science topic is super



On Oct 5, 2017 4:37 PM, "Hareeshkumar K" <[email protected]> wrote:

> ನಿಸರ್ಗ ಪ್ರಕೋಪಗಳು ನೈಸರ್ಗಿಕವೇ ಅಲ್ಲ!
> 5 Oct, 2017
>
> ‘ವಿಶ್ವ ಆವಾಸ ದಿನ’ವನ್ನು ಈ ತಿಂಗಳಿಡೀ ‘ಅರ್ಬನ್ ಅಕ್ಟೊಬರ್’ ಎಂದು ಆಚರಿಸಲು ಕರೆ
> ನೀಡಲಾಗಿದೆ. ಏನು ಹಾಗಂದರೆ?
> ನಿಸರ್ಗ ಪ್ರಕೋಪಗಳು ನೈಸರ್ಗಿಕವೇ ಅಲ್ಲ!
>
> ‘ವಿಶ್ವ ಆವಾಸ ದಿನ’ ವನ್ನು ಈ ತಿಂಗಳಿಡೀ ‘ಅರ್ಬನ್ ಅಕ್ಟೊಬರ್’ ಎಂದು ಆಚರಿಸಬೇಕಾಗಿ
> ವಿಶ್ವಸಂಸ್ಥೆ ಕರೆ ನೀಡಿದೆ. ಏನು ಹಾಗಂದರೆ?
>
> ಇರ್ಮಾ ಎಂಬ ಚಂಡಮಾರುತದ ಸಂಕ್ಷಿಪ್ತ ಇತಿಹಾಸ ಹೀಗಿದೆ: ಈಚೆ ಆಗಸ್ಟ್ 30ರಂದು ಆಫ್ರಿಕದ
> ಅಂಚಿನ ಸಣ್ಣ ದ್ವೀಪದ ಬಳಿ ಅದು ಚಿಕ್ಕದಾಗಿ ಅವತರಿಸಿತು. ಕ್ರಮೇಣ ಬೆಳೆಯುತ್ತ ಸುತ್ತುತ್ತ
> ಸಾಗುತ್ತ ಅಟ್ಲಾಂಟಿಕ್ ಸಾಗರದಲ್ಲಿ ಹಾವಿನಂತೆ ಚಲಿಸುತ್ತ, ವಾರದ ನಂತರ ಭೀಕರ ಸ್ವರೂಪ ತಾಳಿ
> ಹಿಂದಿನ ಎಲ್ಲ ದಾಖಲೆಗಳ ಚಿಂದಿ ಉಡಾಯಿಸುತ್ತ, ಕೆರಿಬಿಯನ್ ದ್ವೀಪಗಳನ್ನು ಚೆಂಡಾಡುತ್ತ,
> ಸೆಪ್ಟಂಬರ್ 11ರಂದು ಹೆಡೆಯೆತ್ತಿ ಅಮೆರಿಕದ ಫ್ಲಾರಿಡಾಕ್ಕೆ ಅಪ್ಪಳಿಸಿತು. ಅಷ್ಟು
> ದೂರದವರೆಗೆ (1700 ಕಿ.ಮೀ) ಚಲಿಸಿದ ಅಷ್ಟೊಂದು ಶಕ್ತಿಶಾಲಿ ಚಂಡಮಾರುತ ಇದುವರೆಗೆ ಬೇರೊಂದು
> ಇರಲಿಲ್ಲ. ಮನುಷ್ಯ ನಿರ್ಮಿಸಿಕೊಂಡಿದ್ದ ಸಕಲ ತಾಂತ್ರಿಕ ಸೌಕರ್ಯಗಳನ್ನೂ ಅದು ಕಿತ್ತು
> ಕಬಳಿಸಿ ಬಿಸಾಕುತ್ತ ಹೋದಂತೆಲ್ಲ, ಅದರಿಂದ ಬಚಾವಾಗಲು ಮನುಷ್ಯರು ತೋರಿದ ತಾಂತ್ರಿಕ ಸಾಹಸಗಳೂ
> ಅಷ್ಟೇ ಅಮೋಘವಾಗಿದ್ದವು (ಅದನ್ನು ಎದುರಿಸುವ ಅಥವಾ ಪಳಗಿಸುವ ಪ್ರಶ್ನೆಯೇ ಇರಲಿಲ್ಲ,
> ಓಡುವುದೊಂದೇ). ಅದು ಸಾಗಿ ಬರುವ ಮಾರ್ಗವನ್ನು ಮೊದಲೇ ನಿಖರವಾಗಿ ಲೆಕ್ಕ ಹಾಕಿ, ಏಳು
> ರಾಷ್ಟ್ರಗಳಲ್ಲಿ ತುರ್ತುಸ್ಥಿತಿ ಘೋಷಿಸಿ, ಜನರನ್ನು ಗುಳೆ ಹೊರಡಿಸಿದ ಪರಿ ಅನನ್ಯವಾಗಿತ್ತು.
> ಯುಎಸ್‌ಎಯಲ್ಲಂತೂ ಎರಡೇ ದಿನಗಳಲ್ಲಿ 20 ಲಕ್ಷ ಜನರನ್ನು, ಸಾಕುಪ್ರಾಣಿಗಳನ್ನು, ಜೈಲಿನ
> ಕೈದಿಗಳನ್ನೂ ಆಸ್ಪತ್ರೆಗಳ ತುರ್ತುನಿಗಾ ಕಕ್ಷೆಗಳಲ್ಲಿನ ರೋಗಿಗಳನ್ನೂ ಅವರ ಜೀವರಕ್ಷಕ
> ಕೊಳವೆಗಳ ಸಮೇತ ಖಾಲಿ ಮಾಡಿಸಿದ್ದು; ಹೆದ್ದಾರಿಗಳಲ್ಲಿ ಎಂಟು ಲೇನ್‌ಗಳ ಜಾಗ ಸಾಕಾಗದೆ ಪಕ್ಕದ
> ಶೋಲ್ಡರ್ (ಅಗಲದ ಫುಟ್‌ಪಾತ್)ಗಳಲ್ಲೂ ವಾಹನಗಳ ದೌಡಾಟಕ್ಕೆ ಅನುವು ಮಾಡಿಕೊಟ್ಟಿದ್ದು;
> ಸಂತ್ರಸ್ತರಿಗೆಲ್ಲ ಪರ್ಯಾಯ ಆಸರೆ, ಅನ್ನ, ಔಷಧ ಒದಗಿಸಿದ್ದು; ಈ ಅವಾಂತರದಲ್ಲೂ ಕ್ಯೂಬಾದ
> ಧೀರಧೀರೆಯರು ಸಮುದ್ರದಲ್ಲಿ ಮುಳುಗು ಹಾಕಿ ಅಲ್ಲಿನ ಡಾಲ್ಫಿನ್‌ಗಳನ್ನು
> ಹೆಲಿಕಾಪ್ಟರ್‌ಗಳಲ್ಲಿ ಸಾಗಿಸಿ ಈಜುಗೊಳಗಳಲ್ಲಿ ಬಚ್ಚಿಟ್ಟು ಬಚಾವು ಮಾಡಿದ್ದು ಎಲ್ಲವೂ
> ರೋಚಕ. ಶ್ವೇತರು, ಅಶ್ವೇತರು, ಯಹೂದ್ಯರು, ಮುಸ್ಲಿಮರು ಎಲ್ಲರೂ ಪರಸ್ಪರ ಕೈ ಕೂಡಿಸಿ
> ಉತ್ಪಾತದಿಂದ ಬಚಾವಾಗಿದ್ದು; ಬಡವರು, ಲಕ್ಷಾಧೀಶರು, ಕಮ್ಯೂನಿಸ್ಟರು, ನಾತ್ಸೀವಾದಿಗಳು,
> ನಿರೀಶ್ವರವಾದಿಗಳು ಎಲ್ಲರೂ ತಾತ್ಕಾಲಿಕ ಶೆಡ್‌ಗಳಲ್ಲಿ ಏಕತ್ರ ಮುದುರಿದ್ದು...
> ಶಿಕ್ಷಕರಿಲ್ಲದಾಗ ಕ್ಲಾಸಿನಲ್ಲಿ ಭಾರೀ ಗಲಾಟೆ ಮಾಡುವ ಮಕ್ಕಳು ಹೆಡ್‌ಮಾಸ್ಟರರ ಹೆಜ್ಜೆ
> ಸದ್ದು ಕೇಳಿ ಗಪ್‌ಚಿಪ್ ಆದಂತೆ.
>
> ವಿಮಾನ ನಿಲ್ದಾಣಗಳು, ಬಂದರುಗಳು, ಕ್ರೀಡಾಂಗಣಗಳು, ಡಿಸ್ನಿ ಉದ್ಯಾನ, ಕೆನ್ನೆಡಿ
> ಬಾಹ್ಯಾಕಾಶ ನಿಲ್ದಾಣ- ಹೀಗೆ ಅಲ್ಲಿಇಲ್ಲಿ ಇರ್ಮಾ ನಡೆಸಿದ ನಂಗಾನಾಚ್ ಕುರಿತು ಆ ವಾರವಿಡೀ
> ಧಿಗ್ಗೆದ್ದು ಬರುತ್ತಿದ್ದ ಸಾವಿರ ಸುದ್ದಿಗಳ ಮಧ್ಯೆ ಶತಕೋಟ್ಯಧೀಶ ಸರ್ ರಿಚರ್ಡ್ ಬ್ರಾನ್ಸನ್
> ಎದ್ದು ಕಾಣುವಂತಾದ. ಆತನ ಖಾಸಗಿ ದ್ವೀಪ ‘ನೆಕರ್ ಐಲ್ಯಾಂಡ್’ ಮೇಲೆಯೇ ಇರ್ಮಾ ಸಾಗಿ ದೂಳೀಪಟ
> ಮಾಡಿ ಹೋಯಿತು. ಆದರೆ ‘ನಾವೆಷ್ಟು ಬೆಚ್ಚಗಿದ್ದೇವೆ, ವೈನ್ ಇಡುವ ನೆಲಮಾಳಿಗೆಯಲ್ಲಿ
> ನಿಶ್ಚಿಂತರಾಗಿ’ ಎಂಬರ್ಥದಲ್ಲಿ ಆತ ತನ್ನ ಕುಟುಂಬದ ಚಿತ್ರ ಹಾಕಿ ಟ್ವೀಟ್ ಮಾಡಿದ. ಮಹಾ
> ಧೈರ್ಯವಂತ, ಪರಮ ಸಾಹಸಿ, 400ಕ್ಕೂ ಹೆಚ್ಚು ಕಂಪನಿಗಳ ಒಡೆಯ, ಅಪ್ರತಿಮ ಚಾಣಾಕ್ಷ, ಧಾರಾಳ
> ದಾನಿ ಎಂಬುದಾಗಿ ಹೊಗಳುಭಟ್ಟರ ಕಣ್ಮಣಿಯಾಗಿರುವ ಆತ ಈ ಟ್ವೀಟ್‌ನಿಂದಾಗಿ ಲೇವಡಿಗೆ ಗುರಿಯಾದ.
> ಈತನ ಕಾರ್ಪೊರೇಟ್ ದುಸ್ಸಾಹಸಗಳಿಂದಾಗಿಯೇ ಶ್ರಮಿಕರ ಹಣವೆಲ್ಲ ಶ್ರೀಮಂತರತ್ತ ಹರಿದಿದ್ದು,
> ಸಾರ್ವಜನಿಕ ಸೊತ್ತುಗಳು ಈತನ ಖಾಸಗಿ ಕಂಪನಿಗಳ ಪಾಲಾಗಿದ್ದು, ಈತನ ‘ವರ್ಜಿನ್ ಗೆಲಾಕ್ಟಿಕ್’
> ವಿಮಾನ ಕಂಪನಿಗಳ ಏರು ಭರಾಟೆಯಿಂದಾಗಿಯೇ (ತನ್ನ ಐದನೆಯ ವಿಮಾನ ಕಂಪನಿಯ ಉದ್ಘಾಟನೆಯ
> ಸಂದರ್ಭದಲ್ಲಿ ಈತ ತನ್ನ ಅಂಡರ್‌ವೇರ್ ಮೇಲೆ ‘ಖಡಕ್ ಸ್ಪರ್ಧೆ’ ಎಂದು ಬರೆದು ಮಾಧ್ಯಮಗಳೆದುರು
> ಪ್ರದರ್ಶಿಸಿದ್ದ) ವಾಯುಮಂಡಲದ ಮಾಲಿನ್ಯ ಅತಿಯಾಗಿ, ಈಗಿನ ಈ ಚಂಡಮಾರುತಗಳ ಹಾವಳಿಗೆ ಈತನ
> ಕೊಡುಗೆ ಗಣನೀಯವಾಗಿದ್ದು ಮತ್ತೆ ಮುನ್ನೆಲೆಗೆ ಬಂತು. ಈ ಎಲ್ಲ ಭಾನಗಡಿಗಳನ್ನು ವರ್ಣಿಸಲು
> ‘ವರ್ಜಿನ್ ಗೆಲಾಕ್ಟಿಕ್’ ಎಂಬ ಎರಡೇ ಪದ ಸಾಕು ಎಂದು ಸಮಾಜ ವಿಜ್ಞಾನಿ ಸಾಲ್ವಟೋರ್ ಬಾಬೊನಿಸ್
> ಹಿಂದೆಯೇ ಹೇಳಿದ್ದಾನೆ. ಇನ್ನು, ಖ್ಯಾತ ಕೆನಾಡಿಯನ್ ಲೇಖಕಿ ನವೊಮಿ ಕ್ಲೇನ್ ತನ್ನ ‘ದಿಸ್
> ಚೇಂಜಿಸ್ ಎವ್ರಿಥಿಂಗ್’ ಸಂಶೋಧನಾ ಗ್ರಂಥದಲ್ಲಿ ಈತನ ಹುನ್ನಾರಗಳನ್ನು ಎಳೆಎಳೆಯಾಗಿ
> ಬಿಚ್ಚಿಟ್ಟಿದ್ದಾಳೆ: ಜಾಗತಿಕ ತಾಪಮಾನ ತಗ್ಗಿಸಲು ತಾನು ಮುನ್ನೂರು ಕೋಟಿ ಡಾಲರ್ ವಂತಿಗೆ
> ನೀಡುತ್ತೇನೆಂದು ಘಂಟಾಘೋಷ ಮಾಡಿ ಈತ ಹಿಂದೆ ಸರಿದ. ತನ್ನ ಕಂಪನಿಗಳಿಂದ ನಿರೀಕ್ಷಿತ ಲಾಭ
> ಬಂದಿಲ್ಲವೆಂದು ಹೇಳಿ ನುಣುಚಿಕೊಂಡ. (ಲಾಭದ ಹಣವನ್ನು ಬೇರಡೆ ತಿರುಗಿಸಿಕೊಂಡಿದ್ದಕ್ಕೂ
> ಕ್ಲೇನ್ ವಿವರಣೆ ಕೊಡುತ್ತಾಳೆ.) ವಾತಾವರಣದ ಇಂಗಾಲದ ಡೈಆಕ್ಸೈಡನ್ನು ಹೀರಿ ತೆಗೆಯಬಲ್ಲ
> ತಂತ್ರಜ್ಞಾನವನ್ನು ರೂಪಿಸಬಲ್ಲವರಿಗೆಂದು ಎರಡೂವರೆ ಕೋಟಿ ಡಾಲರ್ ಬಹುಮಾನ ಘೋಷಿಸಿ,
> ಸ್ಪರ್ಧೆಗೆ ಬಂದ ಉತ್ತಮ ಸಲಹೆಗಳನ್ನೆಲ್ಲ ಹೇಗೆ, ಯಾವ ಸ್ವಾರ್ಥಕ್ಕಾಗಿ ಅದುಮಿಟ್ಟ
> ಎಂಬುದಕ್ಕೂ ವಿವರಣೆಗಳಿವೆ. ಅಂತೂ ಬಹುಮಾನ ಯಾರಿಗೂ ವಿತರಣೆಯಾಗಿಲ್ಲ.
>
> ಎರಡು ಅಮೆರಿಕಗಳ ನಡುವಣ ಕೋಟ್ಯಂತರ ಜನರು ನಿರ್ವಸಿತರಾಗಿ ಒದ್ದಾಡುತ್ತಿರುವಾಗ ಈತ ಹಾಯಾಗಿ
> ನೆಲಮಾಳಿಗೆಯಲ್ಲಿ ಕೂತು ವೈನ್ ಹೀರುತ್ತ ‘ಇರ್ಮಾಳಿಂದ ಪಾರಾಗಿಬಿಟ್ಟೆ’ ಎಂಬುದಾಗಿ ಸಾಹಸ
> ಮೆರೆದಿದ್ದು ಟೀಕಾಕಾರರಿಗೆ ಒಂದು ಬಗೆಯ ರೂಪಕವಾಗಿ ಲಭಿಸಿದೆ. ಈಚೀಚಿನ ಪ್ರಾಕೃತಿಕ
> ದುರಂತಗಳು ‘ಪ್ರಾಕೃತಿಕ ಅಲ್ಲವೇ ಅಲ್ಲ’ ಎಂದು ವಾದಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅವುಗಳ
> ತೀವ್ರತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರಲು ದೊಡ್ಡವರ ದೊಡ್ಡ ದೊಡ್ಡ ಕೃತ್ಯಗಳೇ
> ಕಾರಣವಾಗಿದ್ದರೂ ಅದಕ್ಕೆ ಬೆಲೆ ತೆರುವವರು ಮಾತ್ರ ಕೆಳಸ್ತರದ ಶ್ರಮಜೀವಿಗಳು ಎಂಬುದು ಎಲ್ಲ
> ದೊಡ್ಡ ದುರಂತಗಳಲ್ಲೂ ಎದ್ದು ಕಾಣುವಂತಾಗಿದೆ. ಅಂದಹಾಗೆ, ಆರಂಭದಲ್ಲಿ ವಿವರಿಸಿದ ಎತ್ತಂಗಡಿ
> ವಿವರಗಳೆಲ್ಲ ಯುಎಸ್‌ಎಯ ಫ್ಲಾರಿಡಾ ರಾಜ್ಯದ್ದು; ಆ ಸಂತ್ರಸ್ತರ ಸಾಲಿನಲ್ಲಿ ಕೋಟ್ಯಧೀಶರು
> ಇರಲುಂಟೆ? ಅವರೆಲ್ಲ ಮುನ್ಸೂಚನೆ ಸಿಕ್ಕ ತಕ್ಷಣ ವಿಮಾನ ಏರಿಯಾಗಿತ್ತು. ಇತ್ತ ಕೆರಿಬಿಯನ್
> ದ್ವೀಪಮಾಲೆಯ ಸ್ಥಿತಿ ಬೇರೆಯದೇ ಇತ್ತು. ಅಲ್ಲಿ ಅದೆಷ್ಟೊ ಬಡ ಸಮುದಾಯಗಳ ನಡುವಣ ಚಂದದ
> ನಡುಗಡ್ಡೆಗಳು ಕೋಟ್ಯಧೀಶರ ತೆಕ್ಕೆಗೆ ಸೇರಿವೆ. ಉದಾ: ಬ್ರಾನ್ಸನ್‌ನ ನೆಕರ್ ಐಲ್ಯಾಂಡ್.
> ಇನ್ನು ಕೆಲವಂತೂ ತೆರಿಗೆ ವಂಚಕರ ಖಜಾನೆಗಳಾಗಿವೆ. ಸುಂಟರಗಾಳಿ ಬಂದು ಶ್ರೀಮಂತರ
> ಇಂದ್ರಪ್ರಸ್ಥವನ್ನೂ ಬಡ ಮೀನುಗಾರರ ಗುಡಿಸಲನ್ನೂ ಕೆಡವಿದಾಗ ಇಬ್ಬರಿಗೂ ಅಷ್ಟಷ್ಟೇ
> ನೋವುಂಟಾಗುವುದು ಸಹಜ. ಆದರೆ ಬೊಕ್ಕಸದಿಂದ ಸಿಗುವ ನಷ್ಟ ಪರಿಹಾರ, ವಿಮೆ ಇತ್ಯಾದಿ
> ತೆರಿಗೆದಾರರ ನಿಧಿಯಲ್ಲಿ ದೊಡ್ಡವರ ಪಾಲಿಗೆ ದೊಡ್ಡ ಪಾಲು ಸೇರುತ್ತದೆ.
>
> ’ಚಂಡಮಾರುತಗಳು ಪಕ್ಷಪಾತ ತೋರುವುದಿಲ್ಲ. ಆದರೆ ಪಕ್ಷಪಾತ ತೋರುವ ಸಮುದಾಯದ ನೆಲಕ್ಕೇ ಅವು
> ಅಪ್ಪಳಿಸುತ್ತವೆ’ ಎಂದು ಮೊನ್ನೆ ನ್ಯೂ ಇಂಟರ್‌ನ್ಯಾಶನಲಿಸ್ಟ್ ಪತ್ರಿಕೆಯಲ್ಲಿ ಡೇನಿಯಲ್
> ವೊಸ್ಕೊಬೊಯ್ನಿಕ್ ವಿಶ್ಲೇಷಿಸಿದ್ದಾರೆ. ಚಂಡಮಾರುತ ಅಷ್ಟೇ ಅಲ್ಲ, ಮೇಘಸ್ಫೋಟ, ಮಹಾಪೂರ,
> ಬರಗಾಲದಂಥ ಇತರ ನೈಸರ್ಗಿಕ ಪ್ರಕೋಪಗಳೂ ಹಾಗೇ ಮಾಡುತ್ತವೇನೊ. ಬೆಂಗಳೂರಿನಲ್ಲಿ ಪ್ರವಾಹದ
> ರಗಳೆಗಳು ಅಪಾರ್ಟ್‌ಮೆಂಟ್ ಮತ್ತು ಕೊಳೆಗೇರಿ ನಿವಾಸಿಗಳಿಗೆ ಏಕರೂಪವಾಗಿ ಅಡಚಣೆ
> ಉಂಟುಮಾಡಿದರೂ ದೃಶ್ಯಮಾಧ್ಯಮಗಳಲ್ಲಿ ಯಾರ ಸಂಕಷ್ಟಗಳು ಮುಂಬೆಳಕಿಗೆ ಬಂದುವೆಂದು ನಮಗೆ
> ಗೊತ್ತೇ ಇದೆ. ರಾಜಾಕಾಲುವೆ ಒತ್ತುವರಿ ಮಾಡಿಕೊಂಡು ನೀರಿನ ಸಹಜ ಹರಿವಿಗೆ ಅಡೆತಡೆ ಮಾಡಿ
> ಎತ್ತರದ ಕಟ್ಟಡ ನಿರ್ಮಿಸಿ, ಪ್ರವಾಹ ಸಮಸ್ಯೆಗೆ ಕಾರಣರಾದವರು ಯಾರೆಂಬುದೂ ನಮಗೆ ಗೊತ್ತಿದೆ.
> ಅವರ ಆ ತಪ್ಪಿಗಾಗಿ ಯಾರು ಶಿಕ್ಷೆಗೊಳಗಾದರು ಎಂಬುದೂ ಗೊತ್ತಿದೆ.
>
> ಇವನ್ನೆಲ್ಲ ಈಗ ಇಲ್ಲಿ ಚರ್ಚಿಸಲು ಎರಡು ಕಾರಣಗಳಿವೆ: ವಿಶ್ವಸಂಸ್ಥೆ ಪ್ರತಿವರ್ಷ
> ಅಕ್ಟೊಬರ್ ಮೊದಲ ಸೋಮವಾರವನ್ನು ‘ವಿಶ್ವ ಆವಾಸ ದಿನ’ ಎಂತಲೂ ಅಕ್ಟೊಬರ್ 13ನ್ನು ‘ನೈಸರ್ಗಿಕ
> ಪ್ರಕೋಪ ತಗ್ಗಿಸುವ ದಿನ’ ಎಂತಲೂ ಆಚರಿಸಬೇಕೆಂದು ಮೂರು ದಶಕಗಳ ಹಿಂದೆಯೇ ಕರೆ ಕೊಟ್ಟಿದೆ.
> ಏಕೆಂದರೆ ಇವೆರಡೂ ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತಿರುವ ಸಮಸ್ಯೆಗಳಾಗಿವೆ. ಭಾರತವೂ
> ಅದನ್ನು ಆಚರಿಸುವುದಾಗಿ ಆಣೆ ಮಾಡಿದೆ. ನಮ್ಮ ದೇಶದಲ್ಲಂತೂ ಗ್ರಾಮೀಣ ಭಾಗದಿಂದ ವಲಸೆ ಬಂದು
> ಪಟ್ಟಣಗಳಲ್ಲಿ ಕೊಳೆಗೇರಿಗಳಲ್ಲಿ ಹೇಗೋ ಮುದುರಿ ನೆಲೆಸುವವರ ಸಂಖ್ಯೆ ಮೇರೆ ಮೀರಿ
> ಬೆಳೆಯುತ್ತಿದೆ. ಹಾಗೆ ಬರುವವರಲ್ಲಿ ಬಹುಪಾಲು ಜನರು ನೈಸರ್ಗಿಕ ಪ್ರಕೋಪ ತಾಳಲಾರದೆ
> ಬರುತ್ತಿದ್ದಾರೆ. ಇಲ್ಲಿ ಆವಾಸ ಸಿಗದೆ ಪರದಾಡುತ್ತಾರೆ. ವ್ಯಂಗ್ಯ ಏನೆಂದರೆ, ನಗರಗಳ ಚರಂಡಿ
> ಚೊಕ್ಕಟ ಮಾಡುವ, ಕಸ ಬಾಚುವ, ಮುಸುರೆ ತೊಳೆಯುವಂಥ ಎಲ್ಲ ಅಗತ್ಯ ಸೇವೆಗಳನ್ನೂ ನೀಡುವ ಅವರ
> ಆವಾಸ ಮಾತ್ರ ನರಕ ಸದೃಶ ಇರುತ್ತದೆ. ಅಲ್ಲಿ ಬೆಳಕಿಗೆ, ರಸ್ತೆಗೆ, ಶುದ್ಧ ನೀರಿಗೆ,
> ಶೌಚಕ್ಕೆ, ಶಿಕ್ಷಣಕ್ಕೆ ಎಲ್ಲಕ್ಕೂ ಅಭಾವ. ‘ಅದು ಕ್ರಿಮಿಗಳೂ ಕ್ರಿಮಿನಲ್‌ಗಳೂ ಹುಟ್ಟಿ
> ಬೆಳೆಯುವ ತಾಣ’ ಎಂದು ವಿಶ್ವಸಂಸ್ಥೆಯ ವೆಬ್‌ಸೈಟ್ ಹೇಳುತ್ತದೆ. ನಮ್ಮ ತಾಲ್ಲೂಕು ಮಟ್ಟದ
> ಪಟ್ಟಣಗಳಲ್ಲಿ ಕೆಳವರ್ಗದವರ ‘ಆವಾಸ’ ಎಂಬುದು ಈಗಲೂ ಕೊಳೆಗೇರಿಗಳಂತೇ ಇವೆ. ಅಲ್ಲಿ
> ಕ್ರಿಮಿನಲ್‌ಗಳು ಸೃಷ್ಟಿಯಾಗಲಿಕ್ಕಿಲ್ಲ, ಆದರೆ ಅಲ್ಲಿನವರ ವಾಸದ ಪರಿಸರವಂತೂ ಈಗಿನ
> ಮಾರುಕಟ್ಟೆ ಎಕಾನಮಿಯಲ್ಲಿ ಸುಧಾರಿಸಲು ಸಾಧ್ಯವೇ ಇಲ್ಲ. ಸರ್ಕಾರಿ ನೆರವಿನಿಂದ ಅಲ್ಲಿ ಪೌರ
> ಸೌಲಭ್ಯಗಳನ್ನು ಸುಧಾರಿಸುವ ಮಾತು ಹೇಗೂ ಇರಲಿ, ನಮ್ಮ ನಗರ ಯೋಜನಾ ತಜ್ಞರು ಈಗಲೂ ಹೊಸ
> ಬಡಾವಣೆಗಳಲ್ಲಿ ಈ ಕೆಳಹಂತದ ಸೇವಾವೃತ್ತಿಯವರ ವಸತಿಗಾಗಿ ಒಂದು ಚೂರು ಜಾಗ ಇಡುತ್ತಿಲ್ಲ.
> ಅಥವಾ ದೊಡ್ಡ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುವಾಗ ಕಡ್ಡಾಯವಾಗಿ ಸೇವಕರ ವಾಸ್ತವ್ಯಕ್ಕೆ ಜಾಗ
> ಮೀಸಲಿಡಬೇಕೆಂಬ ನಿಯಮವೂ ಇದ್ದಂತಿಲ್ಲ. ತಳವರ್ಗಕ್ಕೆ ವಾಸಯೋಗ್ಯ ಆಸರೆ ನೀಡುವಲ್ಲಿ ಕೇವಲ
> ಸರ್ಕಾರದ್ದಷ್ಟೇ ಅಲ್ಲ, ಸಮುದಾಯದ್ದೂ ಪಾಲಿರಬೇಕು ಎಂಬುದನ್ನು ಮನದಟ್ಟು ಮಾಡಲೆಂದೇ ‘ವಿಶ್ವ
> ಆವಾಸ ದಿನ’ ಆಚರಿಸಬೇಕಿತ್ತು. ಈ ವರ್ಷವಂತೂ ಅಕ್ಟೊಬರ್ 2ರಂದೇ ‘ವಿಶ್ವ ಆವಾಸ ದಿನ’
> ಬಂದಿತ್ತು. ಗಾಂಧೀಜಿಯವರು ದರಿದ್ರ ನಾರಾಯಣರ ಏಳ್ಗೆಗಾಗಿ, ಅವರ ವಾಸ್ತವ್ಯದ ಶುಚಿತ್ವಕ್ಕಾಗಿ
> ಏನೆಲ್ಲ ಮುಂದಾಳತ್ವದ ಮಾದರಿ ತೋರಿಸಿದ್ದರು. ಸಚಿವರಿಗೆ ‘ಆವಾಸ ದಿನ’ ನೆನಪಿರಲಿಕ್ಕಿಲ್ಲ.
> ಆದರೆ ‘ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಲಿ’ ಎಂಬ ಒಂದು ದೊಡ್ಡ ವ್ಯವಸ್ಥೆ ಇಡೀ
> ರಾಜ್ಯದಲ್ಲೆಲ್ಲ ಬೇರು ಬಿಳಲು ಬೆಳೆಸಿ ನಿಂತಿದೆ. ಅದರ ಕ್ಯಾಲೆಂಡರಿನಲ್ಲೂ ‘ಆವಾಸ ದಿನ’ಕ್ಕೆ
> ಜಾಗ ಇರಲಿಲ್ಲವೆ? ಇಲ್ಲದಿದ್ದರೆ ಈಗಲಾದರೂ ಸೇರಿಸಬಹುದು: ಇಡೀ ತಿಂಗಳನ್ನು ‘ಅರ್ಬನ್
> ಅಕ್ಟೊಬರ್’ ಎಂದು ಆಚರಿಸಲು ಮೊನ್ನೆ ವಿಶ್ವಸಂಸ್ಥೆ ಕರೆ ಕೊಟ್ಟಿದೆ. ನಮ್ಮ ರಾಜ್ಯೋತ್ಸವದ
> ಹಾಗೆ ಎಲ್ಲ ನಗರಗಳಲ್ಲಿ ‘ಆವಾಸ ದಿನ’ ಆಚರಿಸಿ ನಿಮ್ಮ ಸಾಧನೆಯ ಡಂಗುರ ಹೊಡೆಯಲು ಯಾಕೆ,
> ಹಿಂಜರಿಕೆಯೆ ಅಧಿಕಾರಿಗಳೆ, ಅಧ್ಯಕ್ಷರೆ?
>
> ಅರೆ, ಅಕ್ಟೊಬರ್ 13ರ ‘ನೈಸರ್ಗಿಕ ವಿಕೋಪ ತಗ್ಗಿಸುವ ದಿನ’ದ ಆಚರಣೆಯ ಬಗ್ಗೆ
> ಚರ್ಚಿಸೋಣವೆಂದರೆ ಜಾಗವೇ ಉಳಿದಿಲ್ಲವಲ್ಲ. ಅದನ್ನೂ ರಾಜ್ಯಾದ್ಯಂತ ಆಚರಿಸಲು ಸಿದ್ಧತೆ
> ನಡೆಸೋಣವೆ? ಈ ನಡುವೆ ಹೈದರಾಬಾದ್ ನಗರ ಮೇಘಸ್ಫೋಟದಿಂದ ತತ್ತರಿಸಿದೆ; ನಮ್ಮದೇ ರಿಚರ್ಡ್
> ಬ್ರಾನ್ಸನ್ ಎನಿಸಿದ ವಿಜಯ್ ಮಲ್ಯರ ಬಂಧನ- ಬಿಡುಗಡೆಯ ಕೋಲ್ಮಿಂಚು ಹೊಡೆದು ಭಾರತ ಸರ್ಕಾರ
> ಮತ್ತೊಂದು ಬಲೆ ಬೀಸಲು ಹೊರಟಿದೆ. ಮೊದಲು ಆ ಸುದ್ದಿ ಸುಂಟರಗಾಳಿಗಳೆಲ್ಲ ತಣ್ಣಗಾಗಲಿ ನೋಡೋಣ.
>
> --
> Hareeshkumar K
> GHS Huskuru
> Malavalli Tq
> Mandya Dt
> 9880328224
> e-mail [email protected]
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to