sir good information  Thanks for shariong

2016-06-21 19:19 GMT+05:30 Siddaramappa s m Sri <[email protected]>:

> ಭೂಮಿ ಭಾಯ್ಬಿಟ್ಟಾಗ
>
> (3 May) ಭೂಕಂಪಗಳಿಗೂ ಆಲ್ಪ್ರೆಡ್ ವೆಗ್ನರ್​ನಿಗೂ ಬಿಡಿಸಲಾರದ ನಂಟು. ಹೇಗೆ ಎನ್ನುತ್ತೀರ?
> ಅವು ಹೇಗೆ ಸಂಭವಿಸುತ್ತವೆ ಎನ್ನುವುದಕ್ಕೆ ಸರಿಯಾದ ವೈಜ್ಞಾನಿಕ ವಿವರಣೆ ಕೊಡಲು
> ಸಾಧ್ಯವಾಗಿದ್ದೇ ವೆಗ್ನರ್​ನ ಸಂಶೋಧನೆಗಳಿಂದ. ಭೂವಿಜ್ಞಾನದ ಡಾರ್ವಿನ್ ಎಂದೇ
> ಗುರುತಿಸಬಹುದಾದ ವೆಗ್ನರ್ ತನ್ನ ಪ್ರಸಿದ್ಧ 'ಖಂಡ ಮತ್ತು ಸಾಗರಗಳ ಉಗಮ' ಕೃತಿಯನ್ನು ಬರೆದು
> ಇಂದಿಗೆ ನೂರು ವರ್ಷ.
>
> 1930ರ ಒಂದು ಶೀತಲ ಸಂಜೆ. ನಾನು ಸಹೋದ್ಯೋಗಿ ಲೂವಿಯ ಜೊತೆ ಗ್ರೀನ್​ಲ್ಯಾಂಡ್​ನ ಹಿಮ
> ಮುಸುಕಿದ ದಾರಿಯಲ್ಲಿ ಸಿಕ್ಕಿಬಿದ್ದಿದ್ದೆ. ಮೂರು ದಿನಗಳಿಂದ ಇಬ್ಬರೂ ತುತ್ತು ಬ್ರೆಡ್ಡೂ
> ತಿಂದಿರಲಿಲ್ಲ. ನೀರು ಕುಡಿದು ದಾಹ ಇಂಗಿಸಿಕೊಳ್ಳೋಣವೆಂದರೆ ಅದಕ್ಕಾಗಿ ಅಮೂಲ್ಯವಾದ
> ಬೆಂಕಿಯನ್ನು ಗಂಟೆಗಟ್ಟಲೆ ಖರ್ಚು ಮಾಡಬೇಕು. ಆಕಾಶದಿಂದ ಇಳಿದಿಳಿದು ಬಂದು
> ತುಂಬಿಕೊಳ್ಳುತ್ತಿದೆಯೇನೋ ಎನ್ನಿಸುವ ಗವ್ವನೆ ಹಿಮರಾಶಿ ಎಲ್ಲೆಲ್ಲೂ. ನನ್ನ ದೇಹದೊಳಗೆ ರಕ್ತ
> ಹರಿಯುವುದು ನಿಂತುಹೋಗಿ ನಾಳಗಳೆಲ್ಲ ಹೆಪ್ಪುಗಟ್ಟಿದಂತೆ ಭಾಸವಾಗುತ್ತಿತ್ತು. ಲೂವಿ
> ಕಿರುಚಲಿಕ್ಕೂ ದನಿ ಸಾಲದೆ ಒದ್ದಾಡುತ್ತಿದ್ದ. ಅವನ ಕಾಲಿನಲ್ಲಿ ರಕ್ತಪರಿಚಲನೆ ನಿಂತು ನರಗಳು
> ಸತ್ತು ನೀಲಿಗಟ್ಟಿದ್ದವು. ಅವುಗಳನ್ನು ಕತ್ತರಿಸಿ ತೆಗೆಯದೆ ಬೇರೆ ದಾರಿಯೇ ಇರಲಿಲ್ಲ. ಒಂದು
> ಮರದ ಕೊರಡನ್ನು ಅವನ ಹಲ್ಲುಗಳ ನಡುವೆ ತುರುಕಿ, ಕಚ್ಚಿಕೊಂಡಿರಲು ಹೇಳಿ, ನನ್ನ ಚಾಕು ತೆಗೆದು
> ಅವನ ಕಾಲನ್ನು ಗರಗಸದಂತೆ ಕುಯ್ಯತೊಡಗಿದೆ. ಸುಮಾರು ಎರಡು ಗಂಟೆ ಒದ್ದಾಡಿದ ಮೇಲೆ, ಎರಡೂ
> ಕಾಲುಗಳನ್ನು ಮೊಣಗಂಟಿನ ಬಳಿ ಕತ್ತರಿಸಿ ತೆಗೆಯಲು ಸಾಧ್ಯವಾಯಿತು. ಓಹ್ ಕ್ಷಮಿಸಿ,
> ಪರಿಚಯಿಸಿಕೊಳ್ಳುವುದೇ ಮರೆತೆ ನೋಡಿ! ನನ್ನ ಹೆಸರು ಆಲ್ಪ್ರೆಡ್ ವೆಗ್ನರ್. ನಾನೊಬ್ಬ
> ಭೂವಿಜ್ಞಾನಿ. ನೀವಂದುಕೊಂಡ ಹಾಗೆ ನರಭಕ್ಷಕ ಅಥವಾ ರಾಕ್ಷಸ ಏನೂ ಅಲ್ಲ! ಹಿಮಪ್ರದೇಶದ ದುರ್ಭರ
> ಸ್ಥಿತಿ ವಿವರಿಸುತ್ತ ಈ ಲೂವಿಯ ಕಾಲು ಕತ್ತರಿಸಿದ ಮಾತು ಬಂತು ಅಷ್ಟೆ. ಉಷ್ಣಾಂಶ ಮೈನಸ್
> ಅರವತ್ತಕ್ಕೆ ಹೋದಾಗ ಬದುಕು ಹೇಗಿರುತ್ತದೆ ಎನ್ನುವುದನ್ನು ನಿಮಗೆಂದಾದರೂ
> ಕಲ್ಪಿಸಿಕೊಳ್ಳಲಿಕ್ಕಾದರೂ ಸಾಧ್ಯವಾಗುತ್ತದೋ ಇಲ್ಲವೊ ನನಗೆ ಗೊತ್ತಿಲ್ಲ! ಆ ಚಳಿಯಲ್ಲಿ ನೀವು
> ಮೈಮೇಲೆ ಭೂತ ಬಂದಂತೆ ನಡುಗುತ್ತಿರುತ್ತೀರಿ. ಅಥವಾ ನರವ್ಯೂಹ ಸತ್ತು ನಡುಗದೆ ಹೆಣದಂತೆ
> ನಿಶ್ಚೇಷ್ಟಿತರಾಗಿರುತ್ತೀರಿ. ಕೈಕಾಲುಗಳನ್ನೆಲ್ಲ ಹಿಮ ಕೊರೆದುಹಾಕಿರುತ್ತದೆ. ಎಷ್ಟು
> ಹುಡುಕಿದರೂ ಒಂದು ಸಣ್ಣ ಎಲೆ ಕೂಡ ಕಾಣದ ಆ ಬಿಳಿ ಮರುಭೂಮಿಯಲ್ಲಿ ಕೊನೆಗೆ ನಿಮ್ಮೊಡನೆ ಗಾಡಿ
> ಎಳೆಯುತ್ತ ಬಂದ ಹಿಮನಾಯಿಗಳನ್ನೇ ಒಂದೊಂದಾಗಿ ಕೊಂದು ತಿಂದು ಜೀವ ಹಿಡಿದುಕೊಳ್ಳಬೇಕಾದ
> ಪರಿಸ್ಥಿತಿ ಬರುತ್ತದೆ. ಅದೃಷ್ಟವಿದ್ದರೆ ಬದುಕಿಬರುತ್ತೀರಿ. ಇಲ್ಲವೆ, ಸತ್ತು ಹಿಮದ ಮೇಲೆ
> ನೂರಾರು ವರ್ಷ ಕೆಡದೆ ಮಮ್ಮಿಯಾಗಿ ಮಲಗಿರುತ್ತೀರಿ. ಇಂಥದೊಂದು ವಿಚಿತ್ರ ಸಾಹಸಕ್ಕೆ
> ನನ್ನನ್ನು ನಾನು ಪ್ರತಿವರ್ಷ ಒಡ್ಡಿಕೊಳ್ಳಬೇಕಾಗಿತ್ತು. ಯಾಕೆಂದರೆ ನನ್ನ ವಿಶೇಷ ಅಧ್ಯಯನದ
> ವಿಷಯ ಧ್ರುವಪ್ರದೇಶದ ಹವಾಮಾನ ವೈಪರೀತ್ಯ. ವರ್ಷದ ವಿವಿಧ ಕಾಲಗಳಲ್ಲಿ ಧ್ರುವಗಳ ಹಿಮಟೋಪಿಗಳ
> ದಪ್ಪ ಹೇಗೆ ಹೆಚ್ಚುಕಡಿಮೆಯಾಗುತ್ತದೆ ಎನ್ನುವುದನ್ನು ನಾನು ಅಭ್ಯಾಸ ಮಾಡಿ ಸರ್ಕಾರಕ್ಕೆ
> ವರದಿ ಒಪ್ಪಿಸಬೇಕಾಗಿತ್ತು. ಅದಕ್ಕಾಗಿ ನನ್ನ ದೇಶ ಜರ್ಮನಿ, ಭರಪೂರವಾದ ದುಡ್ಡು
> ಸುರಿಯುತ್ತಿತ್ತು. ಸೈಬೀರಿಯದ ಓಪನ್ ಜೈಲುಗಳಿಗಿಂತಲೂ ಭೀಕರವಾದ ಗ್ರೀನ್​ಲ್ಯಾಂಡ್​ನ
> ಹಿಮಭೂಮಿಯಲ್ಲಿ ಹವಾಮಾನ ಪ್ರಯೋಗಾಲಯಗಳನ್ನು ತೆರೆಯುವ ಕೆಲಸ ನನ್ನ ಪಾಲಿಗೆ ಬಂದಿದ್ದರಿಂದ,
> ಅವಕ್ಕಾಗಿ ಈ ಓಡಾಟಗಳು ಅಗತ್ಯವಾಗಿದ್ದವು. ನಾನು ಹುಟ್ಟಿದ್ದು 1880ರ ನವೆಂಬರ್ 1ರಂದು,
> ಜರ್ಮನಿಯ ಬರ್ಲಿನ್​ನಲ್ಲಿ. ಅಪ್ಪ ಜಿಮ್ನಾಸಿಯಂ (ನಿಮ್ಮ ಹೈಸ್ಕೂಲಿಗೆ ಸಮ) ಒಂದರಲ್ಲಿ
> ಲ್ಯಾಟಿನ್, ಗ್ರೀಕ್ ಮೊದಲಾದ ಅಭಿಜಾತ ಭಾಷೆಗಳನ್ನು ಹೇಳಿಕೊಡುವ ಶಿಕ್ಷಕ. ನಾನು ಓದಿನಲ್ಲಿ
> ಮುಂದಿದ್ದೆ. ತರಗತಿಗೆ ಮೊದಲ ಸ್ಥಾನವನ್ನೇ ಪಡೆಯುತ್ತಿದ್ದೆ. ಪದವಿ ಪಡೆಯಲು ಕಾಲೇಜು
> ಸೇರಿದಾಗ ಅಧ್ಯಯನದ ವಿಷಯವಾಗಿ ಭೌತಶಾಸ್ತ್ರ, ಪವನವಿಜ್ಞಾನ (Mಛಿಠಿಛಿಟ್ಟಟ್ಝಟಜಢ) ಮತ್ತು
> ಖಗೋಳಶಾಸ್ತ್ರಗಳನ್ನು ಆರಿಸಿಕೊಂಡೆ. ಪದವಿ ಮುಗಿಯಿತು. ಹತ್ತಿರದ ಖಗೋಳ ವೀಕ್ಷಣಾಲಯದಲ್ಲಿ
> ಪುಟ್ಟದೊಂದು ಕೆಲಸ ಸಿಕ್ಕಿತು. ಅಲ್ಲಿರುತ್ತ, ನನ್ನ ಇಪ್ಪತೆôದನೇ ವರ್ಷಕ್ಕೆಲ್ಲ
> ಆಸ್ಟ್ರಾನಮಿಯಲ್ಲಿ ಪಿಎಚ್​ಡಿಯನ್ನೂ ಪೂರ್ತಿಗೊಳಿಸಿದೆ. ಆಗಲೇ ನನಗೆ ಭೂಮಿಯ ಹವಾಮಾನ
> ಬದಲಾವಣೆಗಳ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಬೇಕೆಂಬ ಆಸೆ ಹುಟ್ಟಿದ್ದು. ಅಣ್ಣ ಕರ್ಟ್
> ಜೊತೆಗಿದ್ದ. ಅವನಿಗೂ ಇಂಥ ಹುಚ್ಚಾಟಗಳಲ್ಲಿ ಅಮಿತ ಆಸಕ್ತಿ. ಇಬ್ಬರೂ ಸೇರಿ, ಆಕಾಶಕ್ಕೆ
> ದೊಡ್ಡದೊಡ್ಡ ಬಲೂನುಗಳನ್ನು ಹಾರಿಸಿ, ಅವು ಹಾರಿಕೊಂಡುಹೋಗುವ ದಿಕ್ಕು, ವೇಗ ಇತ್ಯಾದಿ ನೋಡಿ,
> ಭೂಮಿಯ ಸುತ್ತಲೂ ಒಂದು ಬಗೆಯ ವಾಯುಪ್ರವಾಹಗಳು ಸದಾ ಗಿರಕಿ ಹೊಡೆಯುತ್ತಿವೆ ಎನ್ನುವ
> ತೀರ್ವನಕ್ಕೆ ಬಂದೆವು. ಇವುಗಳ ಉಷ್ಣತೆಯಲ್ಲಿ ಏರುಪೇರಾಗುತ್ತಿರುತ್ತದೆ. ಅಂಥ
> ತಾಪವೈಪರೀತ್ಯವೇ ಜಗತ್ತಿನಲ್ಲಿ ನಡೆಯುವ ಹಲವು ನೈಸರ್ಗಿಕ ವಿದ್ಯಮಾನಗಳಿಗೆ ಕಾರಣ ಎನ್ನುವುದು
> ನಮ್ಮ ತರ್ಕವಾಗಿತ್ತು. ನಂಬಿದರೆ ನಂಬಿ, ಆಗಿನ್ನೂ ಭೂಮಂಡಲದ ಸುತ್ತ ಉಷ್ಣ ಮತ್ತು
> ಶೀತಪ್ರವಾಹಗಳಿರುತ್ತವೆ ಎನ್ನುವ ಕಲ್ಪನೆಯೇ ಜನಕ್ಕೆ ಇರಲಿಲ್ಲ! ನನ್ನ ಸಂಶೋಧನೆಗಳನ್ನು
> ಮುಂದುವರಿಸಲು ಗ್ರೀನ್​ಲ್ಯಾಂಡ್​ನಂಥ ಸ್ತಬ್ಧ ಪರಿಸರ ಸೂಕ್ತ ಅನ್ನಿಸಿತು. 1906ರಲ್ಲಿ ನನ್ನ
> ಸವಾರಿ ಅಲ್ಲಿಗೆ ಹೋಯಿತು. ಅಲ್ಲಿನ ಶೀತದ ಕತೆಯನ್ನು ಕೇಳಿ (ಕೇಳಿಯೇ!) ನಡುಗಿದ್ದೆನೇ ಹೊರತು
> ಕಣ್ಣಾರೆ ನೋಡಿ ಅನುಭವಿಸಿರಲಿಲ್ಲ. ಆ ವರ್ಷದ ಯಾತ್ರೆಯಲ್ಲಿ ನನ್ನ ಕಣ್ಣೆದುರಲ್ಲೇ ಇಬ್ಬರು
> ಹಿರಿಯ ಸಹೋದ್ಯೋಗಿಗಳು ಥಂಡಿಯೇರಿ ಸಾಯುವುದನ್ನು ನೋಡಬೇಕಾಯಿತು. ಅಲ್ಲಿಂದ 1908ರಲ್ಲಿ
> ವಾಪಸು ಬಂದ ಮೇಲೆ, ಮತ್ತೆ ಹೋಗಲು ಧೈರ್ಯ ಸಾಲಲಿಲ್ಲ. ಮೂರ್ನಾಲ್ಕು ವಿಶ್ವವಿದ್ಯಾಲಯಗಳಲ್ಲಿ
> ಪವನವಿಜ್ಞಾನ, ಕಾಸ್ಮಿಕ್ ಫಿಸಿಕ್ಸ್, ಆಸ್ಟ್ರಾನಮಿ ಇತ್ಯಾದಿ ಬೋಧಿಸಿದೆ. ಸ್ವಯಂಸಂಶೋಧನೆಗಳ
> ಕತೆಗಳನ್ನೂ ಗ್ರೀನ್​ಲ್ಯಾಂಡ್​ನಲ್ಲಿ ಅಧ್ಯಯನಕ್ಕಾಗಿ ಮಾಡಿದ ಹುಚ್ಚಾಟದ ವಿವರಗಳನ್ನೂ
> ಸೇರಿಸಿ ಒಗ್ಗರಣೆ ಹಾಕಿ ಪಾಠ ಮಾಡುತ್ತಿದ್ದುದರಿಂದ ಭಲೇ ಜನಪ್ರಿಯ ಪ್ರಾಧ್ಯಾಪಕನಾದೆ.
> ಸಹೋದ್ಯೋಗಿಗಳು ಕೂಡ, ಈತ ಪುಸ್ತಕದ ಬದನೆಕಾಯಲ್ಲ - ಹೊರಗಿನ ಜಗತ್ತಿನ ವಿವರಗಳನ್ನೂ
> ರಸವತ್ತಾಗಿ ಹೇಳುತ್ತಾನೆ ಎಂದು ಮೆಚ್ಚಿಕೊಂಡರು. ಮೊದಲ ಮಹಾಯುದ್ಧ ಶುರುವಾದಾಗ, ದೇಶದ
> ಆಣತಿಯಂತೆ ನಾನು ಅನಿವಾರ್ಯವಾಗಿ ಯುದ್ಧಭೂಮಿಯಲ್ಲಿ ಬಂದೂಕು ಹಿಡಿದು ಹೋರಾಡಬೇಕಾಯಿತು.
> ಅದರಲ್ಲಿ ಅಷ್ಟೊಂದು ಅನುಭವವಿಲ್ಲದ ಮಡೆಯನಾದ್ದರಿಂದ ಎರಡು ಸಲ ತೀವ್ರವಾದ ಗಾಯಗಳಾಗಿ
> ಆಸ್ಪತ್ರೆ ಸೇರಬೇಕಾಯಿತು. ಆದರೆ, ಯುದ್ಧದ ಸಂದರ್ಭದಲ್ಲಿ ನನಗೆ ಯುರೋಪ್​ನಲ್ಲಿ ವ್ಯಾಪಕವಾಗಿ
> ಸುತ್ತಾಡುವ ಸುವರ್ಣ ಅವಕಾಶ ಸಿಕ್ಕಿತು! ಹಾಗೆ ಹೊಸಜಾಗಕ್ಕೆ ಗುಳೆ ಹೊರಟಾಗೆಲ್ಲ ನನ್ನೊಳಗಿನ
> ವಿಜ್ಞಾನಿ ಜಾಗೃತನಾಗುತ್ತಿದ್ದ. ಅಲ್ಲಿ ಸಿಗುವ ಕಲ್ಲುಮಣ್ಣುಗಳನ್ನು ಸೂಕ್ಷ್ಮವಾಗಿ
> ಪರಿಶೀಲಿಸುತ್ತಿದ್ದೆ. ಆಗ ನನಗೆ ಅಚ್ಚರಿ ಹುಟ್ಟಿಸುವ ಫಲಿತಾಂಶವೊಂದು ಸಿಕ್ಕಿತು.
> ಅದೇನೆಂದರೆ, ಉತ್ತರ ಅಮೆರಿಕದ ಪೂರ್ವ ಕರಾವಳಿ ಮತ್ತು ಯುರೋಪ್​ನ ಪಶ್ಚಿಮದ ಭಾಗಗಳಲ್ಲಿ
> ಕಂಡುಬರುವ ಕಲ್ಲುಮಣ್ಣುಗಳಲ್ಲಿ ಮೈ ಮುಳ್ಳೆಬ್ಬಿಸುವಷ್ಟು ಸಾಮ್ಯತೆ ಇದ್ದವು. ಹಾಗೆಯೇ
> ದಕ್ಷಿಣ ಅಮೆರಿಕ ಮತ್ತು ಆಫ್ರಿಕದ ಭಾಗಗಳಲ್ಲಿ ದೊರಕಿದ ಫಾಸಿಲ್​ಗಳಲ್ಲೂ ಅಪ್ರತಿಮ
> ಹೋಲಿಕೆಗಳಿದ್ದವು. ಇದು ಹೇಗೆ ಸಾಧ್ಯ ಎಂದು ತಲೆಕೆಡಿಸಿಕೊಳ್ಳುವಂತಾಯಿತು. ನಡುವೆ ಅಷ್ಟೊಂದು
> ದೊಡ್ಡ ಅಟ್ಲಾಂಟಿಕ್ ಸಾಗರ ಹಬ್ಬಿದ್ದರೂ ಈ ಭೂಸಾಮ್ಯ ಹೇಗೆ? ಸಂಶಯದ ಕೀಟ ಮಿದುಳನ್ನು
> ಕೊರೆಕೊರೆದು ಹಾಕತೊಡಗಿತು. ಸೈನಿಕನ ವೇಷದಲ್ಲಿದ್ದ ಈ ವಿಜ್ಞಾನಿಯ ರಹಸ್ಯಸಂಶೋಧನೆ
> ಶುರುವಾಯಿತು. ಭೂಮಿಯ ಮ್ಯಾಪು ಬಳಿಯಲ್ಲಿಟ್ಟುಕೊಂಡು ಹಗಲುರಾತ್ರಿ ಎವೆಯಿಕ್ಕದೆ ನೋಡಿದೆ.
> ಅದುವರೆಗಿನ ಎಲ್ಲ ಸಂಶೋಧನೆಗಳ ಸಾರಸರ್ವಸ್ವವನ್ನೂ ಮೈಮೇಲೆ ಬಸಿದುಕೊಂಡೆ. ಭೂವಿಜ್ಞಾನದ
> ಗೂಢಗಳನ್ನು ಅರಿಯಲು ಸ್ವತಃ ನಾನೇ ಅದರೊಳಗೆ ಡುಮ್ಕಿ ಹೊಡೆದೆ. ಕೊನೆಗೆ 1912ರ ಹೊತ್ತಿಗೆ
> ನನಗೊಂದು ವಿಷಯ ಸ್ಪಷ್ಟವಾಗತೊಡಗಿತು. ಅದೇನೆಂದರೆ, ಈ ಭೂಮಿ ಈಗ ನಾವು ನೋಡುವಂತೆ ಇರಲಿಲ್ಲ.
> ಅದು ಕಳೆದ ಹಲವು ಕೋಟ್ಯಂತರ ವರ್ಷಗಳಲ್ಲಿ ಬದಲಾಗುತ್ತ ಬಂದಿದೆ. ಕೆಲವು ಲಕ್ಷ ವರ್ಷಗಳ
> ಹಿಂದೆ, ಈ ಖಂಡಗಳು ಪರಸ್ಪರ ಹತ್ತಿರ ಇದ್ದವು. ಹತ್ತಿರ ಏನು? ಅಂಟಿಕೊಂಡೇ ಇದ್ದವು! ಅಮೆರಿಕ
> ಯುರೋಪ್ ಮತ್ತು ಆಫ್ರಿಕಗಳಿಗೆ; ಅವು ಏಷ್ಯಕ್ಕೆ; ಏಷ್ಯ ಆಸ್ಟ್ರೇಲಿಯಕ್ಕೆ - ಹೀಗೆ ಇದು
> ಒಂದಕ್ಕೊಂದು ಪೋಣಿಸಿದ ಸರಮಾಲೆಯಾಗಿತ್ತು! ಕಾಲಕ್ರಮೇಣ ಎಣ್ಣೆಯಲ್ಲಿ ಬಿದ್ದ ಬೂಂದಿಯ
> ಹನಿಗಳಂತೆ ಇವು ದೂರದೂರಕ್ಕೆ ಸರಿಯತೊಡಗಿದವು. ಈ ಚಲನೆ ಈಗಲೂ ಜಾರಿಯಲ್ಲಿದೆ; ಭೂಖಂಡಗಳು
> ಪ್ರತಿವರ್ಷವೂ ಇಷ್ಟಿಷ್ಟೇ ಇಂಚು ಎನ್ನುತ್ತ ಪರಸ್ಪರ ದೂರ ಹೋಗುತ್ತಿವೆ ಎಂಬ ವಾದ ತಲೆಯಲ್ಲಿ
> ಹುಟ್ಟಿತು. 1914ರಲ್ಲಿ ನಾನು ಯುದ್ಧದ ಗಾಯಾಳುವಾಗಿ ಹಲವು ವಾರ ಆಸ್ಪತ್ರೆಯಲ್ಲಿ ಮಲಗಬೇಕಾಗಿ
> ಬಂದದ್ದು ಒಳ್ಳೆಯದೇ ಆಯ್ತೆನ್ನಿ! ಆಗ, ಈ 'ಭೂಖಂಡಗಳ ಚಲನೆ' ಎಂಬ ನನ್ನ ಹೊಸಸಿದ್ಧಾಂತವನ್ನು
> ವಿವರಿಸಿ ವಿವರವಾದ ಪುಸ್ತಕವೊಂದನ್ನು ಬರೆಯಲು ಅನುಕೂಲವಾಯಿತು. ಅದಕ್ಕೆ ಪೂರಕವಾಗಿ ಒಂದೆರಡು
> ಲೇಖನಗಳನ್ನು ಬರೆದು ವಿಜ್ಞಾನ ಜರ್ನಲ್​ಗಳಿಗೆ ಕಳಿಸಿದೆ. ಕೆಲವು ಪ್ರಕಟವಾದವು. ಅವುಗಳನ್ನು
> ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಕೆಲವರು ಉಡಾಫೆ ಮಾಡಿ, ನನಗೊಂದಿಷ್ಟು ಬಯ್ದು ನಾಲಗೆಯ
> ತೀಟೆ ತೀರಿಸಿಕೊಂಡರು. ಈ ಪ್ರತಿಕ್ರಿಯೆಗಳನ್ನು ನೋಡಿ, ನನ್ನ ಪುಸ್ತಕದಲ್ಲಿ ಬೇಕಾದ
> ಪರಿಷ್ಕಾರಗಳನ್ನು ಮಾಡಿ, ಅಗತ್ಯ ಭಾಗಗಳನ್ನು ಹಿಗ್ಗಿಸಿ, ಇನ್ನಷ್ಟು ವಿವರಣೆ ಸೇರಿಸಿ, ಅಂತೂ
> ಅದನ್ನು ಪ್ರಕಟಣೆಗೆ ಸಿದ್ಧಗೊಳಿಸಿದೆ. ಭೂಮಿಯ ಮೇಲಿರುವ ಖಂಡಗಳೆಲ್ಲವೂ ಆಳದಲ್ಲಿ ಒಂದಷ್ಟು
> ಶಿಲಾಫಲಕಗಳ ಮೇಲೆ ನಿಂತಿರುವ ರಚನೆಗಳು; ಈ ಫಲಕಗಳು ಕಾರಣಾಂತರಗಳಿಂದ ಅತ್ತಿತ್ತ ಸರಿದಾಗ
> ಖಂಡಗಳೂ ಚಲಿಸುತ್ತವೆ ಎನ್ನುವ ಹೊಸ 'ಶಿಲಾಫಲಕಗಳ ಚಲನೆಯ ಸಿದ್ಧಾಂತ'ವನ್ನೂ ಆ ಪುಸ್ತಕದಲ್ಲಿ
> ಸೇರಿಸಿದೆ. 1915ರಲ್ಲಿ 'ಖಂಡ ಮತ್ತು ಸಾಗರಗಳ ಉಗಮ' ಎಂಬ ಆ ಉದಂಥ ಪ್ರಕಟಣೆಯ ಭಾಗ್ಯ
> ಕಂಡಿತು. ತಮಾಷೆಯೆಂದರೆ, ಅಲ್ಲಿಯವರೆಗೂ ಈ ಖಂಡಗಳ ಚಲನೆಯ ವಿಷಯದಲ್ಲಿ ಯಾರೂ ಸಂಶೋಧನೆ
> ಮಾಡುವುದು ಬಿಡಿ, ಯೋಚಿಸಿಯೂ ಇರಲಿಲ್ಲ! ಎಲ್ಲ ಖಂಡಗಳ ನಡುವೆಯೂ ನೆಲದ ಸೇತುವೆ ಇದ್ದವು;
> ಕಾಲಾಂತರದಲ್ಲಿ ಅವು ಸಾಗರದಲ್ಲಿ ಬಿದ್ದುಹೋದವು - ಎಂಬ ಮಾತನ್ನೇ ಎಲ್ಲರೂ ದೇವರ ಸಂದೇಶ
> ಎಂಬಂತೆ ಭಯಭಕ್ತಿಯಿಂದ ನಂಬಿ ಕೂತಿದ್ದರು! ಇಡೀ ವಿಶ್ವದಲ್ಲೇ ಅತ್ಯಂತ ಸ್ಥಿರವಾದ ರಚನೆ
> ಎಂದರೆ ಭೂಮಿ, ಅದಕ್ಕೆ ಚಲನೆ ಇಲ್ಲ ಎಂದು ವಿಜ್ಞಾನಿಗಳು ಕೂಡ ನಂಬಿದ್ದರು.
> ದುರದೃಷ್ಟವೆಂದರೆ, ನಾನು ಕೂಡ; ಖಂಡಗಳು ಒಟ್ಟಾಗಿದ್ದವು, ಈಗ ದೂರ ಸರಿಯುತ್ತಿವೆ ಎಂದೆನೇ
> ಹೊರತು ಅವಕ್ಕೆ ಕಾರಣವೇನು ಎನ್ನುವುದನ್ನು ತಿಳಿದಿರಲಿಲ್ಲ. ಭೂಮಿ ಎಡೆಬಿಡದೆ ತನ್ನ
> ಅಕ್ಷದಲ್ಲಿ ಭ್ರಮಿಸುತ್ತಿರುವುದರಿಂದ, ಅದರಿಂದ ಉಂಟಾದ ಕೇಂದ್ರಾಪಗಾಮಿ ಶಕ್ತಿಯೇ ಈ
> ಖಂಡಗಳನ್ನು ದೂರ ತಳ್ಳುತ್ತಿದೆ ಎಂದು ನಂಬಿದ್ದೆ. ನನ್ನ ವಾದಕ್ಕೆ ಎಲ್ಲೂ ಪುಷ್ಟಿ
> ಸಿಗಲಿಲ್ಲ. ನ್ಯೂಯಾರ್ಕ್​ನಲ್ಲಿ ಈ ಪುಸ್ತಕವನ್ನು ಹೀಯಾಳಿಸುವುದಕ್ಕಾಗಿಯೇ ಅಂತಾರಾಷ್ಟ್ರೀಯ
> ಸಮ್ಮೇಳನವೊಂದು ಆಯೋಜನೆಯಾಯಿತು ಎಂದರೆ ನೀವು ನಂಬಲೇಬೇಕು! ಜರ್ಮನಿಯ ಖ್ಯಾತ
> ಭೂವಿಜ್ಞಾನಿಯಾಗಿದ್ದ ನನ್ನ ಮಾವನವರು, 'ಈ ಮೊದ್ದುಮಣಿಯ ಅಧಿಕಪ್ರಸಂಗವನ್ನು ವಿದ್ವನ್ಮಣಿಗಳು
> ಗಂಭೀರವಾಗಿ ಪರಿಗಣಿಸಬಾರದು' ಎಂದುಬಿಟ್ಟರು! ನನ್ನ ವಿರುದ್ಧ ನೂರಾರು ಲೇಖನಗಳು
> ಬರೆಯಲ್ಪಟ್ಟವು. ಕೈಯಲ್ಲಿದ್ದ ಕೆಲಸ ಕೂಡ ಹೋಯಿತು. ಮಾನಸಿಕವಾಗಿ ತೀರಾ ಇಳಿದುಹೋದೆ. ಅದಾಗಿ
> ಹಲವು ವರ್ಷ ನಾನು ಖಂಡಾಂತರ ಚಲನೆಯ ಸಂಶೋಧನೆಯಿಂದಲೇ ದೂರ ಹೋದೆ. ಅಥವಾ ಹಾಗಾಗುವಂತೆ
> ಜಗತ್ತಿನ ಪಂಡಿತವಲಯ ನೋಡಿಕೊಂಡಿತು! ನನ್ನ ಅಧ್ಯಯನವನ್ನು ಭೂಮಿಯ ಮೇಲೆ ನಡೆಯುವ ಉಷ್ಣ-ಶೀತ
> ಪ್ರವಾಹಗಳ ಮೇಲೆ ಕೇಂದ್ರೀಕರಿಸಿದೆ. ಧ್ರುವಪ್ರದೇಶಗಳ ವಾತಾವರಣದ ಬಗ್ಗೆ ಎಡೆಬಿಡದೆ ಸಂಶೋಧನೆ
> ಮಾಡಿದೆ. ವರ್ಷಕ್ಕೊಂದಾವರ್ತಿ ಗ್ರೀನ್​ಲ್ಯಾಂಡ್​ಗೆ ಹೋಗುವುದಂತೂ ಇದ್ದೇ ಇತ್ತು. ಅಲ್ಲಿನ
> ಹಿಮನೆಲದಲ್ಲಿ ಅಲೆಮಾರಿಯಾಗಿ ರಣಪೀಡೆಯಂತೆ ಸುತ್ತುವಾಗ, ಮನುಷ್ಯಪ್ರಪಂಚಕ್ಕಿಂತ ಈ
> ಪ್ರಕೃತಿಯೇ ಹೆಚ್ಚು ಸಹ್ಯವಾಗಿದೆ ಅನ್ನಿಸುತ್ತಿತ್ತು. ಆದರೂ ಖಂಡಾಂತರ ಚಲನೆಯ ವಾದದಿಂದ
> ಹಿಂದೆ ಸರಿಯಲಿಲ್ಲ. ಆ ಪುಸ್ತಕವನ್ನು ಮತ್ತೆ ಮತ್ತೆ ತಿದ್ದಿ ಬರೆಯುತ್ತ, ಪರಿಷ್ಕರಿಸುತ್ತ,
> ಹೊಸ ವಿಚಾರಗಳನ್ನು ಸೇರಿಸುತ್ತ, ತಪ್ಪುಗಳನ್ನು ಕೈಬಿಡುತ್ತ ಐದಾರು ಸಲ ಪ್ರಕಟಿಸಿದೆ. ಆದರೆ,
> ನನ್ನ ಹಣೆಬರಹವೋ ಅಥವಾ ವಿಜ್ಞಾನದ ದುರವಸ್ಥೆಯೋ - ಅಂತೂ ಅದನ್ನು ಇದ್ದರೂ ಇರಬಹುದೆಂದು
> ಒಪ್ಪುವ ಒಬ್ಬನೇ ಒಬ್ಬ ವಿಜ್ಞಾನಪ್ರೇಮಿಯೂ ಹುಟ್ಟಿಬರಲಿಲ್ಲ! ಭೂಮಿಯಲ್ಲಿ ಕಂದಕಗಳು,
> ನದಿಸರೋವರಗಳು ಹುಟ್ಟಲು ಶಿಲಾಫಲಕಗಳ ಅಲುಗಾಟವೇ ಕಾರಣ; ಅವು ಪರಸ್ಪರ ಹತ್ತಿರ ಬಂದಾಗ
> ಪರ್ವತಗಳು ಎದ್ದು ನಿಲ್ಲುತ್ತವೆ ಎಂದು ನಾನು ಹೇಳಿದಾಗ ಜನ ಪಕಪಕನೆ ನಕ್ಕರು.
> ಬಿಸಿಯುಂಡೆಯಾಗಿದ್ದ ಭೂಮಿ ತಣಿಯುತ್ತಿದ್ದಾಗ ಉಂಟಾದ ಮಡಿಕೆಗಳೇ ಪರ್ವತಗಳು ಎಂಬ ವಾದವೇ
> ಸದ್ದುಮಾಡುತ್ತಿತ್ತು. ಅದರ ಆರ್ಭಟದೆದುರು ನನ್ನ ದನಿ ಉಡುಗಿಹೋಯಿತು. 1930ರಲ್ಲಿ
> ಗ್ರೀನ್​ಲ್ಯಾಂಡ್​ನ ನೆಲದಲ್ಲಿದ್ದೆ. ಅಲ್ಲಿ ಮೂರ್ನಾಲ್ಕು ಹವಾಮಾನ ಕೇಂದ್ರಗಳನ್ನು ತೆರೆಯುವ
> ಗುರುತರ ಜವಾಬ್ದಾರಿ ನನ್ನ ಹೆಗಲಿಗೆ ಬಂದಿತ್ತು. ಅವತ್ತೊಂದು ದಿನ - ಚಳಿಗಾಲ ತನ್ನ
> ಉಗ್ರಪ್ರತಾಪ ತೋರುತ್ತಿದ್ದ ದಿನ - ಒಂದು ಸ್ಟೇಶನ್​ನಿಂದ ಇನ್ನೊಂದಕ್ಕೆ ಆಹಾರ ಸರಬರಾಜು
> ಮಾಡುವ ಕೆಲಸ ವಹಿಸಿಕೊಂಡು ಹೊರಬಿದ್ದಿದ್ದೆ. ಕಾಲಡಿಯ ಹಿಮನೆಲ ಎಷ್ಟು ಹೊತ್ತಿಗಾದರೂ ನನ್ನ
> ಬಲಿ ತೆಗೆದುಕೊಳ್ಳುವೆನೆಂಬಂತೆ ಮೈಯನ್ನು ನೆಕ್ಕಿಹಾಕುತ್ತಿತ್ತು. ಮಂಜು ಮುಸುಕಿದ
> ವಾತಾವರಣದಲ್ಲಿ ನನಗೆ ದಾರಿ ತಪ್ಪಿತು. ಹಿಂದೊಮ್ಮೆ ಬಂದಿದ್ದಾಗ ನೆಟ್ಟ ಗುರುತುಗಳೆಲ್ಲ
> ಮೂರ್ನಾಲ್ಕು ಅಡಿ ಆಳದಲ್ಲಿ ಹುಗಿದುಹೋಗಿದ್ದವೊ ಏನೋ. ಎಷ್ಟು ಅಲೆದರೂ ಹಿಂದಿರುಗುವ ಮಾರ್ಗ
> ಕಾಣಲಿಲ್ಲ. ಕತ್ತಲಾಯಿತು. ಸಣ್ಣಗೆ ಹಿಮಪಾತವೂ ಶುರುವಾಯಿತು. ಯಾವುದೋ ಕ್ಷಣದಲ್ಲಿ ನಾನು
> ಬಲಹೀನ ಬಳ್ಳಿಯಂತೆ ಕೆಳಗೆ ಬಿದ್ದೆ. ಇಳಿಯುತ್ತಿದ್ದ ನಸುಗತ್ತಲು ಗಾಢವಾಗಿ ಹರಡಿಕೊಂಡು ನನ್ನ
> ದೇಹವನ್ನು ಹೊದಿಕೆಯಂತೆ ಅಪ್ಪಿಕೊಂಡಿತು.
>
> ಅದಾಗಿ, ಏಳು ತಿಂಗಳ ನಂತರ, 1931ರ ಮೇನಲ್ಲಿ ವೆಗ್ನರ್​ನ ದೇಹ ಪತ್ತೆಯಾಯಿತು. ಅವನ ಜೊತೆ ಆ
> ಚಳಿಗಾಲದಲ್ಲಿ ಗ್ರೀನ್​ಲ್ಯಾಂಡ್​ನಲ್ಲಿ ಕೆಲಸ ಮಾಡುತ್ತಿದ್ದ ಒಂದು ಡಜನ್ ಸಹೋದ್ಯೋಗಿಗಳು
> ಕಣ್ಣೀರು ಮಿಡಿದರು. ವೆಗ್ನರ್​ನ ದೇಹವನ್ನು ಅಲ್ಲೇ ಸಮಾಧಿ ಮಾಡಲಾಯಿತು. ಜೀವನಪರ್ಯಂತ
> ಅವನಿಗೆ ಸೇರಬೇಕಾಗಿದ್ದ ಮಾನ-ಸಮ್ಮಾನಗಳು ಬರಲೇ ಇಲ್ಲ. 1964ರವರೆಗೂ ವಿಜ್ಞಾನಿಗಳು,
> ಸಂಶೋಧಕರು ಯಾರೂ ಅವನ ಸಿದ್ಧಾಂತವನ್ನು ಒಪ್ಪಲಿಲ್ಲ! ಕೊನೆಗೆ ಆ ವರ್ಷ ಅಮೆರಿಕದ
> ಅಲಾಸ್ಕದಲ್ಲಿ ನಡೆದ ಭೀಕರ ಭೂಕಂಪವೊಂದು ವಿಜ್ಞಾನಿಗಳಿಗೆ ಸವಾಲಾಗಿ ಪರಿಣಮಿಸಿತು.
> ಭೂಕಂಪಕ್ಕೆ ನಿಜವಾದ ಕಾರಣ ಏನು ಎಂದು ಹುಡುಕಹೊರಟವರಿಗೆ ಭೂಮಿಯಾಳದಲ್ಲಿ ಶಿಲಾಫಲಕಗಳು
> ಅತ್ತಿತ್ತ ಜರುಗುವ ವಿದ್ಯಮಾನದ ಬಗ್ಗೆ ತಿಳಿಯಿತು. ಐವತ್ತು ವರ್ಷಗಳ ಹಿಂದೆಯೇ ವೆಗ್ನರ್ ಈ
> ಕಾರಣವನ್ನು ಹೇಳಿಬಿಟ್ಟಿದ್ದ ಎನ್ನುವುದೂ ತಿಳಿಯಿತು! ಕುತೂಹಲದಿಂದ ಅವನ ಸಂಶೋಧನಾ
> ಲೇಖನಗಳನ್ನೂ, ಪುಸ್ತಕಗಳನ್ನೂ ಮತ್ತೆ ಓದತೊಡಗಿದ ವಿಜ್ಞಾನಿಗಳು, ಅಲ್ಲಿ ಬರೆದಿರುವ ಒಂದೊಂದು
> ವಾಕ್ಯವೂ ಸತ್ಯ ಎಂದು ಒಪ್ಪಿಕೊಂಡರು! ಭೂಮಿಯ ನೆಲ ಒಂದಾನೊಂದು ಕಾಲದಲ್ಲಿ ಅಖಂಡವಾಗಿತ್ತು,
> ಬಳಿಕ ಸರಿಯುತ್ತ ದೂರಹೋಯಿತು ಎನ್ನುವುದಾಗಲಿ, ಎರಡು ಶಿಲಾಪದರಗಳು ಪರಸ್ಪರ ಒಂದರ ಅಡಿಗೆ
> ಒಂದು ಸೇರಿಕೊಂಡು ಹಿಮಾಲಯದಂಥ ಎತ್ತರದ ಬೆಟ್ಟಗಳನ್ನು ಹುಟ್ಟಿಸುತ್ತವೆ ಎನ್ನುವುದಾಗಲಿ
> ನೂರಕ್ಕೆ ನೂರು ನಿಜವಾದ ಮಾತು ಎಂದು ತಪ್ಪೊಪ್ಪಿಕೊಂಡರು. ಅವರ ಇಷ್ಟು ವರ್ಷಗಳ ನಂಬಿಕೆಯನ್ನು
> ವೆಗ್ನರ್ ಭೂಕಂಪದಂತೆಯೇ ಬುಡಮೇಲು ಮಾಡಿಬಿಟ್ಟಿದ್ದ! ವೆಗ್ನರ್​ನನ್ನು ಈ ಜಗತ್ತಿನಲ್ಲಿ
> ಆಗಿಹೋಗಿರುವ ಅತ್ಯಂತ ಧೀಮಂತ ವಿಜ್ಞಾನಿಗಳಲ್ಲಿ ಒಬ್ಬನೆಂದರು ಹಲವರು. 20ನೇ ಶತಮಾನದ
> ವಿಜ್ಞಾನದ ದಿಕ್ಕು ಬದಲಿಸಿದ ಶಕಪುರುಷರಲ್ಲಿ ವೆಗ್ನರ್ ಒಬ್ಬ ಎಂಬ ಮಾತನ್ನು ಈಗ ಯಾವ ಭೂ
> ಅಥವಾ ಪವನವಿಜ್ಞಾನಿಯೂ ಅಲ್ಲಗಳೆಯುವುದಿಲ್ಲ. ವೆಗ್ನರ್ ಹೋದ ದಾರಿಯಲ್ಲಿ ನಡೆಯದೆ
> ಇರುತ್ತಿದ್ದರೆ, ಈಗಲೂ ನಮಗೆ ಭೂಕಂಪಗಳು ಪ್ರಕೃತಿವೈಚಿತ್ರ್ಯಳಾಗಿಯೇ ಉಳಿಯುತ್ತಿದ್ದವು.
> ನೇಪಾಳದ ಭೂಕಂಪವನ್ನು ತಿಂಗಳಷ್ಟು ಮುಂಚಿತವಾಗಿ ಊಹಿಸಲು ವಿಜ್ಞಾನಿಗಳಿಗೆ ಸಾಧ್ಯವೇ
> ಆಗುತ್ತಿರಲಿಲ್ಲ. ಕಾಲ ಮತ್ತು ಭೂಮಿ ಎರಡೂ ನಿರ್ದಯಿಗಳು. ಯಾವ ಕರುಣೆ ಇಲ್ಲದೆ ಅವು
> ಎಲ್ಲವನ್ನೂ ಅಗಸ್ಱರಂತೆ ಹೊಟ್ಟೆಯೊಳಗೆ ಹಾಕಿಕೊಳ್ಳುತ್ತವೆ. ಹರಪ್ಪಾ-ಮೊಹೆಂಜೋದಾರೋಗಳಂತೆ
> ಅಥವಾ ವೆಗ್ನರ್​ನಂತೆ ಹೂತುಹೋದ ಆ ಗೂಢಸತ್ಯಗಳನ್ನು ಮತ್ತೆಷ್ಟೋ ವರ್ಷಗಳ ನಂತರ ಹೊರಕ್ಕೆ
> ತೆಗೆದು ಮನುಷ್ಯ ಆಶ್ಚರ್ಯದಿಂದ ಬಾಯಿಕಳೆದು ನಿಲ್ಲುತ್ತಾನೆ! *** ಬದುಕಿದ್ದಾಗ ಕಾಯಂ ಕೆಲಸ
> ಹಿಡಿಯಲು ಒದ್ದಾಡಬೇಕಿದ್ದ ವೆಗ್ನರ್ ಸತ್ತು ಐವತ್ತು ವರ್ಷಗಳಾದ ಮೇಲೆ, ಅವನ ಸಂಶೋಧನೆಯ
> ಪ್ರಾಮುಖ್ಯ ಉಳಿದವರಿಗೆ ಗೊತ್ತಾಯಿತು! 1980ರಲ್ಲಿ 'ಆಲ್ಪ್ರೆಡ್ ವೆಗ್ನರ್ ಧ್ರುವ ಮತ್ತು
> ಸಾಗರ ಅಧ್ಯಯನ ಸಂಸ್ಥೆ' ಎಂಬ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಜರ್ಮನಿಯಲ್ಲಿ
> ಸ್ಥಾಪಿಸಲಾಯಿತು. ಉತ್ತರ ಮತ್ತು ದಕ್ಷಿಣಧ್ರುವಗಳೆರಡರ ಮೇಲೂ ನಿರಂತರ ಸಂಶೋಧನೆ ನಡೆಸುವ
> ಪ್ರಪಂಚದ ಏಕಮಾತ್ರ ಸಂಸ್ಥೆ ಇದು. ಚಂದ್ರ ಮತ್ತು ಮಂಗಳಗ್ರಹಗಳ ಮೇಲಿನ ಎರಡು ಕುಳಿಗಳಿಗೆ
> ವೆಗ್ನರ್​ನ ಹೆಸರಿಡಲಾಗಿದೆ. ಭೂಖಂಡಗಳ ಸಂಶೋಧನೆ ಮಾತ್ರವಲ್ಲದೆ, ಭೂಮಿಯ ವಾಯುಮಂಡಲದಲ್ಲಿ
> ಶೀತೋಷ್ಣ ಪ್ರವಾಹಗಳು ನಿರಂತರ ಹರಿಯುತ್ತಿವೆ ಎಂದು ತಿಳಿಸಿದ ಮೊದಲಿಗ ವೆಗ್ನರ್. ಆಧುನಿಕ
> ಹವಾಮಾನ ವಿಜ್ಞಾನ ಇಲ್ಲಿಂದ ಪ್ರಾರಂಭವಾಯಿತು. ಧ್ರುವಪ್ರದೇಶಗಳ ಹಿಮಪದರಗಳ ದಪ್ಪದಲ್ಲಿ ಆಗುವ
> ವ್ಯತ್ಯಾಸಗಳ ಬಗ್ಗೆ ಸಂಶೋಧನೆ ನಡೆಸಿದ ಮೊದಲಿಗನೂ ವೆಗ್ನರನೇ. ಅವನು ಬರೆದ 'ಥಮೋಡೈನಾಮಿಕ್ಸ್
> ಆಫ್ ದ ಅಟ್ಮಾಸ್ಪಿಯರ್' ಕೃತಿಯನ್ನು ಈಗ ಪವನವಿಜ್ಞಾನದ ಮೊದಲ ಪಠ್ಯಪುಸ್ತಕ ಎಂದು
> ಪರಿಗಣಿಸಲಾಗುತ್ತದೆ. ವೆಗ್ನರ್ ಪ್ರಕಾರ ಸುಮಾರು 20 ಕೋಟಿ ವರ್ಷಗಳ ಹಿಂದೆ ಜಗತ್ತಿನ ಏಳು
> ಭೂಖಂಡಗಳೂ ಸೇರಿ ಅಖಂಡವಾದ ಒಂದೇ ಭೂಭಾಗವಾಗಿತ್ತು. (ಆಗ ಆಸ್ಟ್ರೇಲಿಯ ನಮ್ಮ ಕೋಲಾರಕ್ಕೆ
> ಅಂಟಿಕೊಂಡಿತ್ತು!) ಅವು ವರ್ಷಕ್ಕೆ ಒಂದೆರಡು ಇಂಚಿನಷ್ಟೇ ದೂರ ಸರಿಯಲು ಶುರುವಾದ ಮೇಲೆ
> ಆರೂವರೆ ಕೋಟಿ ವರ್ಷಗಳ ಹಿಂದೆ ಈಗಿರುವಂಥ ರೂಪ ಭೂಮಿಗೆ ಸಿಕ್ಕಿತು. ಅಖಂಡವಾಗಿದ್ದ
> ಭೂಭಾಗವನ್ನು ವೆಗ್ನರ್ 'ಖ್ಟಿkಟ್ಞಠಿಜ್ಞಿಛ್ಞಿಠಿ' ಎಂದು ಕರೆದಿದ್ದಾನೆ. (ಇದಕ್ಕೆ ಮುಂದೆ
> ಪ್ಯಾಂಜಿಯಾ ಎಂಬ ಹೆಸರು ಬಂತು) ಈ ಭೂಭಾಗಗಳನ್ನು ಹೊತ್ತಿರುವ ಶಿಲಾಫಲಕಗಳ ಅಲುಗಾಟ ಇನ್ನೂ
> ನಿಂತಿಲ್ಲ. ಇವುಗಳ ನಡುವೆ ನೂರಿನ್ನೂರು ಕಿಲೋಮೀಟರ್ ಆಳದಲ್ಲಾಗುವ ಉಜ್ಜಾಟವೇ ಭೂಕಂಪಕ್ಕೆ
> ಕಾರಣ.
>
> [email protected]
> ಸಿದ್ದರಾಮಪ್ಪ. ಎಸ್.ಎಂ
> ಸಶಿ ಕಲಾ
> ಸರ್ಕಾರಿ ಪ್ರೌಢ ಶಾಲೆ
> ಗಂಜಿಗೆರೆ. ಕೆ ಆರ್ ಪೇಟೆ ತಾ||
> ಮಂಡ್ಯ ಜಿಲ್ಲೆ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAJCvfyUFgbhOf3Ng2UBb7ZwSKvkyKVJMkT6ejWu5gH5WcbbZAQ%40mail.gmail.com
> <https://groups.google.com/d/msgid/socialsciencestf/CAJCvfyUFgbhOf3Ng2UBb7ZwSKvkyKVJMkT6ejWu5gH5WcbbZAQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>



-- 
Basavaraj. s.Gogi.
                   A.M.
Girls,Govt.p.u.college shorapur
po:Shorapur  Dist : yadgiri.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABPNLHRnErF9cLzeP-uoamLekf3jpuoFXA1CSWvQ_6ChFQ9CbA%40mail.gmail.com.
For more options, visit https://groups.google.com/d/optout.

Reply via email to