿಸಿದೆ. ( federal in structure with >> certain unitary features ). ಅದಕ್ಕಾಗಿಯೇ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ >> ಎಂದು ಮೂರು ವಿಭಾಗಗಳು ಸಂವಿದಾನವೆಂಬ ಆಟೋ ರಿಕ್ಷಾದ ಮೂರು ಚಕ್ರಗಳಿವೆ. ಅಲ್ಲದೆ >> ಶಾಸಕಾಂಗದಲ್ಲಿಯೂ ಕೇಂದ್ರದಲ್ಲಿ ರಾಜ್ಯಸಭೆ (Council of States ) ಮತ್ತು ಲೋಕಸಭೆ(House >> of the People )ಯೆಂಬ ಮನೆಗಳೂ, ಪ್ರಧಾನ ಮಂತ್ರಿಯು ಲೋಕಸಭೆ, ಸರಕಾರದ ಮುಖ್ಯಸ್ಥರಾಗಿಯೂ >> ಪ್ರತಿ ರಾಜ್ಯದಲ್ಲಿ ವಿಧಾನ ಸಭೆ (Legislative Assembly), ಕೆಲವು ರಾಜ್ಯಗಳು ವಿಧಾನ >> ಪರಿಷತ್ (State Legislative Council), ರಾಜ್ಯ ಸರಕಾರದ ಮುಖ್ಯಸ್ಥರಾಗಿ ಮುಖ್ಯಮಂತ್ರಿಯು >> ತನ್ನ ಮಂತ್ರಿಮಂಡಲದ ಸಹಕಾರದಿಂದ ಆಡಳಿತ ನಡೆಸತಕ್ಕುದು. ರಾಷ್ಟ್ರಪತಿಯು ಕೇಂದ್ರ ಕಾರ್ಯಾಂಗದ >> ಮುಖ್ಯಸ್ಥನಷ್ಟೇ ಅಲ್ಲದೆ ಭಾರತ ಗಣರಾಜ್ಯದ ಸೇನಾ ದಂಡನಾಯಕನಾಗಿರುತ್ತಾನೆ, ಅದೇ ರೀತಿ >> ರಾಜ್ಯಪಾಲ ರಾಜ್ಯದ ಆಗು ಹೋಗುಗಳ ವೀಕ್ಷಕ, ನಿಯಂತ್ರಕನಾಗಿರುತ್ತಾನೆ. >> >> ಸತ್ಯಮೇವ ಜಯತೆಯೆಂಬ ಧ್ಯೇಯ ವಾಕ್ಯ, ಕೇಸರಿ (ಧೈರ್ಯ ಮತ್ತು ತ್ಯಾಗದ ಪ್ರತೀಕ) ಬಿಳಿ >> (ಸತ್ಯ ಮತ್ತು ಶಾಂತಿಯ ಪ್ರತೀಕ) ಹಸಿರು(ನಂಬಿಕೆ ಮತ್ತು ಸಂಮೃದ್ಧಿಯ ಪ್ರತೀಕ) ಬಣ್ಣಗಳಿಂದ >> ರಾರಾಜಿಸುವ ತ್ರಿವರ್ಣ ಧ್ವಜ ದೇಶದ ಪ್ರಗತಿಯ ಅಶೋಕ ಚಕ್ರವನ್ನು ಒಳಗೊಂಡಿದೆ. ಆದರೆ ಇಂದು ಆ >> ತ್ರಿವರ್ಣವೂ ತನ್ನ ನಿಜದ ಅರ್ಥಗಳನ್ನು ಕಳೆದುಕೊಂಡು ರಾಜಕೀಯ ಪಕ್ಷಗಳ ಧರ್ಮಾಧಾರಿತ >> ಅರ್ಥಗಳನ್ನು ಪಡೆದುಕೊಂಡು, ಕೇಸರೀಕರಣ- ಬೆಳಗುವಿಕೆ- ಹಸಿರೀಕರಣ ಎಂಬಲ್ಲಾ ಪದಗಳು ದೇಶದ >> ಐಕ್ಯತೆ, ಸಾಮರಸ್ಯಗಳಿಗೆ ತೊಡಕಾಗಿವೆ. ಜಾತ್ಯಾತೀತತೆಯಂಥಾ ಅರ್ಥ ವಿಹೀನ ಪದಗಳು, >> ಪ್ರಾದೇಶಿಕತೆಯ ಕೂಗುಗಳು, ಪ್ರತ್ಯೇಕತೆಯ ಹಟಗಳು, ನದಿ ನೀರಿಗಾಗಿ, ಭಾಷಾವಾರು >> ಪ್ರಾಂತ್ಯರಚನೆಯಂಥ ಅಂತರ್ರಾಜ್ಯ ವಿವಾದಗಳು, ಗ್ರಾಮೀಣಾಭಿವೃದ್ಧಿಯ ಸುಳ್ಳು ನಾಟಕಗಳು, >> ದಿನನಿತ್ಯ ಏರುತ್ತಿರುವ ಹಣದುಬ್ಬರ, ತೈಲ ಅನಿಲ ಬೆಲೆಗಳು, ದೇಶದ ಅವಿಭಾಜ್ಯ ಅಂಗವೇ ಆಗಿರುವ >> ಭೃಷ್ಟಾಚಾರ, ದೇಶದ ಆಡಳಿತ ಸಂಸ್ಥೆಗಳ ದುರ್ಬಳಕೆ ಇತ್ಯಾದಿಗಳು ದೇಶ ಎದುರಿಸುತ್ತಿರುವ >> ಸಮಸ್ಯೆಗಳ ಸೈನ್ಯದ ಸೇನಾನಿಗಳು. ಇವಾವುದರ ಅರಿವೇ ಇಲ್ಲದಂತಹ ದುರಾಡಳಿತ, ಸಮಯ ಸಾಧನೆ, ಜನರ >> ಕಣ್ಣೊರೆಸುವ ನಾಟಕಗಳಲ್ಲಿ ವ್ಯಸ್ಥರಾಗಿರುವ ಜನಪ್ರತಿನಿಧಿಗಳು, ಅವರ ಹಿಡಿತದಲ್ಲಿ >> ನರಳುತ್ತಿರುವ ನ್ಯಾಯಾಂಗ, ಕಾರ್ಯಾಂಗ , ಸಿ.ಬಿ.ಐ., ಲೋಕಾಯುಕ್ತದಂಥ ವಿಚಾರಣಾ ಸಂಸ್ಥೆಗಳು >> ಮತ್ತು ಪೋಲೀಸ್ ವ್ಯವಸ್ಥೆ, ಇವೆಲ್ಲವೂ ೬೭ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿಯೂ ಇನ್ನೂ >> ಅಭಿವೃದ್ಧಿಶೀಲ ರಾಷ್ಟ್ರವಾಗಿರುವ ಭಾರತಕ್ಕೆ ಹಿಡಿದ ಕೈಗನ್ನಡಿಗಳು. ಏನೇ ಆಗಲಿ ನಾವು >> ನಿಜವಾದ ಸತ್ಪ್ರಜೆಗಳು, ಎಚ್ಚೆತ್ತು ಕೊಳ್ಳುತ್ತಿರುವ ಭಾರತೀಯರು. ಗಣರಾಜ್ಯೋತ್ಸವದ ಈ >> ಸಂದರ್ಭದಲ್ಲಿ ತಮ್ಮ ತ್ಯಾಗ ಬಲಿದಾನಗಳಿಂದ ದೇಶವನ್ನು ಕಾಪಾಡಿದ ಕಾಯುತ್ತಿರುವ ಭೂಸೇನೆ, >> ವಾಯು ಸೇನೆ ಹಾಗೂ ನೌಕಾ ಸೇನೆಯ ಎಲ್ಲಾ ಸೈನಿಕರಿಗೂ, ದೇಶವನ್ನು ಅಭಿವೃದ್ದಿಯ ಪಥದೆಡೆಗೆ >> ಕೊಂಡುಯ್ಯುತ್ತಿರುವ ಎಲ್ಲಾ ವಿಜ್ಞಾನಿ, ತಂತ್ರಜ್ಞರಿಗೂ, ದೇಶದ ಸವೆಯುತ್ತಿರುವ ಬೆನ್ನೆಲುಬು >> ರೈತವರ್ಗಕ್ಕೂ ಸದಾ ಋಣಿಯಾಗಿರುತ್ತಾ, ನಮಿಸುತ್ತಾ, ನೆನೆಯುತ್ತಾ, ದೇಶದ ಸರ್ವಾಂಗೀಣ >> ಅಭಿವೃದ್ಧಿಯನ್ನು ಆಶಿಸುತ್ತಾ ಉಪಸಂಹಾರಕ್ಕೆ ಮುನ್ನ, >> >> ಕೊನೆಯಲ್ಲಿ ಗಣರಾಜ್ಯವೆಂದರೆ >> ಸರಕಾರದ ಅಧಿಕಾರ ಜನರ ಹಿಡಿತದಲ್ಲಿರಬೇಕು ( The power of government is held by >> the people). >> ಜನರು ಸೂಕ್ತ ಪ್ರತಿನಿಧಿಗಳಿಗೆ ತಮ್ಮ ಪರವಾಗಿ ದೇಶದ ಒಳಿತಿಗೆ ಆಡಳಿತ ನಡೆಸುವ ಪರಮಾಧಿಕಾರ >> ನೀಡಿರುತ್ತಾರೆ ( The people give power to leaders they elect to represent >> them and serve their interests). >> ಚುನಾಯಿತ ಜನಪ್ರತಿನಿಧಿಗಳು ದೇಶದ ಸರ್ವ ಜನರ ಹಿತಕ್ಕಾಗಿ ತಮ್ಮ ವೈಯಕ್ತಿಕ >> ಹಿತಾಸಕ್ತಿಗಳನ್ನು ಬದಿಗಿರಿಸಿ ಬದ್ಧರಾಗಿರಬೇಕು (The representatives are >> responsible for helping all the people in the country, not just a few >> people). >> >> Regards >> >> ERANNA V >> >> -- >> 1. If a teacher wants to join STF, visit >> http://karnatakaeducation.org.in/KOER/en/index.php/Become_a_STF_groups_member >> 2. For STF training, visit KOER - >> http://karnatakaeducation.org.in/KOER/en/index.php >> 4. For Ubuntu 14.04 installation, visit >> http://karnatakaeducation.org.in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequently_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
