ಡಿ.ವಿ.ಜಿ.ಬೆಳಗು ಚೆನ್ನಾಗಿದೆ. ವಂದನೆಗಳು,ಅಭಿನಂದನೆಗಳು
On 10-May-2017 3:57 PM, "Sameera samee" <mehak.sa...@gmail.com> wrote: > > 🙏 *ಡಿ.ವಿ.ಜಿ ಬೆಳಗು:-* 🙏 > > *ಸತತ ಮಾರ್ಗಣೆ, ಸಿದ್ಧಿಯಂತಿರಲಿ, ಮಾರ್ಗಣೆಯೆ|* > *ಗತಿ ಮನುಜ ಲೋಕಕ್ಕೆ; ಜಗದ ಜೀವವದು|* > *ಕೃತಕಾಮರೆಲ್ಲರಾದೊಡೆ ಕೃತ್ಯವುಳಿಯದೊಡೆ||* > *ಕಥೆ ಮುಗಿವುದಲ ಜಗಕೆ?-ಮಂಕುತಿಮ್ಮ||857||* > > *ನಲ್ವೆಳಗು-ಕವಿತಾ ಅಡೂರು* > > ಮನುಷ್ಯ ಲೋಕದಲ್ಲಿ ನಿರಂತರವಾದ ಹುಡುಕಾಟವಷ್ಟೇ ಇದೆ. ಗುರಿ ತಲುಪುವುದು ಹಾಗಿರಲಿ, > ಹುಡುಕುವುದೇ ಸತತವಾಗುಳಿದಿದೆ. ಇದುವೇ ಜಗತ್ತಿನ ಜೀವಾಳವೂ ಹೌದು. ಎಲ್ಲರೂ ಮಾಡ > ಬೇಕಾದುದನ್ನು ಮಾಡಿ ಮುಗಿಸಿದವರೇ ಆದರೆ, ಇನ್ನು ಮಾಡಲು ಯಾವ ಕೆಲಸವೂ ಇಲ್ಲವೆಂದಾದರೆ > ಜಗತ್ತು ಮುನ್ನಡೆಯುವುದಕ್ಕುಂಟೆ? ಜಗದ ಕಥೆಯೇ ಮುಗಿದ ಹಾಗೆ ಅಲ್ಲವೇ? > > ಜೀವನಕ್ಕೊಂದು ಗುರಿ ಇರಬೇಕು ಎನ್ನುವ ಮಾತನ್ನು ನಾವೆಲ್ಲರೂ ಕೇಳಿಸಿಕೊಂಡವರೇ.. ಗುರಿ > ತಲುಪಲು ಪ್ರಯತ್ನಿಸಿದವರೇ. ಆದರೆ ಯಾರಾದರೂ ತಾವು ಯೋಜಿಸಿದಂತೆ, ಯೋಚಿಸಿದಂತೆಯೇ ಬದುಕನ್ನು > ಪಡೆದವರುಂಟೇ? ಗುರಿ ತಲುಪಿದವರುಂಟೇ? ಎಲ್ಲೋ ಸಣ್ಣ ಅತೃಪ್ತಿ ನಮ್ಮಲ್ಲಿ ಉಳಿದೇ > ಉಳಿಯುತ್ತದೆ. ಇರುವುದರೆಡೆಯಿಂದ ಇರದುದರೆಡೆಗೆ ತುಡಿಯುತ್ತಲೇ ಇರುತ್ತೇವೆ. ಮತ್ತು ಅದುವೇ > ಜೀವಿಸುವುದಕ್ಕೆ ಕಾರಣವೂ ಆಗುತ್ತದೆ; ಛಲ ಹುಟ್ಟಿಸುತ್ತದೆ. > > ಗುರುವೊಬ್ಬರ ಬಳಿ ಹಲವಾರು ಮಂದಿ ಶಿಷ್ಯರು ಜ್ಞಾನಾರ್ಜನೆ ಮಾಡುತ್ತಿದ್ದರು. ಆ ಶಿಷ್ಯರಲ್ಲಿ > ಒಬ್ಬನಿಗೆ ಸಾರ್ಥಕ ಬದುಕನ್ನು ಹೊಂದುವ ಬಗೆ ಹೇಗೆ ಎಂಬ ಬಗ್ಗೆ ಜಿಜ್ಞಾಸೆ ಉಂಟಾಯಿತು. > ಗುರುವಿನಲ್ಲೇ ಈ ಬಗ್ಗೆ ವಿಚಾರಿಸಿದ. ಶಿಷ್ಯನನ್ನೇ ದಿಟ್ಟಿಸಿ ನೋಡಿದ ಗುರು , ಮೌನ ಮುರಿದು > ಮಾತನಾಡಿದರು. ಆಶ್ರಮದಿಂದ ಪೂರ್ವಾಭಿಮುಖವಾಗಿ ಒಂದಷ್ಟು ದೂರ ನಡೆದಾಗ ಒಂದು ಎತ್ತರವಾದ > ನಿಬಿಡಾರಣ್ಯದಿಂದ ಕೂಡಿದ ಬೆಟ್ಟ ಸಿಗುತ್ತದೆ. ಅದರ ತುತ್ತ ತುದಿಯನ್ನು ತಲುಪಿದರೆ ಅಲ್ಲಿ > ಕೆಲವು ಗುಹೆಗಳಿವೆ. ಅದರೊಳಗೆ ಒಂದು ಗುಹೆಯಲ್ಲಿ ಮಹಾಗುರುವೊಬ್ಬರು ಧ್ಯಾನಸ್ಥರಾಗಿದ್ದಾರೆ. > ಅವರು ಬದುಕಿನ ಸಾರ್ಥಕತೆಯ ಬಗ್ಗೆ ತಿಳಿಸ ಬಹುದು. ತಿಳಿಯಲೇ ಬೇಕೆಂದಾದಲ್ಲಿ ಮರುಮುಂಜಾವ > ಪೂರ್ವಾಭಿಮುಖನಾಗಿ ಹೊರಡು ಎನ್ನುತ್ತಾರೆ. ಗುರುವಿನ ಮಾತಿನಂತೆಯೇ ಶಿಷ್ಯ ಬೆಳಗ್ಗೆ ಎದ್ದವನೇ > ಗುರುವಿಗೆ ವಂದಿಸಿ ಪೂರ್ವದಿಕ್ಕಿನತ್ತ ಪಯಣಿಸಿದ. ಒಂದಷ್ಟು ದೂರ ಹೋಗುತ್ತಿದ್ದಂತೆಯೇ > ಎತ್ತರದ ಬೆಟ್ಟ ಕಾಣಿಸಿತು. ಅದನ್ನೇ ಗುರಿಯಾಗಿ ಇರಿಸಿಕೊಂಡು ನಡೆದ. ನಡೆದಷ್ಟು ಮುಗಿಯದ > ದಾರಿ. ಬೆಟ್ಟ ದೂರವೇ ಉಳಿಯಿತು. ನಡೆವ ದಾರಿಯಲ್ಲಿ ಅವನಿಗೆ ಹಲವಾರು ಊರುಗಳು ಸಿಕ್ಕಿದವು. > ಆ ಊರಿನಲ್ಲಿ ಕೆಲವು ದಿನ ಉಳಿದುಕೊಳ್ಳಲೇ ಬೇಕಾಯಿತು. ಜನರೊಡನೆ ಬೆರೆಯಲೇ ಬೇಕಾಯಿತು. ಆ > ಸಡಗರದಲ್ಲಿ ಕಳೆದೇ ಹೋದನೆಂಬ ಹೊತ್ತಲ್ಲಿ ಮತ್ತೆ ಎಚ್ಚೆತ್ತುಕೊಂಡ. ಬೆಟ್ಟವನ್ನು > ದೃಷ್ಟಿಸಿದ. ಅದರತ್ತ ನಡೆಯ ತೊಡಗಿದ. ಹೀಗೆ ವಿರಮಿಸುತ್ತಾ, ವಿರಮಿಸುತ್ತಾ ಮುಂದುವರಿದ ಆ > ಶಿಷ್ಯನಿಗೆ ತುಂಬಿ ಹರಿವ ನದಿ, ಜಲಪಾತ, ಬಯಲ ಬೆಡಗು ಕಾಣ ಸಿಕ್ಕಿದವು. ಆ ಚೆಲುವಿಕೆಯಲ್ಲಿ > ತನ್ನನ್ನು ತಾನು ಮರೆತು ಆನಂದದಲ್ಲಿ ಮೈಮರೆತ. ಮತ್ತೆ ತನ್ನ ಗುರಿಯನ್ನು ನೆನಪಿಸಿಕೊಂಡು > ಮುಂದುವರಿದ. ಹೀಗೆ ನಡೆಯುತ್ತಾ ,ನಡೆಯುತ್ತಾ ಬೆಟ್ಟದ ತಪ್ಪಲನ್ನು ಸೇರಿದ. ಆಮೇಲೆ ಏರುವ > ಕೆಲಸ. ದಟ್ಟ ಅರಣ್ಯ. ದಾರಿ ಮಾಡಿಕೊಂಡು ಹೋಗ ಬೇಕಿತ್ತು ಆತ. ಕಾಡಿನ ಮೃಗಗಳು, ನಿರ್ಜನತೆ > ಆತನನ್ನು ಕಂಗೆಡಿಸಿದರೂ, ಹಿಂತಿರುಗುವಂತೆ ಹೆದರಿಸಿದರೂ ಛಲ ಬಿಡದೆ ಮುಂದುವರಿದ. > ಕೊನೆಗೊಮ್ಮೆ ಬೆಟ್ಟದ ಶಿಖರಾಗ್ರವನ್ನು ತಲುಪಿದ. ಅಲ್ಲಿರ ಬಹುದಾದ ಗುಹೆಯನ್ನು ಹುಡುಕಿ, > ಮಹಾಗುರುವಿನಿಂದ ಬದುಕಿನ ಸಾರ್ಥಕತೆಯ ಬಗ್ಗೆ ತಿಳಿದುಕೊಳ್ಳ ಬೇಕಿತ್ತು ಆತ. ಅಷ್ಟರಲ್ಲಾಗಲೇ > ಹಲವು ಕಾಲ ಕಳೆದು ಹೋಗಿತ್ತು. ನಡೆದು ಬಂದ ದಾರಿಯಲ್ಲಿ , ಆ ಶಿಷ್ಯ ಹಲವು ಅನುಭವಗಳನ್ನು > ಪಡೆದಿದ್ದ. ಪ್ರಕೃತಿಯೊಂದಿಗಿನ ಒಡನಾಟದಲ್ಲಿ ಅರಿವನ್ನು ವಿಸ್ತರಿಸಿಕೊಂಡಿದ್ದ. ಎತ್ತರದಲ್ಲಿ > ನಿಂತು ನೋಡಿದಾಗ ಬದುಕಿನ ಧನ್ಯತೆಯ ಅನುಭವವನ್ನು ಪಡೆದ. ಯಾರೂ ಹೇಳದೆಯೇ ಸ್ವತಃ ಆತನೇ > ಬದುಕಿನ ಸಾರ್ಥಕತೆಯನ್ನು ಹುಡುಕಿಕೊಂಡಿದ್ದ. > > ನಾವೆಲ್ಲರೂ ಅವನಂತೆಯೇ ಜೀವನ ಯಾತ್ರೆ ಹೊರಟವರೇ ಅಲ್ಲವೇ? ನಮ್ಮ ಬದುಕಿಗೂ ಒಂದಷ್ಟು > ಧ್ಯೇಯಗಳಿವೆ, ಹೀಗೆಯೇ ಬಾಳಬೇಕೆಂಬ ಕಲ್ಪನೆಗಳಿವೆ, ಹೀಗಾಗಬೇಕೆಂಬ ಗುರಿ ಇದೆ. ಆದರೆ ನಾವು > ಎಷ್ಟರ ಮಟ್ಟಿಗೆ ನಮ್ಮ ಸಂಕಲ್ಪ, ಗುರಿ, ಧ್ಯೇಯಗಳನ್ನು ಸಾಧಿಸುವಲ್ಲಿ ಸ್ಥಿರವಾಗಿದ್ದೇವೆ? > ಇದಲ್ಲ ಅದು, ಅದಲ್ಲ ಇದು ಎಂಬ ಸುಖದ ಹುಡುಕಾಟವನ್ನೇ ಮಾಡುತ್ತಿದ್ದೇವೆ. ಗುರಿಯೆಡೆಗೆ > ಯಾವುದೋ ದಾರಿಯನ್ನು ಅರಸಿ ನಡೆಯುತ್ತೇವೆ. ಸ್ವಲ್ಪ ದೂರ ಗಮಿಸಿದಾಗ ಆ ದಾರಿ > ಪ್ರಯಾಸಕರವಾದದ್ದು ಎಂದು ಮತ್ತೆ ಮೊದಲಿನಿಂದ ನಡೆಯ ತೊಡಗುತ್ತೇವೆ. ಹೀಗೆ ಸದಾ ಕ್ಷೇಮವನ್ನು > ಹುಡುಕುವುದೇ, ಹೊಂದುವುದೇ ಉದ್ದೇಶವಾಗಿದೆ. ವಿಪರ್ಯಾಸವೆಂದರೆ ಕ್ಷೇಮದ ಸ್ವರೂಪ > ಹೇಗಿರುತ್ತದೆ ಎಂಬ ಬಗ್ಗೆ ಸ್ಪಷ್ಟತೆಯೇ ಇಲ್ಲ ನಮ್ಮಲ್ಲಿ. ಮನುಷ್ಯನ ಈ ಸಹಜ ತಲ್ಲಣದ, > ಅಸಂತೃಪ್ತ ಗುಣವೇ ಬದುಕಿನ ಸಾಗುವಿಕೆಗೆ ಉಪಾದಿಯಾಗಿದೆ. ಜೀವನವೆಂದರೆ ಹೋರಾಟ, ಅದಕ್ಕೊಂದು > ಉದ್ದೇಶ ಬೇಕು. ಅದಿಲ್ಲದೇ ಹೋದರೆ, ಸಾಧಿಸುವ ಛಲ, ಆಸೆ-ಆಕಾಂಕ್ಷೆಗಳು ಬತ್ತಿ ಹೋದರೆ ಬದುಕು > ಭಾರವೆನಿಸುತ್ತದೆ, ಬೇಡವೆನಿಸುತ್ತದೆ. > > ಮನುಷ್ಯ ಜೀವಿತಕ್ಕೆ ಬಂದ ಮೇಲೆ ನಮಗೆ ನಮ್ಮದೇ ಆದ ಕರ್ತವ್ಯಗಳಿವೆ ಅದನ್ನು ನಾವು > ನಿಭಾಯಿಸಲೇ ಬೇಕು. ಅದನ್ನು ಪರಿತ್ಯಜಿಸಿ , ಕರ್ತವ್ಯಗಳಿಂದ ವಿಮುಖನಾದರೆ ಜೀವನೋತ್ಸಾಹವೇ > ಕಳೆದು ಹೋಗುತ್ತದೆ. ಭಗವಂತ ಯಾವುದೋ ಗುರಿಯಿರಿಸಿ ಜೀವಾತ್ಮರುಗಳಾದ ನಮ್ಮನ್ನು ಬಾಣದಂತೆ > ಪ್ರಯೋಗಿಸಿದ್ದಾನೆ. ಆತ ಸಂಕಲ್ಪಿಸಿದ ಗುರಿ ಎಲ್ಲಿದೆಯೋ ತಿಳಿಯದ, ದೇವರು ಹೊಡೆದ ಬಾಣಗಳಾದ > ನಾವು ಚಲಿಸುತ್ತಲೇ ಇದ್ದೇವೆ, ಹಾಗೆಯೇ ಇರಬೇಕು. ಆ ಚಲನೆಯಲ್ಲೇ ಬದುಕಿನ ಸಾರ್ಥಕತೆ ಇದೆ. > ಹಾದಿಯ ನಡುವೆ ಹಿಂತೆಗೆಯುವುದು ಸರಿಯಲ್ಲ. ತಡೆದು ನಿಂತರೆ ಆಳ ಪ್ರಪಾತಕ್ಕೆ ಉರುಳ > ಬೇಕಾಗುತ್ತದೆ. > ಆದ್ದರಿಂದ ಜಗತ್ತು ಸಹಜವಾಗಿ ಮುಂದುವರಿಯಲು, ಜೀವನೋತ್ಸಾಹ ಕಳೆದು ಹೋಗದಿರಲು ಅನ್ವೇಷಣೆಯ > ಬದುಕು ಸ್ಪೂರ್ತಿಯಾಗುತ್ತದೆ. ಸಿಗದೇ ಇರುವುದನ್ನು ಪಡೆಯುವ ಧಾವಂತದಲ್ಲಿ ಲಭ್ಯವಾಗುವ ಅನುಭವ > ನಮ್ಮನ್ನು ಔನ್ನತ್ಯಕ್ಕೆ ಏರಿಸುತ್ತದೆ. ಆತ್ಮಜ್ಞಾನವನ್ನು ಹೊಂದಲು ರಹದಾರಿಯಾಗುತ್ತದೆ. > ಎಲ್ಲಾ ಸ್ನೇಹ-ಸಂಬಂಧಗಳಲ್ಲಿರುತ್ತಾ ದೂರವುಳಿಯುವ, ನಮ್ಮನ್ನು ನಾವು ತಿಳಿಯುವ ಅರಿವು > ನಮ್ಮೆಲ್ಲರಲ್ಲಿ ಮೂಡಲಿ, ಧನ್ಯ ಬಾಳುವೆ ನಮ್ಮದಾಗಲಿ. > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.