Super message to every citizen of the world.
On Nov 22, 2016 8:54 PM, "HAREESHKUMAR K Agasanapura" <[email protected]>
wrote:

> https://www.vishwavani.news/political-devil-dint-leave-science/
>
> *ವಿಜ್ಞಾನವನ್ನೂ ಬಿಟ್ಟಿಲ್ಲ ರಾಜಕೀಯದ ಭೂತ!*
>
>  Tuesday, 22.11.2016     ಶಾಂತಾರಾಮ್‌
> <https://www.vishwavani.news/author/shantaram/>     No Comments
>
> <https://www.vishwavani.news/#facebook>
> <https://www.vishwavani.news/#twitter>
> <https://www.vishwavani.news/#google_gmail>
> <https://www.vishwavani.news/#whatsapp>Share
> <https://www.addtoany.com/share#url=https%3A%2F%2Fwww.vishwavani.news%2Fpolitical-devil-dint-leave-science%2F&title=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%B5%E0%B2%A8%E0%B3%8D%E0%B2%A8%E0%B3%82%20%E0%B2%AC%E0%B2%BF%E0%B2%9F%E0%B3%8D%E0%B2%9F%E0%B2%BF%E0%B2%B2%E0%B3%8D%E0%B2%B2%20%E0%B2%B0%E0%B2%BE%E0%B2%9C%E0%B2%95%E0%B3%80%E0%B2%AF%E0%B2%A6%20%E0%B2%AD%E0%B3%82%E0%B2%A4!>
>
> Posted In : ಸಂಗಮ <https://www.vishwavani.news/category/samputa/sangama/>,
> ಸಾಗರೋತ್ತರ <https://www.vishwavani.news/category/columns/saagarottara/>
>
> ಯಾವ ದೇಶದಲ್ಲಿಯೇ ಆಗಲಿ ಅಥವಾ ಯಾವುದೇ ಸಮಯದಲ್ಲಾಗಲಿ ರಾಜಕಾರಣಿಗಳಿಗೆ ಹಾಗೂ ಜನ
> ಸಾಮಾನ್ಯರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಅಂದರೆ ಅಸಡ್ಡೆ. 21ನೆ ಶತಮಾನದ ಅತ್ಯಂತ
> narrow but highly specialized ಯುಗದಲ್ಲಿ ಒಂದು ವಿಷಯದ ವಿಜ್ಞಾನಿ, ವಿಜ್ಞಾನದ
> ಇನ್ನೊಂದು ವಿಷಯದ ಬಗ್ಗೆ ಅರ್ಥೈಸಿಕೊಳ್ಳುವುದೇ ಕಷ್ಟವಾಗುತ್ತಿರುವಾಗ, ಜನರನ್ನು ಆ ಕುರಿತು
> ಕೇಳಲೇಬಾರದು. ವಿಜ್ಞಾನ ಮತ್ತು ತಂತ್ರಜ್ಞಾನವಿಲ್ಲದ ಜೀವನವನ್ನು ಊಹಿಸುವುದೂ
> ಅಸಾಧ್ಯವಾಗಿದ್ದರೂ ಯಾರಾದರು ಆಧುನಿಕ ತಂತ್ರಜ್ಞಾನವನ್ನು ದೂರಿದರೆ, ನಿಜ ಎಂದು ಜನ
> ತಲೆದೂಗುತ್ತಾರೆ.
>
> ಕಬ್ಬಿಣದ ಕಡಲೆಯಂತಿರುವ ವಿಜ್ಞಾನದ ಬಗ್ಗೆ ತಿಳಿವಳಿಕೆ ಮೂಡಿಸುವಲ್ಲಿ ವಿಜ್ಞಾನಿಗಳು
> ಸೋತಿದ್ದಾರೆ. ಜನರಿಗೆ ವಿಜ್ಞಾನದ ಮಾಹಿತಿಯನ್ನು ತಲುಪಿಸುವುದಕ್ಕೆ ವಿಜ್ಞಾನಿಗಳು
> ಮುಂದಾಗಬೇಕು. ರಾಜಕಾರಣಿಗಳಂತೂ ವಿಜ್ಞಾನದ ಬಗ್ಗೆ ಮಾತನಾಡಿದರೆ ಮುಖ ಕಿವುಚುತ್ತಾರೆ. ಆದರೆ
> ತಂತ್ರಜ್ಞಾನವನ್ನು ವಿರೋಧಿಸಿ ಬೀದಿಗಿಳಿಯುವ ಅಜ್ಞಾನಿಗಳ ಮಾತಿಗೆ ಹೂಗುಡುತ್ತಾರೆ. ಇನ್ನು
> ವಿಜ್ಞಾನಿಗಳಂತೂ ಬೀದಿಗಿಳಿದು ಹೋರಾಡುವುದೇ ಇಲ್ಲ. ಅದು ಅವರ ಜಾಯಮಾನವೂ ಅಲ್ಲ. ಹಾಗಾಗಿ,
> ವಿಜ್ಞಾನಿಗಳ ಮಾತುಗಳನ್ನು ಯಾವ ರಾಜಕಾರಣಿಯೂ ಕೇಳಿಸಿಕೊಳ್ಳುವುದಿಲ್ಲ. ವಿಜ್ಞಾನಿಗಳು ಮತ
> ಭಂಡಾರವೂ ಅಲ್ಲ. ವಿಜ್ಞಾನದ ಏಳಿಗೆಗೆ ಬೇಕಾದ ಹಣ ಮತ್ತು ಪ್ರೋತ್ಸಾಹವನ್ನು ಸರಕಾರವೇ
> ಕೊಡಬೇಕು.
>
> ಭಾರತದಂಥ ದೇಶದಲ್ಲಿ ಶೇ.95ರಿಂದ ಶೇ.98ರಷ್ಟು ವಿಜ್ಞಾನಿಗಳು ಸರಕಾರಿ ಸಂಸ್ಥೆಗಳಲ್ಲೇ ಕೆಲಸ
> ಮಾಡಬೇಕು ಮತ್ತು ಪ್ರತಿಭಟನೆ ನಡೆಸಲೂ ಸರಕಾರದಿಂದ ಅನುಮತಿ ಪಡೆಯಬೇಕು. ವಿಜ್ಞಾನದ
> ವಿರೋಧಿಗಳಿಗೆ ಈ ವಿಚಾರ ಚೆನ್ನಾಗಿಯೇ ಗೊತ್ತು. ಹಾಗಾಗಿ ವಿರೋಧಿ ಗುಂಪುಗಳು ವಿಜ್ಞಾನದ
> ಬಗ್ಗೆ ನಿರಕ್ಷರಕುಕ್ಷಿಗಳಾದ ರಾಜಕಾರಣಿಗಳನ್ನು ತಮ್ಮಿಷ್ಟಕ್ಕೆ ಬಂದಂತೆ ಕುಣಿಸುತ್ತಾರೆ.
> ವಿಜ್ಞಾನದ ಅಜ್ಞಾನ ಯಾವ ಪಂಥದ ರಾಜಕಾರಣಿಗಳನ್ನೂ ಬಿಟ್ಟಿಲ್ಲ. ಬಿಜೆಪಿ, ಕಾಂಗ್ರೆಸ್,
> ಸಮಾಜವಾದಿ ಪಕ್ಷ ಅಥವಾ ಕಮ್ಯುನಿಸ್ಟ್‌ರಾಗಲಿ ಅಣುತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ
> ಬಗೆಗಿರುವ ರಾಜಕೀಯ ಪ್ರೇರಿತ ಅಭಿಪ್ರಾಯಗಳನ್ನು ಏನಾದರೂ ಬದಲಿಸಿಕೊಳ್ಳುವುದಿಲ್ಲ.
> ಸಮಾಜವಾದಿಗಳು ಒಂದು ರೀತಿಯಲ್ಲಿ ಅಘೋಷಿತ ಅಥವಾ ಬಹಿರಂಗ ಕಮ್ಯುನಿಸ್ಟರು. ಯಾವ ರೀತಿ
> ವಾಮಪಂಥೀಯ ಸಂಘಟನೆಗಳು ಕೋಡಂಕುಲಂ ಅಣು ಸ್ಥಾವರವನ್ನು ವಿರೋಧಿಸಿ ಗಬ್ಬೆಬ್ಬಿಸಿದರೆಂದು
> ಗೊತ್ತೇ ಇದೆ. ಕುಲಾಂತರಿ ತಂತ್ರಜ್ಞಾನವನ್ನೂ ಇದೇ ರೀತಿ ವಾಮಪಂಥದ ಕಡೆಗೆ ತಿರುಗಿಸಿ
> ಕುಲಾಂತರಿ ಬೆಳೆಗಳನ್ನು ಬೆಳೆಯುವುದಕ್ಕೆ ಅವಕಾಶವನ್ನೇ ಕೊಟ್ಟಿಲ್ಲ.
>
> ಈಗ ಕೇರಳದ ಕಮ್ಯುನ್ಟ್‌ ಸರಕಾರದ ವಿತ್ತ ಮಂತ್ರಿ, ‘ಕುಲಾಂತರಿ ಅಂದರೆ Monsanto,
> Monsanto ಅಂದರೆ ಕುಲಾಂತರಿ. Monsanto ಕಮ್ಯುನಿಸ್ಟರ ಪರಮ ವೈರಿಯಾದ ಅಮೆರಿಕದ
> ಬಹುರಾಷ್ಟ್ರೀಯ ಕಂಪನಿ. ಹಾಗಾಗಿ ನಮಗೆ ಕುಲಾಂತರಿ ತಂತ್ರಜ್ಞಾನ ಬೇಡವೇ ಬೇಡ’ ಎಂದಿದ್ದಾರೆ!
> ಚೀನಾದವರು ಜೈವಿಕ ತಂತ್ರಜ್ಞಾನದ ದೈತ್ಯ ಕಂಪನಿಯಾಗಿರುವ Syngenta ವನ್ನು ಖರೀದಿಸಿ
> ಕುಲಾಂತರಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಸಚಿವರ ಪ್ರಕಾರ ಇದು ನಮಗೆ
> ಬೇಡವಾದ ವಿಷಯ. ಇದೇ ನೋಡಿ ಈ ಕಮ್ಯುನಿಸ್ಟರ ದ್ವಂದ್ವ ನೀತಿ. ಉಳಿದೆಲ್ಲಾ ರಾಜಕೀಯ
> ವಿಷಯಗಳಿಗೆ ಚೀನಾದ ಕಮ್ಯುನಿಸಂನ ಉತ್ತೇಜನ ಬೇಕು. ವೈಜ್ಞಾನಿಕವಾಗಿ ಮಾತ್ರ ಚೀನಾ
> ಮಾದರಿಯಲ್ಲ! ಬಹುತೇಕ ರಾಷ್ಟ್ರಗಳಲ್ಲಿ ರಾಜಕೀಯದಲ್ಲಿ ವಿಜ್ಞಾನದ ಜ್ಞಾನವುಳ್ಳವರು ಬಹು
> ವಿರಳ. ನಮ್ಮ ಅದೃಷ್ಟವೆಂದರೆ ಪ್ರಧಾನಿ ನೆಹರು ನಂತರ ಪ್ರಧಾನಿ ಮೋದಿಯವರಿಗೆ ವಿಜ್ಞಾನ ಮತ್ತು
> ತಂತ್ರಜ್ಞಾನದ ಬಗ್ಗೆ ಅತ್ಯಂತ ಕಾಳಜಿ ಇದೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ವಿಜ್ಞಾನ
> ಮಂತ್ರಿಯಾಗಿದ್ದ ಡಾ. ಮುರಳಿಮೋಹನ ಜೋಶಿಯವರಿಗಿದ್ದ ವೈಜ್ಞಾನಿಕ ಸಂತುಲನದ ಬಗ್ಗೆ
> ವಿಶಿಷ್ಟವಾಗಿ ಹೇಳಬೇಕಿಲ್ಲ.
>
> ಇವೆಲ್ಲದರ ಮಧ್ಯೆ ವಿಜ್ಞಾನ ವಿರೋಧಿ ಗುಂಪುಗಳು ತಮ್ಮದೇ ಆದ ಒಂದು ಸಮಾನಾಂತರ
> ವಿಜ್ಞಾನವನ್ನು ರೂಪಿಸಿಕೊಂಡು ನೈಜ ವಿಜ್ಞಾನಕ್ಕೆ ಸೆಡ್ಡು ಹೊಡೆಯುತ್ತಿವೆ. ಕಳೆದ ತಿಂಗಳು
> ಕುಲಾಂತರಿ ವಿರೋಧಿಗಳು ದೆಹಲಿಯಲ್ಲಿ ಫ್ರಾನ್ಸನ ಎರಿಕ್ ಸೆರಾಲಿನಿ ಎಂಬ ವಿಜ್ಞಾನಿಯನ್ನು
> ಕರೆಸಿದ್ದರು. ಯಾಕೆ ಕುಲಾಂತರಿ ಸಾಸಿವೆಯನ್ನು ಬೆಳೆಯಬಾರದೆಂದು ಆತ ಹತ್ತಾರು ರಾಜಕಾರಣಿಗಳ
> ಕಿವಿಯೂದಿ ಹೋಗಿದ್ದಾನೆ. ಬಾಸುದೇಬ ಆಚಾರಿಯ ಎಂಬ ಕಮ್ಯುನ್ಟ್‌ ಸಂಸದ ತಾನು ಕೃಷಿ ಕ್ಷೇತ್ರದ
> ಸಂಸದೀಯ ಕಮಿಟಿ ಅಧ್ಯಕ್ಷನಾಗಿದ್ದಾಗ ‘ಗ್ರೀನ್ ಪೀಸ್’ ಎಂಬ ವಿರೋಧಿ ಗುಂಪಿನ ಕೈಯಲ್ಲಿ 400
> ಪೇಜಿನ ವರದಿಯನ್ನು ಬರೆಸಿ ತನ್ನ ಕಮಿಟಿಯ 30 ಸಂಸದರಿಂದ ಸಹಿ ಹಾಕಿಸಿ ಸಂಸತ್ತಿಗೆ
> ಸಲ್ಲಿಸಿಯೇ ಬಿಟ್ಟ. ಸಂಸದ ಮಹಾಶಯರು ಆ ವರದಿಯನ್ನು ಓದದೆಯೇ ಸಹಿ ಹಾಕಿದ್ದನ್ನು ಸ್ವತಃ
> ಒಪ್ಪಿಕೊಂಡಿದ್ದಾರೆ. ಅವರೆಲ್ಲರ ಪ್ರಕಾರ, ವಿಜ್ಞಾನದ ವರದಿಯನ್ನು ಓದಿದರೆ ತಲೆ ಚಿಟ್ಟು
> ಹಿಡಿಯುತ್ತದೆ. ಕಮಿಟಿಯ ಅಧ್ಯಕ್ಷರು ಏನು ಹೇಳುತ್ತಾರೋ ಅದಕ್ಕೆ ಕಣ್ಣು ಮುಚ್ಚಿಕೊಂಡು ಸಹಿ
> ಹಾಕುತ್ತಾರೆ. ಹಾಗಾಗಿ ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಅನಾಹುತಗಳು ನಡೆಯುತ್ತವೆ.
>
> ವಿರೋಧಿಗಳು ಹೇಳುವುದೇನೆಂದರೆ, ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳಲ್ಲಿ ಏನೇ ನಿರ್ಧಾರ
> ತೆಗೆದುಕೊಳ್ಳಬೇಕಾದರೂ ಜನಪ್ರತಿನಿಧಿಗಳಿಂದ ಒಮ್ಮತ ಪಡೆದು ತೆಗೆದುಕೊಳ್ಳಬೇಕು. ವಿಜ್ಞಾನಿಗಳ
> ಸಲಹೆಯನ್ನು ಅಗತ್ಯವಿದ್ದರಷ್ಟೇ ತೆಗೆದುಕೊಂಡರೆ ಸಾಕು. ಅದರಲ್ಲೂ, ರಾಜಕಾರಣಿಗಳು ತಮಗೆ
> ಬೇಕಾದ (ವಿರೋಧಿಗಳಿಗೆ ಬೇಕಾದ) ವಿಜ್ಞಾನಿಗಳಿಂದ ಮಾತ್ರ ಸಲಹೆ ಪಡೆಯುತ್ತಾರೆ.
>
> ಆದರೆ ಜನರ ಅಧಿಕಮತಗಳಿಂದ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ನಿರ್ಧಾರ
> ತೆಗೆದುಕೊಳ್ಳುವುದು ಸಾಧುವಲ್ಲ. ವಿಜ್ಞಾನಿಗಳಿಂದ ಅಭಿಪ್ರಾಯ ಪಡೆದು ದೇಶದ ಒಳಿತನ್ನು ಮತ್ತು
> ಸಾಧಕ-ಬಾಧಕಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈ ವಿಷಯದಲ್ಲಿ ಡಾ.
> ಮನಮೋಹನ್ ಸಿಂಗ್ ಸರಕಾರ ಕೂಡಂಕುಲಂ ಅಣು ಸ್ಥಾವರದ ಬಗ್ಗೆ ಖಚಿತವಾದ ನಿರ್ಧಾರವನ್ನು
> ತೆಗೆದುಕೊಂಡಿತು. ಅದೇ ರೀತಿ ಡಾ. ಸಿಂಗ್ ಕುಲಾಂತರಿ ಬಗ್ಗೆ ಸಾಕಷ್ಟು ಬಾರಿ ಜೈರಾಮ್
> ರಮೇಶ್‌ಗೆ ತಿಳಿವಳಿಕೆ ನೀಡಿದರೂ ಆ ಮನುಷ್ಯ ಪರಿಸರವಾದಿಗಳನ್ನು ಮತ್ತು ಸೋನಿಯಾ ಗಾಂಧಿಯನ್ನು
> ಮೆಚ್ಚಿಸಲು ತನ್ನ ನಿಲುವನ್ನು ಬದಲಿಸಲೇ ಇಲ್ಲ.
>
> ಇದಕ್ಕೆಲ್ಲಾ ಮುಖ್ಯ ಕಾರಣ NAC ಎಂಬ ಸೂಪರ್ ಕ್ಯಾಬಿನೆಟ್ ನಡೆಸುತ್ತಿದ್ದ ಸೋನಿಯಾ ಗಾಂಧಿ.
> ಆಕೆಯನ್ನು ಓಲೈಸುವುದಕ್ಕೋಸ್ಕರ ಜೈರಾಮ್ ರಮೇಶ್ ಮತ್ತು ಜಯಂತಿ ನಟರಾಜನ್ ಎಂಬ ಗೋಸುಂಬೆ
> ರಾಜಕಾರಣಿಗಳು ಕುಲಾಂತರಿಯ ಬಗ್ಗೆ ತಮ್ಮ ನಿರ್ಧಾರವನ್ನು ಬದಲಿಸಕೊಳ್ಳಲೇ ಇಲ್ಲ. ದೆಹಲಿಯಲ್ಲಿ
> ರಾಜಕಾರಣಿಯಾಗಬೇಕಿದ್ದರೆ ತನ್ನ ಪಾರ್ಟಿಯ ಅಧಿನಾಯಕಿಯನ್ನು ಒಲಿಸಿಕೊಳ್ಳಬೇಕು. ವೈಜ್ಞಾನಿಕ
> ಅಭಿಪ್ರಾಯವೇನೇ ಇದ್ದರೂ ಅಧಿನಾಯಕಿಯ ಗುಲಾಮನಾಗಲೇಬೇಕು. ಈ ರೀತಿಯ ರಾಜಕೀಯದಿಂದ ದೇಶಕ್ಕೆ
> ನಷ್ಟವೇ ಹೊರತು ಇನ್ಯಾರಿಗೂ ಅಲ್ಲ.
>
> ಮೋದಿಯವರಿಗೆ ನಿಜವಾಗಿಯೂ ವಿಜ್ಞಾನ, ತಂತ್ರಜ್ಞಾನದ ಮೇಲೆ ಆಸಕ್ತಿಯಿದೆ. ಅಣು
> ಸ್ಥಾವರಗಳನ್ನು ಸ್ಥಾಪಿಸಲು ಅಮೆರಿಕ, ಫ್ರಾನ್ಸ್ ಮತ್ತು ಜಪಾನ್‌ಗಳೊಂದಿಗೆ ಒಪ್ಪಂದ
> ಮಾಡಲಾಗಿದೆ. ಆದರೆ ಇನ್ನೂ ಕೆಲಸಗಳು ಆರಂಭವಾಗಿಲ್ಲ. ಕುಲಾಂತರಿ ಬಗ್ಗೆ ಮೋದಿಯವರಿಗೂ ಮತ್ತು
> ಪ್ರಕಾಶ್ ಜಾವೇಡ್ಕರ್‌ಗೂ ಸದಭಿಪ್ರಾಯವಿತ್ತು, ಆದರೂ ಅದಕ್ಕೆ ಅನುಮತಿ ಕೊಡಲಾಗಲಿಲ್ಲ. ಸದರಿ
> ಪರಿಸರ ಮಂತ್ರಿಗಳು ಕಮಿಟಿಗಳ ಮೇಲೆ ಕಮಿಟಿಗಳನ್ನು ಮಾಡಿ ಕಾಲ ತಳ್ಳುತ್ತಿದ್ದಾರೆ. ಬಿಜೆಪಿಗೆ
> ಇರುವ ದೊಡ್ಡ ಅಡಚಣೆ ಅಂದರೆ ಆರ್‌ಎಸ್‌ಎಸ್, ಪಾರ್ಟಿಗೆ ಹತ್ತಿರವಿರುವ ಭಾರತೀಯ ಕಿಸಾನ್ ಸಂಘ
> ಮತ್ತು ಸ್ವದೇಶಿ ಜಾಗರಣ ಮಂಚ್. ಈ ಸಂಘಟನೆಗಳಿಗೆ ಯಾರು ತಲೆ ಕೆಡಿಸಿದರೋ ಗೊತ್ತಿಲ್ಲ,
> ಅವುಗಳು ಕುಲಾಂತರಿ ತಂತ್ರಜ್ಞಾನವನ್ನು ಬಲವಾಗಿ ವಿರೋಧಿಸುತ್ತಿವೆ.
>
> ಇವಕ್ಕೆ ಎಲ್ಲ ತಂತ್ರಜ್ಞಾನಗಳೂ ಸ್ವದೇಶಿಯಾಗಿರಬೇಕೆಂಬ ಹಠ. ಬಿ.ಟಿ ಬದನೆ, ಕುಲಾಂತರಿ
> ಸಾಸಿವೆ ಭಾರತದಲ್ಲೇ ತಯಾರಾದವು ಎಂಬ ಕನಿಷ್ಠ ಜ್ಞಾನವೂ ಇದ್ದಂತಿಲ್ಲ. ಆದರೆ ವಿರೋಧಿಗಳ
> ಗುಂಪು ಈ ಎರಡು ಕುಲಾಂತರಿ ಸಸ್ಯಗಳು ನಮ್ಮವೇ ಆದರೂ ಅವುಗಳ ವೈಜ್ಞಾನಿಕ ತಿಳಿವಳಿಕೆ
> ವಿದೇಶದಿಂದ ಬಂದದ್ದು ಎಂದು ಕಿವಿ ಊದಿವೆ. ಈ ದಡ್ಡತನದಿಂದ ನಮ್ಮ ರೈತರಿಗೆ ತಾನೇ ನಷ್ಟ. ರೈತ
> ಸಂಘದ ನಾಯಕರೂ ಈ ಕುಲಾಂತರಿ ಬೀಜವನ್ನು ವಿರೋಧಿಸುವ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.
> ನಿರಕ್ಷರಕುಕ್ಷಿ ರಾಜಕಾರಣಿಗಳಿಗೂ, ಈ ರೈತ ನಾಯಕರಿಗೂ ಯಾವುದೇ ವ್ಯತ್ಯಾಸವಿಲ್ಲ.
>
> ಇನ್ನು ಅಮೆರಿಕದ ರಾಜಕಾರಣಿಗಳನ್ನು ನೋಡಿದರೆ, ರಿಪಬ್ಲಿಕನ್ ಪಾರ್ಟಿಗೆ ಸೇರಿದ
> ರಾಜಕಾರಣಿಗಳೆಲ್ಲ ಬೈಬಲ್ ಹಿಡಿದು ಓಡಾಡುವವರು. ಈ ಜಗತ್ತು ಏಳು ಸಾವಿರ ವರ್ಷಗಳ ಹಿಂದೆ
> ನಿರ್ಮಾಣವಾದದ್ದೆಂದು ಅವರ ನಂಬಿಕೆ. ಸಕಲವನ್ನೂ ದೇವರೇ ನಿರ್ಮಿಸಿದ್ದಾನೆ ಎಂದು ನಂಬಿದ ಮೇಲೆ
> ಡಾರ್ವಿನ್‌ನ ಜೀವ ವಿಕಾಸಕ್ಕೆಲ್ಲಿದೆ ಬೆಲೆ? ಪ್ರೆಸಿಡೆಂಟ್ ಬುಶ್ ಕಾಲದಲ್ಲಿ STEM CELL
> ಬಗ್ಗೆ ಸಂಶೋಧನೆ ಮಾಡಬಾರದೆಂದು ಸುಗ್ರೀವಾಜ್ಞೆ ಹೊರಡಿಸಿದ್ದ. ಒಬಾಮ ಅಧಿಕಾರಕ್ಕೆ ಬಂದ ಮೇಲೆ
> ಮಾಡಿದ ಮೊದಲ ಕೆಲಸವೆಂದರೆ ಆ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಿದ್ದು. ಈ ರಿಪಬ್ಲಿಕನ್
> ದಡ್ಡ ರಾಜಕಾರಣಿಗಳು ಜಗತ್ತಿನಲ್ಲೇ ಎಲ್ಲರೂ ಒಪ್ಪಿಕೊಂಡ ವಿಶ್ವ ಸುಕ್ಹೋಷ್ಣವಾದದಲ್ಲೂ
> ನಂಬಿಕೆಯಿಲ್ಲ. ಡೊನಾಲ್ಡ್ ಟ್ರಂಪ್ ಸಹ ಅದನ್ನು ಒಪ್ಪುವುದಿಲ್ಲ. ಕಳೆದ ವಾರ ಚೀನಾ CRISPR
> ತಂತ್ರಜ್ಞಾನವನ್ನು ಮಾನವ ಜೀವಕೋಶಗಳ ಮೇಲೆ ಪ್ರಯೋಗ ಮಾಡೇಬಿಟ್ಟರು. ಈ ತಂತ್ರಜ್ಞಾನದಲ್ಲಿ
> ಚೀನಾ ಖಂಡಿತವಾಗಿಯೂ ಅಮೆರಿಕವನ್ನು ಮೀರಿ ಬೆಳೆಯುವುದರಲ್ಲಿ ಸಂದೇಹವೇ ಇಲ್ಲ.
>
> ಕರ್ನಾಟಕದಲ್ಲೂ ಯಾವುದೇ ಪಕ್ಷದ ಸರಕಾರವಿರಲಿ, ವಿಜ್ಞಾನಿಗಳಿಗೆ ಕೇರ್ ಮಾಡಿದ್ದೆ ಇಲ್ಲ.
> ಎಲ್ಲ ಪಕ್ಷಗಳ ತಲೆ ಕೆಡಿಸುವುದು ಪರಿಸರವಾದಿಗಳು ಮತ್ತು ರೈತ ನಾಯಕರು. ಪ್ರಾಮಾಣಿಕವಾಗಿ
> ವಿಜ್ಞಾನವನ್ನು ಅಭ್ಯಸಿಸಿ ಅದರಿಂದ ಯಾವ ರೀತಿ ಅಭಿವೃದ್ಧಿ ಹೊಂದಬಹುದು ಎಂದು ಯೋಚಿಸುವ
> ಒಬ್ಬನೇ ಒಬ್ಬ ಪ್ರಜ್ಞಾವಂತ ರಾಜಕಾರಣಿಯೂ ನಮ್ಮಲ್ಲಿಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಡೆಂಘೀ
> ಮತ್ತು ಚಿಕೂನ್‌ಗುನ್ಯ ಪ್ರಕರಣಗಳು ದಾಖಲಾಗಿವೆ. ಈ ರೋಗ ಹರಡುವ ಸೊಳ್ಳೆಗಳ ನಿರ್ಮೂಲನಕ್ಕೆ
> ಒಂದು ಕುಲಾಂತರಿ ಗಂಡು ಬಂಜೆ ಸೊಳ್ಳೆ ತಯಾರಾಗಿದೆ. ಈ ಕುಲಾಂತರಿ ಸೊಳ್ಳೆ, ಮಲೇರಿಯ ಮತ್ತು
> ಝೀಕಾ ಹರಡುವ ಸೊಳ್ಳೆಗಳನ್ನು ನಿರ್ಮೂಲನೆ ಮಾಡಿರುವ ಅಧಿಕೃತ ಮಾಹಿತಿ ಇದೆ. ಆದರೆ ಅದಕ್ಕೆ
> ಭಾರತ ಅನುಮತಿ ಕೊಟ್ಟಿಲ್ಲ. ಅದರ ಬಗ್ಗೆ ರಾಜ್ಯದ ಯಾವ ರಾಜಕಾರಣಿಗೂ ಮಾಹಿತಿಯಿಲ್ಲ.
> ಗೊತ್ತಿದ್ದರೆ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಸಾಂಕ್ರಾಮಿಕ ರೋಗಗಳನ್ನು
> ನಿವಾರಿಸಬಹುದು. ಆದರೆ ಕೇಳುವವರಾರು?
>
> ಒಂದು ಮಾತಂತೂ ನಿಜ. ಎಲ್ಲಿಯವರೆಗೆ ನಮ್ಮ ರಾಜಕಾರಣಿಗಳು ವಿಜ್ಞಾನವನ್ನು
> ಅರಿತುಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ದೇಶ ಪ್ರಗತಿ ಸಾಧಿಸಲಾರದು. ವಿಜ್ಞಾನ ಮತ್ತು
> ತಂತ್ರಜ್ಞಾನದಲ್ಲಿ ರಾಜಕೀಯ ಸುತರಾಂ ಸಲ್ಲ.
>
> *ಡಾ. ಶಾಂತು ಶಾಂತಾರಾಮ್, ಮೇರಿಲ್ಯಾಂಡ್ ವಿವಿ*
>
> Hareeshkumar K
> GHS Huskuru
> Malavalli TQ
> Mandya Dt
> 9880328224
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to