ತುಂಬಾ ಮನಕ್ಕೆ ಮುಟ್ಟುವ ಮಾತು ಸರ್ ಅದು "ಅನ್ನ ದೇವರ ಮುಂದೆ ಅನ್ಯ ದೇವರು ಉಂಟೆ" ಅನ್ನುವ ಹಾಗೆ ನಮ್ಮೆಲ್ಲರಿಗೂ ಅನ್ನ ನೀಡುತ್ತಿರುವ "ಮಕ್ಕಳೇ ನಮ್ಮಪಾಲಿನ ದೇವರು", ಆ ದೇವರಿಗೆ ಮೋಸಮಾಡಿದರೆ ನಮ್ಮ ಕರ್ತವ್ಯಕ್ಕೆ ದ್ರೋಹ ಮಾಡಿದ ಹಾಗೆ ಎಂದಿಗೂ ಅದಕ್ಕೆ ಕ್ಷಮೆಇಲ್ಲ. On Mar 21, 2016 3:23 PM, "Basavaraja Naika H.D." < [email protected]> wrote:
> ಒಬ್ಬ ಶಿಕ್ಷಕಿಯ ಮನದಾಳದ. ಮಾತು ನನ್ನನ್ನು ಬಡಿದೆಬ್ಬಿಸಿತು.ಅ ಮಾತು ಶಿಕ್ಷಕರ > ನಿದ್ದೆಗೆಡಿಸಬೇಕು > ************************** > ಹೋದ ವರ್ಷ ಇರಬೇಕೆನ್ನಿಸುತ್ತದೆ.ರಾಯಚೂರು ತಾಲೂಕಿನ ಬಿ.ಅರ್.ಸಿ ಕೇಂದ್ರದಲ್ಲಿ ನಲಿ ಕಲಿ > ತರಬೇತಿ ನಡೆಯುತ್ತಿತ್ತು.ನಮ್ಮ ಡಯಟ್ ಅವರಣದಲ್ಲಿಯೆ ಇರುವ ಬಿ.ಅರ್.ಸಿ ಕೇಂದ್ರ.ಬಿ.ಅರ್.ಪಿ > ಮಿತ್ರ ಅಹ್ಮದ್ ನನ್ನನ್ನು ತರಬೇತಿ ನಡೆಯುತ್ತಿದೆ ಬನ್ನಿ ಎಂದು ಕರೆಯಲು ಬಂದರು.ತರಬೇತಿಗಳು > ನಡೆಯುವಾಗ ನನ್ನನ್ನು ಕರೆದರೆ ಬಹಳ ಖುಷಿಯಿಂದ ನಾನಲ್ಲಿಗೆ ಹೋಗಬಯಸುತ್ತೇನೆ.ಅದರೆ > ಕರೆಯುವವರು ಮಾತ್ರ ಅತ್ಯಲ್ಪ.ಕಾರಣ ಗೊತ್ತಿಲ್ಲ.ಕಂಡುಕೊಳ್ಳಲು ಇಷ್ಟವಿದ್ದರೂ > ಕಂಡುಕೊಳ್ಳುವುದಿಲ್ಲ.ಬಿ.ಅರ್.ಸಿ ಕೇಂದ್ರಕ್ಕೆ ಹೋದೆ.ನಲಿ ಕಲಿ ಚಪ್ಪಾಳೆಯೊಂದಿಗೆ ಭವ್ಯ > ಸ್ವಾಗತ ಸಿಕ್ಕಿತು.ಅಹ್ಮದ್ ಸಾಬ್ ಸ್ವಾಗತಿಸಿ ಈಗ ಪ್ರಾಚಾರ್ಯರು ಮಾತನಾಡುತ್ತಾರೆ ಎಂದು > ಎಮ್ಮೆಯನ್ನು ನೀರಿಗಿಳಿಸುವ ಥರ ನನ್ನನ್ನು ಮಾತನಾಡಲು ಗ್ರೀನ್ ಸಿಗ್ನಲ್ ಕೊಟ್ಟ. ಈ ಬಾರಿ > ನಾನು ನೀರಿಗಿಳಿಯಲಿಲ್ಲ.ನಾನು ಮಾತನಾಡುವದಿಲ್ಲ ನಿಮ್ಮೆಲ್ಲರ ಜೊತೆ ಸಂವಾದ > ಮಾಡುತ್ತೇನೆಂದೆ.ಮಾತಿಗೆ ಪ್ರಾರಂಭಿಸಿದೆ.ತರಬೇತಿಗೆ ಬಂದಿರುವವರು ಬಹಳಷ್ಟು ಜನ ಮಹಿಳೆಯರು. > ಸಮಸ್ಯೆಗಳನ್ನು ಹೇಳಲು ಶುರು ಮಾಡಿದರು.ಸಾರ್,ನಲಿಕಲಿ, ಕೆಳಗೆ ಕೂಡಬೇಕು.ಮಂಡಿ ನೋವು ಕೂಡಲು > ಅಗಲ್ಲ.ಕೂತರೆ ಏಳಲು ಅಗಲ್ಲ ಎಂದರು ಓರ್ವ ಶಿಕ್ಷಕಿ.ಮಂಡಿ ನೋವುಗಳಿರುವ ಶಿಕ್ಷಕಿಯರ ಒಕ್ಕೂಟ > ಇದಕ್ಕೆ ದನಿಗೂಡಿಸಿದರು.ಸಾರ್,ನಲಿ ಕಲಿ ಪ್ರಾರಂಭವಾದಾಗಿನಿಂದ ನಾವೇ ಹ್ಯಾಂಡಲ್ ಮಾಡ್ತೀವಿ > ಬೇರೆಯವರು ಇದನ್ನು ಮಾಡಬಾರದಾ ಸಾರ್.ನಲಿ ಕಲಿ ಶಿಕ್ಷಕರೆಂದರೆ ಶಾಲೆಯ ಇತರೆ ಶಿಕ್ಷಕರು ನಾವು > ಸುಮಾರು ಅನ್ನೋ ಥರ ನೋಡ್ತಾರೆ ಸಾರ್..ಎಂದೊಬ್ಬ ಶಿಕ್ಷಕಿ ಎದ್ದು ನಿಂತು > ಹೇಳಿದಳು..ಅದಕ್ಕೊಂದಿಷ್ಟು ಜನ ದನಿಗೂಡಿಸಿದರು.ನಮಗೂ ಬೇರೆ ವಿಷಯಗಳನ್ನು ಬೋಧಿಸುವಾಸೆ, > ಹೆಚ್ಚಿನ ತರಗತಿಗಳಿಗೆ ಪಾಠ ಮಾಡಲು ನಮಗೆ ಅವಕಾಶ ಯಾಕೆ ಕೊಡಬಾರದು. ನಾವೇನು ನಲಿ ಕಲಿ > ಶಿಕ್ಷಕರೆಂದು ನೇಮಕಗೊಂಡಿದ್ದೀವಾ? ಮತ್ತೊಬ್ಬರ ಅಭಿಪ್ರಾಯ ಅದಕ್ಕೆ ದನಿಗೂಡಿಸಿದ ಹಲವಾರು > ಶಿಕ್ಚಕಿಯರು ರೊಟೇಷನ್ ಸಿಸ್ಟಮ್ ಮಾಡಿ ಸಾರ್ ಪ್ಲೀಜ್ ..ಇವೆಲ್ಲ ಸಂಭಾಷಣೆಯ ತುಣುಕುಗಳು. > ನಮ್ಮ ಅಹಂನ ಭದ್ರಕೋಟೆಯಿಂದ ಕೆಳಗಿಳಿದು ಶಿಕ್ಷಕರ ಹತ್ತಿರ ಹೀಗೆಲ್ಲಾ ಮಾತನಾಡುವುದಿದೆಯಲ್ಲ > ಅದಕ್ಕಿಂತ ಖುಷಿ ಇನ್ಯಾವುದರಲ್ಲಿ ಇಲ್ಲ.ಕುಟುಂಬದ ಹಿರಿಯನ ಜೊತೆ ಪ್ರೀತಿಯಿಂದ ಹಕ್ಕು > ಮಂಡಿಸುವ ಥರ ಪ್ರೀತಿಯಿಂದ ಎಲ್ಲ ಸಮಸ್ಯೆಗಳನ್ನು, ಸಾಧನೆಗಳನ್ನು ಹೇಳುಕೊಂಡು > ಹಗುರವಾಗುತ್ತಾರೆ.ನಮಗೆ ತನಗರಿವಿಲ್ಲದಂತೆಯೇ ಹತ್ತಿರವಾಗಿಬಿಡುತ್ತಾರೆ.ಕೆಲವರು > ಸಮಸ್ಯೆಗಳನ್ನು ಹೇಳುತ್ತಾ ಕಣ್ಣೀರಿಟ್ಟಿದ್ದೂ ಸಹ ಉಂಟು.ಅವರೆಲ್ಲರೂ ನಿಜಕ್ಕೂ ಕಾಳಜಿ > ಇರುವವರು. ಹೃದಯವಂತರು.ನಮ್ಮ ಅಧಿಕಾರಿ ವರ್ಗದ ಅಹಂ ಇಳಿದಾಗ ಮಾತ್ರ ನಾವು ಸುಲಭವಾಗಿ > ಶಿಕ್ಷಕರ ಮನದಾಳಕ್ಕೆ ಇಳಿಯುತ್ತೇವೆ.ಅವರಿಗೆಲ್ಲ ಸಮಾಧಾನ ಪಡಿಸಿದರೆ.ಅವರ ಕಾರ್ಯವನ್ನು > ಪ್ರಶಂಸಿಸಿದೆ.ಅವರಿಗಾದ ಹರ್ಷ ಅಷ್ಟಿಷ್ಟಲ್ಲ. ಇಲ್ಲದಿದ್ದ ಉತ್ಸಾಹ ಎಲ್ಲಿಂದಲೋ ಬಂದು > ಸೇರಿಬಿಟ್ಟಿತು.ಅಗ ಓರ್ವ ಶಿಕ್ಷಕಿ ಎದ್ದು ನಿಂತು "ಸಾರ್, ನಾನು ಬಹಳ ಸಂತಸದಿಂದ,ಕಳಕಳಿಯಿಂದ > ಕಲಿಸುತ್ತೇನೆ ಸಾರ್.ನಮಗೆ ಅನ್ನ ಹಾಕುವ ಮಕ್ಕಳು ಈ ಶಾಲೆಯ ಮಕ್ಕಳು.ಅವರಿಂದಲೇ ಬರುವ > ಸಂಬಳ..ಅದರಿಂದಲೇ ನಮಗೆಲ್ಲ ಅನ್ನ.ಅವರು ನಮ್ಮ ಮಾಲೀಕರು ಸಾರ್.ನಮ್ಮ ಹೊಟ್ಟೆಯಲ್ಲಿ ಹುಟ್ಟಿದ > ಮಕ್ಕಳು ದೊಡ್ಡವರಾಗಿ ನಾಳಿನ ದಿನ ಅನ್ನ ಹಾಕುತ್ತಾರೋ ಇಲ್ಲವೋ ಗೊತ್ತಲ್ಲ.ಅದರೆ ಈ ಪುಟ್ಟ > ಮಕ್ಕಳು ಈಗಿನಿಂದಲೇ ನಮಗೆ ಅನ್ನ ಹಾಕುತ್ತಿವೆ.ಇದರ ಋಣ ನಾವು ತೀರಿಸಲೇ ಬೇಕಲ್ಲ > ಸಾರ್"ಎಂದಳು.ಅ ಮಹಾತಾಯಿಯ ಕಂಗಳು ಮಾತನಾಡುವಾಗ ಒದ್ದೆಯಾಗಿದ್ದವು.ನನಗರಿವಿಲ್ಲದಂತೆ ನನ್ನ > ಗಂಟಲಿನ ನರಗಳು ಉಬ್ಬಿಬಂದವು.ನನ್ನ ಕಂಗಳು ಹನಿಗೂಡಲಾರಂಭಿಸಿದವು.ಅಕೆಯ ಮಾತುಗಳಿಗೆ ಸಭೆ > ದಿಗ್ಮೂಡಗೊಂಡಿತು.ಸಭೆ ನಿಶ್ಯಬ್ದವಾಯಿತು.ಅಕೆಗೆ ಮಕ್ಕಳ ಬಗ್ಗೆ ಇರುವ ದೊಡ್ಡ > ಭಾವನೆ,ಪವಿತ್ರಭಾವನೆ,ಅರ್ಪಣಾ ಮನೋಭಾವನೆ,ಋಣ ಸಂದಾಯ..ಅಬ್ಬಬ್ಬಾ...ಏನೆಂದು ಬಣ್ಣಿಸಲಿ ಬಣ್ಣ > ಹಚ್ಚದಿರುವ ಅ ಸಹಜತೆಯ ಮಗುವಿನಂತಹ ಮನವ.ಅ ತಾಯಿಯ ಹೆಸರು ಕೇಳಲಿಲ್ಲ ನಾನು.ಅಕೆಯನ್ನು > ನಿರ್ದಿಷ್ಟಗೊಳಿಸಬಾರದೆಂದು.ಅದು ಇಡೀ ಸಭೆಯ ದನಿಯೆಂದು ಭಾವಿಸಿ ಅಕೆಯ ಕಳಕಳಿಗೆ ಮನಸಾರೆ > ನನ್ನ ಮನದಾಳದ ಮಾತುಗಳಿಂದ ಅಭಿನಂದಿಸಿದೆ. > ಅಧಿಕಾರಿಗಳಾದ ನಮಗೆಷ್ಟು ಜನರಿಗೆ ಈ ನಿಯತ್ತಿದೆ? ಜವಾಬ್ದಾರಿ ಇದೆ? ನಮ್ಮ ಕೆಲಸದ ಬಗ್ಗೆ > ನಮಗೆಷ್ಟು ಕಳಕಳಿ ಇದೆ ಎನ್ನುವುದನ್ನು ನಾವು ಮನಮುಟ್ಟಿ ನೋಡಿಕೊಳ್ಳಬೇಕಿದೆ. > ಈ ಶಿಕ್ಷಕಿಗಿರುವ ಕಳಕಳಿ ನಮಗೆಲ್ಲ ಬರಬೇಕು.ಶಾಲೆಗೆ ಬರುವ ,ನಮಗೆ ಅನ್ನವಿಕ್ಕುವ ನಮ್ಮ > ಪುಟ್ಟ ಧಣಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು.ಅವರ ಬಗ್ಗೆ ಕಳಕಳಿ,ಜವಾಬ್ದಾರಿ,ಕೆಲಸದ > ಬಗ್ಗೆ ವಿಧೇಯತೆ ನಮಗಿರಬೇಕು.ಎಷ್ಟು ಜನ ಶಿಕ್ಷಕರು ಈ ನಿಜವನ್ನು ಅರ್ಥಮಾಡಿಕೊಂಡಿದ್ದಾರೆ? > ನಿಜಕ್ಕೂ ಎಲ್ಲರ ಮನದಾಳಕ್ಕೆ ಈ ಮಾತಿಳಿಯಬೇಕಿದೆ.ಮನಕ್ಕಿಳಿದು ಅಲ್ಲಿ ಅದು > ಹೆಮ್ಮರವಾಗಬೇಕಿದೆ.ನಾವು ಬಲಿಷ್ಟರಾಗಲು ಬೇರೇನೂ ಬೇಕಿಲ್ಲ ..ಬಡಿದೆಬ್ಬಿಸುವ ಈ ಮಾತು > ಸಾಕು.ನಾವು ಬಲಿಷ್ಟರಾಗುತ್ತೇವೆ..ನಮ್ಮ ಮನೋದಾರಿದ್ರ್ಯ ತೊಲಗಲು ಅ ಶಿಕ್ಷಕಿಯಾಡಿದ ಮಾತು > ಸಾಕಲ್ಲವೇ? > ನಮಸ್ಕಾರ > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CACwGsz6LcpunsoHqjLFd2hCyVabTK7%3DKS2aqRqaL-Z_9z37zJw%40mail.gmail.com > <https://groups.google.com/d/msgid/socialsciencestf/CACwGsz6LcpunsoHqjLFd2hCyVabTK7%3DKS2aqRqaL-Z_9z37zJw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAPpNVaWXaqSPUoX9AdEiWxwy8YPRPi7%3Dm1Kreh2obZ5siN0YUQ%40mail.gmail.com. For more options, visit https://groups.google.com/d/optout.
