ಜಯಗೀತ
ಯಾರು ಕೊಟ್ಟರು? ಯಾರು ತಂದರು ?
ಸ್ವತಂತ್ರವನು ದೇಶಕೆ !
ಯಾರು ಹಚ್ಚಿದ ನಂದಾ ದೀಪವು ?
ಬೆಳಗುತಿಹುದೀ ನಾಡನು? !//೧//
ಭರತ ಮಾತೆಯ ಕಣ್ಣ ನೀರನು
ಒರೆಸಿದವರು ಯಾರು?
ಕಬಂಧ-ದಾಸ್ಯದ ಹಿಡಿತ ಸಡಿಲಿಸಿ
ಬಿಡುಗಡೆ ಯಾರು ತಂದರು ?//೨//
ಯಾರ ತ್ಯಾಗದ ಫಲಸ್ವರೂಪವೋ
ಹೆಗಲಿನ ನೊಗ ಕಳಚಿತು
ಯಾರು ಪಡೆದ ಕರಿ-ನೀರ ಶಿಕ್ಷೆಯೋ
ನಮ್ಮೆಲ್ಲರ ಸೆರೆ ತಪ್ಪಿತು //೩//
ಯಾರ ಬಂಧನಕೆ ಸಂದ ಬೆಲೆಯಿದೊ
ನಮ್ಮ ಬಾಳುವೆ ಸುಂದರ
ಯಾವ ಮಹಿಮರ ಬಲಿದಾನವೋ ಇದು
ಆ ಮಹಾತ್ಮರ ನೆನೆಯುವಾ//೪//
ಮಸಾಲೆವಸ್ತುಗೆ ಮನವ ಸೋತು
ಕಡಲು ದಾಟಿ ಬಂದರು
ಅರಿವೆ ಮಾರುತ,ಸುಳಿವು ಅರಿಯುತಾ
ದಾಳ ಉರುಳಿಸಿ ಗೆದ್ದರು // ೫//
'ನೆರವು ಸೈನ್ಯ'ದ ನೆಪವ ಒಡ್ಡುತಾ
ನುಂಗಿಬಿಟ್ಟರು ದೇಶವ
' ದತ್ತುಮಕ್ಕಳಹಕ್ಕು' ಕೀಳುತಾ
ಕಬಳಿಸಿದರು ಖಂಡವ //೬//
ತಾತ್ಯಾ,ನಾನಾ,ಪಾಂಡೆ,ಲಕ್ಷ್ಮಿಬಾಯಿ
ಹಚ್ಚಿದಂತ ಕಿಡಿಯಿದು !
ಭರತ ಖಂಡವೇ ಹೊತ್ತಿ ಉರಿಯಿತು
ಜಲಿಯನ್,ದಂಡಿ,ಅಸಹಕಾರದಿ.....//೭//
ಗಾಂಧಿ,ನೆಹರು,ಪಟೇಲ್,ಸುಭಾಸರು
ಧುಮುಕಿದರು ಮುಂಚೂಣಿಗೆ
ಬಿಪಿನ ,ಲಜಪತ, ಸಾವರ್ಕರ್,ತಿಲಕರು
ಮಾಡಿಮಡಿದ ಮಹಾತ್ಮರು //೮//
ಮದನ,ಆಜಾದ,ಸುಖದೇವ,ಭಗತರು
ಹರಣ ತೊರೆದ ಧೀರರು
ಪರಂಗಿ ಜನರ ಫಿರಂಗಿ ಗುಂಡಿಗೆ
ಎದೆಯನೊಡ್ಡಿದ ವೀರರು//೯//
ಅಹಿಂಸೆಯೆ ಹೋರಾಟ ಮಂತ್ರವು,
ಸತ್ಯಾಗ್ರಹವೇ ತಂತ್ರವು
ತ್ಯಜಿಸಿ ಶಸ್ತ್ರವ ,ಮಣಿಸೆ ಶತ್ರುವ
ರಾಷ್ಟ್ರ ಜಿಗಿಯಿತು ಸಂಗ್ರಾಮಕೆ //೧೦//
ನಾಡೇ ಕೂಗಿತು ;ಮುಗಿಲು ಮುಟ್ಟಿತು
ಸ್ವಾಯತ್ತತೆಯ ಬೇಡಿಕೆ .!
ದಿಗಿಲು ಹುಟ್ಟಿತು, ಓಟ ಕಿತ್ತಿತು
ಕಂಪನಿ ಜನ ಸ್ವದೇಶಕೆ ! //೧೧//
ನಾಲ್ವತ್ತೇಳರ ಆಗಸ್ಟ್ ಮಾಸದಿ
ಗಗನಗಾಮಿ ತಿರಂಗವು
ಹದಿನಾಲ್ಕರ ನಡು ರಾತ್ರಿಯಲ್ಲಿ
ಧರೆಗಿಳಿದ ಒಕ್ಕೂಟಪತಾಕೆಯು //೧೨//
ಉರಿಯಲಿ ನಿತ್ಯ ಸ್ವತಂತ್ರ ಹಣತೆಯು
ಹುತಾತ್ಮರನೆನಪೇ ಬತ್ತಿಯು
ಮೆರೆಸಲು ಎಲ್ಲೆಡೆ ನಾಡ ಘನತೆಯಾ
ನಮ್ಮ ದುಡಿಮೆಯೇ ತೈಲವು //೧೩//
# ಚಂದ್ರೇಗೌಡನಾರಮ್ನಳ್ಳಿ , 8722199344
ಸ/ಶಿ,ಸರ್ಕಾರಿ ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ/ ತಾ/
Chandregowda m.d. pin 573119. mo 8722199344
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
-http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
For more options, visit https://groups.google.com/d/optout.