Good ias officer like bharath lal meena needs to many districts On Mar 25, 2016 7:56 AM, "HAREESHKUMAR K Agasanapura" <harihusk...@gmail.com> wrote:
> http://vijayavani.net/?p=1752677 > > *ಆಡಳಿತ ಪಾಠ ಕಲಿಸಿದ ಪಿಲಿಕುಳ ನಿಸರ್ಗಧಾಮ* > > BY ವಿಜಯವಾಣಿ ನ್ಯೂಸ್ <http://vijayavani.net/?author=3> · MAR 25, 2016 > > *ಪಿಲಿಕುಳ ನಿಸರ್ಗಧಾಮದ ನೀಲಿನಕ್ಷೆ ಅನ್ವಯ ಈ ಪ್ರದೇಶದಲ್ಲಿ ವನ್ಯಜೀವಿ ಉದ್ಯಾನ, ವಾಟರ್ > ಪಾರ್ಕನ್ನೊಳಗೊಂಡ ಮನರಂಜನಾ ಕೇಂದ್ರ, ವಿಜ್ಞಾನ ಕೇಂದ್ರ ಹಾಗೂ ಹೆರಿಟೇಜ್ ವಿಲೇಜ್ > ತಲೆಯೆತ್ತಬೇಕಾಗಿತ್ತು. ಆ ಜಮೀನಿನಲ್ಲಿದ್ದ ಜನರನ್ನೇನೋ ಸ್ಥಳಾಂತರಿಸಿದೆವು. ಆದರೆ, ಈ > ಕಲ್ಪನೆಗೆ ಸಾಕಾರ ರೂಪ ನೀಡುವುದು ಬಹುದೊಡ್ಡ ಸವಾಲಾಗಿತ್ತು.* > > ಮೂಡಣದಲ್ಲಿ ಹಸಿರು ಹೊದ್ದು ನಿಂತ ಪಶ್ಚಿಮ ಘಟ್ಟ, ಪಡುವಣದಲ್ಲಿ ವಿಶಾಲವಾಗಿ ಹರಡಿರುವ > ಅರಬ್ಬಿ ಸಮುದ್ರ. ಹೀಗೆ ನೈಸರ್ಗಿಕವಾಗಿ ಸಂಪದ್ಭರಿತವಾಗಿರುವ ಕಡಲತಡಿಯ ನಗರ ಮಂಗಳೂರು. > ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರಸ್ಥಾನವಾಗಿರುವ ಈ ನಗರ ಸಾಂಸ್ಕೃತಿಕ ಶ್ರೀಮಂತಿಕೆಯ ಜತೆಗೆ > ಶಿಕ್ಷಿತ, ವಿಚಾರಶೀಲ ನಾಗರಿಕರ ನೆಲೆಬೀಡು ಕೂಡ. ಇಷ್ಟು ಸಂಪದ್ಭರಿತವಾಗಿರುವ ನಗರದಲ್ಲಿ > ದೊಡ್ಡ ಕೊರತೆಯೊಂದು ಕಾಡುತ್ತಿತ್ತು. ಪಶ್ಚಿಮ ಘಟ್ಟದ ನೈಸರ್ಗಿಕ ಸಂಪತ್ತನ್ನು > ಅನಾವರಣಗೊಳಿಸುವ, ಅಲ್ಲಿನ ಸಸ್ಯ, ಪ್ರಾಣಿ ಪ್ರಭೇದ ಹಾಗೂ ಶ್ರೀಮಂತ ಸಂಸ್ಕೃತಿಯ ಪರಿಚಯ > ಮಾಡಿಸುವಂಥ ತಾಣ ಇರಲಿಲ್ಲ. ಈ ಕೊರತೆ ನೀಗಿಸಲು ರೂಪುತಳೆದ ಪರಿಕಲ್ಪನೆಯೇ ‘ಪಿಲಿಕುಳ > ನಿಸರ್ಗಧಾಮ’. ಈ ಕಲ್ಪನೆಯನ್ನು ವಾಸ್ತವಕ್ಕಿಳಿಸಿದ ಪ್ರಕ್ರಿಯೆಯಿದೆಯಲ್ಲ, ಅದು ಆಡಳಿತದಲ್ಲಿ > ಸಂಶೋಧನೆ, ಸಂಘಟಿತ ಮತ್ತು ಸಂತುಲಿತ ಕಾರ್ಯಯೋಜನೆ ಹಾಗೂ ಸರ್ಕಾರಿ-ಖಾಸಗಿ ಸಹಭಾಗಿತ್ವಕ್ಕೆ > ಅತ್ಯುತ್ತಮ ನಿದರ್ಶನವೆಂದು ಧಾರಾಳವಾಗಿ ಹೇಳಬಹುದು. > > ಪ್ರಮುಖ ನಗರಗಳಲ್ಲಿ ಬಹೂಪಯೋಗಿ ಉದ್ಯಾನ ಸ್ಥಾಪಿಸುವ ಚಿಂತನೆಯೊಂದು ಬಹುಕಾಲದಿಂದ ನನ್ನ > ತಲೆಯಲ್ಲಿ ಇತ್ತು. ನಾನು ದ.ಕ. ಜಿಲ್ಲಾಧಿಕಾರಿಯಾಗಿದ್ದಾಗ ಕಾಕತಾಳೀಯವೆಂಬಂತೆ ಸರ್ಕಾರ > ಪ್ರಮುಖ ನಗರಗಳಲ್ಲಿ ಲಂಗ್ ಸ್ಪೇಸ್ (ನಗರಗಳಲ್ಲಿ ಆರೋಗ್ಯಕರ ಪರಿಸರಕ್ಕೆ ಅನುಕೂಲವಾಗಲು) > ಸ್ಥಾಪಿಸುವಂತೆ ಸುತ್ತೋಲೆ ಹೊರಡಿಸಿತು. ಇದು ಜಿಲ್ಲಾಡಳಿತವನ್ನು ಸೂಕ್ತ ಸ್ಥಳದ ಪತ್ತೆಗೆ > ಪ್ರೇರೇಪಿಸಿತು. ಇದೊಂದು ವಿಶಿಷ್ಟ ಯೋಜನೆಯಾಗಿದ್ದು, ಶಿಕ್ಷಣ, ಮನೋರಂಜನೆ, ಪ್ರಕೃತಿ > ಪರಿಚಯದ ಜತೆಗೆ ಆ ಪ್ರದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುವ ಪರಿಕಲ್ಪನೆ > ಹೊಂದಿತ್ತು. > > ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಬಹೂಪಯೋಗಿ ಉದ್ಯಾನ ಸ್ಥಾಪನೆಗೆ ವಿವಿಧ > ಸ್ಥಳಗಳನ್ನು ಸೂಚಿಸಲಾಗಿತ್ತು. ಇದರಲ್ಲಿ ಅನೇಕ ಸ್ಥಳಗಳ ಪರಿಶೀಲನೆ ಬಳಿಕ ಮಂಗಳೂರಿನಿಂದ 11 > ಕಿ.ಮೀ. ದೂರದಲ್ಲಿ ಅರಣ್ಯ ಇಲಾಖೆಗೆ ಸೇರಿದ 20 ಎಕರೆ ವಿಸ್ತೀರ್ಣದ ನರ್ಸರಿ ಇದಕ್ಕೆ > ಸೂಕ್ತ ಎಂದು ತೀರ್ವನಿಸಲಾಯಿತು. ಆದರೆ ಈ ನರ್ಸರಿಯ ಸುತ್ತ ಪೊದೆಗಳು ಬೆಳೆದಿದ್ದವು. ಒಡೆದ > ಕೆರೆ ಹಾಗೂ ನಿರುಪಯುಕ್ತ ಕ್ವಾರಿ ಅಲ್ಲಿತ್ತು. ಅತಿಕ್ರಮಣವೂ ನಡೆದಿತ್ತು. ಹೀಗಾಗಿ ನರ್ಸರಿ > ಸುತ್ತಮುತ್ತಲಿನ ಸ್ಥಳದ ಸರ್ವೆ ನಡೆಸುವಂತೆ ನಾನು ಆದೇಶಿಸಿದೆ. ಈ ಜಮೀನಿಗೆ ಸಂಬಂಧಿಸಿದ > ದಾಖಲೆಗಳನ್ನು ಪರಿಶೀಲಿಸುವಾಗ ಆ ಪ್ರದೇಶದಲ್ಲಿ 350 ಎಕರೆ ಸರ್ಕಾರಿ ಜಾಗವಿರುವುದು ಬೆಳಕಿಗೆ > ಬಂತು. ಸರಿ, ಮಂಗಳೂರಿನಲ್ಲಿ ಇಕೋ ಪಾರ್ಕ್ ನಿರ್ವಣಕ್ಕೆ ಇದಕ್ಕಿಂತ ಸೂಕ್ತವಾದ ಸ್ಥಳ ಬೇರೆ > ಇಲ್ಲ ಎಂಬ ತೀರ್ವನಕ್ಕೆ ನಾವಾಗಲೇ ಬಂದುಬಿಟ್ಟೆವು. > > ಒಕ್ಕಲೆಬ್ಬಿಸುವ ಸವಾಲು: ಈ ವಿಶಾಲ ಜಾಗ ನಮ್ಮ ಕನಸಿನ ಯೋಜನೆಯ ಸಾಕಾರಕ್ಕೆ ಪ್ರಶಸ್ತ > ತಾಣವಾಗಿತ್ತೇನೋ ನಿಜ. ಆದರೆ, ಆ ಜಮೀನನ್ನು ಸುರ್ಪದಿಗೆ ತೆಗೆದುಕೊಳ್ಳುವುದು ಸುಲಭದ > ಕೆಲಸವಾಗಿರಲಿಲ್ಲ. ಅಲ್ಲಿ ಅನೇಕ ಅಕ್ರಮ ಗುಡಿಸಲುಗಳು ಹರಡಿಕೊಂಡಿದ್ದವು. ಜತೆಗೆ ಜಮೀನಿನ > ಮಾಲೀಕತ್ವ ಸರ್ಕಾರದ ಅನೇಕ ಇಲಾಖೆಗಳ ನಡುವೆ ಹಂಚಿಹೋಗಿತ್ತು. ಹೀಗಾಗಿ ನಾನು ಭೂ ಕಂದಾಯ > ಕಾಯ್ದೆ ಅಡಿಯಲ್ಲಿ ಆಡಳಿತಾತ್ಮಕ ಅಧಿಕಾರ ಬಳಸಿಕೊಂಡು ಆ ಜಮೀನನ್ನು ಥೀಮ್ ಪಾರ್ಕ್ > ನಿರ್ವಣಕ್ಕೆ ಕಾಯ್ದಿರಿಸಿದೆ. ಇದರಿಂದಾಗಿ, ವಿವಿಧ ಇಲಾಖೆಗಳು ವಿವಿಧ ಉದ್ದೇಶಗಳಿಗೆ > ರೂಪಿಸಿದ್ದ ಅರೆಬೆಂದ ಪ್ರಸ್ತಾವನೆಗಳಿಗೆ ಬ್ರೇಕ್ ಹಾಕಿದಂತಾಯಿತು. ಆ ಜಮೀನಿನಲ್ಲಿ > ಅತಿಕ್ರಮಣ ತಡೆಯಲು ವಿವಿಧ ಯೋಜನೆಗಳ ಬಡ್ಡಿ ಹಣದಲ್ಲಿ ಬೇಲಿ ನಿರ್ವಿುಸಲಾಯಿತು. ಅಲ್ಲಿ > ಅಕ್ರಮವಾಗಿ ನೆಲೆ ನಿಂತಿರುವ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಿತ್ತು. ಒಟ್ಟು 250 > ಕುಟುಂಬಗಳಿದ್ದು, ಎಲ್ಲರೂ ಕೃಷಿ ಕೂಲಿ ಕಾರ್ವಿುಕರಾಗಿದ್ದರು. ಹೀಗಾಗಿ ಹೊಟ್ಟೆಪಾಡಿಗೆ > ತೊಂದರೆಯಾಗದಂತೆ ಹಳ್ಳಿಗೆ ಸಮೀಪದಲ್ಲೇ ಮನೆಗಳನ್ನು ಹೊಂದಲು ಬಯಸಿದ್ದರು. ಅವರಿಗೆ > ಪುನರ್ವಸತಿ ಕಲ್ಪಿಸಲು ನಗರದ ಸಮೀಪ ಜಮೀನು ಗುರುತಿಸಿ, ನಿವೇಶನಗಳನ್ನು ಹಂಚಲಾಯಿತು. > ಸರ್ಕಾರದ ವಸತಿ ಯೋಜನೆಗಳ ನೆರವಿನಿಂದ ಮನೆಗಳನ್ನೂ ನಿರ್ವಿುಸಿಕೊಡಲಾಯಿತು. ಈ ಕ್ರಮ > ಸಾರ್ವಜನಿಕರಲ್ಲಿ ಜಿಲ್ಲಾಡಳಿತದ ಬಗ್ಗೆ ನಂಬಿಕೆ ಹುಟ್ಟಿಸುವ ಜತೆಗೆ ಯೋಜನೆಯ > ಉದ್ದೇಶವನ್ನೂ ಸರಿಯಾಗಿ ಮನವರಿಕೆ ಮಾಡಿಕೊಟ್ಟಿತು. > > ನೀಲಿನಕ್ಷೆ ಅನ್ವಯ ಈ ಪ್ರದೇಶದಲ್ಲಿ ವನ್ಯಜೀವಿ ಉದ್ಯಾನ, ವಾಟರ್ ಪಾರ್ಕನ್ನೊಳಗೊಂಡ > ಮನರಂಜನಾ ಕೇಂದ್ರ, ವಿಜ್ಞಾನ ಕೇಂದ್ರ ಹಾಗೂ ಹೆರಿಟೇಜ್ ವಿಲೇಜ್ ತಲೆ ಎತ್ತಬೇಕಾಗಿತ್ತು. > ಜನರನ್ನೇನೋ ಸ್ಥಳಾಂತರಿಸಿದೆವು. ಆದರೆ, ಈ ಕಲ್ಪನೆಗೆ ಸಾಕಾರ ರೂಪ ನೀಡುವುದು > ಸವಾಲಾಗಿತ್ತು. > > ಅನುಷ್ಠಾನಕ್ಕೆ ಕಾರ್ಯತಂತ್ರ: ಇಂಥ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ನಿರಂತರ ನಿರ್ವಹಣೆ > ಅಗತ್ಯ. ಹೀಗಾಗಿ ಇದಕ್ಕೆ ಸ್ವಾಯತ್ತ ಸಂಸ್ಥೆಯ ಅಗತ್ಯ ಮನಗಂಡು ಅಧಿಕಾರಿಗಳು ಹಾಗೂ > ನಾಗರಿಕರನ್ನೊಳಗೊಂಡ ಸೊಸೈಟಿಯನ್ನು ನೋಂದಾಯಿಸಲಾಯಿತು. ಯೋಜನೆಯ ಪ್ರತಿ ಘಟಕದ > ಮೇಲ್ವಿಚಾರಣೆಗೆ ಒಂದು ಉಪಸಮಿತಿ ರಚಿಸಲಾಯಿತು. ಇದರಲ್ಲಿ ಈ ಘಟಕಕ್ಕೆ ಸಂಬಂಧಿಸಿದ > ಅಧಿಕಾರಿಗಳು, ತಜ್ಞರು ಹಾಗೂ ನಾಗರಿಕರನ್ನು ತೊಡಗಿಸಿಕೊಳ್ಳಲಾಯಿತು. ಈ ಸಮಿತಿ ನಿಯತವಾಗಿ > ಸಭೆ ಸೇರಿ ಯೋಜನೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸುತ್ತಿತ್ತು. ಜಿಲ್ಲಾಧಿಕಾರಿಯಾಗಿದ್ದ > ನಾನು ತಿಂಗಳಿಗೊಮ್ಮೆ ಎಲ್ಲ ಉಪಸಮಿತಿಗಳನ್ನು ಒಟ್ಟುಸೇರಿಸಿ ಸಭೆ ನಡೆಸಿ, ಪ್ರಗತಿ > ಪರಿಶೀಲಿಸುವ ಮೂಲಕ ಯೋಜನೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದನ್ನು > ಖಚಿತಪಡಿಸಿಕೊಳ್ಳುತ್ತಿದ್ದೆ. > > ಈ ಯೋಜನೆಗೆ ಭಾರಿ ಪ್ರಮಾಣದ ಹಣದ ಅಗತ್ಯವಿತ್ತು. ಡಿಸಿಗೆ ಲಭ್ಯವಿರುವ ಅನುದಾನದಲ್ಲಿ ಇದು > ಕಷ್ಟಸಾಧ್ಯವಾಗಿತ್ತು. ಹೀಗಾಗಿ ಯೋಜನೆಯನ್ನು ವಿವಿಧ ವಿಭಾಗಗಳನ್ನಾಗಿ ವಿಂಗಡಿಸಿ, ಆರ್ಥಿಕ > ನೆರವು ಪಡೆಯಲು ನಿರ್ಧರಿಸಲಾಯಿತು. > > ಸರ್ಕಾರದ ನೆರವು: ವಿಜ್ಞಾನ ಕೇಂದ್ರ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಕೇಂದ್ರ > ಸರ್ಕಾರ ನೆರವು ನೀಡಿತು. ಮನೋರಂಜನಾ ಚಟುವಟಿಕೆಗಳಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ > ಅನುದಾನ ನೀಡಿತು. ಪಾರ್ಕ್ನಲ್ಲಿ ಗಿಡ ನೆಡುವುದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿತು. ನಗರದ > ಬೇರೆ ಪ್ರದೇಶಗಳಲ್ಲಿದ್ದ ಅರಣ್ಯ ಹಾಗೂ ತೋಟಗಾರಿಕಾ ಇಲಾಖೆಯ ನರ್ಸರಿಗಳನ್ನು ಇಲ್ಲಿಗೆ > ಸ್ಥಳಾಂತರಿಸಲಾಯಿತು. > > ಖಾಸಗಿ ಸಹಭಾಗಿತ್ವ: ಈ ಯೋಜನೆಯಲ್ಲಿ ವಾಟರ್ ಪಾರ್ಕ್ ಕೂಡ ಸೇರಿತ್ತು. ಇದು ಉತ್ತಮ ಆದಾಯ > ತರುವ ಚಟುವಟಿಕೆಯಾಗಿತ್ತು. ಹೀಗಾಗಿ ಇದರ ನಿರ್ಮಾಣ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು > ಖಾಸಗಿ ಸಂಸ್ಥೆಗೆ ವಹಿಸಲು ನಿರ್ಧರಿಸಲಾಯಿತು. ಗಾಲ್ಪ್ ಕೋರ್ಟ್ಗೂ ಇದೇ ಮಾದರಿ > ಅನುಸರಿಸಲಾಯಿತು. ಪ್ರವಾಸಿಗರಿಗೆ ತಾತ್ಕಾಲಿಕವಾಗಿ ತಂಗಲು ಅಲ್ಲಲ್ಲಿ ಗುಡಿಸಲು ನಿರ್ವಿುಸುವ > ಹೊಣೆಗಾರಿಕೆಯನ್ನು ಕರ್ನಾಟಕ ಸರ್ಕಾರ ಸ್ವಾಮ್ಯದ ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ ಲಿ.ಗೆ > ನೀಡಲಾಯಿತು. ಆದಾಯಕ್ಕಾಗಿ, ಉದ್ಯಾನ ಕಾರ್ಯಾರಂಭಿಸುತ್ತಿದ್ದಂತೆ ಗ್ರಾಹಕರಿಗೆ ಶುಲ್ಕ > ವಿಧಿಸುವ ವ್ಯವಸ್ಥೆ ಜಾರಿಗೊಳಿಸಲಾಯಿತು. > > ಕೆರೆಗೆ ಕಾಯಕಲ್ಪ: ಉದ್ಯಾನದ ಮಧ್ಯಭಾಗದಲ್ಲಿರುವ ಕೆರೆ ಎಲ್ಲ ಚಟುವಟಿಕೆಗಳ > ಕೇಂದ್ರಬಿಂದುವಾಗಿತ್ತು. ಪಾರ್ಕ್ನ ಸುತ್ತಮುತ್ತಲಿನ ಕೊಳಚೆ ನೀರು ಈ ಕೆರೆ ಸೇರುತ್ತಿತ್ತು. > ಅದರಲ್ಲಿ ಹೂಳು ತುಂಬಿಕೊಂಡಿದ್ದು, ಬದಿಯ ಗೋಡೆಗಳು ಕುಸಿದು ಬಿದ್ದಿದ್ದವು. ಅದೃಷ್ಟವಶಾತ್ > ಗಣಿ ಕಂಪನಿಯೊಂದಕ್ಕೆ ಸೇರಿದ ನೆಲ ಅಗೆಯುವ ಯಂತ್ರಗಳು ಕೆಲಸವಿಲ್ಲದೆ ಖಾಲಿ ಬಿದ್ದಿದ್ದವು. > ಇದೇ ಯಂತ್ರಗಳನ್ನು ಕೆರೆ ಹೂಳೆತ್ತಲು ಬಳಸಿಕೊಳ್ಳಲಾಯಿತು. ಯಂತ್ರದ ಇಂಧನ ವೆಚ್ಚ ಭರಿಸಲು > ಇನ್ನೊಂದು ಕಂಪನಿ ಮುಂದೆ ಬಂತು. ಈ ರೀತಿಯಾಗಿ ಖಾಸಗಿ ಸಹಭಾಗಿತ್ವದೊಂದಿಗೆ ಹೂಳು ತೆಗೆಯುವ > ಕಾರ್ಯ ಪೂರ್ಣಗೊಳಿಸಲಾಯಿತು. ಮನೋರಂಜನಾ ಉದ್ದೇಶಕ್ಕಾಗಿ ಕೆರೆಯಲ್ಲಿ ಜೆಟ್ ಬೋಟ್, > ಪೆಡಲ್, ರೋಯಿಂಗ್ ಹಾಗೂ ಮೋಟಾರ್ ಬೋಟ್ಗಳನ್ನು ಇಡಲಾಯಿತು. > > ಜೈವಿಕ ಉದ್ಯಾನ: 100 ಎಕರೆ ಪ್ರದೇಶದಲ್ಲಿ ವನ್ಯಜೀವಿ ಉದ್ಯಾನ ಸ್ಥಾಪನೆಗೆ > ನಿರ್ಧರಿಸಲಾಯಿತು. ಭಾರತೀಯ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಗಳ ಅನ್ವಯ ಪ್ರಾಣಿಗಳಿಗೆ > ಅನುಕೂಲವಾಗುವಂತೆ ದೊಡ್ಡ ಆವರಣದೊಳಗಡೆ ಅವುಗಳನ್ನು ಬಿಡಲು ನಿರ್ಧರಿಸಲಾಯಿತು. ಮಂಗಳೂರು > ಸುತ್ತಮುತ್ತಲಿನ ಪ್ರಮುಖ ಕಂಪನಿಗಳು ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ > (ಸಿಎಸ್ಆರ್)ಚಟುವಟಿಕೆಯಂಗವಾಗಿ ಪ್ರಾಣಿಗಳಿಗೆ ಪಂಜರ, ಪ್ರಾಣಿಗಳ ದತ್ತು ಸ್ವೀಕಾರ ಮುಂತಾದ > ಚಿಕ್ಕಪುಟ್ಟ ಕಾರ್ಯಗಳ ಹೊಣೆ ವಹಿಸಿಕೊಂಡವು. ರಾಜ್ಯ ಸರ್ಕಾರದಿಂದಲೂ ಅನುದಾನ ಸಿಕ್ಕಿತು. > ಇಂದು ಪಿಲಿಕುಳ ಜೈವಿಕ ಉದ್ಯಾನ ಭಾರತದ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಪ್ರಮುಖ > ಉದ್ಯಾನಗಳಲ್ಲೊಂದು. ಕಾಳಿಂಗಸರ್ಪದ ಸಂತಾನೋತ್ಪತ್ತಿ ಕೇಂದ್ರ ಹೊಂದಿರುವ ಏಕೈಕ ಮೃಗಾಲಯ ಕೂಡ > ಹೌದು. > > ಹೆರಿಟೇಜ್ ವಿಲೇಜ್: ಈ ಭಾಗದ ಕಲೆ, ಸಂಸ್ಕೃತಿಗಳು ನಶಿಸಿ ಹೋಗುತ್ತಿರುವುದನ್ನು ಗಮನಿಸಿದ > ಜಿಲ್ಲಾಡಳಿತ ಹೆರಿಟೇಜ್ ವಿಲೇಜ್ ಸ್ಥಾಪನೆಗೆ ಮುಂದಾಯಿತು. ಕುಶಲಕರ್ವಿುಗಳು ಅಲ್ಲೇ ಉಳಿದು > ಕಲಾಕೃತಿಗಳನ್ನು ರಚಿಸಿ, ಮಾರಾಟ ಮಾಡಲು ಅನುವಾಗುವಂತೆ ವ್ಯವಸ್ಥೆ ಕಲ್ಪಿಸಿತು. ಮಂಗಳೂರಲ್ಲಿ > ಕೂಡ ಅವರಿಗಾಗಿ ಪ್ರತ್ಯೇಕ ಮಾರಾಟ ಮಳಿಗೆ ಸ್ಥಾಪಿಸಲಾಯಿತು. ಕುಶಲಕರ್ವಿುಗಳ 25 ಕುಟುಂಬಗಳು > ಈ ಹಳ್ಳಿಗೆ ಸ್ಥಳಾಂತರಗೊಂಡವು. ಪ್ರವಾಸಿಗರಿಗೆ ಹಳ್ಳಿ ಸೊಗಡಿನ ಪರಿಚಯ ಮಾಡಿಸಲು ‘ಗುತ್ತಿನ > ಮನೆ’ (ಹಳ್ಳಿಯ ಮುಖ್ಯಸ್ಥನ ಮನೆ) ನಿರ್ವಿುಸಲಾಗಿದೆ. ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು > ಪ್ರವಾಸಿಗರಿಗೆ ಪರಿಚಯಿಸಲು ‘ಕಂಬಳ ಗದ್ದೆ’ ರೂಪುಗೊಂಡಿದ್ದು, ಆಗಾಗ ಕಂಬಳ ಕೂಡ ನಡೆಯುತ್ತದೆ. > > ವಿಜ್ಞಾನ ಕೇಂದ್ರ: ವಿಜ್ಞಾನ ಪ್ರಯೋಗಗಳ ಮೂಲಕ ಜನರಿಗೆ ಮನರಂಜನೆ ನೀಡುವ ಜತೆಗೆ ವಿಜ್ಞಾನ > ಕಲಿಕೆಯತ್ತ ಮಕ್ಕಳ ಆಸಕ್ತಿಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಆರ್ಥಿಕ > ನೆರವಿನೊಂದಿಗೆ ಈ ಕೇಂದ್ರ ಸ್ಥಾಪಿಸಲಾಯಿತು. > > ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ: ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ ನೆರವಿನೊಂದಿಗೆ ಸಮಾಜ > ನಿರ್ಮಾಣ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲಾಯಿತು. ಇಲ್ಲಿ ಮಕ್ಕಳಿಗೆ ಶಿಬಿರ > ನಡೆಸಲು ಅನುಕೂಲ ಕಲ್ಪಿಸಲಾಗಿದೆ. > > ಮನೋರಂಜನೆ, ಶಿಕ್ಷಣ, ಪರಿಸರ ಸಂರಕ್ಷಣೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯ > ರಕ್ಷಣೆಯನ್ನೊಳಗೊಂಡ ಈ ಯೋಜನೆ ಅತ್ಯಂತ ವಿಶಿಷ್ಟವಾದದ್ದು. ಇದರ ಯಶಸ್ಸು ಒಬ್ಬ > ವ್ಯಕ್ತಿಗಲ್ಲ, ಬದಲಿಗೆ ಇಡೀ ಯೋಜನಾ ತಂಡಕ್ಕೆ ಸೇರಿದ್ದು. ಒಟ್ಟಾರೆ ಸಂಪನ್ಮೂಲಗಳ > ಕೇಂದ್ರೀಕರಣಕ್ಕೆ, ಯೋಜನೆಯ ಆರಂಭದಿಂದ ಅಂತ್ಯದವರೆಗೆ ಜನರ ಸಹಭಾಗಿತ್ವ, ಪಾರದರ್ಶಕತೆ > ಹಾಗೂ ಉತ್ತರದಾಯಿತ್ವ- ಈ ಮುಂತಾದ ವಿಶೇಷಗಳ ಸಂಗಮವಾದ ಪಿಲಿಕುಳ ನಿಸರ್ಗಧಾಮ ನನ್ನ > ಕಾರ್ಯಾವಧಿಯಲ್ಲಿನ ಸಿಹಿ ಸಿಹಿ ನೆನಪುಗಳಲ್ಲೊಂದು… > > *ಲೇಖಕರ ಕುರಿತು…* > > ಭರತ್ ಲಾಲ್ ಮೀನಾ ಮೂಲತಃ ರಾಜಸ್ಥಾನದವರು. ಬಡ ಕೃಷಿ ಕುಟುಂಬದಲ್ಲಿ 1957ರ ಫೆಬ್ರವರಿ > 5ರಂದು ಜನನ. 1985ರ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ. ಬೆಳಗಾವಿ ಜಿಪಂ ಸಿಇಒ, ದಕ್ಷಿಣ > ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿ, ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ > ಹೆಚ್ಚುವರಿ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ ಸೇರಿದಂತೆ ವಿವಿಧ ಉನ್ನತ ಹುದ್ದೆಗಳನ್ನು > ನಿಭಾಯಿಸಿದ್ದಾರೆ. ಪ್ರಸ್ತುತ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ > ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತದಲ್ಲಿ ಜನಸಹಭಾಗಿತ್ವದ ಅನೇಕ ಉಪಕ್ರಮಗಳನ್ನು > ಕೈಗೊಂಡಿರುವ ಹೆಗ್ಗಳಿಕೆ ಇವರದು. ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿ ಇಂಗ್ಲೆಂಡ್ನಲ್ಲಿ > ಅಧ್ಯಯನ ನಡೆಸಿರುವ ಇವರು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ‘ಅಪ್ನಾ ದೇಶ್’ ಎಂಬ > ಎನ್ಜಿಒ ಹುಟ್ಟುಹಾಕುವ ಮೂಲಕ ಮನೆ ಮಾತಾಗಿದ್ದರು. ‘ಲೈಫ್ ಆಂಡ್ ಪೀಸ್’ ಎಂಬ ಕೃತಿಯನ್ನು > ಕೂಡ ರಚಿಸಿದ್ದಾರೆ. > > Hareeshkumar K > AM(PCM) > GHS HUSKURU > MALAVALLI TQ > MANDYA DT 571475 > mobile no 9880328224 > email harihusk...@gmail.com > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.