On Nov 19, 2017 5:28 PM, "Hareeshkumar K" <[email protected]> wrote:
> ಒಂದು ಹುಲ್ಲಿನ ಇನ್ನೊಂದು ಕ್ರಾಂತಿ > 16 Nov, 2017 > > ದಟ್ಟ ಮೋಡಗಳ ಮಧ್ಯೆ ಸಾಗುತ್ತಿದ್ದ ವಿಮಾನ ಧಡಕ್ಕೆಂದು ಕೊಂಚ ಕುಪ್ಪಳಿಸಿ, ಮುಗ್ಗರಿಸಿ > ಮುಂದಕ್ಕೆ ಧಾವಿಸಿತು. ಆಗಲೇ ನಮಗೆ ಗೊತ್ತಾಗಿದ್ದು- ಒಹ್ಹೋ ವಿಮಾನ ದಿಲ್ಲಿಯಲ್ಲಿ > ನೆಲಕ್ಕಿಳಿದಿದೆ ಅಂತ. ‘ಸೀಟ್ ಬೆಲ್ಟ್ ಬಿಗಿದುಕೊಳ್ಳಿ, ಕೆಳಕ್ಕಿಳಿಯುತ್ತಿದ್ದೇವೆ’ ಎಂಬ > ಸಂದೇಶ ಕೊಂಚ ಮೊದಲೇ ಬಂದಿತ್ತು ನಿಜ > ಒಂದು ಹುಲ್ಲಿನ ಇನ್ನೊಂದು ಕ್ರಾಂತಿ > > ದಟ್ಟ ಮೋಡಗಳ ಮಧ್ಯೆ ಸಾಗುತ್ತಿದ್ದ ವಿಮಾನ ಧಡಕ್ಕೆಂದು ಕೊಂಚ ಕುಪ್ಪಳಿಸಿ, ಮುಗ್ಗರಿಸಿ > ಮುಂದಕ್ಕೆ ಧಾವಿಸಿತು. ಆಗಲೇ ನಮಗೆ ಗೊತ್ತಾಗಿದ್ದು- ಒಹ್ಹೋ ವಿಮಾನ ದಿಲ್ಲಿಯಲ್ಲಿ > ನೆಲಕ್ಕಿಳಿದಿದೆ ಅಂತ. ‘ಸೀಟ್ ಬೆಲ್ಟ್ ಬಿಗಿದುಕೊಳ್ಳಿ, ಕೆಳಕ್ಕಿಳಿಯುತ್ತಿದ್ದೇವೆ’ ಎಂಬ > ಸಂದೇಶ ಕೊಂಚ ಮೊದಲೇ ಬಂದಿತ್ತು ನಿಜ. ಆದರೆ ಕಿಟಕಿಯಲ್ಲಿ ಬಗ್ಗಿ ನೋಡಿದರೆ ನೆಲವೇ > ಕಾಣುತ್ತಿರಲಿಲ್ಲ. ಇನ್ನೂ ಮೋಡದಲ್ಲೇ ಇದ್ದೇವೆಂಬ ಭ್ರಮೆ. ನೆಲಕ್ಕಿಳಿದ ಮೇಲೂ ಹೆಚ್ಚೆಂದರೆ > 25 ಮೀಟರ್ ದೂರದವರೆಗಿನ ಕಂಬ, ಕಟ್ಟೆ, ದೀಪಗಳು ಮಾತ್ರ- ಅವೂ ಮಬ್ಬಾಗಿ ಕಾಣುತ್ತಿದ್ದವು. > ಸಮಯ: ಮಧ್ಯಾಹ್ನ ಒಂದೂವರೆ. > > ‘ದಿಲ್ಲಿಯಲ್ಲಿ ಈಗ ಮೊದಲ ನೋಟಕ್ಕೆ ಪ್ರೇಮ ಅಂಕುರಿಸಲು ಸಾಧ್ಯವೇ ಇಲ್ಲ’ ಎಂದು > ವಾಟ್ಸ್ಆ್ಯಪ್ನಲ್ಲಿತಮಾಷೆಯ ಮಾತು ಹರಿದಾಡುತ್ತಿತ್ತು. ದೂರದ ಯಾರ ಮುಖವೂ > ಕಾಣಿಸುತ್ತಿರಲಿಲ್ಲ. ಹತ್ತಿರ ಬಂದರೂ ಯಾರೆಂಬುದು ಸುಲಭಕ್ಕೆ ಗೊತ್ತಾಗದಂತೆ ಎಲ್ಲೆಲ್ಲೂ > ಮುಖವಾಡಗಳು. ಬ್ರೆಕಿಂಗ್ ನ್ಯೂಸ್ ಗಳಿಗಂತೂ ಬಿಡುವೇ ಇಲ್ಲ. ಚಾನೆಲ್ ಗಳಲ್ಲಿ ಜಗಳವೋ ಜಗಳ. > ‘ಇಂಥ ದುಃಸ್ಥಿತಿಗೆ ಕಾರಣ ನಾವಲ್ಲ, ನೀವು’ ಎಂದು ಎಲ್ಲ ರಾಜಕೀಯ ಪಕ್ಷಗಳ ವಕ್ತಾರರ ಬೆರಳೂ > ಇನ್ನೊಬ್ಬರ ಕಡೆಗೆ. > > ಈ ಹಿಂದೆ ಬೀಜಿಂಗ್ನಲ್ಲಿ, ಮೆಕ್ಸಿಕೊದಲ್ಲಿ ಇಂಥದೇ ಸಂದರ್ಭದಲ್ಲಿ ಕೈಗೊಂಡಿದ್ದ > ತುರ್ತುಕ್ರಮಗಳೆಲ್ಲ ದಿಲ್ಲಿಯಲ್ಲಿ ಕಳೆದ ವಾರ ಜಾರಿಗೆ ಬಂದಿವೆ. ಆರೋಗ್ಯ ತುರ್ತುಸ್ಥಿತಿ > ಘೋಷಣೆ. ಎಲ್ಲ ಕಲ್ಲಿದ್ದಲ ವಿದ್ಯುತ್ ಘಟಕಗಳು ಸ್ಥಗಿತ; ಕಾರ್ಖಾನೆಗಳೆಲ್ಲ ಬಂದ್. > ಶಾಲೆಗಳಿಗೆ ರಜೆ; ಲಾರಿಗಳಿಗೆ ಪ್ರವೇಶ ನಿಷೇಧ; ಎಲ್ಲ ಕಟ್ಟಡ ಕಾಮಗಾರಿ ನಿಷೇಧ; ಇಟ್ಟಿಗೆ > ಬಟ್ಟಿಗಳು ಬಂದ್. ಕ್ರೀಡಾ ಕಾರ್ಯಕ್ರಮಗಳು ಬಂದ್. ಮುಂಜಾವಿನ ವಾಕಿಂಗ್, ವ್ಯಾಯಾಮ ಬಂದ್. > ವಾಹನ ನಿಲುಗಡೆ ಶುಲ್ಕ ದುಪ್ಪಟ್ಟು; ಕೃತಕ ಮಳೆ ಸುರಿಸಲು ಸಿದ್ಧತೆ. ಸಮ- ಬೆಸ ಕ್ರಮಗಳನ್ನು > ಮತ್ತೆ ಜಾರಿಗೆ ತರಲು ಚಿಂತನೆ. ದೂಳು ತಗ್ಗಿಸಲು ರಸ್ತೆಗಳಿಗೆ ವ್ಯಾಕ್ಯೂಮ್ ಕ್ಲೀನಿಂಗ್; > ನೀರು ಎರಚಾಟ. ಮಾರುಕಟ್ಟೆಯಲ್ಲಿ ಏರ್ ಫಿಲ್ಟರ್ ಯಂತ್ರಗಳ ಮಾರಾಟ ಮೇಲಾಟ. ಮಾಧ್ಯಮ ವರದಿಗಾರರ > ಕೈಯಲ್ಲಿ ವಾಯುಮಾಲಿನ್ಯ ಅಳೆಯುವ ಸಾಧನಗಳ ಓಡಾಟ. ವಾಯು ಗುಣಮಟ್ಟ ಸುರಕ್ಷಾ ಮಿತಿಗಿಂತ ಐದು > ಪಟ್ಟು, ಏಳು ಪಟ್ಟು ಏರಿತೆಂಬ ಚೀರಾಟ. > > ರಾಜಧಾನಿಯಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳನ್ನು ಕೈಗೊಂಡಿದ್ದಾಯಿತು. ಮಾಧ್ಯಮಗಳ ದೌಡು > ಈಗ ರೈತರ ಕಡೆಗೆ. ದಿಲ್ಲಿಯ ಸುತ್ತಲಿನ (ಹರ್ಯಾಣಾ, ಪಂಜಾಬ್ ಮತ್ತು ಉ.ಪ್ರ. ಪಶ್ಚಿಮ) > ಭಾಗಗಳ ರೈತರೆಲ್ಲ ಪ್ರತಿವರ್ಷ ನವಂಬರ್ ಆರಂಭದಲ್ಲಿ ಕಟಾವಾದ ಭತ್ತದ ಗದ್ದೆಗಳಲ್ಲಿ ಉಳಿದ > ಮೊಳಕಾಲೆತ್ತರದ ಬೇಹುಲ್ಲಿಗೆ ಬೆಂಕಿ ಕೊಡುತ್ತಾರೆ. ಈ ವರ್ಷವಂತೂ ಬಂಪರ್ ಫಸಲು. ಈ ಎರಡು > ವಾರಗಳಲ್ಲಿ ಅಂದಾಜು ಮೂರು ಕೋಟಿ ಟನ್ ಹುಲ್ಲು ಸುಟ್ಟು ಅದರ ಹೊಗೆಯೆಲ್ಲ > ಆಕಾಶಕ್ಕೇರುತ್ತಿದೆ.ಸುತ್ತ ಎಲ್ಲೂ ಸಮುದ್ರ ಇಲ್ಲವಾದ್ದರಿಂದ ಗಾಳಿಯ ಓಡಾಟ ಈ ದಿನಗಳಲ್ಲಿ > ತೀರ ಕಡಿಮೆ. ಹಾಗಾಗಿ ಪಾಕಿಸ್ತಾನದ ಲಾಹೋರದಿಂದ ಹಿಡಿದು ಕಾನಪುರ, ಲಖ್ನೋ, ವಾರಾಣಸಿವರೆಗೂ > ಹೊಗೆ, ಮಂಜು ಮತ್ತು ಅವೆರಡರ ಮಿಶ್ರಣವಾದ ಹೊಂಜು ಕವಿತ. ರೈತರು ಹುಲ್ಲನ್ನು ಸುಡುವುದು > ಯಾಕೆಂದರೆ ತುರ್ತಾಗಿ ಹಿಂಗಾರು ಗೋಧಿಯ ಬಿತ್ತನೆ ಮಾಡಬೇಕು. ತಡ ಮಾಡುವಂತಿಲ್ಲ. ಸುಡುವ ಬದಲು > ಭತ್ತದ ಹುಲ್ಲನ್ನು ಮೇವಿಗೆ ಯಾಕೆ ಬಳಸುತ್ತಿಲ್ಲ ಅಂದರೆ, ಗೋಧಿಯ ಹುಲ್ಲು ಸಾಕಷ್ಟು > ಸಿಗುತ್ತದೆ. ಪಶುಗಳಿಗೂ ಅದು ಒಳ್ಳೆಯದು ಯಾಕೆಂದರೆ ಭತ್ತದ ಹುಲ್ಲಿನಲ್ಲಿರುವ ಸಿಲಿಕಾ ಗೋಧಿಯ > ಹುಲ್ಲಿನಲ್ಲಿ ಇಲ್ಲ. ಭತ್ತದ ನೆಲಸಮ ಕಟಾವು ಸಾಧ್ಯವಿಲ್ಲ ಯಾಕೆಂದರೆ ಕಟಾವು ಯಂತ್ರಗಳ > ವಿನ್ಯಾಸವೇ ಹಾಗೆ ಇದೆ. ಅವು ತೆನೆಯನ್ನಷ್ಟೇ ಕತ್ತರಿಸಿ ಸಾಗಿಸುತ್ತವೆ. > > ಹಸುರು ಕ್ರಾಂತಿಯ ಕೆಸರು ಇದು. ದೇಶಕ್ಕೆ ಆಹಾರ ಒದಗಿಸಬೇಕೆಂಬ ಹುಕ್ಕಿಯಲ್ಲಿ ಕೇವಲ > ಧಾನ್ಯಕ್ಕೆ ಒತ್ತು ಕೊಟ್ಟಿದ್ದರಿಂದ ಎಷ್ಟೆಲ್ಲ ಎಡವಟ್ಟುಗಳಾಗಿವೆ. ಅದಕ್ಕೂ ಮುನ್ನ ಪಂಜಾಬಿ > ರೈತರು ಗೋಧಿ, ಭತ್ತ, ಎಣ್ಣೆ ಕಾಳು, ತೊಗರಿ, ಅಲಸಂಡೆ, ಕಿರುಧಾನ್ಯ ಎಲ್ಲ ಬೆಳೆಯುತ್ತಿದ್ದರು. > ಅಂಥ ಸಮಗ್ರ ಕೃಷಿಯಲ್ಲಿ ರೈತರಿಗೆ ಸಮೃದ್ಧ ಊಟ, ಪಶುಗಳಿಗೆ ಪುಷ್ಕಳ ಮಿಶ್ರ ಮೇವು, ನೆಲಕ್ಕೆ > ಸಾವಯವ ಗೊಬ್ಬರ ಎಲ್ಲ ಸಿಗುತ್ತಿತ್ತು. ಆಹಾರ ಸ್ವಾವಲಂಬನೆ ಸಾಧಿಸಲೆಂದು ಬೃಹತ್ ಅಣೆಕಟ್ಟು > ಕಟ್ಟಿ, ಪಂಜಾಬಿನ ಶೇ 95ಕ್ಕೂ ಹೆಚ್ಚು ಭೂಮಿಗೆ ನೀರಾವರಿ ಒದಗಿಸಿ, ಕೃತಕ ಗೊಬ್ಬರ, ಕೆಮಿಕಲ್ > ಕೀಟನಾಶಕ, ಭರ್ಜರಿ ಕೃಷಿ ಉಪಕರಣ ಪೂರೈಸಿ, ಬರೀ ಗೋಧಿ, ಭತ್ತದ ಹೈಬ್ರಿಡ್ ಬೀಜ ವಿತರಿಸಿ > 1970ರ ಹೊತ್ತಿಗೆ ಪಂಜಾಬ್ ಎಂದರೆ ದೇಶದ ‘ಧಾನ್ಯದ ಕಣಜ’ ಎಂಬ ಕೀರ್ತಿ ಬಂದಿದ್ದೇನೊ ಹೌದು. > ಇತರೆಲ್ಲ ಬೆಳೆಗಳನ್ನು ಕೈಬಿಟ್ಟು ಎರಡೇ ಧಾನ್ಯಗಳನ್ನು ಬೆಳೆಯುತ್ತಿದ್ದರೆ ಅದು ‘ಕಣಜ’ > ಎನಿಸಿದ್ದರಲ್ಲಿ ಅಚ್ಚರಿಯೇನಿಲ್ಲ. ಇದರ ದುಷ್ಪರಿಣಾಮಗಳು ಒಂದೆರಡಲ್ಲ: ಮಣ್ಣು ಮತ್ತು > ಅಂತರ್ಜಲ ವಿಷಮಯ. ಚಿಟ್ಟೆ, ಗುಬ್ಬಿ, ಏಡಿ, ಎರೆಹುಳಗಳೆಲ್ಲ ನಾಪತ್ತೆ. > ಕ್ಯಾನ್ಸರ್ ಪೀಡಿತ ಮಕ್ಕಳ ಸಂಖ್ಯೆ ಏರುಮುಖ. ಭಾರೀ ಪ್ರಮಾಣದಲ್ಲಿ ನೀರನ್ನು ಆವಿಯಾಗಿಸಿ > ಮೇಲಕ್ಕೆ ಕಳಿಸುವುದರಿಂದ ವಾತಾವರಣದಲ್ಲಿ ತೇವಾಂಶ ಜಾಸ್ತಿ; ಈಗಂತೂ ದಟ್ಟ ಮಂಜು, ಡೀಸೆಲ್ > ಮತ್ತು ಹುಲ್ಲಿನ ಹೊಗೆ ಸೇರಿ ಉತ್ತರ ಭಾರತ ತತ್ತರ. > > ಒಂದು ದೃಷ್ಟಿಯಲ್ಲಿ ಈ ಹುಲ್ಲಿನ ಹೊಗೆ ದಿಲ್ಲಿಗೆ ಮುತ್ತಿಗೆ ಹಾಕಿದ್ದು ಒಳ್ಳೆಯದೇ > ಎನ್ನಬೇಕು. ಹಳ್ಳಿಯ ಸಮಸ್ಯೆ ಜಗಜ್ಜಾಹೀರಾಯಿತು. ದೇಶದ ನೀತಿ ನಿರೂಪಕರು, ವಿಜ್ಞಾನಿಗಳು, > ಉದ್ಯಮಪತಿಗಳು, ರಾಜಕಾರಣಿಗಳು, ಅಧಿಕಾರಿಗಳು ಮತ್ತು ಮಾಧ್ಯಮಗಳು ಎಚ್ಚೆತ್ತವು. ಇಲ್ಲಾಂದರೆ > ಇಪ್ಪತ್ತು ನಗರಗಳನ್ನು, ಇನ್ನೂರಕ್ಕೂ ಹೆಚ್ಚು ಪಟ್ಟಣಗಳನ್ನು, ಅಸಂಖ್ಯ ಹಳ್ಳಿಗಳನ್ನು > ಮುಸುಕಿರುವ ಮಾಲಿನ್ಯಕ್ಕೆ ಕ್ಯಾರೇ ಅನ್ನುವವರೇ ಇರಲಿಲ್ಲ. ಭಟಿಂಡಾದ ನಾಗರಿಕರು ಆಮ್ಲಜ > ನಕ ಸಿಲಿಂಡರನ್ನೇ ಹೆಗಲ ಮೇಲೆ ಹೊತ್ತು ಬೀದಿ ಮೆರವಣಿಗೆ ಮಾಡಿದ್ದು; ರೈಲು ತಡವಾಗಿದ್ದರಿಂದ > ಪ್ರಯಾಣಿಕರು ಶಹಾದ್ರಾ ನಿಲ್ದಾಣದ ಬೆಂಚ್ಗಳನ್ನೇ ಕಿತ್ತು ಹಳಿಯ ಮೇಲೆ ಹಾಕಿದ್ದು; > ಮಬ್ಬಿನಲ್ಲಿ ವಾಹನಗಳು ಅಪಘಾತಕ್ಕೀಡಾಗಿದ್ದು; ಆಸ್ಪತ್ರೆಗಳಲ್ಲಿ ಆಸ್ತಮಾ ರೋಗಿಗಳ ಸಾಲು > ಉದ್ದವಾಗಿದ್ದು ಎಲ್ಲವೂ ಬೆಳಕಿಗೆ ಬಂದವು. ನಗರದವರಿಗೆ ತೃಣಸಮಾನ ಎನಿಸಿದ್ದ ಹುಲ್ಲು ಈಗಿನ > ಮಬ್ಬಿನಲ್ಲಿ ಧಿಗ್ಗನೆದ್ದು ಕಾಣುವಂತಾಯಿತು. > > ಹುಲ್ಲನ್ನು ಸುಡುವ ಬದಲು ಎಷ್ಟೊಂದು ವಿಧದಲ್ಲಿ ಬಳಸಬಹುದು. ಯಾವುದೇ ಸಸ್ಯದಲ್ಲಿ ಲಿಗ್ನಿನ್ > ಮತ್ತು ಸೆಲ್ಯುಲೋಸ್ ಎಂಬ ಎರಡು ಘಟಕಗಳಿರುತ್ತವೆ. ಸೆಲ್ಯುಲೋಸ್ (ಅಂದರೆ ಸಕ್ಕರೆ) ಅಂಶವನ್ನು > ಬೇರ್ಪಡಿಸಿ ಅದರಿಂದ ಮದ್ಯಸಾರ, ಸುಗಂಧ ವಸ್ತು, ಇಂಧನ ತೈಲವನ್ನು ಪಡೆಯಬಹುದು. ಲಿಗ್ನಿನ್ > ನಿಂದ ರಟ್ಟು, ಕಾಗದ, ಪ್ಲಾಸ್ಟಿಕ್ ತಯಾರಿಸಬಹುದು. ಅಥವಾ ಒತ್ತಿಟ್ಟಿಗೆ ಮಾಡಿ > ಕಲ್ಲಿದ್ದಲಿನಂತೆ ಕುಲುಮೆಯಲ್ಲಿ ಉರಿಸಬಹುದು; ವಿದ್ಯುತ್ ಉತ್ಪಾದನೆ ಮಾಡಬಹುದು. ಹುಲ್ಲು, > ಜೋಳದ ದಂಟು, ಹತ್ತಿ ಕಡ್ಡಿ, ಕಬ್ಬಿನ ರೌದಿ, ಹಿಪ್ನೇರಳೆ ಕಡ್ಡಿ ಮುಂತಾದ ಎಲ್ಲ ಕೃಷಿ > ತ್ಯಾಜ್ಯಗಳಿಂದ ಇವುಗಳನ್ನು ಪಡೆಯಲು ಸಾಧ್ಯವಿದೆ. ಇದೆಲ್ಲ ಗೊತ್ತಿದ್ದರೂ ದಿಲ್ಲಿಯ ಸುತ್ತ > ಮುನ್ನೂರು ಲಕ್ಷ ಟನ್ ಹುಲ್ಲು ಹೊಗೆಯಾಗಿ, ಧಗೆಯಾಗಿ ಜೀವಲೋಕಕ್ಕೆ ಕಂಟಕವಾಗುತ್ತಿದ್ದರೆ > ತಂತ್ರಜ್ಞರು ನೋಡುತ್ತ ಕೂತಿದ್ದಾರೆಯೆ? > > ಹಾಗೇನಿಲ್ಲ; ಹುಲ್ಲನ್ನು ಉರಿಸಿ ವಿದ್ಯುತ್ ಉತ್ಪಾದಿಸುವ ಆರು ಘಟಕಗಳು ಪಂಜಾಬಿನಲ್ಲಿವೆ. > ಆದರೆ ವಿದ್ಯುತ್ ಉತ್ಪಾದನಾ ವೆಚ್ಚ ಪ್ರತಿ ಯುನಿಟ್ಟಿಗೆ ಆರು ರೂಪಾಯಿ. ಇತ್ತ ಕಲ್ಲಿದ್ದಲ > ವಿದ್ಯುತ್ತು ಮೂರು ರೂಪಾಯಿಗೆ ಸಿಗುವಾಗ ಹುಲ್ಲಿನ ವಿದ್ಯುತ್ತನ್ನು ಸರ್ಕಾರವೂ > ಖರೀದಿಸುತ್ತಿಲ್ಲ. ಹಾಗಾಗಿ ಐದು > ಘಟಕಗಳು ಮುಚ್ಚಿವೆ. ಈಗ ವಿದ್ಯುತ್ ಬದಲು ಬೇರೆ ಉತ್ಪಾದನೆಗಳ ಸಾಧ್ಯತೆಯ ಪರೀಕ್ಷೆ > ನಡೆದಿದೆ. ಹುಲ್ಲಿನಿಂದ ಮೀಥೇನ್ ಅನಿಲ ಉತ್ಪಾದಿಸಿ ಸಿಲಿಂಡರ್ಗೆ ತುಂಬಿ ಪೂರೈಕೆಮಾಡುವ > ತಂತ್ರಜ್ಞಾನ ಪಾಕಿಸ್ತಾನದ ಗಡಿಯ ಬಳಿ ಫಜಿಲ್ಕಾದಲ್ಲಿ ಬಳಕೆಗೆ ಬಂದಿದೆ. ಅನಿಲದ ಬದಲು > ಇಥೆನಾಲ್ (ಬಯೊ ಪೆಟ್ರೋಲ್) ಉತ್ಪಾದಿಸಲು ಭಾರತ್ ಪೆಟ್ರೋಲಿಯಂ ಮತ್ತು ಎನ್ಟಿಪಿಸಿಗಳು > ಹೂಡಿಕೆ ಮಾಡುತ್ತಿವೆ. ಭಟಿಂಡಾ ಮತ್ತು ಪಾಟಿಯಾಲಾಗಳಲ್ಲಿ ಕೆಮಿಕಲ್ ಕಿಣ್ವಗಳನ್ನು ಸೇರಿಸಿ > ಬಟ್ಟಿ ಇಳಿಸುವ ಮೂಲಕ ಬಯೊ ಪೆಟ್ರೋಲ್ ತೆಗೆಯುವ 12 ಘಟಕಗಳು ಶೀಘ್ರಮಾರ್ಗದಲ್ಲಿ > ಸ್ಥಾಪನೆಗೊಳ್ಳುತ್ತಿವೆ. > > ‘ತಂತ್ರಜ್ಞಾನಗಳು ಎಷ್ಟೊಂದಿವೆ; ಆದರೆ ಇತರ ಅಡೆತಡೆ ನಿವಾರಣೆ ಆಗಬೇಕಿದೆ’ ಎನ್ನುತ್ತಾರೆ, > ಜೈವಿಕ ಇಂಧನದ ರಾಷ್ಟ್ರೀಯ ಕಾರ್ಯಪಡೆಯ ಅಧ್ಯಕ್ಷ ವೈ.ಬಿ. ರಾಮಕೃಷ್ಣ. ಡೇರಿ ಹಾಲಿನ > ಪೂರೈಕೆಯಷ್ಟು ಸುಲಭವಲ್ಲ ಕೃಷಿತ್ಯಾಜ್ಯ ವಿಲೆವಾರಿ. ಎರಡೇ ವಾರಗಳಲ್ಲಿ ಕಟಾವಾಗುವ ಅಷ್ಟೊಂದು > ಹುಲ್ಲನ್ನು ಸಂಗ್ರಹಿಸಿ, ಸಾಗಿಸಿ, ಒಂದೆಡೆ ಒಟ್ಟಿಟ್ಟು ವರ್ಷವಿಡೀ ಬಳಸುವಂತೆ ಉದ್ಯಮಿಗಳ > ಮನವೊಲಿಸಬೇಕು. ಹಳ್ಳಿಗರನ್ನೇ ತೊಡಗಿಸಿ ವ್ಯವಸ್ಥಿತ ಸಾಗಾಟ ಸರಪಳಿ ಸಿದ್ಧವಾಗಬೇಕು. > ‘ಅವೆಲ್ಲ ಒಂದೊಂದಾಗಿ ಕಾರ್ಯರೂಪಕ್ಕೆ ಬರುತ್ತಿದೆ. ಇಥೆನಾಲ್ ತಯಾರಿಕೆಯ ಅನುಕೂಲ ಏನೆಂದರೆ, > ದೇಶಕ್ಕೆ ಇಂಧನ ಸಿಗುತ್ತದೆ. ರೈತರಿಗೆ ಉತ್ಕೃಷ್ಟಗುಣಮಟ್ಟದ ಸಾವಯವ ಗೊಬ್ಬರ ಮರಳಿ > ಬರುತ್ತದೆ’ ಎಂದು ರಾಮಕೃಷ್ಣ ಹೇಳುತ್ತಾರೆ. ಹಾಗಿದ್ದರೆ ಅಂಥ ತಂತ್ರಜ್ಞಾನ ನಮ್ಮಲ್ಲಿಗೂ > ಬಂದೀತೆ ಎಂದು ಕೇಳಿದರೆ ‘ಬಂದಿದೇರೀ ಆಗ್ಲೇ’ ಎನ್ನುತ್ತ ಅವರು ಉದ್ದ ಪಟ್ಟಿಯನ್ನೇ > ಕೊಡುತ್ತಾರೆ. ಮುಸುಕಿನ ಜೋಳದ ದಿಂಡು, ದಂಟುಗ > ಳಿಂದ ಇಂಧನ ತೆಗೆಯುವ ಎಮ್.ಆರ್.ಪಿ.ಎಲ್. ಘಟಕ ಹರಿಹರದ ಬಳಿ ಬರುತ್ತಿದೆ. ಶೆಲ್ > ಕಂಪನಿಯವರು ಬೆಂಗಳೂರಿನ ಅಂಚಿನಲ್ಲೆ ಹಿಪ್ನೇರಳೆ ಕಡ್ಡಿ ಮತ್ತು ನಗರ ತ್ಯಾಜ್ಯಗಳಿಂದ ತೈಲ > ತಯಾರಿಸುವ ಘಟಕ ಹಾಕುತ್ತಿದ್ದಾರೆ. ಬಿದಿರನ್ನು ರುಬ್ಬಿ ಮದ್ಯಸಾರ ತೆಗೆಯುವ ಕಾರ್ಖಾನೆ > ಅಸ್ಸಾಮಿನಲ್ಲಿ ಫಿನ್ಲೆಂಡ್ ನೆರವಿನಿಂದ ಸಜ್ಜಾಗಿದೆ. > > ಕೊಚ್ಚಿಯಲ್ಲಿ ಕೃಷಿತ್ಯಾಜ್ಯದಿಂದ ಬಯೊಪೆಟ್ರೋಲ್ಪಡೆಯುವ ಉದ್ಯಮವನ್ನು ಬಿಪಿಸಿಎಲ್ ಇದೀಗ > ಆರಂಭಿಸುತ್ತಿದೆ. ಜೈವಿಕ ತಂತ್ರಜ್ಞಾನದಲ್ಲಿ ಇಂಥ ಏನೇನು > ಹೊಸ ಸಾಧ್ಯತೆಗಳಿವೆ ಎಂಬುದನ್ನು ತೋರಿಸಲೆಂದೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ > ಮೂರು ದಿನಗಳ ‘ತಂತ್ರಜ್ಞಾನ ಶೃಂಗಸಭೆ’ ಆರಂಭವಾಗಿದೆ. ದೇಶದ ಐಟಿ, ಬಿಟಿ ಧುರಂಧರರು, > ಉದ್ಯಮಪತಿಗಳು, ಸಂಶೋಧಕರು, ಹೂಡಿಕೆದಾರರು ಎಲ್ಲ ಸೇರುತ್ತಿದ್ದಾರೆ. ಇದೇ ವೇಳೆಗೆ ಅತ್ತ > ಜಿಕೆವಿಕೆಯಲ್ಲಿ ಅದ್ಧೂರಿಯ ಕೃಷಿಮೇಳವೂ ಆರಂಭವಾಗುತ್ತಿದೆ. ದಿಲ್ಲಿಯ ಗಾಳಿ > ಬೀಸಿದ್ದರಿಂದಾಗಿ ಹಳ್ಳಿಯ ಕಡೆಗೆ ತಂತ್ರವಿಶಾರದರ ಗಮನ ಹರಿದಿದೆ. > ಜಪಾನೀ ಕೃಷಿಋಷಿ ಫುಕುವೊಕನ ‘ಒಂದು ಹುಲ್ಲಿನ ಕ್ರಾಂತಿ’ ಗ್ರಂಥದ ಪ್ರಕಾರ, ಹುಲ್ಲು ಎಂಬುದು > ಕೃಷಿಕನ ಸುಸ್ಥಿರ ಬದುಕಿಗೆ ಬುನಾದಿಯಾಗಿತ್ತು. ಭತ್ತದ ಕೊಯ್ಲು ಮಾಡುವ ಎರಡು ವಾರ ಮೊದಲೇ > ಫುಕುವೊಕ ಮುಂದಿನ ಬೆಳೆಗೆ ಬಿತ್ತನೆ ಮಾಡಿಬಿಡುತ್ತಿದ್ದ. ಕೊಯ್ಲಿನ ನಂತರ ಹುಲ್ಲನ್ನು ಅಲ್ಲೇ > ಹಾಸುತ್ತಿದ್ದ. ಫಸಲಿನ ದಾಖಲೆ ಇಳುವರಿ ಪಡೆಯುತ್ತಿದ್ದ. ನಾವು ‘ಎಲ್ಲರಿಗೂ ಆಹಾರ’ ಒದಗಿಸುವ > ಧಾವಂತದಲ್ಲಿ ಯಾಂತ್ರಿಕ ಕೃಷಿಗೆ ಆದ್ಯತೆ ನೀಡಿದೆವು. ಅದರ ಮುಂದುವರಿಕೆಯಾಗಿ ಎಲ್ಲರಿಗೂ > ಹಾಲು, ಬಟ್ಟೆ, ಮನೆ, ಎಲ್ಲರಿಗೂ ಫ್ರಿಜ್ಜು, ಕಾರು... ಈಗ ಎಲ್ಲರಿಗೂ ಔಷಧ, ಎಲ್ಲರಿಗೂ > ಮುಖವಾಡ ಎಂಬಲ್ಲಿಗೆ ತಲುಪಿದ್ದೇವೆ. ಉಸಿರ ತುಸು ಬಿಗಿ ಹಿಡಿದು ಕಾಯೋಣ. ತ್ಯಾಜ್ಯ ಮರುಬಳಕೆಯ > ತಂತ್ರಜ್ಞಾನ ಸನಿಹದಲ್ಲೇ ಮಂಜು ಮಂಜಾಗಿ ಕಾಣತೊಡಗಿದೆ. > > -- > Hareeshkumar K > GHS Huskuru > Malavalli Tq > Mandya Dt > 9880328224 > e-mail [email protected] > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
