ಒಳ್ಳೆಯ ಮಾಹಿತಿ. ಅಭಿನಂದನೆಗಳು On Feb 28, 2016 10:51 AM, "Ramachandra BK" <[email protected]> wrote:
> ತುಂಬಾ ಚೆನ್ನಾಗಿದೆ. ಅಭಿನಂದನೆಗಳು . > On Feb 28, 2016 8:44 AM, "HAREESHKUMAR K Agasanapura" < > [email protected]> wrote: > >> http://m.prajavani.net/article/2016_02_28/390604 >> >> *ಆಕಾಶವೇಕೆ ನೀಲಿಯಾಗಿದೆ?* >> >> ಪ್ರಜಾವಾಣಿ ಆರ್ಕ್ಸೈವ್ಸ್ / ಟಿ.ಎಲ್. ರಾಮಸ್ವಾಮಿ >> >> ಪ್ರಿಸಂ ಮೂಲಕ ಹಾಯುವಾಗ ಬೆಳಕು ವಿಸರಣವಾಗುವುದು (ಡಿಸ್ಪರ್ಶನ್) >> >> Previous <http://m.prajavani.net/article/2016_02_28/390604#>Next >> <http://m.prajavani.net/article/2016_02_28/390604#> >> >> 28 Feb, 2016 >> >> ಟಿ.ಆರ್. ಅನಂತರಾಮು >> >> >> <https://www.facebook.com/sharer/sharer.php?u=http%3A%2F%2Fgoo.gl%2FY9wMpb> >> <https://twitter.com/intent/tweet?text=%E0%B2%86%E0%B2%95%E0%B2%BE%E0%B2%B6%E0%B2%B5%E0%B3%87%E0%B2%95%E0%B3%86+%E0%B2%A8%E0%B3%80%E0%B2%B2%E0%B2%BF%E0%B2%AF%E0%B2%BE%E0%B2%97%E0%B2%BF%E0%B2%A6%E0%B3%86%3F+http%3A%2F%2Fgoo.gl%2FY9wMpb> >> <https://plus.google.com/share?url=http%3A%2F%2Fgoo.gl%2FY9wMpb> >> <http://www.pinterest.com/pin/find/?url=http%3A%2F%2Fgoo.gl%2FY9wMpb> >> <http://www.linkedin.com/shareArticle?mini=true&title=%E0%B2%86%E0%B2%95%E0%B2%BE%E0%B2%B6%E0%B2%B5%E0%B3%87%E0%B2%95%E0%B3%86+%E0%B2%A8%E0%B3%80%E0%B2%B2%E0%B2%BF%E0%B2%AF%E0%B2%BE%E0%B2%97%E0%B2%BF%E0%B2%A6%E0%B3%86%3F+&url=http%3A%2F%2Fgoo.gl%2FY9wMpb> >> >> ‘ಆಕಾಶವೇಕೆ ನೀಲಿಯಾಗಿದೆ?’ ಎಂಬುದು ಅಹಮದಾಬಾದಿನ ಸಮುದಾಯ ವಿಜ್ಞಾನ ಕೇಂದ್ರಕ್ಕೆ ಅಡಿಪಾಯ >> ಹಾಕುವ ಸಂದರ್ಭದಲ್ಲಿ (ಡಿಸೆಂಬರ್ 22, 1968) ಅವರು ನೀಡಿದ ಉಪನ್ಯಾಸ. ವಿಜ್ಞಾನವನ್ನು ಹೇಗೆ >> ಸರಳವಾಗಿ, ಪರಿಣಾಮಕಾರಿಯಾಗಿ ಹೇಳಬಹುದು ಎಂಬುದಕ್ಕೆ ಈ ಉಪನ್ಯಾಸ ಮಾದರಿಯಾಗಿದೆ. ಮೂಲ >> ಉಪನ್ಯಾಸದ ಸಾರ ಸಂಗ್ರಹ ಮಾಡಿಕೊಟ್ಟಿದ್ದಾರೆ ಹಿರಿಯ ಲೇಖಕ >> ಟಿ.ಆರ್. ಅನಂತರಾಮು. >> ಎಲ್ಲ ವಿದ್ಯಾರ್ಥಿಗಳೂ ಶಿಕ್ಷಕರೂ ಓದಬೇಕಾದ ಬರಹವಿದು. >> >> ನಾನು ವಿಜ್ಞಾನದ ಯಾವ ವಿಚಾರವಾಗಿ ಉಪನ್ಯಾಸ ಕೊಡಬೇಕು ಎಂಬುದನ್ನು ನನಗೇ ಬಿಟ್ಟಾಗ ನಾನು >> ಆಯ್ಕೆ ಮಾಡಿಕೊಂಡದ್ದು ‘ಆಕಾಶವೇಕೆ ನೀಲಿಯಾಗಿದೆ?’ ಎಂಬ ವಿಷಯ. ನಿಸರ್ಗ ಈ ದಿನ ಕರುಣೆ >> ತೋರಿದೆ; ಆಕಾಶ ನೀಲಿಯಾಗಿದೆ. ಆದರೆ ಎಲ್ಲೆಡೆಯೂ ಅಲ್ಲ. ಬಹಳಷ್ಟು ಭಾಗದಲ್ಲಿ ಮೋಡಗಳಿವೆ. ಈ >> ವಿಷಯ ಆಯ್ಕೆಮಾಡಿಕೊಂಡದ್ದು ಏಕೆ ಎಂದರೆ ಇದನ್ನು ನೋಡಲು ಪ್ರಯೋಗಾಲಯಕ್ಕೇನೂ ಹೋಗಬೇಕಾಗಿಲ್ಲ; >> ತಲೆಯೆತ್ತಿ ಮೇಲೆ ನೋಡಿದರೆ ಸಾಕು. ಅಷ್ಟೇ ಅಲ್ಲ, ಇದರಲ್ಲಿ ವಿಜ್ಞಾನದ ಚೈತನ್ಯವಿದೆ. >> >> ಕಣ್ಣು ಬಿಟ್ಟು, ತೆರೆದ ಕಿವಿಗಳಿಂದ ಆಲಿಸಿ ಸುತ್ತಣ ಜಗತ್ತನ್ನು ನೋಡಿದರೆ ಅದೇ ವಿಜ್ಞಾನದ >> ಕಲಿಕೆ. ನನ್ನ ಮಟ್ಟಿಗೆ ವಿಜ್ಞಾನ ಕೊಟ್ಟಿರುವ ಸ್ಫೂರ್ತಿಯೆಂದರೆ ಪ್ರಕೃತಿಯ ಬಗೆಗಿನ >> ಪ್ರೀತಿ. ನೀವು ಜಗತ್ತನ್ನು ಎಲ್ಲೇ ನೋಡಲಿ, ಪ್ರಕೃತಿಯಲ್ಲಿ ಎಲ್ಲ ಬಗೆಯ ಚಮತ್ಕಾರಗಳನ್ನೂ >> ಕಾಣುತ್ತೀರಿ. ನನಗೆ ಅವು ಸದಾ ಚೋದ್ಯವುಂಟುಮಾಡಿವೆ. ಸಾಮಾನ್ಯವಾಗಿ ಅದೆಲ್ಲ ಹಾಗೆಯೇ ಎನ್ನುವ >> ಮನೋಭಾವ ನಮ್ಮದು. ವೈಜ್ಞಾನಿಕ ಚೈತನ್ಯದ ಹೂರಣವೆಂದರೆ ಹಿಂತಿರುಗಿ ನೋಡಬೇಕು, ಮುನ್ನೋಟ >> ಹರಿಸಬೇಕು. ನಮ್ಮೆದುರಿಗಿರುವುದು ಎಂಥ ಅದ್ಭುತ ಜಗತ್ತು ಎನ್ನುವುದನ್ನು ನಮ್ಮ ಒಳಮನಸ್ಸಿಗೆ >> ತಂದುಕೊಳ್ಳಬೇಕು. ನಾವು ನೋಡುವುದೆಲ್ಲ ಬರಿ ವಿಸ್ಮಯಕಾರಿಯಾಗಿರುವುದಿಲ್ಲ, ಬದಲು >> ಮನುಷ್ಯನಿಗೆ ಸವಾಲೆಸೆಯುತ್ತವೆ. ನಮ್ಮ ಸುತ್ತ ಆವರಿಸಿರುವ ದೊಡ್ಡ ನಿಗೂಢವನ್ನು ಬೆದಕಲು >> ಪ್ರೇರೇಪಿಸುತ್ತವೆ. >> >> ಇಂಥ ಸವಾಲನ್ನು ‘ವಿಜ್ಞಾನ ಸಮುದಾಯ’ ಸವಾಲೆಂದೇ ಸ್ವೀಕರಿಸುತ್ತದೆ, ಪರಿಹಾರ ಹುಡುಕಲು >> ಪ್ರಯತ್ನಿಸುತ್ತದೆ. ಡಾ. ವಿಕ್ರಂ ಸಾರಾಭಾಯಿ ಅವರು ಈಗಾಗಲೇ ನುಡಿದಂತೆ– ನಮ್ಮ ದೇಶದ ಯುವ >> ಜನಾಂಗ ಇಂಥ ಸವಾಲನ್ನು ಸ್ವೀಕರಿಸಲು ಯಾವ ರೀತಿಯಲ್ಲಿ ಸಿದ್ಧವಾಗಿದೆ? ಅವರನ್ನು >> ಎಚ್ಚರಿಸುವುದು ಹೇಗೆ? ಮತ್ತೆ ಭಾರತವನ್ನು ಜ್ಞಾನಕೇಂದ್ರವಾಗಿ ಬೆಳಗಬೇಕಲ್ಲ! ಈಗ ಮೊದಲು >> ಎತ್ತಿದ ಪ್ರಶ್ನೆಗೆ ಮರಳುತ್ತೇನೆ. >> >> ಆಕಾಶವೇಕೆ ನೀಲಿಯಾಗಿದೆ? ಕುತೂಹಲಕಾರಿ ಅಂಶವೆಂದರೆ ಈ ಪ್ರಶ್ನೆಗೆ ಉಡಾಫೆಯ ಉತ್ತರ >> ಕೊಡುವುದು ಸುಲಭ. ಬೇಕಾದರೆ ‘ಎಲೆಗಳೇಕೆ ಹಸಿರಾಗಿವೆ?’ ಎಂದು ಸಸ್ಯ ವಿಜ್ಞಾನಿಯನ್ನು ಕೇಳಿ, >> ಆತ ಗೊಣಗುತ್ತ ‘ಕ್ಲೋರೋಫಿಲ್ನಿಂದ’ ಎಂಬ ಚುಟಕು ಉತ್ತರಕೊಟ್ಟು ತೆಪ್ಪಗಾಗುತ್ತಾನೆ. ಎಲ್ಲ >> ವೈಜ್ಞಾನಿಕ ಪ್ರಶ್ನೆಗಳಿಗೂ ಇದೇ ಧಾಟಿಯಲ್ಲಿ ಎರಡು ಮೂರು ಪದಗಳಲ್ಲಿ ಉತ್ತರಕೊಟ್ಟು ಕೈ >> ತೊಳೆದುಕೊಳ್ಳುವುದಕ್ಕೆ ಆಗುವುದಿಲ್ಲ. ಇಂಥ ಉತ್ತರದಿಂದ ಪರೀಕ್ಷೆಯಲ್ಲಿ ಪಾಸಾಗಬಹುದು ನಿಜ. >> ಆದರೆ ಅದು ಸಮರ್ಪಕ ಉತ್ತರ ಅಲ್ಲ.ನಿಸರ್ಗ ಎಸೆಯುವ ವೈಜ್ಞಾನಿಕ ಸವಾಲೆಂದರೆ ಅದಕ್ಕೆ >> ಉತ್ತರವಾಗಿ ಬರಿ ಆವಿಷ್ಕಾರ ಮಾಡುವುದಲ್ಲ, ಮತ್ತೆ ಮತ್ತೆ ಸುದೀರ್ಘವಾಗಿ ಚಿಂತನೆ >> ಮಾಡುತ್ತಿರುವುದು, ನಿಗೂಢವನ್ನು ಒಡೆಯಲು ಗಾಢವಾಗಿ ತೊಡಗುವುದು. >> >> ‘ಆಕಾಶವೇಕೆ ನೀಲಿ’ ಎಂಬುದು ಕುತೂಹಲಕರ ಪ್ರಶ್ನೆ. ಇದರಲ್ಲಿ ಎರಡು ಅಂಶಗಳಿವೆ. ಅಲ್ಲಿ >> ಆಕಾಶವಿದೆ– ಇಲ್ಲಿ ನಾನಿದ್ದೇನೆ. ನನಗೆ ಅದು ಕಾಣುವುದು ನೀಲಿಯಾಗಿ. ಮನುಷ್ಯನ ಮಿದುಳು >> ಮತ್ತು ಮನಸ್ಸು ಎರಡರ ಪಾತ್ರವೂ ಇದರಲ್ಲಿದೆ. ಹಿಂದೆ ಯಾರೂ ತಲೆ ಕೆಡಿಸಿಕೊಂಡಿರದ ಪ್ರಶ್ನೆ >> ಇದೆಂದು ಭಾವಿಸಿ, ನಿಮಗೆ ನೀವೇ ಈ ಪ್ರಶ್ನೆ ಹಾಕಿಕೊಳ್ಳಿ. ಆಗ ಅದೊಂದು ಭಾವೋದ್ರೇಕಗೊಳಿಸುವ >> ಪ್ರಶ್ನೆ ಎಂದು ನಿಮಗೆ ಅನ್ನಿಸುತ್ತದೆ. ಅದಕ್ಕೆ ಸ್ವತಃ ನೀವೇ ಉತ್ತರಿಸಬಹುದೇ ನೋಡಿ. >> >> ನಿರಭ್ರ ರಾತ್ರಿಯಲ್ಲಿ ನಕ್ಷತ್ರಗಳು ಮಿನುಗುವುದನ್ನು ಕಾಣುತ್ತೇವೆ. ಹಾಗಿದ್ದಲ್ಲಿ, ಹಗಲು >> ಹೊತ್ತಿನಲ್ಲೇಕೆ ಮಿನುಗುವುದು ಕಾಣುವುದಿಲ್ಲ? ಪ್ರಶ್ನಿಸಿಕೊಳ್ಳಿ. ಉತ್ತರ ಕಂಡ ಹಾಗೇ ಇದೆ. >> ಭೂದೇವಿ ಪರದೆಯ ಹಿಂದೆ ಬಚ್ಚಿಟ್ಟುಕೊಂಡಿದ್ದಾಳೆ. ಈ ಪರದೆ ಬೇರೆ ಯಾವುದೂ ಅಲ್ಲ, ವಾಯುಗೋಳ. >> ತಿಳಿರಾತ್ರಿಯಲ್ಲಿ ನಾವು ಕ್ಷೀಣವಾಗಿ ಕಾಣುವ ನಕ್ಷತ್ರವನ್ನು, ಕ್ಷೀರಪಥವನ್ನು ಅದೇ >> ವಾಯುಗೋಳದಲ್ಲಿ ಕಾಣುತ್ತೇವಲ್ಲ. ಆಕಾಶ ನಿಜಕ್ಕೂ ನೀಲಿ ಆಗಿರಬೇಕೆಂದರೆ ಅಲ್ಲಿ >> ಮೋಡಗಳಿರಬಾರದು, ದೂಳಿನ ಕಣಗಳು ಇರಬಾರದು. >> >> ವಾಯುಗೋಳದ ಸ್ಥಿತಿ ಆಧರಿಸಿ, ಕೆಲವೊಮ್ಮೆ ಆಕಾಶ ನೀಲಿಯಾಗಿ ಕಾಣುತ್ತದೆ, ಕೆಲವೊಮ್ಮೆ ನೀಲಿ >> ಇರುವುದಿಲ್ಲ. ನೋಡಿದ ಮಾತ್ರಕ್ಕೇ ಇದನ್ನು ಹೇಳಬಹುದು. ಆಕಾಶ ಮತ್ತು ವಾಯುಗೋಳ ಸೂರ್ಯನ >> ಬೆಳಕಿನಲ್ಲಿ ಝಗಮಗಿಸುತ್ತವೆ. ಬೆಳಕು ವಾಯುವಿನಿಂದ ಕೂಡಿರುವ ದಟ್ಟ ವಾಯುಗೋಳದ ಪದರದ ಮೂಲಕವೇ >> ಹಾಯ್ದುಬರಬೇಕು. ಕೆಲವೊಮ್ಮೆ ಅದು ಪಾರದರ್ಶಕ, ಇರುಳಿನಲ್ಲಿ ಗೋಚರಿಸುವುದಿಲ್ಲ. ಎಂದಾದರೂ >> ಪೂರ್ಣ ಚಂದ್ರ ಇರುವ ರಾತ್ರಿಯನ್ನು ಕುತೂಹಲಕಾರಿಯಾಗಿ ನೀವು ಗಮನಿಸಿದ್ದೀರಾ? ಚಂದ್ರನ ಮೇಲೆ >> ಸೂರ್ಯನ ಬೆಳಕು ವಿಸರಣವಾದರೆ (ಡಿಫ್ಯೂಸ್) ಅಥವಾ ಪ್ರತಿಫಲಿಸಿದರೆ ಅದೇ ನಾವು ಕಾಣುವ >> ಬೆಳದಿಂಗಳು. >> >> ಬೆಳದಿಂಗಳ ರಾತ್ರಿಯಲ್ಲಿ ಆಕಾಶವೇನೂ ನೀಲಿಯಾಗಿರುವುದಿಲ್ಲ. ಪೇಲವ ಬಣ್ಣ, ಸ್ವಲ್ಪ >> ಬೆಳಕಿರುತ್ತದೆ. ಪೂರ್ಣಚಂದ್ರನ ರಾತ್ರಿಯಲ್ಲೂ ಮಿನುಗುವ ನಕ್ಷತ್ರಗಳನ್ನು ನೋಡಬಹುದು. >> ಹಗಲಿನಲ್ಲಿ ಪ್ರಕಾಶವಿದ್ದಾಗ, ಆಕಾಶ ನೀಲಿಯಾಗಿ ಕಾಣುತ್ತದೆ, ಬೆಳದಿಂಗಳ ದಿನಗಳಲ್ಲಿ >> ಏಕಿಲ್ಲ? ಕಾರಣವಿಷ್ಟೇ, ಬೆಳದಿಂಗಳು ಶಕ್ತಿಯುತವಾದದ್ದಲ್ಲ. ಇದನ್ನು ಅರ್ಥಮಾಡಿಕೊಳ್ಳಲು >> ನೀವು ದೊಡ್ಡ ಗಣಿತ ವಿಶಾರದರಾಗಬೇಕಾಗಿಲ್ಲ. ಯಾರಾದರೂ ಉತ್ಸಾಹಿ ತರುಣರು ಲೆಕ್ಕಹಾಕಬಹುದು. >> ಬೆಳದಿಂಗಳ ಬೆಳಕೆಂದರೆ ಸೂರ್ಯನ ಪ್ರಜ್ವಲತೆಯ ದಶಲಕ್ಷದ ಒಂದು ಭಾಗ. ಅಬ್ಬಬ್ಬಾ, ಅಷ್ಟು >> ಕಡಿಮೆಯೇ ಎಂದು ನೀವು ಉದ್ಗಾರ ತೆಗೆಯಬಹುದು. >> >> ಆದರೂ ಬೆಳದಿಂಗಳು ಉಜ್ವಲವಾಗಿಯೇ ಕಾಣುತ್ತದೆ. ಎಲ್ಲ ತಾರೆಗಳನ್ನು ಅದು >> ಮಸುಕುಗೊಳಿಸುವಷ್ಟಲ್ಲ, ಆಕಾಶವಂತೂ ಆಗ ನೀಲಿಯಾಗಿರುವುದಿಲ್ಲ. ಮನುಷ್ಯನ ದೃಷ್ಟಿ ಇಲ್ಲಿ >> ಕೆಲಸ ಮಾಡುತ್ತದೆ. ಬಣ್ಣ ನಿಚ್ಚಳವಾಗಿ ನಮಗೆ ಕಾಣಬೇಕೆಂದರೆ ದೀಪ್ತಿ ಹೆಚ್ಚಿನ >> ಮಟ್ಟದಲ್ಲಿರಬೇಕು. ಆಕಾಶ ನೀಲಿಯಾಗಿ ಕಾಣುತ್ತದೆ ಏಕೆಂದರೆ ಸೂರ್ಯನ ಬೆಳಕು ಹೆಚ್ಚು ಪ್ರಖರ. >> ಬೆಳದಿಂಗಳ ಬೆಳಕು ಅಷ್ಟು ತೀಕ್ಷ್ಣವಲ್ಲ. ನಮ್ಮ ಮಿದುಳು ಈ ಬಣ್ಣವನ್ನು ಗ್ರಹಿಸದು. ಬೆಳಕಿನ >> ಪ್ರಖರತೆ ಕಡಿಮೆಯಾದಷ್ಟೂ ನಾವು ಬಣ್ಣವನ್ನು ಗ್ರಹಿಸುವುದು ಕಷ್ಟವಾಗಿ ಕೊನೆಗೆ ಶೂನ್ಯವನ್ನು >> ಕಾಣುತ್ತೇವೆ. >> >> ಒಂದು ಪುಟ್ಟ ದೂರದರ್ಶಕವನ್ನು ಬಳಸಿ ನಕ್ಷತ್ರಗಳನ್ನೋ ಅಥವಾ ‘ಮಹಾವ್ಯಾಧ’ ನೀಹಾರಿಕೆಯನ್ನೋ >> ವೀಕ್ಷಿಸಿ. ನಾನು ಮತ್ತೆ ಮತ್ತೆ ಹೇಳುವುದಿಷ್ಟು. ಖಗೋಳವಿಜ್ಞಾನದಂತಹ ಭವ್ಯವಿಜ್ಞಾನ >> ಬೇರೊಂದಿಲ್ಲ. ಮನಸ್ಸನ್ನು ಪುಟಿಸುತ್ತದೆ. ಎಷ್ಟು ಮಂದಿ ಮೇಲುಸ್ತರದವರು ದೂರದರ್ಶಕ >> ಬಳಸಿದ್ದಾರೋ ತಿಳಿಯದು. ಅಂತಹವರಿಗೆ ಹೇಳುವುದಿಷ್ಟು. ಒಂದು ಜೊತೆ ಬೈನಾಕ್ಯುಲರ್ ಬಳಸಿ >> ಆಕಾಶವನ್ನು ವೀಕ್ಷಿಸಿ. ಅದು ನಿಮ್ಮ ಅಧ್ಯಯನಕ್ಕೆ ನೆಲೆಯಾಗುತ್ತದೆ. ಬೈನಾಕ್ಯುಲರ್ ಬಳಸದ >> ವಿದ್ಯಾವಂತರನ್ನು ನಾನು ಒಪ್ಪಲಾರೆ. ನಾವು ಬಾಳುತ್ತಿರುವ ವಿಶ್ವದ ಅತ್ಯದ್ಭುತದಿಂದ ಅಂತಹವರು >> ವಂಚಿತರಾಗುತ್ತಾರೆ. >> >> ಆಗಸದ ಸ್ವಲ್ಪ ಭಾಗವನ್ನು ವೀಕ್ಷಿಸಿದರೂ ಸಾಕು, ಸಂತೋಷದ ಔನ್ನತ್ಯಕ್ಕೆ ಅದು ನಮ್ಮನ್ನು >> ಒಯ್ಯುತ್ತದೆ. ಈಗ ಒಂದು ಕಠಿಣ ಪ್ರಶ್ನೆ ಹಾಕುತ್ತೇನೆ. ಏಕೆ ಬೆಳಕು ಪ್ರಖರವಾಗಿದ್ದಾಗ ಮಾತ್ರ >> ಆಕಾಶ ನೀಲಿಯಾಗಿ ಕಾಣುತ್ತದೆ? ಬಿಳಿ ಬೆಳಕಿನಲ್ಲಿ ರೋಹಿತದ (spectrum) ಎಲ್ಲ ಬೆಳಕೂ >> ಅಡಕವಾಗಿರುತ್ತದೆ. ಬಣ್ಣವನ್ನು ಪ್ರತ್ಯೇಕಿಸುತ್ತ ಹೋಗಿ, ಗಾಢ ಕೆಂಪಿನಿಂದ ನೇರಿಳೆಯವರೆಗೆ >> ಅದರ ವ್ಯಾಪ್ತಿ ಉಂಟು. ಆಕಾಶ ನೋಡಿದಾಗ ನನಗೆ ಬರಿ ನೀಲಿ ಬಣ್ಣ ಮಾತ್ರ ಏಕೆ ಕಾಣಬೇಕು? >> ರೋಹಿತದ ಉಳಿದ ಬಣ್ಣಗಳೇನಾದವು? ಇದು ಅತ್ಯಂತ ಮೂಲ ಪ್ರಶ್ನೆ. ರೋಹಿತದಲ್ಲಿ ಎಲ್ಲಕ್ಕಿಂತ >> ಕಡಿಮೆ ತೀವ್ರತೆಯದೆಂದರೆ ಅದು ನೀಲಿ. >> ಬೆಳಕಿನ ಉಜ್ವಲತೆಯ ೪೦ರಲ್ಲಿ ಒಂದು ಭಾಗದಷ್ಟು. ನೀಲಿ ಆಕಾಶದಲ್ಲಿ ಉಳಿದ ಬಣ್ಣಗಳನ್ನು >> ತುಸು ಶ್ರಮದಿಂದಲೇ ಗುರುತಿಸಬೇಕಾಗುತ್ತದೆ. >> >> ಇದರರ್ಥ ರೋಹಿತದ ಉಳಿದ ಬಣ್ಣಗಳನ್ನು ನೀಲಿ ಮಸುಕುಗೊಳಿಸುತ್ತದೆ. ನೀಲಿ ಆಕಾಶ, ಅದರ ಮಧ್ಯೆ >> ತೇಲುವ ಕುಂತಲ ಮೋಡಗಳು (ಕ್ಯುಮುಲಸ್) ಎಂಥ ಮನಮೋಹಕ ದೃಶ್ಯ ನೀಡುತ್ತವೆ. ಅದರಲ್ಲೂ ಮೋಡಗಳು >> ಚಲಿಸುತ್ತಿದ್ದರೆ ಆಕಾಶ ಇನ್ನಷ್ಟು ನೀಲಿಯಾಗಿ ಕಾಣುತ್ತದೆ. ನಾನು ಎಷ್ಟೋ ಕಾಲ ತನ್ಮಯನಾಗಿ >> ವೀಕ್ಷಣೆ ಮಾಡಿ ಆನಂದಿಸಿದ್ದೇನೆ. ವಿಚಾರವೇನೆಂದರೆ ಈ ಕುಂತಲ ಮೋಡಗಳು ಹುಟ್ಟುವಾಗ ಸುತ್ತಲಿನ >> ದೂಳನ್ನೆಲ್ಲ ಬಾಚಿಕೊಳ್ಳುತ್ತವೆ. >> >> ಇದೆಲ್ಲ ಸರ್ವಸಾಮಾನ್ಯ ಎಂದು ನೀವು ಅಂದುಕೊಂಡರೆ ಇವೆಲ್ಲ ನಿಮ್ಮ ಗಮನಕ್ಕೆ ಬರದೇ >> ಹೋಗಬಹುದು. ಅದು ಸರಿ, ಸ್ವಚ್ಛತೆಯಾಗುವುದು ಹೇಗೆ? ಕೆಲವೊಮ್ಮೆ ನಾನು ತರುಣರನ್ನು ‘ಮೋಡ >> ಎಂದರೆ ಏನು’ ಎಂದು ಕೇಳುತ್ತೇನೆ. ‘ಅದಾ ಸರ್, ಅದು ಹಬೆಯ ಸಾಂದ್ರೀಕರಣ’ ಎಂದುಬಿಡುತ್ತಾರೆ. >> >> ನಿಜವಾಗಲೂ ಅಂಥದ್ದು ಏನೂ ಇಲ್ಲ. ಮೋಡವೆಂದರೆ ಕಣಗಳ ದೊಡ್ಡ ರಾಶಿ. ಬಿಳಿ ಮೋಡವೆಂದರೆ ನೀರ >> ಹನಿಗಳ ಸಂಗ್ರಹ. ನೀರು ಭಾರ ತಾನೆ? ಹಾಗಿದ್ದರೆ ಮೋಡಗಳು ಏಕೆ ಕುಸಿದುಬೀಳುವುದಿಲ್ಲ? ಈ >> ಪ್ರಶ್ನೆ ಎತ್ತಿಕೊಂಡರೆ ಅದು ನಮ್ಮನ್ನು ಇನ್ನೆಲ್ಲಿಗೋ ಒಯ್ಯುತ್ತದೆ. ಇಷ್ಟಂತೂ ನಿಜ. ಕಣಗಳು >> ಇರಲೇಬೇಕು ಬೀಜದಂತೆ. ಅದರ ಸುತ್ತ ಮೋಡ ಕಟ್ಟುತ್ತದೆ. ದೂಳು ಕಣಗಳು ಇಲ್ಲವೆಂದಾಗ ವಾಯುಗೋಳ >> ಸ್ವಚ್ಛವಾಗುತ್ತದೆ, ಅಂದರೆ ಆಕಾಶ ನೀಲಿಯಾಗುತ್ತದೆ. >> >> ಸೂರ್ಯನ ಬೆಳಕಿನ ಒಂದು ಭಾಗ ನೀಲಿ. ಹಾಗಾದರೆ ಉಳಿದ ಭಾಗ ಏನಾಯಿತು? ಇದನ್ನು >> ಅರ್ಥಮಾಡಿಕೊಳ್ಳಲು ಉದಾಹರಣೆಯೊಂದನ್ನು ಪರಿಗಣಿಸಬೇಕಾಗುತ್ತದೆ. ಬಿಳಿಮೋಡ ಮತ್ತು ನೀಲಿ >> ಆಕಾಶವನ್ನು, ಪಾಕೆಟ್ಟಿನಲ್ಲಿಡಬಹುದಾದ ರೋಹಿತ ದರ್ಶನದ (ಸ್ಪೆಕ್ರ್ಟೋಸ್ಕೋಪ್) ಮೂಲಕ >> ಗಮನಿಸಿ, ತೋರಿಕೆಗೆ ಅಂಥ ವ್ಯತ್ಯಾಸವೇನೂ ಕಾಣದು. ಈಗ ನೀಲಿ ಆಕಾಶದ ಬಗ್ಗೆ– ರೋಹಿತದಲ್ಲಿ >> ನೀಲಿಗಿಂತಲೂ ಹತ್ತುಪಟ್ಟು ಹೆಚ್ಚು ಉಜ್ವಲವಾಗಿ ಕಾಣುವುದು ಹಸುರು, ಹಳದಿ ಮತ್ತು ಕೆಂಪು. >> ಆದರೂ ಆಕಾಶ ಏಕೆ ನೀಲಿಯಾಗಿ ಕಾಣಬೇಕು? ಕೆಲವು ನಿರ್ದಿಷ್ಟ ಸ್ಥಿತಿಯಲ್ಲಿ ರೋಹಿತದ ನೀಲಿ >> ದುರ್ಬಲವಾಗಿರುತ್ತದೆ, ಅದು ಇರಬೇಕಾದ ತೀವ್ರತೆಗಿಂತ ಹೆಚ್ಚು ತೀವ್ರವಾಗಿರುತ್ತದೆ. >> >> ಇದು ಸಾಧ್ಯವಾಗುವುದು ಚದರಿಕೆಯಿಂದಾಗಿ. ನೀಲಿಯ ತರಂಗಾಂತರ ಉಳಿದ ಬಣ್ಣಗಳಿಗಿಂತ ಕಡಿಮೆ. >> ಹೀಗಾಗಿ ಅದು ಹೆಚ್ಚು ಚದುರುತ್ತದೆ. ನಮ್ಮ ಕಣ್ಣು ನೀಲಿ ಬಣ್ಣವನ್ನು ಸುಲಭವಾಗಿ >> ಗ್ರಹಿಸುವಂತೆ ರೂಪಿತವಾಗಿದೆ. >> >> ಈಗ ಇನ್ನೊಂದು ಪ್ರಶ್ನೆ. ವಾಯುಗೋಳದಲ್ಲಿ ಗಾಳಿಯ ಅನಿಲಗಳೇಕೆ ಬೆಳಕನ್ನು ಚದರಿಸಬೇಕು. >> ರೋಹಿತದಲ್ಲಿನ ಕೆಂಪು, ಹಳದಿ ಮತ್ತು ಹಸುರುಗಳ ಅಲೆಯುದ್ದ ಹೆಚ್ಚು. ಹಾಗಾಗಿ ಅವು >> ಚದರುವುದಿಲ್ಲ. ಇದನ್ನು ಒಂದು ಉದಾಹರಣೆಯಿಂದ ಅರ್ಥಮಾಡಿಕೊಳ್ಳಬಹುದು. ವಾಯುಗೋಳದಲ್ಲಿನ >> ಅಣುಗಳ ಗಾತ್ರ ತುಂಬ ಚಿಕ್ಕದು. ಒಂದು ದೊಡ್ಡ ಕೊಳ ನೋಡುತ್ತಿದ್ದೀರಿ ಎನ್ನೋಣ. ಅದರಲ್ಲಿ >> ಒಂದು ಬಿರುಡೆ ತೇಲುತ್ತಿದೆ ಎನ್ನೋಣ. >> >> ಗಾಳಿ ಬೀಸಿದಾಗ ಆ ಬಿರುಡೆ ಅಲೆಯ ಹೊಡೆತಕ್ಕೆ ಅಲುಗಾಡುತ್ತದೆ. ಏಕೆಂದರೆ ಬಿರುಡೆ ಮತ್ತು >> ಅಲೆಗಳ ಗಾತ್ರವನ್ನು ಹೋಲಿಸಬಹುದು. ಇದರ ಬದಲು ಅದೇ ಕೊಳದಲ್ಲಿ ದೊಡ್ಡ ದೋಣಿಯೊಂದು >> ಸಾಗುತ್ತಿದೆ ಎನ್ನಿ. ಆಗ ಅವೇ ಅಲೆಗಳು ಅದನ್ನು ಅಲುಗಾಡಿಸುವುದಿಲ್ಲ. ಇದರ ಅರ್ಥವಿಷ್ಟು. >> ಅಲೆಯ ಗಾತ್ರ ಮತ್ತು ವಸ್ತುವಿನ ಗಾತ್ರ ಇಲ್ಲಿ ಮುಖ್ಯವಾಗುತ್ತದೆ. ಕಡಿಮೆ ಅಲೆಯುದ್ದದವು ಬೇಗ >> ಚದರುತ್ತವೆ ಎಂಬುದಕ್ಕೆ ಇದೊಂದು ಹೋಲಿಕೆ ಅಷ್ಟೇ. ನಿಜವಾದ ಗಾಢ ನೀಲಿ ಆಕಾಶವನ್ನು >> ನೋಡಬೇಕೆಂದರೆ ಅಣುಗಳ ಗಾತ್ರ ಅತಿ ಚಿಕ್ಕದಾಗಿರಬೇಕು. ಆಗ ಹೆಚ್ಚು ಚದರಿಕೆಯಾಗುತ್ತದೆ. >> ಇದಕ್ಕಿಂತಲೂ ಮುಖ್ಯ ಬೆಳಕಿನ ಪ್ರಖರತೆ ಕೂಡ ಹೆಚ್ಚಾಗಿರಬೇಕು. ವಾಸ್ತವವಾಗಿ ಆಕಾಶವೇಕೆ >> ನೀಲಿಯಾಗಿರುತ್ತದೆ ಎಂಬುದಕ್ಕೆ ಮೊದಲು ಸಮರ್ಪಕವಾದ ವೈಜ್ಞಾನಿಕ ಉತ್ತರವನ್ನು ಕೊಟ್ಟವನು >> ಲಾರ್ಡ್ ರ್್ಯಾಲಿ. >> >> ಕನಸುಗಳಿರಬೇಕು. ಅವು ನನಸಾಗುತ್ತವೋ ಇಲ್ಲವೋ ಅದು ಬೇರೆ ಮಾತು. ಅವನ್ನು >> ನಿರೀಕ್ಷಿಸಬಹುದಲ್ಲ. ನಾನು ನಾಳೆ ಏನೋ ಒಂದನ್ನು ಆವಿಷ್ಕರಿಸುತ್ತೇನೆ, ಅದನ್ನು ಬೆಂಬತ್ತಿದ >> ವ್ಯಕ್ತಿ ಹೊಸತಾಗಿ ಇನ್ನೇನನ್ನಾದರೂ ಆವಿಸ್ಕರಿಸುತ್ತಾನೋ ಇಲ್ಲವೋ ಶ್ರಮವನ್ನಂತೂ >> ಪಡುತ್ತಾನೆ. ಇದನ್ನು ಮತ್ತೆ ಹೇಳುತ್ತೇನೆ. ವಿಜ್ಞಾನ ಮುಖ್ಯವಾಗಿ ಮನುಷ್ಯನ ಆಂತರ್ಯದ >> ಚೈತನ್ಯ. ಕವಿ ಮಾಡುವುದೇನು? ಕಲಾವಿದ ಮಾಡುವುದೇನು? ಮಹಾಶಿಲ್ಪಿ ಮಾಡುವುದೇನು? ಶಿಲ್ಪಿ >> ದೊಡ್ಡ ಅಮೃತಶಿಲೆಯ ತುಂಡನ್ನು ಆಯ್ದುಕೊಳ್ಳುತ್ತಾನೆ, ಕೆತ್ತುತ್ತಾ ಹೋಗುತ್ತಾನೆ. >> >> ಅಂತಿಮವಾಗಿ ಮೂರ್ತಿ ಸಿದ್ಧವಾದಾಗ ಅವನ ಕನಸು ನನಸಾಗುತ್ತದೆ. ಅದೆಷ್ಟು ಶ್ರಮ ಅದಕ್ಕಾಗಿ >> ಹಾಕಿರುತ್ತಾನೆನ್ನುವುದನ್ನು ನಾವು ಮರೆಯಬಾರದು. ಇದನ್ನು ಮಾಡೇ ಮಾಡುತ್ತೇನೆ ಎಂಬ >> ಭರವಸೆಯಿಂದ ತಾನೆ ಅವನು ಶ್ರಮಹಾಕುವುದು? ವಿಜ್ಞಾನ ಕ್ಷೇತ್ರದಲ್ಲೂ ಅಷ್ಟೇ. ಇಲ್ಲಿ ಜ್ಞಾನದ >> ಅನ್ವೇಷಣೆಯೇ ಗುರಿ. ಸಾಧಿಸಬೇಕೆಂಬ ಛಲವಿಲ್ಲದಿದ್ದರೆ ಅವನು ವಿಜ್ಞಾನಿಯಾಗಲಾರ. ಯಾವುದೋ >> ಇಲಾಖೆಯಲ್ಲಿ ಕೆಲಸ ಸಿಗುತ್ತದೆ, ತಿಂಗಳ ಪಗಾರ ಸಿಗುತ್ತದೆ. ಆದರೆ ಅದು ವಿಜ್ಞಾನವಲ್ಲ. >> ವಾಸ್ತವವಾಗಿ ಆಕಾಶವೇಕೆ ನೀಲಿ ಎಂಬುದನ್ನು ಕುರಿತು ನಾನು ಮಾತನಾಡಿದೆನಾದರೂ ಅದು ನನ್ನ >> ನಿಜವಾದ ಉದ್ದೇಶವಾಗಿರಲಿಲ್ಲ. >> >> ವಿಜ್ಞಾನದ ಚೈತನ್ಯ ಸ್ವರೂಪವನ್ನು ನಿಮಗೆ ತಿಳಿಸುವುದು ನನ್ನ ಮುಖ್ಯ ಉದ್ದೇಶವಾಗಿತ್ತು. >> ವಿಜ್ಞಾನದಲ್ಲಿ ಈ ದೇಶದಲ್ಲಿ ನಾವು ಹೇಗೆ ಮುಂದುವರಿಯಬೇಕು, ನಮ್ಮ ಹಿಂದಿನವರ ಸಮಸಮಕ್ಕೆ >> ಬರಲು ನಾವು ಮಾಡಬೇಕಾದ್ದೇನು? ಅದು ನನ್ನ ಉಪನ್ಯಾಸದ ಆಂತರ್ಯ. ಬೆಳಕು ಅಣುಗಳೊಂದಿಗೆ >> ವರ್ತಿಸುವುದು ಹೇಗೆ? ಅಣುಗಳಿಗೆ ಏನಾಗುತ್ತದೆ? ಅಣುಗಳೆಂದರೆ ಏನು? ಇವು ನಿಖರವಾಗಿ >> ಚರ್ಚಿಸಬೇಕಾದ ವಿಚಾರ. ವಿಜ್ಞಾನ ಇಲ್ಲಿಗೇ ಸ್ಥಗಿತವಾಗುವುದಿಲ್ಲ. >> >> ಬೆದಕಿದಷ್ಟೂ ಇನ್ನೂ ಬೆಂಬತ್ತಿಹೋಗುವಂತೆ ಪ್ರೇರೇಪಿಸುತ್ತದೆ. ವಿಜ್ಞಾನದ ಆಕರ್ಷಣೆ >> ಇರುವುದೇ ಇಲ್ಲಿ. ಇತರರೊಡನೆ ನೀವು ಎಂದೂ ಹೋಲಿಸಿಕೊಳ್ಳಬಾರದು. ಹೊಸ ಪ್ರಶ್ನೆಗಳು >> ಹುಟ್ಟುತ್ತವೆ, ಅವಕ್ಕೆ ಹೊಸ ಉತ್ತರಗಳೂ ಬರಬೇಕು. >> >> ನನ್ನ ಉಪನ್ಯಾಸದಲ್ಲಿ ಪ್ರಸ್ತಾಪಿಸಿದ ಅಂಶಗಳು ಪವನವಿಜ್ಞಾನಕ್ಕೆ (ಮೀಟಿಯೊರಾಲಜಿ) >> ಸಂಬಂಧಿಸಿವೆ ಎಂಬ ವಿಚಾರವನ್ನು ಹೇಳದೆ ಮುಂದುವರಿಯಲು ಆಗುವುದಿಲ್ಲ. ಆದರೆ ನನ್ನ ನಿಜವಾದ >> ಆಸಕ್ತಿ ಪವನವಿಜ್ಞಾನವೂ ಅಲ್ಲ, ಅದು ಬೆಳಕಿನ ಚದರಿಕೆಯ ಬಗ್ಗೆ. ಗಾಳಿಯಲ್ಲಿ ಅಣುಗಳ ಅಂತಿಮ >> ಸ್ವಭಾವ ಕುರಿತು. ಇದು ಇಂದಿನ ಸಂದರ್ಭದಲ್ಲಿ ನಮಗೆ ಸಿಕ್ಕಿರುವ ಪ್ರಬಲ ಅಸ್ತ್ರ. ಅಣುಗಳನ್ನು >> ನೀವು ಎಣಿಸಬಹುದು. ಪ್ರಯೋಗಾಲಯದಲ್ಲಿ ಪರೀಕ್ಷಿಸಬಹುದು. ಪ್ರತಿ ವಿದ್ಯಾರ್ಥಿಯೂ ಈ >> ಪ್ರಯೋಗವನ್ನು ನೋಡಿರಲೇಬೇಕು. ಒಂದು ಬಾಟಲಿಯನ್ನೋ ಅಥವಾ ಪ್ಲಾಸ್ಕನ್ನೋ ತೆಗೆದುಕೊಳ್ಳಿ. >> ಅದಕ್ಕೆ ಬಿರುಡೆ ಇರಲಿ. >> >> ಅದರಲ್ಲಿರುವ ದೂಳನ್ನೆಲ್ಲ ಕೊಡವಿಬಿಡಿ. ಅದರ ಆಳಕ್ಕೆ ಬೆಳಕಿನ ದಂಡ ಬೀಳುವಂತೆ ಮಾಡಿ. ಅದು >> ಗಾಳಿಯನ್ನು ತೂರಿಹೋಗುವಂತಿರಬೇಕು. ಗಾಳಿಯನ್ನು ನೀವು ಕಾಣಬಹುದು. ಗಾಳಿಯೇನೂ ಪಾರದರ್ಶಕ, >> ನಿರ್ವರ್ಣದ ಅನಿಲವಲ್ಲ. ಕಾಣದೆ ಇರುವಂಥದ್ದೂ ಅಲ್ಲ. ಬೆಳಕಿನ ಚದರಿಕೆಯಿಂದ ಗಾಳಿ >> ಕಾಣುವಂತಾಗುತ್ತದೆ. ಈ ಸರಳ ಪ್ರಯೋಗವನ್ನು ವಿದ್ಯಾರ್ಥಿಗಳು ತಮ್ಮ ಜೀವಮಾನದಲ್ಲಿ >> ಒಮ್ಮೆಯಾದರೂ ನೋಡಿರಬೇಕು. ಯಾವ ಅನಿಲವಾದರೂ ಸರಿ, ಬಾಷ್ಪವಾದರೂ ಸರಿ, ಕಣಗಳಿಂದ ಬೆಳಕು ಯಾವ >> ಮಟ್ಟದಲ್ಲಿ ವಿಸರಣವಾಗುತ್ತದೆ ಎಂಬುದು ಮುಖ್ಯ. ಹೆಚ್ಚು ಕಣಗಳಿದ್ದರೆ ವಿಸರಣವೂ ಹೆಚ್ಚು. >> >> ಇದನ್ನಾಧರಿಸಿ ಅಣುಗಳ ಸಂಖ್ಯೆಯನ್ನು ಲೆಕ್ಕಹಾಕಬಹುದು. ಇಲ್ಲಿ ನಾನು ಸಂಖ್ಯೆ ಎಂದದ್ದು 1, >> 2, 3ಇತ್ಯಾದಿ ಅಲ್ಲ. ಅದಕ್ಕೆ ಬೇರೆಯದೇ ಆದ ಅರ್ಥವುಂಟು. ನಾನು ಕರೆನ್ಸಿ ಕಚೇರಿಯಲ್ಲಿದ್ದಾಗ >> ಅಲ್ಲಿ ರೂಪಾಯಿ ಎಣಿಸಬೇಕಾಗಿತ್ತು, ಅಂದರೆ ಬಿಡಿ ಬಿಡಿ ರೂಪಾಯಿ ಅಲ್ಲ, ರೂಪಾಯಿ ತುಂಬಿದ >> ಚೀಲವನ್ನು ಎಣಿಸುವುದು. ಪ್ರತಿ ಚೀಲದಲ್ಲೂ ಸುಮಾರು ೨,೦೦೦ ರೂಪಾಯಿ ಇರುತ್ತಿತ್ತು– ಅದು >> ನಂಬಿಕೆಯ ಪ್ರಶ್ನೆ. ಚೀಲಗಳ ಗುಣಾಕಾರ ಮಾಡಿದರೆ ಸಾಕು, ಎಷ್ಟು ಕೋಟಿ ರುಪಾಯಿ ಇದೆ >> ಎನ್ನುವುದನ್ನು ಹೇಳಬಹುದಾಗಿತ್ತು. ಈ ಲೆಕ್ಕದಲ್ಲಿ ವಾಯುಗೋಳದ ಅಣುಗಳನ್ನು ಎಣಿಸಬೇಕು– ಒಂದು >> ಅಂದಾಜು ಎನ್ನಿ. >> >> ಇದಕ್ಕಿಂತಲೂ ಮುಖ್ಯ ಉಪಕರಣದ ಮೂಲಕ ವಿಸರಣವನ್ನು ನೀವೂ ಗಮನಿಸಬಹುದು. ಅಣು ಚಿಕ್ಕದೇ >> ದೊಡ್ಡದೇ, ಗುಂಡಾಗಿದೆಯೇ, ಚೌಕವಾಗಿದೆಯೇ ಎಂಬುದೂ ಕಾಣುತ್ತದೆ. ನೀಲಿ ಆಕಾಶವನ್ನು ಅಧ್ಯಯನ >> ಮಾಡುವುದು ಸಂಶೋಧನೆಯ ದೊಡ್ಡ ಕ್ಷೇತ್ರ. ಅದಕ್ಕೆ ಮಿತಿ ಎಂಬುದಿಲ್ಲ. ಈಗಲೂ ಅಲ್ಲಿ >> ಕೆಲಸವಾಗುತ್ತಿದೆ. ಕಣ್ಣು ತೆರೆದಿರಲಿ, ಆಸಕ್ತಿ ಇಂಗದಿರಲಿ, ಸಮಸ್ಯೆಯನ್ನು ಬಿಡಿಸುವ ಬಗ್ಗೆ >> ನಿರಂತರ ಆಸ್ಥೆ ಇರಬೇಕು. >> >> ಇದನ್ನೇ ತರುಣರಿಗೆ ನಾನು ಹೇಳುವುದು. ಅದು ಸರಿ, ಇದರಿಂದ ಏನು ಪ್ರಯೋಜನ? ನಾನು ನಂಬಿರುವ >> ತತ್ತ್ವವನ್ನು ಹೇಳುತ್ತೇನೆ. ಇವೆಲ್ಲದರಿಂದ ಏನು ಪ್ರಯೋಜನ ಎಂಬುದನ್ನು ಮಾತ್ರ ಯಾವಾಗಲೂ >> ಕೇಳಬಾರದು; ಬದಲು ಕಾರ್ಯೋನ್ಮುಖವಾಗುವುದು ಒಳ್ಳೆಯದು. ಏಕೆಂದರೆ ಮನುಷ್ಯ ಸ್ವಭಾವಕ್ಕೆ >> ಸಹಜವಾಗಿ ಬಂದಿರುವ ಎರಡು ಗುಣಗಳೆಂದರೆ ವೀಕ್ಷಣೆ ಮತ್ತು ಚಿಂತನೆ. ಅವನ್ನು ನಾವು >> ಬಳಸಿಕೊಳ್ಳಬೇಕು. ಬಳಸಿದಷ್ಟೂ ಬುದ್ಧಿ ತೀಕ್ಷ್ಣವಾಗುತ್ತದೆ. >> >> ಅದರಿಂದ ಹೊಸತು ಹುಟ್ಟಿ ಕೊನೆಗೆ ಅದು ಮನುಕುಲಕ್ಕೆ ನೆರವಾಗಬಹುದು. ವಿಜ್ಞಾನಕ್ಕೂ >> ಒಳ್ಳೆಯದಾಗಬಹುದು. ವಾಸ್ತವವಾಗಿ ನಿಜವಾದ ವಿಜ್ಞಾನದ ಗುರಿ ಇದೇ. ನಾವು ಬಗೆಹರಿಸಬಲ್ಲ >> ಸಮಸ್ಯೆಗಳು ನಮಗೆ ಎಂದೂ ಸನಿಹದಲ್ಲೇ ಇರುತ್ತವೆ. ಅವು ನಮ್ಮ ಬದುಕಿಗೆ ಸಂಬಂಧಿಸಿದ >> ಸಮಸ್ಯೆಗಳು. ನಮ್ಮ ಸುತ್ತಣ ಜಗತ್ತಿನ ಸಮಸ್ಯೆಗಳೂ ಅವು ಆಗಿರುವುದರಿಂದ ಅವನ್ನು ಅಪ್ರಯೋಜನ >> ಎಂದು ಜರಿಯಲಾಗದು. >> >> ಬಹು ಮುಖ್ಯವಾಗಿ ಮೂಲಭೂತ ಶೋಧನೆ ಮಾಡುವ ವಸ್ತು ಪ್ರಕೃತಿಯಲ್ಲಿ ಅಮೂರ್ತವಾಗಿರಬಹುದು. ಅವೇ >> ಮುಂದೆ ಮನುಷ್ಯನ ಜೀವನವನ್ನೂ ಚಟುವಟಿಕೆಯನ್ನೂ ದೊಡ್ಡದಾಗಿ ಬಾಧಿಸುತ್ತವೆ. ವೈಜ್ಞಾನಿಕ >> ಕೆಲಸಗಳು ಎಂದೂ ಮೌಲ್ಯಯುತವಾಗಿಯೇ ಇರುತ್ತವೆ. ಇದನ್ನು ಆಧುನಿಕ ವಿಜ್ಞಾನ ಚರಿತ್ರೆಯೇ >> ಸಾರುತ್ತದೆ. ವಿಜ್ಞಾನ ನಮ್ಮ ಸುತ್ತಣ ಜಗತ್ತನ್ನು ಬದಲಾಯಿಸಿದೆ. ಯಾವ ನಿಶ್ಚಿತ ಗುರಿಯೂ >> ಇಲ್ಲದೆ ಸಾಗುವುದು ವಿಜ್ಞಾನಿಗಳ ಕೆಲಸದ ಪರಿ ಅಲ್ಲ. ಕೇವಲ ಜ್ಞಾನ ಪಡೆಯಲೆಂದೇ ಕೆಲಸ ಮಾಡುವ >> ಏಕೈಕ ಗುರಿ ಇರುವ ವಿಜ್ಞಾನಿಗಳಿಂದ ಮನುಕುಲಕ್ಕೆ ಎಂದೂ ಉಪಕಾರವೇ ಆಗುತ್ತದೆ. >> >> Hareeshkumar K >> AM(PCM) >> GHS HUSKURU >> MALAVALLI TQ >> MANDYA DT 571475 >> mobile no 9880328224 >> email [email protected] >> >> -- >> 1. If a teacher wants to join STF, visit >> http://karnatakaeducation.org.in/KOER/en/index.php/Become_a_STF_groups_member >> 2. For STF training, visit KOER - >> http://karnatakaeducation.org.in/KOER/en/index.php >> 4. For Ubuntu 14.04 installation, visit >> http://karnatakaeducation.org.in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequently_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
