Superb article sir
Thank you so much sir
On Jan 13, 2016 6:14 PM, "HAREESHKUMAR K huskuru" <[email protected]>
wrote:

>
> http://m.vijaykarnataka.com/edit/columns/Net-nota-by-Sudhindra-Haldodderi-Innovation-science-are-basis-of-long-term-economic-health-V-Ramakrishnan/articleshow/50550760.cms
> *ನೆಟ್‌ ನೋಟ: ವಿವೇಚನೆಯೊಂದಿಗೆ ‘ವಿವೇಕ’ ಬೆರೆತ ಜ್ಞಾನವೇ ವಿಜ್ಞಾನ*
>
> Jan 13, 2016, 04.00 AM IST
>
> Venkatraman-Ramakrishnan
>
> AAA
>
> * ಸುಧೀಂದ್ರ ಹಾಲ್ದೊಡ್ಡೇರಿ
>
> ಬಹುಶಃ ಇಪ್ಪತ್ತು ವರ್ಷಗಳ ಹಿಂದಿನ ಮಾತಿದು. ಇಷ್ಟೆಲ್ಲಾ ಅಗಾಧವಾಗಿ ಇಂಟರ್‌ನೆಟ್ ಅಥವಾ
> ಟೀವಿ ಚಾನೆಲ್‌ಗಳು ನಮ್ಮನ್ನು ಆವರಿಸಿಕೊಂಡಿರಲಿಲ್ಲ. ಬೆಳಗ್ಗೆ ಕಾಫಿಯೊಂದಿಗೆ ಕಣ್ಣು
> ಹಾಯಿಸುತ್ತಿದ್ದ ಪತ್ರಿಕೆಗಳೇ ನಮಗೆ ರೋಚಕ ಹಾಗೂ ಸ್ವಾರಸ್ಯಕರ ಸುದ್ದಿಗಳನ್ನು
> ತಲುಪಿಸುತ್ತಿದ್ದವು. ನಮ್ಮ ಕಣ್ಣಿಗೆ ಬೀಳದಿದ್ದ 'ರಸ ವಾರ್ತೆ'ಗಳನ್ನು ಆಕಾಶವಾಣಿ
> ವಿಶೇಷವಾಗಿ ಬಿತ್ತರಿಸುತ್ತಿತ್ತು. ಹೀಗೊಂದು ದಿನ 'ನಲ್ಲಿ ನೀರು ಕ್ಯಾನ್ಸರ್ ತರಬಹುದೆ?'
> ಎಂಬ ಸುದ್ದಿ ಪ್ರಕಟವಾಯಿತು. ಅಮೆರಿಕದಲ್ಲಿ ಜರುಗಿದ ಸಂಶೋಧನೆಯೊಂದರ ಸುದ್ದಿ ಸಾರಾಂಶ ನಮ್ಮ
> ನ್ಯೂಸ್ ಏಜೆನ್ಸಿಗಳ ಮೂಲಕ ಕನ್ನಡ ಪತ್ರಿಕೆಗಳನ್ನೂ ತಲುಪಿತ್ತು. ಮೂತ್ರಕೋಶ ಹಾಗೂ ಗುದದ್ವಾರ
> ಕ್ಯಾನ್ಸರ್‌ಗಳಿಂದ ಬಳಲುತ್ತಿದ್ದವರಲ್ಲಿ ಅನೇಕರು ತಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳಲು
> ಮಳಿಗೆಗಳಲ್ಲಿ ಲಭ್ಯವಿರುವ ಶುದ್ಧ ಕುಡಿಯುವ ನೀರಿನ ಪೀಪಾಯಿಗಳ ಬದಲು ಕೊಳವೆಗಳ ಮೂಲಕ ಮನೆಗೆ
> ನೀರು ಹರಿದು ಬರುವ ನಳವನ್ನು ಆಶ್ರಯಿಸಿದ್ದರು. ಸಾಮಾನ್ಯವಾಗಿ ನೀರನ್ನು ಶುದ್ಧೀಕರಿಸಲು
> ಎಲ್ಲೆಡೆಯಂತೆ ಅಮೆರಿಕದಲ್ಲೂ ಕ್ಲೋರಿನ್ ಅನ್ನು ಬಳಸುತ್ತಾರೆ. ಈ ವಿಜ್ಞಾನಿಗಳು ತಮ್ಮ
> ಅಧ್ಯಯನದಲ್ಲಿ ಕಂಡುಕೊಂಡ ಹೊಸ ವಿಷಯವೇನೆಂದರೆ ನೀರಿನ ಕೊಳವೆಗಳ ತಿರುವು, ಜೋಡಣಾ ಭಾಗ,
> ಉಬ್ಬು-ತಗ್ಗುಗಳಲ್ಲಿ ಇರಬಹುದಾದ ಜೈವಿಕ ಅಂಶಗಳೊಡನೆ ಕ್ಲೋರಿನ್ ಬೆರೆತು ಕ್ಯಾನ್ಸರ್-ಕಾರಕ
> ರಾಸಾಯನಿಕಗಳನ್ನು ಉತ್ಪಾದಿಸುವ ಸಾಧ್ಯತೆ ಹೆಚ್ಚು. ಇಲ್ಲಿ ಎಷ್ಟು ಮಂದಿ ಈ ಅಧ್ಯಯನದಲ್ಲಿ
> ಭಾಗಿಯಾಗಿದ್ದರು, ನಳದ ನೀರನ್ನೇ ಸೇವಿಸುತ್ತಿದ್ದವರ ದೇಹದಲ್ಲಿ ಮತ್ಯಾವ
> ಕ್ಯಾನ್ಸರ್-ಕಾರಕಗಳು ಪತ್ತೆಯಾಗಿದ್ದವು, ಮತ್ತಿತರ ಅಂಶಗಳು ಪ್ರಕಟವಾದ ಆ ಕನ್ನಡ
> ಸುದ್ದಿಯಲ್ಲಿ ಇರಲಿಲ್ಲ.
>
> ನಳದ ನೀರಿನ ಹಳೆಯ ಸುದ್ದಿ ಇಂದು ನೆನಪಿಗೆ ಬರಲು ಕಾರಣ -ಕಳೆದ ಗುರುವಾರವಷ್ಟೇ
> ಮೈಸೂರಿನಲ್ಲಿ ಮುಕ್ತಾಯಗೊಂಡ ಇಂಡಿಯನ್ ಸೈನ್ಸ್ ಕಾಂಗ್ರೆಸ್. ಈ ಸಂದರ್ಭದಲ್ಲಿ ನೊಬೆಲ್
> ಪುರಸ್ಕತ ವಿಜ್ಞಾನಿ ವೆಂಕಟರಾಮನ್ ರಾಮಕಷ್ಣನ್ ಅವರು ಹೋಮಿಯೋಪತಿ ವೈದ್ಯಪದ್ಧತಿಯ ಕುರಿತು
> ಹೇಳಿದ ಮಾತು ಮಾಧ್ಯಮಗಳಲ್ಲಿ ತಿರು ತಿರುಚಿ ಚರ್ಚೆಯಾಯಿತು. ಹೋಮಿಯೋಪತಿಯನ್ನು ನಳದ ನೀರಿಗೆ
> ಅವರು ಹೋಲಿಸಿದ್ದಾರೆ, ನಳದ ನೀರೇ ಹೋಮಿಯೋಪತಿ ಮದ್ದಿಗಿಂತ ಉತ್ತಮ... ಎಂಬಂತೆ
> ಬಿಂಬಿತವಾಯಿತು. ಅಸಲಿಗೆ, ಅವರು ಹೇಳಿದ್ದೇನೆಂದರೆ ''ಹೋಮಿಯೋಪತಿ ವೈದ್ಯಪದ್ಧತಿಯಲ್ಲಿ
> ಅತ್ಯಂತ ದುರ್ಬಲಗೊಳಿಸಿದ ಆರ್ಸೆನಿಕ್ ವಿಷವನ್ನು ಔಷಧವಾಗಿ ನೀಡಲಾಗುತ್ತದೆ. ಅದನ್ನೆಷ್ಟು
> ದುರ್ಬಲಗೊಳಿಸಲಾಗಿರುತ್ತದೆಂದರೆ ಆರ್ಸೆನಿಕ್ ನ ಒಂದು ಅಣು ಆ ಔಷಧದಲ್ಲಿರಬಹುದು. ನಮ್ಮ
> ನಲ್ಲಿ ನೀರಿನಲ್ಲಿಯೇ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಆರ್ಸೆನಿಕ್ ಅಂಶವಿರುತ್ತದೆ. ರಸಾಯನ
> ವಿಜ್ಞಾನದಲ್ಲಿ ತೊಡಗಿಕೊಂಡವರಲ್ಲಿ ಯಾರೂ ಹೋಮಿಯೋಪತಿಯ ಪರಿಣಾಮಗಳನ್ನು ನಂಬುವುದಿಲ್ಲ''.
>
> ಮೊದಲು ಉಲ್ಲೇಖಿಸಿದ ಸಂಶೋಧನಾ ವರದಿಗೂ ಮತ್ತು ನಮ್ಮ ನೊಬೆಲ್ ವಿಜ್ಞಾನಿಯ ಹೇಳಿಕೆಗೂ
> ಸಾಮ್ಯತೆಗಳಿವೆ. ವಿಜ್ಞಾನ
>
> ಆಧಾರ ಸಹಿತವಾದ ವಿಶ್ವಾಸಾರ್ಹ ಫಲಿತಾಂಶಗಳನ್ನು ನಿರೀಕ್ಷಿಸುತ್ತದೆ. ಜತೆಗೆ, ಬಲವಾಗಿ
> ನಂಬಿದ ಒಂದು ಪದ್ಧತಿಯನ್ನು ನಲ್ಲಿಯ ಮೂಲಕ ಬರುವ ಕುಡಿಯುವ ನೀರು ಆರೋಗ್ಯಕ್ಕೆ ಹಾನಿಕರವಲ್ಲ
> ಅಥವಾ ಆಲೋಪತಿಯ ಮೂಲಕ ಗುಣ ಕಾಣದ ದೀರ್ಘಕಾಲದ ರೋಗರುಜಿನಗಳಿಗೆ ಹೋಮಿಯೋಪತಿಯಲ್ಲಿ
> ಪರಿಹಾರವಿದೆ. ರೋಗವನ್ನು ಬುಡ ಸಹಿತ ಕಿತ್ತೊಗೆಯಬೇಕಾದರೆ, ಕೇವಲ ಕೆಲವೇ ಜನರ ಮೇಲೆ ನಡೆಸಿದ
> ಪ್ರಯೋಗಗಳಾಗಲೀ ಈ ಬಗೆಯ ಘೋಷಣೆಗಳನ್ನು ಮಾಡುವ ಮೊದಲು ವಿವೇಚನೆಯಿಂದ 'ವಿವೇಕ'ವನ್ನು
> ಬಳಸಬೇಕಾಗುತ್ತದೆ.
>
> ನಿನ್ನೆ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವವನ್ನು ಸಂಭ್ರಮದಿಂದ ಆಚರಣೆ
> ಮಾಡಿದ್ದಾಗಿದೆ. ಈ ಹೊತ್ತಿನಲ್ಲಿ ಅವರು ಬೇರೊಂದು ಕಾರಣಕ್ಕೆ ನೆನಪಿಗೆ ಬರುತ್ತಿದ್ದಾರೆ.
> ಬಹುಶಃ ಐವತ್ತು ಅಥವಾ ನೂರು ವರ್ಷಗಳ ಹಿಂದೆ ನಮ್ಮ ಬೆಂಗಳೂರು ಸುಂದರ ನಗರವಾಗಿತ್ತು. ಇನ್ನೂ
> ಹಿಂದೆ ಸ್ವಾಮಿ ವಿವೇಕಾನಂದರು ಬೆಂಗಳೂರಿಗೆ ಬಂದ ಸಮಯದಲ್ಲಿ ಇಡೀ ಬೆಂಗಳೂರೇ
> ಚಂದದೂರಾಗಿತ್ತು. ಇಂದು ಜಗತ್ಪ್ರಸಿದ್ಧವಾಗಿರುವ ಬೆಂಗಳೂರು ಐ.ಟಿ.-ಬಿ.ಟಿ.
> ನಗರವಾಗುವುದಕ್ಕೂ ಮುನ್ನ ದೇಶದ ಬಾಹ್ಯಾಕಾಶ ರಾಜಧಾನಿಯಾಗಿತ್ತು. ಇನ್ನೂ ಸ್ವಲ್ಪ ಹಿಂದಕ್ಕೆ
> ಹೊರಳಿದರೆ ಇದು ದೇಶದ ವಿಮಾನ ನಗರವಾಗಿತ್ತು. ಹಾಗೆಯೇ ತಂತ್ರಜ್ಞಾನ ನಗರವಾಗಿತ್ತು. ಅದಕ್ಕೂ
> ಹಿಂದೆ ವಿಜ್ಞಾನ ನಗರವಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ಬೆಂಗಳೂರು ಉದ್ಯಾನ ನಗರವಾಗಿ ಹಿರಿಮೆ
> ಹೊಂದಿತ್ತು.
>
> ಬೆಂಗಳೂರೆಂಬ ಬ್ರಿಟಿಷರ ಕಂಟೋನ್ಮೆಂಟ್ ಮುಂದೆ ಪ್ರಮುಖ ಔದ್ಯಮಿಕ ಕೇಂದ್ರವಾಗುತ್ತದೆಂಬ
> ಕಲ್ಪನೆ ಯಾರಿಗೂ ಇರಲಿಲ್ಲ. ಆದರೆ ಮೈಸೂರನ್ನು ಮಾದರಿ ಸಂಸ್ಥಾನವನ್ನಾಗಿಸಿ, ಬೆಂಗಳೂರನ್ನು
> ಉನ್ನತ ಸ್ಥಾನಕ್ಕೇರಿಸಬೇಕೆಂಬ ಹಂಬಲ ಆಳರಸರಲ್ಲೂ, ಅವರ ದಿವಾನರಲ್ಲೂ ಇತ್ತು. ಅಂದು ಅವರೆಲ್ಲ
> ಕಂಡ ಕನಸಿನ ಫಲದಿಂದ ಇಂದು ಬೆಂಗಳೂರಿಗೆ ಇನ್ನಿಲ್ಲದ ಗರಿಮೆ ಸಿಕ್ಕಿದೆ. ಬೆಂಗಳೂರಿನ ಕೀರ್ತಿ
> ಜಗದಗಲ ವಿಸ್ತರಿಸುವುದರಲ್ಲಿ ಆ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವುದರಲ್ಲಿ
> ಸ್ವಾಮಿ ವಿವೇಕಾನಂದರ ಪಾತ್ರ ಮಹತ್ತರವಾದದ್ದು. ವಿಶೇಷವಾಗಿ ಇಲ್ಲಿ ಉಲ್ಲೇಖಿಸಬಹುದಾದ ವಿಷಯ
> ಸ್ವಾಮಿ ವಿವೇಕಾನಂದರ ಬೆಂಗಳೂರಿನ ಭೇಟಿ, ಹಾಗೆಯೇ ಅದಕ್ಕೂ ಮುನ್ನ ಅವರು ಜಪಾನಿನಿಂದ
> ಅಮೆರಿಕಕ್ಕೆ ಹಡಗಿನಲ್ಲಿ ಪಯಣಿಸುತ್ತಿದ್ದಾಗ ಅಚಾನಕ್ಕಾಗಿ ಟಾಟಾ ಅವರನ್ನು ಭೇಟಿಯಾದ
> ಸಂದರ್ಭಗಳು. ಕ್ರಿ.ಶ.1893ರ ಈ ಹಡಗು ಪಯಣದಲ್ಲಿ ಟಾಟಾ ಅವರ ಉದ್ದಿಶ್ಯದ ಬಗ್ಗೆ
> ವಿವೇಕಾನಂದರು ವಿಚಾರಿಸುತ್ತಾರೆ. ಉಕ್ಕಿನ ಉದ್ದಿಮೆಯನ್ನು ಭಾರತಕ್ಕೆ ತರುವ ಹಂಬಲವನ್ನು
> ಟಾಟಾ ಅವರು ವಿವೇಕಾನಂದರೊಂದಿಗೆ ಹಂಚಿಕೊಳ್ಳುತ್ತಾರೆ. ವಿವೇಕಾನಂದರ ದೂರದರ್ಶಿತ್ವವನ್ನು
> ಇಲ್ಲಿ ಗಮನಿಸಬೇಕು. 'ನೀವು ಕೇವಲ ಉಕ್ಕಿನ ತಂತ್ರಜ್ಞಾನವನ್ನಷ್ಟೇ ಭಾರತಕ್ಕೆ ತಂದರೆ ಸಾಲದು,
> ಉಕ್ಕು ತಯಾರಿಕೆಯ ಹಿಂದಿನ ವಿಜ್ಞಾನವನ್ನೂ ಭಾರತಕ್ಕೆ ತನ್ನಿ' ಎಂದು ಟಾಟಾ ಅವರನ್ನು
> ಒತ್ತಾಯಿಸುತ್ತಾರೆ. ಇದು ಟಾಟಾ ಅವರಲ್ಲಿ ಚಿಂತನೆಯ ತುಮುಲಗಳನ್ನೆಬ್ಬಿಸುತ್ತವೆ. ಈ ಹಿಂದೆ
> ಟಾಟಾ ಅವರು ಲಂಡನ್ನಿಗೆ ಹೋಗಿದ್ದ ಘಟನೆಯ ನೆನಪು ಮರುಕಳಿಸುತ್ತದೆ. ಉಕ್ಕು ಕಾರ್ಖಾನೆಯ
> ತಂತ್ರಜ್ಞಾನ ವರ್ಗಾವಣೆಯ ಬಗ್ಗೆ ಅಲ್ಲಿನ ಉದ್ದಿಮೆದಾರರನ್ನು ಟಾಟಾ ಅವರು ವಿಚಾರಿಸಿದಾಗ
> ಲೇವಡಿಗೆ ಒಳಗಾಗಿದ್ದ ನೋವು ನೆನಪಿಗೆ ಬರುತ್ತದೆ. 'ಭಾರತೀಯರು ಉಕ್ಕು ತಯಾರಿಸಲು
> ಸಾಧ್ಯವಾದರೆ, ಅದು ಬ್ರಿಟಿಷರು ಹಲ್ಲಿನಿಂದ ಜಗಿಯುವಂತೆ ಇರುತ್ತದೆ, ಬಿಡಿ' ಎಂದಿದ್ದರಂತೆ ಆ
> ಉದ್ಯಮಿಗಳು. ಇದು ಟಾಟಾ ಅವರಲ್ಲಿ ಅದೆಂಥಾ ಛಲ ಹುಟ್ಟಿಸಿತೆಂದರೆ ಅಟ್ಲಾಂಟಿಕ್ ಸಾಗರ ದಾಟಿ,
> ಅಮೆರಿಕ ಮುಟ್ಟಿ, ಉಕ್ಕು ತಯಾರಿಕಾ ತಂತ್ರಜ್ಞಾನವನ್ನು ಭಾರತಕ್ಕೆ ತರುತ್ತಾರೆ. ಆಗಸ್ಟ್ 25,
> 1907ರಂದು ಕಾರ್ಖಾನೆ ಆರಂಭವಾಗುತ್ತದೆ. ಇಂದು ಜಮ್‌ಶೆಟ್‌ಪುರದಲ್ಲಿ ವರ್ಷಕ್ಕೆ ಸುಮಾರು
> ಒಂದು ಕೋಟಿ ಟನ್ ಉಕ್ಕು ತಯಾರಿಸುವ ಟಾಟಾ ಉದ್ದಿಮೆ, ವಿಮಾನದ ಎಂಜಿನ್‌ಗಳಿಗೆ, ಇಳಿಯುವ
> ಗಾಲಿಗಳಿಗೆ, ಅತಿ ತಾಪಮಾನದ ಜೋಡಣೆಗಳಿಗೆ ಅಗತ್ಯವಾದ ವಿಶಿಷ್ಟ ಉಕ್ಕನ್ನು ತಯಾರಿಸುತ್ತಿದೆ,
> ಲೇವಡಿ ಮಾಡಿ ನಕ್ಕ ದೇಶಕ್ಕೂ ಅಂಥ ಉತ್ತಮೋತ್ತಮ ಉಕ್ಕನ್ನು ರಫ್ತು ಮಾಡುತ್ತಿದೆ.
>
> ವಿವೇಕಾನಂದರು ನೀಡಿದ ಸ್ಫೂರ್ತಿಯನ್ನು ಮತ್ತೆ ನೆನೆಸಿಕೊಳ್ಳಬೇಕೆಂದರೆ ಬೆಂಗಳೂರಿನ
> ಮಲ್ಲೇಶ್ವರ-ಯಶವಂತಪುರದತ್ತ ಹೊರಡಬೇಕು. ವಿವೇಕಾನಂದರೇನೋ ಅಂದು ಟಾಟಾ ಅವರನ್ನು ಹಡಗಿನಲ್ಲಿ
> ಚಿಂತನೆಗೆ ಹಚ್ಚಿಬಿಟ್ಟರು. ಅಂದಿನಿಂದ ಟಾಟಾ ಅವರಿಗೆ ಬಹುಶಃ ನಿದ್ದೆ ಹತ್ತಿರಲಾರದು.
> ಭಾರತಕ್ಕೆ ಹಿಂದಿರುಗಿದ ನಂತರ ದಿನಾಂಕ 23ನೇ ನವೆಂಬರ್ 1898ರಲ್ಲಿ ಅವರು
> ವಿವೇಕಾನಂದರಿಗೊಂದು ಪತ್ರ ಬರೆಯುತ್ತಾರೆ. ತಾವು ಭಾರತದಲ್ಲಿ ವಿಜ್ಞಾನ ಸಂಸ್ಥೆಯೊಂದನ್ನು
> ಸ್ಥಾಪಿಸುವ ಕನಸನ್ನು ಆ ಪತ್ರದಲ್ಲಿ ಹಂಚಿಕೊಳ್ಳುತ್ತಾರೆ. ಆ ಸಂಸ್ಥೆಯ ನೇತತ್ವವನ್ನು
> ವಿವೇಕಾನಂದರೇ ವಹಿಸಿಕೊಳ್ಳಬೇಕೆಂದು ಟಾಟಾ ಅವರು ಒತ್ತಾಯಿಸುತ್ತಾರೆ. ಇದಕ್ಕೆ
> ಉತ್ತರವೆಂಬಂತೆ ಬೆಂಗಳೂರಿಗೆ ವಿವೇಕಾನಂದರು ಆಗಮಿಸಿದ ಸಂದರ್ಭದಲ್ಲಿ ಯುವರಾಜ ನಾಲ್ವಡಿ
> ಕೃಷ್ಣರಾಜ ಒಡೆಯರ್ ಹಾಗೂ ಅವರ ತಾಯಿ ಮಹಾರಾಣಿ ವಾಣೀವಿಲಾಸರವರ ಆತಿಥ್ಯದಲ್ಲಿರುತ್ತಾರೆ.
> ಜಮ್‌ಶೇಟ್ಚಿ ಟಾಟಾ ಅವರ ಸಮ್ಮುಖದಲ್ಲಿ ವಿಜ್ಞಾನ ಸಂಶೋಧನಾ ಕೇಂದ್ರದ ಬಗ್ಗೆ ಅಲ್ಲಿ
> ಸಮಾಲೋಚನೆ ನಡೆಯುತ್ತದೆ. ಮೈಸೂರು ಸಂಸ್ಥಾನವು 400 ಎಕರೆ ಜಾಗವನ್ನು ಉಚಿತವಾಗಿ ಕೊಡಲು
> ನಿರ್ಧರಿಸುತ್ತದೆ. ಈ ಪ್ರಸ್ತಾವನೆ ಅನುಮತಿಗೆಂದು 1898ರಲ್ಲಿ ಬ್ರಿಟಿಷರಿಗೆ ಹೋಗುತ್ತದೆ.
> ಏತನ್ಮಧ್ಯೆ ಟಾಟಾ ಅವರು ಹಠಾತ್ತಾಗಿ 1904ರಲ್ಲಿ ವಿಧಿವಶರಾಗುತ್ತಾರೆ. ಕೊನೆಗೆ 'ಭಾರತೀಯ
> ವಿಜ್ಞಾನ ಮಂದಿರ' 1909ರಲ್ಲಿ ಆರಂಭವಾಗುತ್ತದೆ. ಭಾರತದ ಮೊದಲ ಖಾಸಗಿ-ಸರ್ಕಾರ ಭಾಗಿಯಾದ
> ಜಂಟಿ ಯೋಜನೆಯಿದು. ಮುಂದಿನದು ಇತಿಹಾಸ.
>
> ವಿವೇಕಾನಂದರ ನೂರನೆಯ ಜನ್ಮ ದಿನೋತ್ಸವ ವರ್ಷದಲ್ಲೇ (1963) ತಿರುವನಂತಪುರದ ಸಮೀಪದ ಹಳ್ಳಿ
> ತುಂಬಾದಲ್ಲಿ ದೇಶದ ಮೊದಲ ರಾಕೆಟ್ ಉಡ್ಡಯಣೆಯಾಗುತ್ತದೆ. ದೇಶದ ಹೆಮ್ಮೆಯ ವಿಜ್ಞಾನಿ ಅಬ್ದುಲ್
> ಕಲಾಂ ಅವರು ಆ ರಾಕೆಟ್ ಹಾರಾಟದ ಹಿಂದಿನ ಯುವ ಸ್ಫೂರ್ತಿಯಾಗಿರುತ್ತಾರೆ. ಹೋಮಿ ಭಾಭಾ-ವಿಕ್ರಂ
> ಸಾರಾಭಾಯ್-ರಾಜಾರಾಮಣ್ಣ ಅವರ ಮಾರ್ಗದರ್ಶನದಲ್ಲಿ ಭಾರತ ಬಾಹ್ಯಾಕಾಶ ಸಂಶೋಧನಾ ಜಗತ್ತಿಗೆ
> ಅಂಬೆಗಾಲಿಡುತ್ತದೆ. ಐವತ್ತು ವರ್ಷಗಳಲ್ಲಿ ಮಂಗಳಗ್ರಹ ಮುಟ್ಟುವ ತ್ರಿವಿಕ್ರಮ ಹೆಜ್ಜೆಯಾಗಿ
> ಅದು ಬೆಳೆಯುತ್ತದೆ. ಈ ಹನುಮ ಲಂಘನದ ನಡುವೆ ಬೆಂಗಳೂರು ಮುಂಚೂಣಿ
> ವಿಜ್ಞಾನ-ತಂತ್ರಜ್ಞಾನಗಳನ್ನು ಪೊರೆಯುತ್ತದೆ. ಉದ್ದಿಮೆದಾರರನ್ನು ಸೆಳೆಯುತ್ತದೆ. ಈ ಸೆಳೆತ
> ತಿರುಗಣಿ ಮಡುವಾಗಿ ಬೆಂಗಳೂರನ್ನು ಭಾರತದ ವಿಜ್ಞಾನ-ತಂತ್ರಜ್ಞಾನ ರಾಜಧಾನಿಯಾಗಿ
> ನಿಲ್ಲಿಸುತ್ತದೆ. ವಿಮಾನ ಹಾಗೂ ಬಾಹ್ಯಾಕಾಶ ಸಂಶೋಧನೆಗಳಿಗೆ ಬೆಂಗಳೂರು ಪ್ರಧಾನ
> ನೆಲೆಯಾಗುತ್ತದೆ. ಇಂದಿನ ಬೆಂಗಳೂರು ವಿವೇಕಾನಂದರ ಕನಸನ್ನು ಸಾಕಾರಗೊಳಿಸುತ್ತಿದೆ. ಬಹುಶಃ
> ವಿವೇಕಾನಂದರು ಬದುಕಿದ್ದಿದ್ದರೆ ನಮ್ಮೆಲ್ಲರಿಗಿಂತಲೂ ಹೆಚ್ಚು ಪುಳಕಿತಗೊಳ್ಳುತ್ತಿದ್ದರು.
> ಅವರು ನೀಡಿದ ಸ್ಫೂರ್ತಿ ದೇಶಾದ್ಯಂತ ಇಂಥ ಸಹಸ್ರ ಸಂಸ್ಥೆಗಳ ಹುಟ್ಟಿಗೆ ಕಾರಣವಾಗಿದೆ. ಇದು
> ಚಿರಂತನವಾಗಿ ಮುನ್ನಡೆದು ದೇಶವನ್ನು ಮತ್ತಷ್ಟು ಸದೃಢ ಹಾಗೂ ಸಮೃದ್ಧಗೊಳಿಸಲಿದೆ.
>
>
> Hareeshkumar K
> AM(PCM)
> GHS HUSKURU
> MALAVALLI TQ
> MANDYA DT 571475
> mobile no 9880328224
> email [email protected]
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to