Thank You very much sir

On Wed, Jan 2, 2019 at 11:36 AM Girish T P <[email protected]> wrote:

> *ಎಲ್ಲಾ ಹಿರಿಯರಿಗೂ ಸ್ನೇಹಿತರಿಗೂ ಹೃನ್ಮನ ನಮಸ್ಕಾರ.*
>
> ಹೊಸ ವರ್ಷದ ಆರಂಭದಲ್ಲಿ ಈ ಹಿಂದೆ ಒಮ್ಮೆ ಓದಿದ ಪುಸ್ತಕವೊಂದನ್ನು ಪುನಃ ಓದಬೇಕೆಂಬ
> ತುಡಿತವನ್ನುಂಟು ಮಾಡುತ್ತಿರುವುದು ಈಗಿನ ತರಬೇತಿಗಳು ಮತ್ತು ಶಾಲಾ ಶಿಕ್ಷಣದಲ್ಲಿ
> ನೈಜ್ಯತೆಯಿಂದ ಹಾಗೂ ಸಹಜ ಪ್ರಕ್ರಿಯೆಗಳಿಂದ ದೂರವುಳಿದು ಎದುರಿಸುತ್ತಿರುವ ಸವಾಲುಗಳು.
>
> ಆ ಪುಸ್ತಕವೇ
>  *ಪರಿಧಿಯಾಚೆಗಿನ ಪಯಣ*.
> ಪುಸ್ತಕದ ಶೀರ್ಷಿಕೆಯೇ ನಾವು ತಿಳಿದು ಕಲ್ಪಿಸಿ ಭ್ರಮಿಸಿ ಹಾಕಿಕೊಂಡಿರುವ ಚೌಕಟ್ಟಿನಾಚೆಗೆ
> ಅಲೋಚಿಸುವಂತೆ ಮಾಡುತ್ತದೆ.
>
> *ಈ ಪುಸ್ತಕದ ಮುಖ್ಯ ತಿರುಳು ಕಲಿಕಾರ್ಥಿಯ(ವಿಶೇಷವಾಗಿ ಮಗು) ಕೇಂದ್ರಿಕೃತವಾಗಿರುವುದು*
>
> ಅಕ್ಷರಗಳ ಗಾತ್ರ(font size) ದೊಡ್ಡದಾಗಿದ್ದು, ಉತ್ತಮವಾಗಿ ಓದಿಸಿಕೊಂಡು ಹೋಗುವ 206
> ಪುಟಗಳ ಈ ಪುಸ್ತಕವು ಒಟ್ಟು 05 ಭಾಗಗಳನ್ನು ಒಳಗೊಂಡಿದೆ.
>
> ೧. 'ಮಕ್ಕಳೇ' ಕೇಂದ್ರ
> ೨. ಶಿಕ್ಷಕ ಸಂಬಂಧಿತ
> ೩. ಶೈಕ್ಷಣಿಕ ವ್ಯವಸ್ಥೆಯೊಳಗೊಂದು ಅವಲೋಕನ
> ೪. ಲಿಂಗತ್ವದ ಮಹತ್ವದೆಡೆಗೆ
> ೫. ಸಮಾಜಿಕ ಕಳಕಳಿಯ ಇತರೆ ವಿಷಯಗಳು.
>
> ನಾವು ಅದೆಷ್ಟೋ ಸಂದರ್ಭಗಳಲ್ಲಿ ಶಿಕ್ಷಣ ತಜ್ಞರ, ಸಾಹಿತಿಗಳ ಶಿಕ್ಷಣ ಕುರಿತಾದ
> ಗ್ರಂಥಗಳನ್ನು ಉಲ್ಲೇಖಿಸಿ ಮೆಚ್ಚುಗೆ ಸೂಚಿಸುತ್ತೇವೆ.
>
> ಅದೇ ಕೆಲಸವನ್ನು ಅಥವಾ ಅದಕ್ಕಿಂತಲೂ ವಿಶಿಷ್ಟವಾಗಿ ನಮ್ಮವರೇ ಆ ಕೆಲಸವನ್ನು ಮಾಡಿದಾಗ
> ಹಿತ್ತಲ ಗಿಡ ಮದ್ದಲ್ಲವೆಂಬ ರೀತಿಯಲ್ಲಿ ಮೌನಿಯಾಗಿಬಿಡುತ್ತವೆ...!
>
> *ಅಂದಹಾಗೇ ಈ ಮಹತ್ವದ ಕೃತಿಯನ್ನು ರಚಿಸಿದವರು ನಮ್ಮ ಇಲಾಖೆಯ ೧೯೯೯ನೇ ಬ್ಯಾಚಿನ
> ಶಿಕ್ಷಣಾಧಿಕಾರಿಗಳಾದ ಶ್ರೀಯುತ ‌ಡಾ. ಹೆಚ್.ಬಿ.ಚಂದ್ರಶೇಖರ್ ಸರ್ ರವರು.*
>
> ಪ್ರಸ್ತುತ ಡಿ.ಎಸ್.ಇ.ಆರ್.ಟಿಯಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿ ಸೇವೆ
> ಸಲ್ಲಿಸುತ್ತಿದ್ದಾರೆ.
>
> ಪ್ರಜಾವಾಣಿ ದಿನಪತ್ರಿಕೆ ಮತ್ತು ಶಿಕ್ಷಣವಾರ್ತೆಯಲ್ಲಿ ಶ್ರೀಯುತರ ಅಂಕಣಗಳನ್ನು ನಾವು
> ಓದುತ್ತಿರುತ್ತೇವೆ. ಚರ್ಚಿಸುತ್ತಿರುತ್ತೇವೆ.
>
> ಇಲಾಖೆಯೆ ಹೊರಗಿನವರು  ಶಿಕ್ಷಣದ ಕುರಿತು ಬರೆಯುವುದಕ್ಕಿಂತ ಇಲಾಖೆಯೊಳಗಿದ್ದುಕೊಂಡೆ ತಮ್ಮ
> ಅನುಭವಗಳನ್ನು ಸಂಕಲಿಸಿ ಲೇಖನ, ಪುಸ್ತಕ ಬರೆಯುವವರು ಬಹಳ ಖುಷಿ, ಹೆಮ್ಮೆ ಮತ್ತು ಬಹಳ ಅಪರೂಪ.
> ಅಂತಹದ್ದರಲ್ಲಿ ಚಂದ್ರು ಸರ್ ರವರ ಈ ಹೊತ್ತಿಗೆ ಅತ್ಯಂತ ವಾಸ್ತವವಿಕವಾದುದು &
> ಪ್ರಯೋಜನಕಾರಿಯಾದುದು.
>
> ಅವರ ಕೆಲವು ಆಯ್ದ ಅಂಕಣಗಳು ಈ ಪುಸ್ತಕದ ಭಾಗವಾಗಿವೆ.
>
> ಈ ಪುಸ್ತಕದಿಂದ‌ ಪ್ರೇರಿತನಾಗಿಯೇ ನಮ್ಮ ಶಾಲಾ ಧೇಯ್ಯ ವಾಕ್ಯವಾದ
> *ಸಂತಸದಾಯಕ ಕಲಿಕೆಗಾಗಿ ಪರಿಸರ ಮತ್ತು ಮಗು ಸ್ನೇಹಿ ಶಾಲೆ....ಮಗು ಮೊದಲು* ರೂಪಿಸಲು
> ಸಾಧ್ಯವಾಗಿದೆ.
>
> ಬಹಳ‌ ಹಿಂದೆಯೇ ಸರ್ ರವರಿಂದ ಈ ಪುಸ್ತಕವನ್ನು ಪಡೆದುಕೊಂಡಿದ್ದರು ನನ್ನ ಸೋಮಾರಿತನದಿಂದ
> ಪರಿಪೂರ್ಣವಾಗಿ ಓದಲು, ಹಂಚಿಕೊಳ್ಳಲು ಸಾಧ್ಯವಾಗಿರಲಿಲ್ಲ.
>
> ಈ ಪುಸ್ತಕವು ಎಲ್ಲಾ ಶಿಕ್ಷಣಾಸಕ್ತರನ್ನು ಮತ್ತು ಶಿಕ್ಷಣಾಸಕ್ತರಲ್ಲದವರನ್ನೂ ತಲುಪಬೇಕು,
> ನಾವೆಲ್ಲರೂ ಲೇಖಕರು ಇಲ್ಲಿ ವ್ಯಕ್ತಪಡಿಸಿರುವ
> *ಮಕ್ಕಳ ಸ್ನೇಹಿ ಶಾಲೆಗಳನ್ನು ಕಟ್ಟುವಲ್ಲಿ*  ಮುಂದಡಿಯಿಡಬೇಕು.
>
> ಚಂದ್ರು ಸರ್ ರವರು
> *ಶಿಶು ಕೇಂದ್ರಿತ ಶಿಕ್ಷಣ ಪದ್ಧತಿ* ಯನ್ನು ಯಶಸ್ವಿಯಾಗಿ ಸಮಪರ್ಕವಾಗಿ
> ಅನುಷ್ಠಾನಯೋಗ್ಯಗೊಳಿಸುವ ಬಗ್ಗೆ ಮನೋ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ ಚರ್ಚಿಸಿದ್ದಾರೆ.
>
> ಈ ಪುಸ್ತಕವು ನಮ್ಮ ಶಾಲೆಗಳನ್ನು ಮಕ್ಕಳ ಸ್ನೇಹಿಯಾಗಿ ನಡೆಸುಕೊಂಡು ಹೋಗುವಲ್ಲಿ
> ಖಂಡಿತವಾಗಿಯೂ ಸಹಕಾರಿ ಮತ್ತು ದಾರಿದೀಪವಾಗುವುತ್ತದೆ.
>
> *ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವುದು ಚಾಮರಾಜನಗರದ ದೀನಬಂಧು ಆಶ್ರಮದ ಗೌರವ‌
> ಕಾರ್ಯದರ್ಶಿಗಳು ಮತ್ತು ನಮ್ಮ ಶಿಕ್ಷಣ ವಾರ್ತೆಯ ಗೌರವ ಸಲಹೆಗಾರರಲ್ಲಿ ಒಬ್ಬರಾಗಿರುವ ನನ್ನ
> ಪ್ರೀತಿಯ ಗುರುಗಳಾದ ಪ್ರೋ.ಜಿ.ಎಸ್.ಜಯದೇವಣ್ಣ ರವರು.*
>
> ಪ್ರತಿ ಶಾಲೆಯ ಪ್ರತಿ ಶಿಕ್ಷಕರು, ಶಿಕ್ಷಣ ನೀತಿ ಮತ್ತು ಯೋಜನೆಗಳನ್ನು ರೂಪಿಸುವವರು ಮತ್ತು
> ಎಲ್ಲಾ ಹೆತ್ತವರು ಕಡ್ಡಾಯವಾಗಿ ಕೊಂಡು ಓದಲೇಬೇಕಾದಂತಹ ಪುಸ್ತಕ ಪರಿಧಿಯಾಚೆಗಿನ ಪಯಣ.
>
> *ಪುಸ್ತಕ : ಪರಿಧಿಯಾಚೆಗಿನ ಪಯಣ*
>
> *ಲೇಖಕರು : ಡಾ. ಹೆಚ್.ಬಿ.ಚಂದ್ರಶೇಖರ್*
>
> *ಪುಸ್ತಕಗಳಿಗಾಗಿ : ಮಣಿ 9686535465 ಇವರನ್ನು ಸಂಪರ್ಕಿಸಬಹುದು.*
>
> ಸದ್ಯಕ್ಕೆ ಮಾರುಕಟ್ಟೆಯಲ್ಲಿ ಮತ್ತು ಲೇಖಕರ ಬಳಿ ಪುಸ್ತಕ ಲಭ್ಯತೆಯಿರುವುದಿಲ್ಲ ಎಂಬುದಾಗಿ
> ಸ್ನೇಹಿತರು ಹೇಳುತ್ತಿದ್ದಾರೆ.
>
> ನಮ್ಮ ಇಲಾಖೆಯೇ ಎಲ್ಲಾ ಶಾಲೆಗೊಂದು ಪ್ರತಿಯಂತೆ ಸರಬರಾಜು ಮಾಡಿದರೆ ಚೆಂದ...
>
> ಗೌರವಪೂರ್ವಕ ವಂದನೆಗಳೊಂದಿಗೆ ಧನ್ಯವಾದಗಳು.
>
> ಗಿರೀಶ ಟಿ.ಪಿ.
> 2012ರ ಬ್ಯಾಚಿನ ಮುಖ್ಯಶಿಕ್ಷಕ.
> ಸ.ಪ್ರೌ.ಶಾಲೆ ಹಾದಿಕೆರೆ. ತರೀಕೆರೆ.
> 9900700249
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "EnglishSTF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to