On Mar 31, 2017 9:32 PM, "HAREESHKUMAR K Agasanapura" <[email protected]>
wrote:

> http://m.prajavani.net/article/2017_03_23/479353
>
> *‘ಸಂತೋಷ ಶ್ರೇಯಾಂಕ’ದಲ್ಲೂ ನಾವೇಕೆ ಕಳಪೆ?*
>
> 23 Mar, 2017
>
> ನಾಗೇಶ್ ಹೆಗಡೆ
>
>
> <https://www.facebook.com/sharer/sharer.php?u=https%3A%2F%2Fgoo.gl%2FBJwHtN>
> <https://twitter.com/intent/tweet?text=%E2%80%98%E0%B2%B8%E0%B2%82%E0%B2%A4%E0%B3%8B%E0%B2%B7+%E0%B2%B6%E0%B3%8D%E0%B2%B0%E0%B3%87%E0%B2%AF%E0%B2%BE%E0%B2%82%E0%B2%95%E2%80%99%E0%B2%A6%E0%B2%B2%E0%B3%8D%E0%B2%B2%E0%B3%82+%E0%B2%A8%E0%B2%BE%E0%B2%B5%E0%B3%87%E0%B2%95%E0%B3%86+%E0%B2%95%E0%B2%B3%E0%B2%AA%E0%B3%86%3F+https%3A%2F%2Fgoo.gl%2FBJwHtN>
> <https://plus.google.com/share?url=https%3A%2F%2Fgoo.gl%2FBJwHtN>
> <http://www.pinterest.com/pin/find/?url=https%3A%2F%2Fgoo.gl%2FBJwHtN>
> <http://www.linkedin.com/shareArticle?mini=true&title=%E2%80%98%E0%B2%B8%E0%B2%82%E0%B2%A4%E0%B3%8B%E0%B2%B7+%E0%B2%B6%E0%B3%8D%E0%B2%B0%E0%B3%87%E0%B2%AF%E0%B2%BE%E0%B2%82%E0%B2%95%E2%80%99%E0%B2%A6%E0%B2%B2%E0%B3%8D%E0%B2%B2%E0%B3%82+%E0%B2%A8%E0%B2%BE%E0%B2%B5%E0%B3%87%E0%B2%95%E0%B3%86+%E0%B2%95%E0%B2%B3%E0%B2%AA%E0%B3%86%3F+&url=https%3A%2F%2Fgoo.gl%2FBJwHtN>
>
> ಕಳೆದ ಮೂರು ದಿನಗಳಿಂದ ಸಾಲುಗಟ್ಟಿ ‘ಅಂತರರಾಷ್ಟ್ರೀಯ ದಿನಾಚರಣೆ’ಗಳು ಬಂದವು: ಮಾರ್ಚ್ 20-
> ಸಂತಸ ದಿನ, 21- ಅರಣ್ಯ ದಿನ, 22- ಜಲದಿನ. ಆ ಸಾಲಿನಲ್ಲಿ ನಾಲ್ಕನೆಯದಾಗಿ ಇಂದು, 23-
> ಹವಾಮಾನ ದಿನ ಬಂದಿದೆ.
>
>
>
> ಇವುಗಳಲ್ಲಿ ಒಂದಾದರೂ ಸಂಭ್ರಮ ಆಚರಿಸುವ ದಿನವೆ? ಹವಾಮಾನ ದಿನದಿನಕ್ಕೆ ಹದಗೆಡುತ್ತಿದೆ;
> ನೀರಿನ ಹಾಹಾಕಾರ ಎಲ್ಲ ಕಡೆಗಳಿಂದಲೂ ಕೇಳಬರುತ್ತಿದೆ. ಇನ್ನು ಅರಣ್ಯಗಳ ಸ್ಥಿತಿಗತಿಯಂತೂ
> ಕೇಳುವುದೇ ಬೇಡ. ಮತ್ತೆ, ಮಾರ್ಚ್ 20ರ ‘ಅಂತರಾಷ್ಟ್ರೀಯ ಸಂತಸ ದಿನ’- ಅದೊಂದಾದರೂ ಸಂತಸದ
> ದಿನ ಆಗಿರಬೇಕಲ್ಲ?
>
>
>
> *ಅದನ್ನೇ ತುಸು ವಿವರವಾಗಿ ನೋಡೋಣ:*ದುಡ್ಡು ಕಾಸು, ಬಂಗ್ಲೊ, ಕಾರುಗಳೇ ಶ್ರೀಮಂತಿಕೆಯ
> ಸೂಚಿಯಲ್ಲ ಎಂಬುದು ನಮಗೆಲ್ಲ ಗೊತ್ತಿದೆ. ಈ ಮನುಷ್ಯನೆಂಬ ಪ್ರಾಣಿ ಇಂಥ ಬರೀ ಭೋಗಲಾಲಸೆಯ
> ಬೆನ್ನಟ್ಟಿದ್ದರಿಂದಲೇ ಪ್ರಪಂಚದ ಎಲ್ಲ ಜೀವಿಗಳ ಬದುಕೂ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂಬುದು
> ವಿಶ್ವಮಟ್ಟದ ಚಿಂತಕರಿಗೂ ಈಗ ಗೊತ್ತಾಗಿದೆ.
>
>
>
> ಅಭಿವೃದ್ಧಿಯ, ಜಿಡಿಪಿಯ ಮಂತ್ರವನ್ನು ಜಪಿಸುತ್ತ ಸಾಮೂಹಿಕ ವಿನಾಶದತ್ತ ಚಲಿಸುವ ಬದಲು
> ‘ಸಂತಸ’ವನ್ನೇ ಸಾಮಾಜಿಕ ಪ್ರಗತಿಯ ಅಳತೆಗೋಲಾಗಿ ಬಳಸುವ ಸಾಧ್ಯತೆಗಳ ಬಗ್ಗೆ ಚರ್ಚೆ
> ನಡೆಯುತ್ತಿದೆ. ನಮ್ಮ ಪಕ್ಕದ ಭೂತಾನ್ ದೇಶ ಕಳೆದ ಮೂರು ದಶಕಗಳಿಂದ ‘ಜಿಡಿಪಿ’ ಎಂಬ
> ಅಭಿವೃದ್ಧಿ ಸೂಚ್ಯಂಕದ ಬದಲು ‘ಸಂತಸ ಸೂಚ್ಯಂಕ’ವನ್ನೇ ಬಳಸುತ್ತಿದೆ.
>
>
>
> ಅದೇ ಮಾದರಿಯನ್ನು ಮುಂದಿಟ್ಟುಕೊಂಡು 2012ರಲ್ಲಿ ವಿಶ್ವಸಂಸ್ಥೆಯ ಉನ್ನತ ಮಟ್ಟದ ತಜ್ಞರು
> ಸಭೆ ನಡೆಸಿದ್ದರು. ಹಣಕಾಸಿನ ಶ್ರೀಮಂತಿಕೆಯ ಹೊರತಾಗಿ ಬದುಕಿನಲ್ಲಿ ನೆಮ್ಮದಿ ಕೊಡಬಲ್ಲ ಬೇರೆ
> ಏನೇನು ಅಂಶಗಳಿವೆ ಎಂಬುದನ್ನು ವೈಜ್ಞಾನಿಕವಾಗಿ ಅಳೆದು ನೋಡಲು ಸಾಧ್ಯವೇ ಎಂಬುದನ್ನು
> ಚರ್ಚಿಸಿದ್ದರು.
>
>
>
> ಅಂದಿನಿಂದ ಪ್ರತಿ ವರ್ಷ ‘ವಿಶ್ವ ಸಂತಸ ವರದಿ’ಯನ್ನು (ವರ್ಲ್ಡ್ ಹ್ಯಾಪಿನೆಸ್
> ರಿಪೋರ್ಟನ್ನು) ಮಾರ್ಚ್ 20ರಂದು ವಿಶ್ವಸಂಸ್ಥೆ ಬಿಡುಗಡೆ ಮಾಡುತ್ತ ಬಂದಿದೆ. ವಿವಿಧ ಬಗೆಯ
> ಮಾನದಂಡಗಳನ್ನು ಆಧರಿಸಿ ಯಾವ ದೇಶದ ಪ್ರಜೆಗಳು ಎಷ್ಟರಮಟ್ಟಿಗೆ ಸಂತೋಷದಿಂದ ಇದ್ದಾರೆ
> ಎಂಬುದನ್ನು ಸೂಚಿಸುವ ‘ಸಂತಸ ಶ್ರೇಯಾಂಕ’ ಪಟ್ಟಿಯನ್ನು ಕೂಡ ಅದೇ ವರದಿಯ ಜೊತೆಯಲ್ಲಿ ಅದೇ
> ದಿನ ವಿಶ್ವಸಂಸ್ಥೆ ಬಿಡುಗಡೆ ಮಾಡುತ್ತಿದೆ. ಆ ದಿನವನ್ನು ‘ಹ್ಯಾಪಿನೆಸ್ ಡೇ ಎಂದು ಆಚರಿಸೋಣ’
> ಎಂತಲೂ ಅದು ಕರೆ ನೀಡಿದೆ. ಮೊನ್ನೆ ಬಿಡುಗಡೆ ಮಾಡಿದ್ದು ಈ ಸರಣಿಯ 5ನೇ ‘ಸಂತಸ ಶ್ರೇಯಾಂಕ’
> ಪಟ್ಟಿ.
>
>
>
> ಒಟ್ಟು 155 ದೇಶಗಳ ಸಮೀಕ್ಷೆ ಮಾಡಿ ತಯಾರಿಸಲಾದ ಈಗಿನ ಶ್ರೇಯಾಂಕ ಪಟ್ಟಿಯ ಪ್ರಕಾರ ನಾರ್ವೆ
> ದೇಶ ಜಗತ್ತಿನಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಇಂಡಿಯಾ 122ನೇ ಸ್ಥಾನದಲ್ಲಿದೆ. ಹಿಂದಿನ
> ಬಾರಿ ಅಳೆದು ನೋಡಿದಾಗ ನಾಲ್ಕನೆಯ ಸ್ಥಾನದಲ್ಲಿದ್ದ ನಾರ್ವೆ ಈಗ ಮೊದಲ ಸ್ಥಾನಕ್ಕೆ ಏರಿದೆ.
> ನಾವು ನಾಲ್ಕು ಸ್ಥಾನ ಕಳೆದುಕೊಂಡಿದ್ದೇವೆ.
>
>
>
> ನಮ್ಮ ಅಕ್ಕಪಕ್ಕದ ಶ್ರೀಲಂಕಾ, ಬಾಂಗ್ಲಾದೇಶ, ಚೀನಾ, ನೇಪಾಳ, ಮಯಾನ್ಮರ್, ಕೊನೆಗೆ
> ಪಾಕಿಸ್ತಾನವೂ ನಮಗಿಂತ ತುಸು ಸಂತಸ ತುಂಬಿದ ದೇಶವೆಂದು ಈ ಪಟ್ಟಿಯಲ್ಲಿ ಹೇಳಲಾಗಿದೆ. ಅವರಿವರ
> ಸುದ್ದಿ ಹಾಗಿರಲಿ, ಇರಾಕ್ ಕೂಡ ನಮಗಿಂತ ಮೇಲಿದೆ. ಹೀಗೆ, ನಮ್ಮ ಆಚೀಚಿನ ಎಲ್ಲರಿಗಿಂತ ನಾವು
> ಅಸಂತುಷ್ಟಿಗಳೆಂಬ ಮಾಹಿತಿಯೇ ನಮ್ಮನ್ನು ಈ ಪಟ್ಟಿಯಲ್ಲಿ ಇನ್ನೂ ಕೆಳಕ್ಕೆ ತಳ್ಳಬಹುದೇನೊ.
>
>
>
> ಸಂತಸ ಸಮೀಕ್ಷೆಯಲ್ಲಿ ಆಯಾ ದೇಶದ ಪ್ರಜೆಯ ಆದಾಯ, ಆರೋಗ್ಯವಂತ ಬದುಕಿನ ನಿರೀಕ್ಷೆ,
> ಸಂಕಷ್ಟದಲ್ಲಿ ನೆರವಿಗೆ ಬರುವವರ ನಿರೀಕ್ಷೆ, ಧಾರಾಳತನ, ಸ್ವಾತಂತ್ರ್ಯ ಮತ್ತು ವಿಶ್ವಾಸ ಈ
> ಆರು ಸೂಚಕಗಳನ್ನು ಬಳಸಲಾಗಿತ್ತು. ಭಾರತದ ಮಟ್ಟಿಗೆ ಆದಾಯ ನಿರಂತರವಾಗಿ ಏರುತ್ತಿದೆಯಾದರೂ
> ಇತರ ರಂಗಗಳಲ್ಲೆಲ್ಲ ಕುಸಿತ ಹೆಚ್ಚಾಗಿ ಕಂಡಿದ್ದರಿಂದ ನಮ್ಮ ದೇಶದ ಒಟ್ಟಾರೆ ಶ್ರೇಯಾಂಕದಲ್ಲೂ
> ಕುಸಿತವಾಗಿದೆ; ಹಣವೊಂದೇ ನೆಮ್ಮದಿ ತರಲಾರದು ಎಂಬುದು ಅಲ್ಲೂ ಸಾಬೀತಾಗಿದೆ.
>
>
>
> ನಾರ್ವೆ ದೇಶ ಏಕೆ ಇತರ 154 ದೇಶಗಳಿಗಿಂತ ಹೆಚ್ಚು ಸಂತಸದಲ್ಲಿದೆ? ‘ನಮ್ಮ ಶಾಲೆಗಳು,
> ಆಸ್ಪತ್ರೆ, ಪೊಲೀಸ್ ಮತ್ತು ಆಡಳಿತ ವ್ಯವಸ್ಥೆ ಎಲ್ಲವೂ ಪ್ರಜೆಗಳನ್ನು ಗೌರವದಿಂದ
> ನೋಡುತ್ತವೆ. ನಮ್ಮ ಬೆಂಬಲಕ್ಕೆ ಎಷ್ಟೊಂದು ಮಂದಿ ಇದ್ದಾರಲ್ಲ ಎಂಬ ಭರವಸೆ ನಮಗಿರುತ್ತದೆ-
> ಅದೇ ನಮ್ಮ ಸಂತಸದ ಗುಟ್ಟು’ ಎಂದು ನಾರ್ವೆಯ ಪ್ರಜೆಗಳು ಹೇಳುತ್ತಾರೆ.
>
>
>
> ವಿಶ್ವಸಂಸ್ಥೆಯ ವರದಿ ಬೇರೊಂದು ಗುಟ್ಟನ್ನು ಹೇಳುತ್ತದೆ: ನಾರ್ವೆಯಲ್ಲಿ ಭಾರಿ ದೊಡ್ಡ
> ತೈಲನಿಕ್ಷೇಪ ಇದೆ. ಅದನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಎತ್ತಿ ಹಣ ಗಳಿಸುವ ಬದಲು
> ನಾರ್ವೆ ಬೇಕಂತಲೇ ಕಡಿಮೆ ತೈಲವನ್ನು ಮೇಲೆತ್ತುತ್ತಿದೆ. ಹಾಗೆ ಎತ್ತಿದ್ದನ್ನೂ ಅದು ಇಂದಿನ
> ತುರ್ತಿಗಾಗಿ ಬಳಸುವ ಬದಲು ಭವಿಷ್ಯದ ಭದ್ರತೆಗಾಗಿ ಹೂಡಿಕೆ ಮಾಡುತ್ತಿದೆ. ತೈಲಬೆಲೆ ಇಳಿದರೂ
> ಅದರ ಬಿಸಿ ತಟ್ಟದಂತೆ ರಕ್ಷಾಕೋಟೆಯನ್ನು ನಿರ್ಮಿಸಿಕೊಂಡಿದೆ. ‘ಪರಸ್ಪರ ನಂಬಿಕೆ, ವಿಶ್ವಾಸ
> ತುಂಬಿರುವ ಪ್ರಜಾಸ್ತೋಮದಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ’ ಎಂದು ವರದಿಯಲ್ಲಿ
> ಹೇಳಲಾಗಿದೆ.
>
>
>
> ಉತ್ತರ ಯುರೋಪ್‌ನ ಸುಮಾರು ಎಲ್ಲ ದೇಶಗಳೂ, ಅಂದರೆ ಫಿನ್ಲೆಂಡ್, ಐಸ್ಲೆಂಡ್,
> ಸ್ವಿತ್ಸರ್ಲೆಂಡ್, ಡೆನ್ಮಾರ್ಕ್ ಎಲ್ಲವೂ ಮೊದಲ ಹತ್ತು ಶ್ರೇಯಾಂಕದಲ್ಲೇ ಬರುತ್ತವೆ. ಅಷ್ಟೇ
> ಅಲ್ಲ, ಇತರೆಲ್ಲ ಅಭಿವೃದ್ಧಿ ಸೂಚ್ಯಂಕಗಳಲ್ಲೂ ಅವು ಅತ್ಯುನ್ನತ ಶ್ರೇಣಿಯಲ್ಲಿವೆ. ಸಮಾನತೆ
> ಜಾಸ್ತಿ ಇದೆ, ಭ್ರಷ್ಟಾಚಾರ ಇಲ್ಲ, ಪರಿಸರ ನಾಶ ಇಲ್ಲ, ಪೊಲೀಸರಿಗೆ ಜಾಸ್ತಿ ಕೆಲಸ ಇಲ್ಲ,
> ಗಡಿ ಜಗಳ ಇಲ್ಲ, ಆಡಳಿತ ಸುಗಮವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಮುದಾಯಗಳಲ್ಲಿ ಒಗ್ಗಟ್ಟಿದೆ.
>
>
>
> ನೆರೆಹೊರೆಯ ಜನರು ಆಗಾಗ ಸೇರಿ ಊರೊಟ್ಟಿನ ಕೆಲಸಗಳಲ್ಲಿ ನಿರತರಾಗುತ್ತಾರೆ. ಅಲ್ಲಿನ
> ದೇಶಗಳಿಗೆ ಹೋಲಿಸಿದರೆ ಅಮೆರಿಕ ಕಳೆದ ವರ್ಷ 13ನೇ ಸ್ಥಾನದಲ್ಲಿದ್ದುದು ಈಗ 14ಕ್ಕೆ
> ಇಳಿದಿದೆ. ‘ನಾವು ಅಮೆರಿಕನ್ನರು ದಿನಗಳೆದಂತೆ ಸ್ವಾರ್ಥಿಗಳಾಗುತ್ತಿದ್ದೇವೆ. ಸರ್ಕಾರದಲ್ಲಿ
> ಭ್ರಷ್ಟಾಚಾರ ಹೆಚ್ಚುತ್ತಿದೆ; ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತಿದೆ’ ಎನ್ನುತ್ತಾರೆ ಈ
> ‘ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್‌’ನ ಸಹಲೇಖಕರಾದ ಕೊಲಂಬಿಯಾ ವಿಶ್ವವಿದ್ಯಾಲಯದ ಆರ್ಥಿಕ
> ತಜ್ಞ ಜೆಫ್ರಿ ಸ್ಯಾಕ್ಸ್.
>
>
>
> ಹೆಚ್ಚಿನ ಮಾಹಿತಿ ಬಯಸುವವರು world happiness. report ಎಂಬ ಜಾಲತಾಣದಲ್ಲಿ ನೋಡಬಹುದು.
> ಇಡೀ ವರದಿ ಬೇಡವೆಂದರೆ ‘ಸಂತಸದ ಸಾಮಾಜಿಕ ನೆಲೆಗಳು’, ‘ಕೆಲಸದ ಪರಿಸರದಲ್ಲಿ ಸಂತಸ ಗಳಿಕೆ’,
> ‘ಸಂತಸ ಮತ್ತು ದುಃಖಗಳ ಪ್ರಧಾನ ಮೂಲಗಳು’ - ಹೀಗೆ ವಿವಿಧ ಅಧ್ಯಾಯಗಳಲ್ಲಿ ಮೌಲಿಕ
> ಚರ್ಚೆಗಳಿವೆ. ಅವಷ್ಟನ್ನೇ ಇಳಿಸಿಕೊಳ್ಳಬಹುದು.
>
>
>
> ಸಂತಸ ಎಂದರೆ ಏನು? ಅದನ್ನು ಗಳಿಸುವುದು, ಉಳಿಸಿಕೊಳ್ಳುವುದು ಹೇಗೆ? ಆಧ್ಯಾತ್ಮಿಕ
> ನೆಲೆಯಲ್ಲಿ ಅನೇಕ ಸಂತರು, ಯೋಗಿಗಳು, ಅನುಭಾವಿಗಳು, ಬ್ರಹ್ಮಕುಮಾರಿಗಳು ಅದೆಷ್ಟೊ
> ಹೇಳಿದ್ದಾರೆ; ಹೇಳುತ್ತಲೇ ಇದ್ದಾರೆ. ವಿಜ್ಞಾನಿಗಳೂ ಕಳೆದ ಹತ್ತೆಂಟು ವರ್ಷಗಳಲ್ಲಿ ಸಂತಸದ
> ಮೂಲವನ್ನು ಶೋಧಿಸಲು ಯತ್ನಿಸಿದ್ದಾರೆ.
>
>
>
> ಮಾದಕ ವಸ್ತುಗಳಿಂದ ಲಭಿಸುವ ಕೃತಕ ಸಂತಸ ಮತ್ತು ನಮ್ಮದೇ ವರ್ತನೆಯಿಂದ, ಧೋರಣೆಯಿಂದ ಲಭಿಸುವ
> ಸಹಜ ಸಂತಸಗಳ ನಡುವಣ ವ್ಯತ್ಯಾಸವನ್ನು ತೋರಿಸಿದ್ದಾರೆ. ನಮ್ಮ ದೋಷಗಳನ್ನು ಗುಣಪಡಿಸಲು
> ಯತ್ನಿಸುವ ಬದಲು ನಮ್ಮಲ್ಲೇ ಅವಿತಿರುವ ಸಾಮರ್ಥ್ಯಗಳನ್ನು ಅನಾವರಣ ಮಾಡುವುದೇ ಮನೋವಿಜ್ಞಾನದ
> ಮೂಲ ಧ್ಯೇಯ ಆಗಬೇಕು ಎಂದು 1998ರಲ್ಲಿ ಅಮೆರಿಕದ ಸೈಕಾಲಜಿಕಲ್ ಸಂಘದ ಅಧ್ಯಕ್ಷತೆ ವಹಿಸಿಕೊಂಡ
> ಮಾರ್ಟಿನ್ ಸೆಲಿಗ್ಮನ್ ಒತ್ತು ನೀಡಿದ ಮೇಲೆ  ‘ಪಾಸಿಟಿವ್ ಸೈಕಾಲಜಿ’ (ಧನಾತ್ಮಕ
> ಮನೋವಿಜ್ಞಾನ) ಎಂಬ ಹೊಸ ಶಾಖೆ ರೂಪುಗೊಂಡಿದೆ.
>
>
>
> ನಮ್ಮ ಬಗ್ಗೆ, ಬೇರೆಯವರ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ಒಳ್ಳೆಯದನ್ನೇ ಆಶಿಸುವ ಮೂಲಕ ಹೇಗೆ
> ಒಳ್ಳೆಯತನವನ್ನು ಸುತ್ತೆಲ್ಲ ಹಿಗ್ಗಿಸುತ್ತ ಹೋಗಬಹುದು ಎಂಬುದೇ ಧನಾತ್ಮಕ ಮನೋವಿಜ್ಞಾನ. ಅಂಥ
>  ಒಳ್ಳೆಯತನವನ್ನು ಮೇಲಕ್ಕೆತ್ತಲೆಂದು ಸಲಹಾ ಕೇಂದ್ರಗಳು, ‘ಮೈಂಡ್‌ಫುಲ್‌ನೆಸ್’ ಶಿಬಿರಗಳು,
> ವ್ಯಕ್ತಿತ್ವ ವಿಕಸನದ ಸಮುದಾಯ ಚಟುವಟಿಕೆಗಳು ರೂಪುಗೊಂಡಿವೆ. ಜಾಲತಾಣಗಳಲ್ಲಿ ಅದಕ್ಕೆಂದೇ
> ಆಟಗಳು, ರಸಪ್ರಶ್ನೆಗಳು, ಸಲಹೆಗಳು ಸಿಗುತ್ತಿವೆ.
>
>
>
> ಜಾಗತಿಕ ಮಟ್ಟದಲ್ಲಿ ‘ಆಕ್ಷನ್ ಫಾರ್ ಹ್ಯಾಪಿನೆಸ್’ ಹೆಸರಿನ ಒಂದು ‘ಸಂತಸ ಅಭಿಯಾನ’
> ಚಾಲನೆಗೆ ಬಂದಿದೆ. ಸ್ವಂತದ ಧಾರ್ಮಿಕ, ರಾಜಕೀಯ ನಿಲುವುಗಳನ್ನು ದೂರವಿಟ್ಟು ಯಾರು ಬೇಕಾದರೂ
> ಅದಕ್ಕೆ ಸೇರಿ ಸ್ವಾರ್ಥ, ತ್ವೇಷದಿಂದ ತುಂಬಿದ ಜಗತ್ತನ್ನು ಬದಲಿಸಲು ಕೈಜೋಡಿಸಬಹುದು. ದಲಾಯಿ
> ಲಾಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಅದರಲ್ಲಿದ್ದಾರೆ. ಮೊದಲಿಗೆ ನಿಮ್ಮನ್ನು ನೀವೇ
> ಬದಲಿಸಿಕೊಳ್ಳುವ ಅನೇಕ ಸೂತ್ರಗಳು ಅದರಲ್ಲಿ ಉಚಿತವಾಗಿ ಸಿಗುತ್ತವೆ.
>
>
>
> ಉದಾಹರಣೆಗೆ ಯಂತ್ರಗಳನ್ನು ತುಸು ಕಮ್ಮಿ ಬಳಸಿ. ಬಸ್‌ನಿಂದ ಒಂದು ಸ್ಟಾಪ್ ಹಿಂದೆಯೇ ಇಳಿದು
> ನಡೆಯಿರಿ; ಲಿಫ್ಟ್ ಮೂಲಕ ಎಂಟನೇ ಅಂತಸ್ತಿಗೆ ಏರುವುದಾದರೆ 6ರ ಬಟನ್ ಒತ್ತಿ. ಟಿವಿ
> ಸ್ವಿಚಾಫ್ ಮಾಡಿ ಹೊರಗಡೆ ಸುತ್ತಾಡಿ. ಪ್ರತಿದಿನವೂ ಏನೊ ಹೊಸದನ್ನು ಮಾಡಿ. ಬೇರೆ
> ರಸ್ತೆಯಲ್ಲಿ ಹೋಗಿ. ಬೇರೆ ಪತ್ರಿಕೆ ಓದಿ. ಅಪರಿಚಿತರೊಂದಿಗೆ ಮಾತಾಡಿ. ಒಂದೆರಡು ಗಂಟೆಗಳ
> ಕಾಲ ನಗುನಗುತ್ತಲೇ ಇತರರೊಂದಿಗೆ ವ್ಯವಹರಿಸಿ. ವ್ಯತ್ಯಾಸ ಗಮನಿಸಿ. ನಮ್ಮ ಸುತ್ತಲಿನ
> ಸಂತಸಗಳನ್ನು ಗಮನಿಸಿ. ಪಕ್ಷಿಗಳ ಇಂಚರ, ಕಾಫಿ ಪರಿಮಳ, ಚಿಗುರೆಲೆ, ನಗುವಿನ ಅಲೆ...
>
>
>
> ಅಂಥ ಖಾಸಗಿ ಸಂತಸದ ಏರಿಳಿತ ಇದ್ದೇ ಇರುತ್ತದೆ ಬಿಡಿ. ‘ವಿದಾಯದ ವೇದನೆ ಇಲ್ಲದೆ ಮರುಮಿಲನದ
> ಸಂತಸ ಸಿಕ್ಕೀತೆ? ಬಂಧನದ ಬವಣೆ ಅನುಭವಿಸದೆ ಬಿಡುಗಡೆಯ ಸಂತಸ ದಕ್ಕೀತೆ?’ ಎಂಬೆಲ್ಲ ತರ್ಕ
> ಮಂಡಿಸಬಹುದು. ಆದರೆ ಇಡೀ ಸಮಾಜದಲ್ಲಿ ಸಂತಸದ ಮಟ್ಟ ಏರಬೇಕೆಂದರೆ ಸಮಾನತೆಯೇ ಅತಿ ಮುಖ್ಯ
> ಸೂಚಕವಾಗಿರಬೇಕು.
>
> ಈಗಿನ ಪಟ್ಟಿಯಲ್ಲಿ ಅತಿ ಹೆಚ್ಚು ಶ್ರೇಯಾಂಕ ಗಳಿಸಿದ ದೇಶಗಳಲ್ಲಿ ಧನಿಕರ ಮತ್ತು ಬಡವರ
> ನಡುವಣ ಅಂತರ ತೀರ ಕಡಿಮೆ ಇದೆ. ಭಾರತ ಇದಕ್ಕೆ ತದ್ವಿರುದ್ಧವಾದ ಪ್ರಗತಿಯ ಮಾರ್ಗದಲ್ಲಿ
> ಸಾಗುತ್ತಿದೆ. ಇಲ್ಲಿ ಕೆಲವರ ಓಡಾಟಕ್ಕೆ ಖಾಸಗೀ ವಿಮಾನಗಳಿವೆ. ಅನೇಕರಿಗೆ ಸೈಕಲ್ ಸವಾರಿಗೂ
> ಸುಗಮ ದಾರಿಯಿಲ್ಲ.
>
>
>
> ಇಷ್ಟಕ್ಕೂ ಇಡೀ ಭಾರತವನ್ನೇ ಒಂದೆಂದು ಪರಿಗಣಿಸಿ ಬೇರೆ ದೇಶಗಳೊಂದಿಗೆ ಹೋಲಿಕೆ ಮಾಡುವುದೇ
> ಸರಿಯಲ್ಲ. ಇಲ್ಲಿರುವಷ್ಟು ವೈವಿಧ್ಯಮಯ ಸಮುದಾಯ ಜಗತ್ತಿನಲ್ಲಿ ಬೇರೆ ಎಲ್ಲೂ ಇಲ್ಲ.
> ಭ್ರಷ್ಟಾಚಾರ ಶ್ರೇಯಾಂಕ ಇರಲಿ, ಬಡತನದ ಶ್ರೇಯಾಂಕ ಇರಲಿ, ಸಮಾನತಾ ಶ್ರೇಯಾಂಕ ಅಥವಾ ಸಂತಸ
> ಶ್ರೇಯಾಂಕವೇ ಇರಲಿ ಜಗತ್ತಿನ ಅತ್ಯುತ್ತಮವಾದುದೂ ಇಲ್ಲಿದೆ, ಅತ್ಯಂತ ಕನಿಷ್ಠದ್ದೂ
> ಇಲ್ಲಿರಬಹುದು.
>
>
>
> ಯಾರಿಗೆ ಗೊತ್ತು, ಇಲ್ಲೂ ಯಾವುದೋ ಒಂದು ರಾಜ್ಯದ ಒಂದು ಗ್ರಾಮದ ಸಂತಸದ ಮಟ್ಟ ಇಡೀ ಕೆನಡಾದ
> ಶ್ರೇಯಾಂಕಕ್ಕಿಂತ ಮೇಲೆಯೇ ಇದ್ದೀತು. ಬಿಹಾರದ ಒಂದು ಇಡೀ ತಾಲ್ಲೂಕಿನ ಶ್ರೇಯಾಂಕ ಆಫ್ರಿಕಾದ
> ರುವಾಂಡಾಕ್ಕಿಂತ ಕೆಳಕ್ಕಿರಬಹುದು. ಉರಿಬೇಸಿಗೆಗಿಂತ ತಂಪಿನ ಸೆಪ್ಟೆಂಬರ್‌ನಲ್ಲಿ ಸಮೀಕ್ಷೆ
> ನಡೆಸಿದರೆ ಸಂತಸದ ಮಟ್ಟದಲ್ಲಿ ಭಾರೀ ಏರಿಕೆ ಕಾಣಬಹುದು.
>
>
> ಅಲ್ಲಿಗೆ ಇಂದಿನ ‘ವಿಶ್ವ ಹವಾಗುಣ ದಿನಾಚರಣೆ’ಗೆ ಕೊನೆಗೂ ತಲುಪಿದಂತಾಯಿತು. ಹವಾಮಾನ
> ಬದಲಾಗುತ್ತಿದೆ ಎಂಬುದೆಲ್ಲ ಸುಳ್ಳೆಂದು ಟ್ರಂಪಟಾಲಮ್ ಅದೆಷ್ಟೇ ಜೋರಾಗಿ ಹೇಳಿದರೂ ಕಳೆದ 40
> ಲಕ್ಷ ವರ್ಷಗಳ ದಾಖಲೆಗಳನ್ನು ಮೀರಿಸಿ ವಾಯುಮಂಡಲದ ಇಂಗಾಲದ ಡೈಆಕ್ಸೈಡ್ ಮಟ್ಟ ಮೇಲಕ್ಕೇರಿದೆ
> ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇನ್ನುಮೇಲೆ ಶುದ್ಧನೀರು, ವಿದ್ಯುತ್ತು ಎರಡೂ ಇರುವಲ್ಲಿ
> ಮಾತ್ರ ಸಂತೋಷದ ಮಟ್ಟವನ್ನು ಅಳೆಯಬಹುದೇನೊ.
>
> Hareeshkumar K
> GHS Huskuru
> Malavalli TQ
> Mandya Dt
> 9880328224
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to