ಜೈ ಭಗತ್
On Feb 6, 2016 4:36 PM, "guruiv naik" <[email protected]> wrote:

> ನಿಮ್ಮ ಶ್ರಮಕ್ಕೆ ನಮಸ್ಕಾರ
> On 5 Feb 2016 11:00 a.m., "Mallikarjunagouda Patil" <[email protected]>
> wrote:
>
>> ಭಗತ್ ಸಿಂಗ್ ನಾಟಕ (No Copyrights! You have Right to copy!)
>>
>> ಪೊಲೀಸ್ ಅಧಿಕಾರಿ - ಭಗತ್ ಸಿಂಗ್ ಸಮಯ ಬಂತು
>>
>> ಭಗತ್ - ಒಂದ್ ನಿಮಿಷ ಜೈಲರ್ ಸಾಬ್, ಪುಸ್ತಕ ಒದ್ತಾ ಇದ್ದೀನಿ. ಒಬ್ಬ ಕ್ರಾಂತಿಕಾರಿ
>> ಇನ್ನೊಬ್ಬ ಕ್ರಾಂತಿಕಾರಿ ಬಗ್ಗೆ.
>>
>> ರಾಜಗುರು - ಓ ಭಗತ್
>>
>> ಭಗತ್ - ರಾಜಗುರು
>>
>> ರಾಜಗುರು - ಭಗತ್ ನಾಳೆ ಕೊಡಬೇಕಾಗಿರೋ ಗಲ್ಲು ಶಿಕ್ಷೆನಾ ಇವತ್ತೇ ಕೊಡ್ತಾ ಇದ್ದಾರೆ!
>>
>> ಸುಖದೇವ್ - ನಮ್ಮನ್ನ ಇನ್ನು ಒಂದು ದಿನ ಇಟ್ಟುಕೊಳ್ಳೋ ತಾಕತ್ತು ಈ ಬ್ರಿಟೀಷರಿಗೆ ಇಲ್ಲಾ
>> ಅಂತ ಕಾಣತ್ತೆ ಭಗತ್!
>>
>> ರಾಜಗುರು, ಸುಖದೇವ್ ಮತ್ತು ಭಗತ್ - ಹ ಹ ಹ.
>>
>> ಭಗತ್ - ಹುತಾತ್ಮರಾಗೋದಿಕ್ಕೆ ಅಂತಾ ಹೊರಟೋರಿಗೆ ನಾಳೆ ಆದ್ರೇನು ಇವತ್ತಾದ್ರೇನು? ಎರಡೂ
>> ಒಂದೇ. ನಡೀರಿ ನಡೀರಿ. ಚಿನ್ನದ ಕುಣಿಕೆಗಳು ನಮಗೋಸ್ಕರ ಕಾಯ್ತಾ ಇದ್ದಾವೆ.
>>
>> ಸುಖದೇವ್ ರಾಜಗುರು - ನಡೀ ಭಗತ್.
>>
>> ಪೊಲೀಸ್ ಆಧಿಕಾರಿ - ಒಂದು ನಿಮಿಷ.... ಕೈಕೋಳ ಹಾಕಿ.
>>
>> ರಾಜಗುರು ಸುಖದೇವ್ - ಏನು ಕೈಕೋಳನಾ? ಇವತ್ ಕೈಕೋಳ ಹಾಕ್ಕೊಳಲ್ಲ. ಇವತ್ ನಾವು ಸಂಪೂರ್ಣ
>> ಸ್ವತಂತ್ರವಾಗಿರಬೇಕು.
>>
>> ಭಗತ್ - ರಾಜಗುರು ಸುಖದೇವ್ ಇನ್ನು ಹತ್ತು ನಿಮಿಷ ಕಳೆದರೆ ನಮ್ ದೇಹದಿಂದ ಆತ್ಮಾನೇ ಬೇರೆ
>> ಆಗಿಬಿಡತ್ತಂತೆ ಅಂಥಾದ್ರಲ್ಲಿ ಇದ್ರಲ್ಲೆಲ್ಲಾ ಏನಿದೆ? ಹಾಕಿಸ್ಕೊಳ್ಳಿ ಹಾಕಿಸ್ಕೊಳ್ಳಿ.
>>
>> ರಾಜಗುರು ಸುಖದೇವ್ - ಹೂಂ ಹಾಕಿ ಹಾಕಿ..
>>
>> ಪೊಲಿಸ್ ಅಧಿಕಾರಿ - ಹೂಂ. ಹೋಗ್ಲಿ ಬಿಡಿ.  310 320 ನಡಿರಿ...
>>
>> ಪೊಲೀಸರು - ಎಸ್ ಸಾರ್.
>>
>> ಭಗತ್ ರಾಜಗುರು ಸುಖದೇವ್ ಮೂವರೂ - ತುಂಬಾ ಸಂತೋಷ ಆಯ್ತು ಜೈಲರ್ ಸಾಬ್.
>>
>> ಭಗತ್ - ರಾಜಗುರು ಸುಖದೇವ್. ಇವತ್ತು ನಾವು ಮೂವರು ನಮ್ಮ ದೇಶಕ್ಕೆ ರಂಗು ಕೊಡ್ಲಿಕ್ಕೆ
>> ಹೋಗ್ತಿದ್ದೀವಿ. ನಮ್ಮ ಭೂಮಿ ತಾಯಿಗೆ ಬಣ್ಣ ಕೊಡೋದಿಕ್ಕೆ ಹೋಗ್ತಾ ಇದ್ದೀವಿ. ಕ್ರಾಂತಿಕಾರಿ
>> ರಾಂ ಪ್ರಸಾದ್ ಬಿಸ್ಮಿಲ್ ಬರೆದಿರೋ ಕ್ರಾಂತಿಗೀತೆ ನಿಮಗೆ ಜ್ಞಾಪಕ ಇದೆ ಅಲ್ವಾ? ಮೇರಾ ರಂಗ್
>> ದೇ ಬಸಂತಿ ಚೋಲಾ.
>>
>> ಭಗತ್ ರಾಜಗುರು ಸುಖದೇವ್ ಮೂವರೂ - ಮೇರಾ ರಂಗ್ ದೇ ಬಸಂತಿ ಚೋಲಾ.
>> ( ಹಾಡು - ಮೇರಾ ರಂಗ್ ದೇ ಬಸಂತಿ ಚೋಲಾ.)
>>
>> ಭಗತ್ - ಜೈಲರ್ ಸಾಬ್ ನೀವು ತುಂಬಾ ಅದೃಷ್ಟವಂತರು!
>>
>> ಸುಖದೇವ್ - ಲಕ್ಕಿ!
>>
>> ರಾಜಗುರು - ವೆರಿ ಲಕ್ಕಿ!!
>>
>> ಪೊಲೀಸ್ ಅಧಿಕಾರಿ - ಯಾಕೆ? ನಾವ್ ಯಾಕೆ ಅದೃಷ್ಟವಂತರು?
>>
>> ಭಗತ್ ಸಿಂಗ್ - ಜೈಲರ್ ಸಾಬ್ ಜೈಲಿನ ಹೊರಗಡೆ ಸಾವಿರಾರು ಜನ, ದೇಶದಾದ್ಯಂತ ಲಕ್ಷಾಂತರ ಜನ
>> ನಾವು ಮೂರು ಜನ ದೇಶಕ್ಕೋಸ್ಕರ ಹೇಗೆ ನಗುನಗುತ್ತಾ ಪ್ರಾಣ ಕೊಡ್ತೀವಿ ಅಂತಾ ನೋಡೋದಕ್ಕೆ
>> ಕಾತರದಿಂದ ಕಾಯ್ತಾ ಇದ್ದಾರೆ. ಆದ್ರೆ ಅವರ್ಯಾರಿಗೂ ಆ ಭಾಗ್ಯ ಇಲ್ಲ. ನಿಮಗೆ ಮಾತ್ರ ನಾವು
>> ಮೂರು ಜನ ಕ್ರಾಂತಿಕಾರಿಗಳು ದೇಶಕ್ಕೋಸ್ಕರ ನಗು ನಗುತ್ತಾ ಉರುಳನ್ನ ಚುಂಬಿಸಿ ಕೊರಳಿಗೆ
>> ಹಾಕಿಕೊಳ್ಳೊದನ್ನ ಕಣ್ತುಂಬಾ ನೋಡೋ ಭಾಗ್ಯ ಸಿಕ್ಕಿದೆ. ಹೀಗಾಗಿ ನೀವು ಅದೃಷ್ಟವಂತರು!
>>
>> ಬ್ರಿಟೀಷ್ ಅಧಿಕಾರಿ - ಯು ಆಸ್ಕ್ ದೆಮ್. ವಾಟ್ ಈಸ್ ದೇಯರ್ ಅಲ್ಟಿಮೆಟ್ ಡಿಸೈರ್.
>>
>> ಪೊಲಿಸ್ ಅಧಿಕಾರಿ - ಭಗತ್ ಸಿಂಗ್ ರಾಜಗುರು ಸುಖದೇವ್ ನಿಮ್ ಕೊನೇ ಆಸೆ ಏನು ಅಂತಾ
>> ಕೇಳ್ಕೊಳ್ಳಿ.
>>
>> ಭಗತ್ ಸಿಂಗ್ - ಜೈಲರ್ ಸಾಬ್ ನಮ್ಮ ಮೊದಲ ಮತ್ತು ಕೊನೇ ಆಸೆ ಎರಡೂ ಒಂದೇ!
>>
>> ಸುಖದೇವ್ - ಅದು ನಮ್ ದೇಶಕ್ಕೆ ಸ್ವಾತಂತ್ರ್ಯ ಕೊಡಿಸೋದು.
>>
>> ರಾಜಗುರು - ಈ ಕೆಂಪು ಮೂತಿಯ ಕೋತಿಗಳನ್ನ ನಮ್ ದೇಶ ಬಿಟ್ಟು ಓಡಿಸೋದು!
>>
>> ಬ್ರಿಟೀಷ್ ಅಧಿಕಾರಿ - ವಾಟ್? ವಾಟ್ ದೆ ಟೆಲ್ಲಿಂಗ್?
>>
>> ಪೊಲೀಸ್ ಅಧಿಕಾರಿ - ನಥಿಂಗ್ ಸಾರ್ ನಥಿಂಗ್. ಭಗತ್ ಸಿಂಗ್ ಈ ರೀತಿಯ ಆಸೆಗಳನ್ನೆಲ್ಲಾ
>> ಈಡೇರಿಸೋಕಾಗಲ್ಲ. ಇದನ್ನ ಬಿಟ್ಟು ಬೇರೆ ಏನಾದ್ರೂ ಇದ್ರೆ ಕೇಳ್ಕೊಳ್ಳಿ!
>>
>> ಭಗತ್ - ಜೈಲರ್ ಸಾಬ್. ನೀವಿಷ್ಟೋಂದ್ ಪ್ರೀತಿಯಿಂದ ಕೊನೇ ಆಸೆ ಕೇಳ್ಕೊಳ್ಳಿ ಕೊನೇ ಆಸೆ
>> ಕೇಳ್ಕೊಳ್ಳಿ ಅಂತಾ ಕೇಳೋದ್ ನೋಡಿದ್ರೆ ನಂಗೆ ಕೊನೇ ಆಸೆ ಕೇಳ್ಕೊಳ್ಳಲೇ ಬೇಕು ಅನ್ನಿಸ್ತಿದೆ!
>> ಜೈಲರ್ ಸಾಬ್ ನಿಮ್ಮ ಬ್ರಿಟೀಷ್ ನ್ಯಾಯಾಲಯದ ಪ್ರಕಾರ ನಮ್ಮ ಮೂವರ ಮೇಲಿರೋದು ರಾಜದ್ರೋಹದ
>> ಆರೋಪ. ರಾಜದ್ರೋಹದ ಅಪರಾಧಕ್ಕೆ ಬ್ರಿಟನ್ ನಲ್ಲಿ ಕೊಡೋ ಶಿಕ್ಷೆ ಏನು?
>>
>> ರಾಜಗುರು - ಗುಂಡಿಟ್ಟು ಕೊಲ್ಲೋದು.
>>
>> ಭಗತ್ - ನಿಮಗೆ ತಾಕತ್ ಇದ್ರೆ ನಮಗೆ ಗುಂಡಿಟ್ಟು ಸಾಯಿಸಿ!!
>>
>> ಪೊಲೀಸ್ ಅಧಿಕಾರಿ - ಅಬ್ಭಾ! ಎಂಥಾ ದೇಶಭಕ್ತರು. ನಾನೂ ಬಾರತೀಯ ಇವರೂ ಭಾರತೀಯರು. ಆದ್ರೆ
>> ಎಂಥಾ ವ್ಯತ್ಯಾಸ? ದೇಶಕ್ಕೋಸ್ಕರ ಇವ್ರು ಗುಂಡು ಹೊಡೆಸಿಕೊಳ್ಳೋಕೂ ಸಿಧ್ಧರಾಗಿದ್ದಾರೆ.
>> ಆದ್ರೆ ನಾನು ಈ ಬ್ರಿಟೀಷರು ಕೊಡೋ ಸಂಬಳಕ್ಕೆ ಆಸೆ ಪಟ್ಟು ಇವರ ಗುಲಾಮಗಿರಿ ಮಾಡ್ತಾ ಇದೀನಿ.
>> ಛೇ ಛೇ.
>>
>> ಸುಖದೇವ್ - ಯೋಚನೆ ಮಾಡಬೇಡಿ ಜೈಲರ್ ಸಾಬ್. ನೀವು ನಿಮ್ಮ ಉಪ್ಪಿನ ಋಣ ತೀರ್ಸಿ. ನಾವ್
>> ನಮ್ಮ ಮಣ್ಣಿನ ಋಣ ತೀರಿಸ್ತೀವಿ.
>>
>> ಪೊಲೀಸ್ ಅಧಿಕಾರಿ - ಭಗತ್ ಸಿಂಗ್ ರಾಜಗುರು ಸುಖದೇವ್. ದಯವಿಟ್ಟು ಈ ಆಸೆ ಒಂದು ಬಿಟ್ಟು
>> ಬೇರೆ ಏನಾದ್ರೂ ಕೇಳ್ಕೊಳ್ಳಿ. ಅದನ್ನಾದ್ರೂ ಈಡೇರಿಸಿ ನನ್ ಪಾಪ ನಾನ್ ಕಡಿಮೆ ಮಾಡ್ಕೋತೀನಿ.
>>
>> ರಾಜಗುರು - ಭಗತ್. ನಾವ್ ಮೂವರು ಒಟ್ಟಿಗೆ ಒಂದೇ ತಟ್ಟೆಲಿ ಊಟ ಮಾಡ್ತಾ ಇದ್ವಿ. ಒಟ್ಟಿಗೆ
>> ದೇಶದ್ ಕೆಲಸ ಮಾಡಿದ್ವಿ. ಈವತ್ತು ಸಾಯೋವಾಗ್ಲೂ ಒಟ್ಟಿಗೆ ಇದ್ದೀವಿ. ಆದ್ರೆ ಭಗತ್ ಸಾಯೋ
>> ಮೊದ್ಲು ನಿನ್ನ ಒಂದೇ ಒಂದ್ ಸಾರಿ ತಬ್ಬಿಕೊಳ್ಳಬೇಕು ಅನ್ನಿಸ್ತಿದೆ ಕಣೋ.
>>
>> ಸುಖದೇವ್ - ಜೈಲರ್ ಸಾಬ್. ನಾವು ಮೂವರೂ ಒಬ್ಬರನ್ನೊಬ್ಬರು ಅಪ್ಪಿಕೊಳ್ಳಬೇಕು.
>>
>> ಪೊಲೀಸ್ ಅಧಿಕಾರಿ - ಹೂಂ
>>
>> (ಮೂವರೂ ತಬ್ಬಿಕೊಳ್ಳುತ್ತಾರೆ)
>>
>> ಭಗತ್ - ರಾಜಗುರು ನಿನ್ ಕಣ್ಣಲ್ಲಿ ನೀರು?
>>
>> ಸುಖದೇವ್ - ಸಾವಿಗೆ ಇಷ್ಟೋಂದ್ ಹೆದ್ರುಕೊಳ್ಳೋನು ದೇಶದ ಕೆಲಸಕ್ಕೆ ಯಾಕೋ ಬರಬೇಕಿತ್ತು?
>>
>> ರಾಜಗುರು - ಸುಖದೇವ್ ದುಡುಕಬೇಡ. ಇದು ಸಾವಿಗೆ ಹೆದರಿಕೊಂಡು ಬರ್ತಾ ಇರೋ ಕಣ್ಣೀರಲ್ಲಾ.
>> ದೇಶಕ್ಕೋಸ್ಕರ ಪ್ರಾಣ ಕೊಡ್ತಾ ಇದ್ದೀನಲ್ಲಾ ಅಂತಾ ಆನಂದಕ್ಕೆ ಬರ್ತಾ ಇರೋ ಕಣ್ಣೀರು.
>> ನಿನ್ನಂತಾ ಸ್ನೇಹಿತನ ಭಗತ್ ಸಿಂಗ್ ನಂಥಾ ದೇಶಭಕ್ತನ ಜೊತೆ ಒಟ್ಟಿಗೆ ಸಾಯೋ ಭಾಗ್ಯ
>> ಸಿಕ್ಕಿದಿಯಲ್ಲಾ ಆ ಸಂತೋಷಕ್ಕೆ ಬರ್ತಾ ಇರೋ ಕಣ್ಣೀರು.
>>
>> ಸುಖದೇವ್ - ರಾಜಗುರು! ನಂಗೊತ್ತು. ನೀನು ಸಾವಿಗೆ ಯಾವತ್ತೂ ಭಯ ಪಡಲ್ಲ ಅಂತ. ನೀನು ಸಿಂಹ
>> ಕಣೋ ನೀ ಸಿಂಹ. ಆದ್ರೆ ಗೆಳೆಯ ಸಾಯೋ ಕೊನೇ ಕ್ಷಣದಲ್ಲಿ ನಿನ್ ಕಣ್ಣಲ್ಲಿ ಕಣ್ಣೀರು ನೋಡಿ
>> ತಪ್ಪು ತಿಳಿದುಕೊಂಡು ಬಿಟ್ಟೆ. ನನ್ನ ಕ್ಷಮಿಸು ಗೆಳೆಯಾ.
>>
>> ಭಗತ್ - ಸುಖದೇವ್ ರಾಜಗುರು. ದೇಶಕ್ಕೋಸ್ಕರ ಪ್ರಾಣ ಕೊಡ್ಲಿಕ್ಕೆ ಅಂತ ಹೊರಟಿರೋ
>> ಕ್ರಾಂತಿಕಾರಿಗಳು ಯಾವತ್ತೂ ಕಣ್ಣೀರು ಹಾಕಬಾರದು. ಕಣ್ಣೀರ್ ಹಾಕಕೂಡದು.
>>
>> ರಾಜಗುರು - ಭಗತ್ ನಾವೇನೋ ಸತ್ ಹೋಗಿಬಿಡ್ತೀವಿ. ಸರಿ. ಆದ್ರೆ ನೀ ಸತ್ ಹೋದ್ರೆ, ನಮ್
>> ದೇಶಕ್ಕೆ ಸ್ವಾತಂತ್ರ್ಯ ಕೊಡಿಸೋದು ಯಾರು?
>>
>> ಭಗತ್ -  ಹ್ಹ ಹ್ಹ ಹ್ಹ. ರಾಜಗುರು. ನಾನೊಬ್ಬ ಸತ್ತ ಮಾತ್ರಕ್ಕೆ ಈ ದೇಶಕ್ಕೆ
>> ಸ್ವಾತಂತ್ರ್ಯ ಸಿಕ್ಕೋದಿಲ್ಲ ಅಂತ ತಿಳಿದುಕೊಂಡಿದ್ದೀಯೇನು? ಇಲ್ಲ. ನಮ್ಮ ಮೂವರನ್ನ
>> ನೇಣಿಗೇರಿಸಿ ಈ ಬ್ರಿಟೀಷ್ ಸಕರ್ಾರ ಸಾಧಿಸೋದೇನು ಇಲ್ಲ. ಬದಲಾಗಿ ನಾವು ಮೂರು ಜನ
>> ನಗುನಗುತ್ತಾ ಉರುಳನ್ನು ಚುಂಬಿಸಿ ಕೊರಳಿಗೆ ಹಾಕಿಕೊಳ್ಳೋದನ್ನ ನೋಡಿದ ಈ ದೇಶದ ತಾಯಂದಿರು
>> ಅವರ ಹೊಟ್ಟೆಯಲ್ಲಿ ಭಗತ್ ಸಿಂಗ್ ನಂಥಾ ಮಕ್ಕಳು ಹುಟ್ಟಲಿ, ರಾಜಗುರು ನಂಥಾ ಮಕ್ಕಳು
>> ಹುಟ್ಟಲಿ, ಸುಖದೇವ್ ನಂಥಾ ಮಕ್ಕಳು ಹುಟ್ಟಲಿ, ಅಂತಾ ಬಯಸುತ್ತಾರೆ. ಆನಂತರ ಅವರ ಹೊಟೇಲಿ
>> ಹುಟ್ಟೋ ಪ್ರತಿಯೊಂದು ಮಗು ಕೂಡಾ ಈ ಬ್ರಿಟೀಷರ ವಿರುದ್ಧ ಸಿಂಹದ ಥರಾ ಹೋರಾಡಿ ನಮ್ ದೇಶಕ್ಕೆ
>> ಸ್ವಾತಂತ್ರ್ಯ ಕೊಡಿಸುತ್ತೆ. ಸುಖದೇವ್, ಇವತ್ತು ನಮ್ ದೇಶದ ಜನರಿಗೆ ದೇಸಕ್ಕೋಸ್ಕರ ಹೇಗೆ
>> ಬದುಕಬೇಕು ಅಂತಾ ಗೊತ್ತಿಲ್ಲ. ದೇಶಕ್ಕೋಸ್ಕರ ಹೇಗೆ ಕೆಲಸ ಮಾಡಬೇಕು ಅಂತಾ ಗೊತ್ತಿಲ್ಲ.
>> ದೇಶಕ್ಕೋಸ್ಕರ ಹೇಗೆ ಪ್ರಾಣ ತ್ಯಾಗ ಮಾಡಬೇಕು ಅಂತ ಗೊತ್ತಿಲ್ಲ. ಎಲ್ಲರೂ ತಮ್ಮ ತಮ್ಮ
>> ಸ್ವಾರ್ಥದಲ್ಲಿ ಮುಳುಗಿ ಈ ಬ್ರಿಟೀಷರ ಪಾದಸೇವಕರಾಗಿ ಕೆಲಸ ಮಾಡ್ತಾ ಇದಾರೆ. ಸುಖದೇವ್
>> ಇವತ್ತು ಇವತ್ತು ನಾವು ಆ ಜನರಿಗೆ ದೇಶಕ್ಕೋಸ್ಕರ ಹೇಗೆ ನಗುನಗುತ್ತಾ ಪ್ರಾಣತ್ಯಾಗ ಮಾಡೋದು
>> ಆಂತ ತೋರಿಸಿಕೊಡೋಣ. ಒಂದ್ ಸಾರಿ ಈ ದೇಶದ ಜನ ಸಾವಿನ ಭಯವನ್ನು ಗೆದ್ರು ಅಂತ ಹೇಳಿದ್ರೆ
>> ಆನಂತರ ಈ ಬ್ರಿಟೀಷರನ್ನ ಎರಡು ನಿಮಿಷ ಕೂಡಾ ಈ ದೇಶದಲ್ಲಿ ಉಳಿಸಲ್ಲ. ಈ ಉದಾತ್ತ
>> ಉದ್ದೇಶಕ್ಕೋಸ್ಕರ ನಾವ್ ಪ್ರಾಣತ್ಯಾಗ ಮಾಡ್ಲೇಬೇಕು ಸುಖದೇವ್. ಮಾಡಲೇಬೇಕು ರಾಜಗುರು.
>>
>> ಸುಖದೇವ್ - ಭಗತ್ ನೀ ಹೇಳಿದ್ದು ನಿಜ. ಈವತ್ತು ನಾವು ದೇಶಕ್ಕೋಸ್ಕರ ಪ್ರಾನ ಕೊಡ್ತಾ ಒಂದು
>> ಒಳ್ಳೇ ಕೆಲಸ ಮಾಡ್ತಾ ಇದ್ದೀವಿ ನಿಜ. ಆದ್ರೆ ಮುಂದಿನ ಜನ್ಮ ಅಂತ ಒಂದಿದ್ರೆ ಮತ್ತೆ ಇದೇ
>> ಮಣ್ಣಲ್ಲಿ ಹುಟ್ಟಿ ಈ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ನಮ್ ದೇಶಕ್ಕೆ ಸ್ವಾತಂತ್ರ್ಯ
>> ಕೊಡಿಸೋಣ.
>>
>> ಬ್ರಿಟೀಷ್ ಅಧಿಕಾರಿ - ಓಕೆ ಓಕೆ ಟೈಮ್ ಅಪ್ ಟೈಮ್ ಅಪ್.
>>
>> ಪೊಲೀಸ್ ಅಧಿಕಾರಿ - 310 320.
>>
>> ಬ್ರಿಟೀಷ್ ಅಧಿಕಾರಿ - ಟೂ ಮಿನಿಟ್ಸ್ ಮೋರ್
>>
>> ಸುಖದೇವ್ - ಭಗತ್ ನೆನ್ನೆ ನಿಮ್ ತಾಯಿ ಹೇಳಿದ್ ಮಾತು ಜ್ಞಾಪಕದಲ್ಲಿದಿಯಾ?
>>
>> ಭಗತ್ - ಅದ್ ಹ್ಯಾಗ್ ಮರಿಯಕಾಗತ್ತೆ ಸುಖದೇವ್. ನೆನ್ನೆ ನಮ್ ತಾಯಿ ನನ್ನ ನೋಡೋಕೆ ಅಂತ
>> ಜೈಲಿಗೆ ಬಂದಿದ್ದರು. ಆಕೆ ನನ್ನನ್ನ ನೋಡಿದ್ ತಕ್ಷಣ ಕಣ್ಣಲ್ಲಿ ನೀರ್ ತುಂಬಿಕೊಂಡು
>> ಹೇಳಿದ್ಲು. "ಮಗೂ ಭಗತ್. ಇಷ್ಟು ಚಿಕ್ಕ ವಯಸ್ಸಿಗೇ ದೇಶ ದೇಶ ಅಂತ ಹೇಳ್ತಾ ಪ್ರಾನ ಕೊಡೋ
>> ಸ್ಥಿತಿಗೆ ಬಂದ್ ಬಿಟ್ಯಲ್ಲೋ. ನಿನ್ನನ್ನ ನಾನು ಮದುವೆ ಮಾಡಿ ಮದುವೆ ದಿಬ್ಬಣದಲ್ಲಿ ನೋಡಬೇಕು
>> ಅಂತ ಅಸೆಪಟ್ಟಿದ್ದೆ ಆದ್ರೆ ಇವತ್ತು ನೀನು ಸಾಯೋದನ್ನ ನೋಡಬೇಕಾದ ಪರಿಸ್ಥಿತಿ
>> ಬಂದುಬಿಡ್ತಲ್ಲೋ" ಅಂತ ಕಣ್ಣಿರು ಹಾಕಿದ್ಲು. ಆಗ ನಾನು ನನ್ ತಾಯಿಗೆ ಹೇಳಿದೆ. " ಅಮ್ಮಾ.
>> ನಿನ್ ಮಗ ಭಗತ್ ಸಿಂಗ್ ಯಾವ್ದೋ ಕಳ್ಳತನ ಮಾಡಿ ಯಾವ್ದೋ ದರೋಡೆ ಮಾಡಿ ನೇಣು ಶಿಕ್ಷೆಗೆ ಗುರು
>> ಆಗಿಲ್ಲ. ನಿನ್ ಮಗ ಭಗತ್ ಸಿಂಗ್ ದೇಶದ ಸ್ವಾತಂತ್ರ್ಯಕ್ಕೋಸ್ಕರ ಬ್ರಿಟೀಷರನ್ನ ಈ ದೇಶದಿಂದ
>> ಹೊರಗೆ ಓಡಿಸಬೇಕು ಅನ್ನೋ ಉದಾತ್ತ ಉದ್ದೇಶಕ್ಕೋಸ್ಕರ ಪ್ರಾಣ ಕೊಡ್ತಾ ಇದ್ದಾನೆ. ಸತ್ತ ನಂತರ
>> ನಿನ್ನ ಮಗ ಜನರ ಕಣ್ಣಲ್ಲಿ ಹುತಾತ್ಮ. ಅಮ್ಮಾನಾನ್ ನಿಧರ್ಾರ ಮಾಡಿಕೊಂಡಿದ್ದೀನಿ ಸಾಯೋ ಕೊನೇ
>> ಕ್ಷಣದಲ್ಲೂ ನನ್ನ ಕಣ್ಣಲ್ಲಿ ಕಿಂಚಿತ್ತೂ ಭಯವನ್ನು ಈ ಆಂಗ್ಲರು ನೋಡಲಾರರು. ಆದ್ರೆ ಅಮ್ಮಾ
>> ನೀನು ಹೀಗೆ ಕಣ್ಣಿರು ಹಾಕ್ತಾ ಇರೋದನ್ನ ನೋಡಿ ಈವಾಗ್ಲೇನೋ ನಾ ತಡೆದುಕೊಂಡುಬಿಡಬಲ್ಲೆ.
>> ಆದ್ರೆ ನಾಳೆ ಗಲ್ಲಿಗೇರೋ ಕೊನೇ ಕ್ಷಣದಲ್ಲಿ ಕಣ್ಣಿರು ತುಂಬಿದ ನಿನ್ನ ಮುಖ ನನ್ನ
>> ನೆನಪಿಗೇನಾದ್ರೂ ಬಂದುಬಿಟ್ರೆ ಆಗ ನನ್ನ ಕೈಲಿ ತಡೆದುಕೊಳ್ಳೋಕಾಗಲ್ಲ ಅಮ್ಮಾ. ಒಂದ್ ವೇಳೆ ನಾ
>> ಆಗ ಕಣ್ಣಿರ್ ಹಾಕಿಬಿಟ್ರೆ ಈ ಪಾಫಿ ಬ್ರಿಟೀಷರು ಹೇಳ್ತಾರೆ. ನೋಡ್ರೀ. ಭಗತ್ ಸಿಂಗ್ ಸಾವಿಗೆ
>> ಭಯಪಟ್ಟು ಕಣ್ಣಿರು ಹಾಕ್ತಾ ಇದ್ದಾನೆ. ಸಾಯೋ ಕಾಲಕ್ಕೆ ಈ ಕ್ರಾಂತಿಕಾರಿ ಹೇಡಿ ಆಗ್ಬಿಟ್ಟ
>> ಅಂತ. ಅಮ್ಮಾ ಹುತಾತ್ಮನಾಗಲಿಕ್ಕೆ ಅಂತ ಹೊರಟಿರೋ ನಿನ್ನ ಮಗ ಹೇಡಿ ಅನ್ನಿಸಿಕೊಳ್ಳೊದು ನಿಂಗೆ
>> ಇಷ್ಟ ಏನಮ್ಮಾ ?" ಅಂತ. ನನ್ ತಾಯಿ ಹೇಳಿದ್ಲು " ಮಗೂ ಭಗತ್ ನಾ ನಿನ್ನ ತುಂಬಾ ಚಿಕ್ ಹುಡುಗ
>> ಅನ್ಕೊಂಬಿಟ್ಟಿದ್ದೆ. ಆದ್ರೆ ನೀ ಚಿಕ್ ಹುಡುಗ ಅಲ್ಲ ದೇಶಕ್ಕೋಸ್ಕರ ಪ್ರಾನತ್ಯಾಗ
>> ಮಾಡೋದಿಕ್ಕೆ ಅಂತ ಹೊರಟಿರೋ ಹುತಾತ್ಮ. ನಾನು ಕಣ್ಣಿರು ಹಾಕಿ ನಿನ್ನ ಹುತಾತ್ಮ ಪಟ್ಟಕ್ಕೆ
>> ಅಡ್ಡಿಬರಲ್ಲ. ನಾನು ನಿನಗೆ ಮಾತು ಕೊಡ್ತೀನಿ ನೀನು ಸತ್ತ ನಂತರವೂ ನನ್ನ ಕಣ್ಣಲ್ಲಿ ಒಂದು
>> ತೊಟ್ಟು ನೀರು ಬರಲ್ಲ. ಆದ್ರೆ ನೀ ನಂಗೊಂದು ಮಾತು ಕೊಡಬೇಕು. ನಾಳೆ ಸಾಯೊ ಕೊನೇ ಕ್ಷಣದಲ್ಲಿ
>> ನೀವು ಮೂವರ ಬಾಯಲ್ಲಿ ಬರಬೇಕಾದ ಕಡೆಯ ಶಬ್ದ .. ವಂದೇ ಮಾತರಂ ಆಗಿರಬೇಕು.
>>
>> ರಾಜಗುರು - ಇನ್ಕಿಲಾಬ್ ಜಿಂದಾಬಾದ್
>>
>> ಸುಖದೇವ್ - ಭಾರತ್ ಮಾತಾ ಕೀ ಜೈ
>>
>> ಭಗತ್ - ವಂದೇ ಮಾತರಂ.
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit
>> https://groups.google.com/d/msgid/kannadastf/CAOM04w%2BpnwLpYD%3D_UkmP5vw%2BWenADYVhWN5%3Dif3fE%3DERqf9K_A%40mail.gmail.com
>> <https://groups.google.com/d/msgid/kannadastf/CAOM04w%2BpnwLpYD%3D_UkmP5vw%2BWenADYVhWN5%3Dif3fE%3DERqf9K_A%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAK3w_BOKUAZasNQ5%2BfJ4tV8WP4xwTSjE-H0ZiG7PLMHU4cr%2BzQ%40mail.gmail.com
> <https://groups.google.com/d/msgid/kannadastf/CAK3w_BOKUAZasNQ5%2BfJ4tV8WP4xwTSjE-H0ZiG7PLMHU4cr%2BzQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CABJr6PPKC73Zke-EiWkcQS%3DBFLmB_nqdj09WtyAgGtk0UhyWmg%40mail.gmail.com.
For more options, visit https://groups.google.com/d/optout.

Reply via email to