ಆತ್ಮೀಯ ಪ್ರಶ್ನೆಪತ್ರಿಕೆ ತಯಾರಕರೇ,

ನಾವು ಹಳ್ಳಿಮೇಷ್ಟ್ರು. ಅಂದರೆ ಹಳ್ಳಿ ಶಾಲೆಗಳಲ್ಲಿ, ಹಳ್ಳಿ ಮಕ್ಕಳಿಗೆ ಮೇಷ್ಟ್ರು. ನಮ್ಮ
ಶಾಲೆಗಳಲ್ಲಿ ನಿಜವಾದ ಕ್ಲರ್ಕ್ ಇಲ್ಲ. ನೀಡಬೇಕಾದ ಮಾಹಿತಿಗಳನ್ನೆಲ್ಲಾ ನಾವೇ ಬರೆದು
ಕೊಡಬೇಕು. ನಾವೇ ಕ್ಲರ್ಕ್. ಎಷ್ಟು ಮಾಹಿತಿಗಳನ್ನು ನೀಡಬೇಕು ಎಂದು ನಿಮಗೇ ಗೊತ್ತು.
ಡಿ-ಗ್ರೂಪ್ ನೌಕರರಿಲ್ಲ. ನಾವೇ ಡಿ-ಗ್ರೂಪ್ ನೌಕರರು. ಶೌಚಾಲಯವನ್ನು ಸಹ
ಸ್ವಚ್ಛಗೊಳಿಸುತ್ತೇವೆ. ಎಲ್ಲಾ ವಿಷಯಗಳಿಗೂ ಶಿಕ್ಷಕರಿಲ್ಲ. ಏಕೆಂದರೆ ನಮ್ಮದು ಸರ್ಕಾರಿ
ಶಾಲೆ. ಒಂದಿದ್ದರೆ, ಹತ್ತಾರು ಕೊರತೆ. ಹಳ್ಳಿಗಳಲ್ಲಿ ಹೆಚ್ಚಿನ ಮಕ್ಕಳು ಶಾಲೆಗೆ ಬರುವುದೇ
ಕಷ್ಟ. ಮನೆಗಳಲ್ಲಿ ಎಷ್ಟೋ ಕಷ್ಟದಿಂದ ಬದುತ್ತಿರುವ ಮಕ್ಕಳ್ಳನ್ನು ತುಂಬಾ ಸಲ ಪೋಷಕರು ತಮ್ಮ
ಕೆಲಸಗಳಿಗೆ ಕರೆದುಕೊಂಡು ಶಾಲೆಗೆ ಬರದೇ, ಎಷ್ಟೋ ದಿನಗಳ ನಂತರ ಶಾಲೆಗೆ ಬರುವ ಮಕ್ಕಳು
ಇದ್ದಾರೆ. ಶಾಲೆ ಮುಗಿದ ನಂತರ ಮನೆಗೆ ತೆರಳಿ ಓದಲು ಸಮಯವಿಲ್ಲದ ಎಷ್ಟೋ ಮಕ್ಕಳು ಇದ್ದಾರೆ.
ಇಂತಹ ಮಕ್ಕಳಿಗೆ ಶಾಲೆಯಲ್ಲಿ ನಮಗೆ ದೊರೆಯುವ ಸಮಯದಲ್ಲಿ ನಾವು ಮಕ್ಕಳನ್ನು ಪರೀಕ್ಷೆಗೆ
ಎಷ್ಟರ ಮಟ್ಟಿಗೆ ಸಿದ್ದಪಡಿಸಬಹುದು? ಆಲೋಚಿಸಿ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಇರುವ
ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಎಷ್ಟು ಸಮಯ ಬೋಧನಾ-ಕಲಿಕೆ ಪ್ರಕ್ರಿಯೆಯಲ್ಲಿ
ತೊಡಗಿಸಿಕೊಳ್ಳಲ್ಲು ಸಾಧ್ಯ ಯೋಚಿಸಿ. ಹೇಳಿಕೊಳ್ಳಲಾಗದ ಇನ್ನು ಎಷ್ಟೋ ಸಮಸ್ಯೆಗಳ ಮಧ್ಯೆ
ಇದ್ದೇವೆ. ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ತಯಾರು ಮಾಡದ ಸ್ಥಿತಿಯಲ್ಲಿ ಇದ್ದೇವೆ.
ಇಂತಹ ಸಂದರ್ಭಗಳಲ್ಲಿ ಪ್ರಶ್ನೆಪತ್ರಿಕೆಗಳಲ್ಲಿ ನಿಮ್ಮ ಅತಿಯಾದ ಬುದ್ದಿವಂತಿಕೆಯನ್ನು ಹಳ್ಳಿ
ಮಕ್ಕಳ ಮೇಲೆ ಪ್ರಯೋಗ ಮಾಡಿದರೆ ಅವರ ಭವಿಷ್ಯವೇನು? ನಗರದಲ್ಲಿ ಕಲಿಯುತ್ತಿರುವ
ವಿದ್ಯಾರ್ಥಿಗಳಿಗೆ ಬಹುತೇಕ ಪೋಷಕರು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.
ಟ್ಯೂಷನ್ ಗೆ ಸೇರಿಸುತ್ತಾರೆ, ಮನೆಯಲ್ಲಿ ಹೆಚ್ಚಾಗಿ ಅಭ್ಯಾಸ ಮಾಡಿಸುತ್ತಾರೆ. ಆದರೆ
ಹಳ್ಳಿಗಳಲ್ಲಿ ಇದು ವಿರಳ. ಕೆಲವರು ಶ್ರಮ ಪಡುತ್ತಾರೆ. ಇಲ್ಲವೆಂದಲ್ಲ. ಆದರೆ ಇದು ನಗರ
ಪ್ರದೇಶಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಈ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ
ವಿಜ್ಞಾನ ಕಬ್ಬಿಣದ ಕಡಲೆ. ಏಕೆಂದರೆ ಪ್ರಶ್ನೇಪತ್ರಿಕೆ ಹಾಗಿರುತ್ತದೆ. ಕೊನೆಗೆ ಪಿ.ಯು.ಸಿ
ಯಲ್ಲಿ ವಿಜ್ಞಾನದ ಸಹವಾಸವೇ ಬೇಡವೆಂದು ಕಾಮರ್ಸ್ ಅಥವಾ ಕಲಾ ವಿಭಾಗಕ್ಕೆ ಹೋಗುತ್ತಾರೆ. ನೀವೇ
ಗಮನಿಸಿ ಬಹುತೇಕ ಪ್ರೌಢಶಾಲೆಗಳಲ್ಲಿ ಗಣಿತ ಹಾಗೂ ವಿಜ್ಞಾನ ಶಿಕ್ಷಕರ ಕೊರತೆಯೇ
ಹೆಚ್ಚು.(ಇದರಿಂದ ನಮ್ಮ ಶಾಲೆಯೂ ಹೊರತಾಗಿಲ್ಲ.) ಇದರೆ ಜೊತೆಗೆ ಶಾಲೆಗಳಲ್ಲಿ ಮೂಲಭೂತ
ಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಮುಂದೆ ಡಾಕ್ಟರ್ ಹಾಗೂ ಇಂಜಿನಿಯರ್ ಗಳು ನಮ್ಮಲ್ಲಿಯೇ
ಹೆಚ್ಚು ಎಂದು ಉತ್ತರಗಳು ಬರುತ್ತಿವೆ. ಹೌದು. ಆದರೆ ಎಸ್.ಎಸ್.ಎಲ್.ಸಿ ಪರೀಕ್ಷೆ
ಬರೆದವರೆಲ್ಲಾ ಡಾಕ್ಟರ್ ಹಾಗೂ ಇಂಜಿನಿಯರ್ ಆಗುತ್ತಾರೆಯೇ? ಮುಂದಿನ ಹಂತದ ಪರೀಕ್ಷೆಗಳಲ್ಲಿ
ಅದಕ್ಕೆ ತಕ್ಕಂತೆ ಪರೀಕ್ಷೆಗಳನ್ನು ಎದುರಿಸುವುದು ಇದ್ದೇ ಇರುತ್ತದೆ. ಆದ್ದರಿಂದ ವಿಜ್ಞಾನ
ಶಿಕ್ಷಕರಾದ ನಾವುಗಳು ಎಲ್ಲಾ ಹಂತದ ಎಲ್ಲಾ ಪ್ರದೇಶದ ವಿದ್ಯಾರ್ಥಿಗಳನ್ನು ಗಮನದಲ್ಲಿ
ಇಟ್ಟುಕೊಂಡು ಪ್ರಶ್ನೆಪತ್ರಿಕೆ ತಯಾರಿಸಿದರೆ ಮಕ್ಕಳು ಹೆಚ್ಚಾಗಿ ವಿಜ್ಞಾನ ಕ್ಷೇತ್ರದಲ್ಲಿ
ಮುಂದುವರೆಯುತ್ತಾರೆ. ಹೊಸ ಹೊಸ ರೀತಿಯ ಪ್ರಶ್ನೆಗಳಿರಬೇಕು. ಆದರೆ ಅವೇ ಹೆಚ್ಚಾಗಿರಬಾರದು.
ಇದು ನಮ್ಮ ಪ್ರದೇಶದ ಮಕ್ಕಳ ಹಿತದೃಷ್ಟಿಯಿಂದ.

ವಂದನೆಗಳೊಂದಿಗೆ

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to