ಸಮೀರ ಮೇಡಂ, ಕಗ್ಗದ ಸಾಲುಗಳು ಬಹಳ ಅರ್ಥಗರ್ಭಿತವಾಗಿದೆ, ದಯಮಾಡಿ ಪ್ರತಿ ದಿನವು ಕಗ್ಗದ ಸಾಲುಗಳನ್ನುಹಾಗು ತಾತ್ಪರ್ಯವನ್ನು ತಿಳಿಸಿ. On May 9, 2017 9:03 PM, "Sameera samee" <[email protected]> wrote:
> > 🙏 *ಡಿ.ವಿ.ಜಿ ಬೆಳಗು:-*🙏 > > *ನೂರಾರು ಮತವಿಹುದು ಲೋಕದುಗ್ರಾಣದಲಿ|* > *ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್||* > *ಸಾರದಡುಗೆಯನೊಳವಿಚಾರದೊಲೆಯಲಿ ಮಾಡು|* > *ಬೇರೆ ಮತಿ ಬೇರೆ ಮತ – ಮಂಕುತಿಮ್ಮ||934||* > > *ನಲ್ವೆಳಗು-ಕವಿತಾ ಅಡೂರು* > > ಲೋಕವೆಂಬ ಉಗ್ರಾಣದಲ್ಲಿ ನೂರಾರು ಮತವಿದೆ. ಅದರಲ್ಲಿ ನಿನ್ನ ಅಭಿರುಚಿಗೆ ಒಪ್ಪುವುದನ್ನು > ಆರಿಸಿಕೊ. ಅವುಗಳಲ್ಲಿ ನಿನಗೆ ದೊರಕಿರುವ ಸಾರವನ್ನು , ವಿಚಾರವೆಂಬ ಒಲೆಯಲ್ಲಿ ಅಡುಗೆ ಮಾಡು. > ಪ್ರತಿಯೊಬ್ಬರದ್ದೂ ಕೂಡಾ ಬೇರೆ ಬೇರೆ ಮತಿ, ಅದಕ್ಕನುಸಾರವಾಗಿಯೇ ಬೇರೆ ಬೇರೆ ಮತವೂ > ಇರುತ್ತದೆ. > > ಜಗತ್ತು ದೈವಸೃಷ್ಟಿ ಎನ್ನುವುದನ್ನು ನಾವೆಲ್ಲರೂ ಬಲ್ಲೆವು. ಸೂಕ್ಷ್ಮವಾಗಿ ಅವಲೊಕಿಸಿದರೆ > ಅದೆಷ್ಟು ವೈವಿಧ್ಯತೆಯನ್ನು ನಾವಿಲ್ಲಿ ಕಾಣುತ್ತೇವೆ. ಹಾಗೆಯೇ ಜೀವನ ಕ್ರಮದಲ್ಲಿ, > ಆಚಾರವಿಚಾರಗಳಲ್ಲಿ, ಗುಣ-ಧರ್ಮದಲ್ಲಿ ವ್ಯತ್ಯಾಸವಿರುವುದೂ ಹೌದು. ಈ ವಿಭಿನ್ನತೆಯೊಳಗೆಯೇ > ನಾವು ಒಂದಾಗಿ ಬಾಳುತ್ತಿದ್ದೇವೆ. ಆದರೆ ಎಲ್ಲವನ್ನು ಸಹಿಸಿಕೊಂಡು, ಯಾವುದನ್ನೂ > ನಿರಾಕರಿಸದೆ, ದ್ವೇಷಿಸದೆ ,ತಿರಸ್ಕರಿಸದೆ ಬಾಳುತ್ತಿದ್ದೇವೆಯೇ? ಯೋಚಿಸ ಬೇಕಿದೆ. > > ಗಗನವನ್ನು ಸೋಕುವಂತೆ ಕಾಣುವ ಪರ್ವತ ಶ್ರೇಣಿ. ಅದರಾಚೆಗೇನಿದೆ ಎಂದು ಕಾಣಲು ಸಾಧ್ಯವೇ > ಇಲ್ಲವೆಂಬಂತೆ , ಆ ಪರ್ವತಕ್ಕೆ ಹೊದೆದ ಹಸಿರ ಚಾದರ! . ಆ ಶಿಖರವನ್ನು ಏರಿದರೆ ಭಗವಂತನ > ದರ್ಶನವಾಗುತ್ತದೆ, ಬದುಕು ನೆಮ್ಮದಿಯನ್ನು ಕಾಣುತ್ತದೆ ಎಂಬ ಸತ್ಯವನ್ನು ತಿಳಿದ ಹಲವರು; ಆ > ಪರ್ವತವನ್ನು ಹತ್ತಲು ಪ್ರಯತ್ನಿಸುತ್ತಾರೆ. ಅದೇನು ಅಷ್ಟು ಸುಲಭದ ವಿಚಾರವಾಗಿರಲಿಲ್ಲ. > ಪರ್ವತವನ್ನು ಏರಲು ಹಲವು ಹಾದಿಗಳಿತ್ತು. ಯಾವ ಹಾದಿಯನ್ನು ಹಿಡಿದು ನಡೆಯುವುದು > ಎನ್ನುವುದನ್ನು ನಿರ್ಧರಿಸುವುದು ; ಚಾರಣಿಗರ ಜಾಣ್ಮೆಗೆ ಒಡ್ಡಿದ ಸವಾಲಾಗಿತ್ತು. ಪ್ರತಿ > ಹಾದಿಯೂ ಒಂದಕ್ಕಿಂತ ಒಂದು ಭಿನ್ನ. ದಟ್ಟ ಅರಣ್ಯದ ನಡುವಿನ ಇರುಳ ದಾರಿ ಸ್ಪಷ್ಟವಾಗಲು , > ಅಲ್ಲಲ್ಲಿ ಮಾರ್ಗದರ್ಶಕ ದೀಪಗಳಿದ್ದರೂ, ನಡೆವ ಹೆಜ್ಜೆಗಳಿಗೆ ಧೈರ್ಯ ಬೇಕೇ ಬೇಕು. ಹೀಗೆ > ಬೆಟ್ಟ ಏರುವವರು ಹಲವರಿದ್ದರೂ, ಶಿಖರಾಗ್ರವನ್ನು ತಲುಪಿದವರು ವಿರಳ. ಕಾರಣ; ತಮ್ಮ > ಮನಸ್ಸಿಗೆ ಒಗ್ಗುವ ದಾರಿಯನ್ನು ಆಯ್ದು ಕೊಂಡು ನಡೆಯ ಹೊರಟ ಕೆಲವು ದಿನಗಳ ನಂತರ, ಆ ದಾರಿ > ಕಷ್ಟಕರವೆಂದೋ, ಸ್ವಾರಸ್ಯಕರವಲ್ಲವೆಂದೊ, ಅಪನಂಬಿಕೆಯಿಂದಲೋ ಇನ್ನೊಂದನ್ನು > ಆರಿಸಿಕೊಳ್ಳುತ್ತಿದ್ದರು. ಮತ್ತದೂ ಬೇಡವೆಂದು ಮಗದೊಂದನ್ನು... ಹೀಗೆ ಹಾದಿಗಳನ್ನು ಅರಸಿ, > ಆರಿಸಿ ,ಬದಲಿಸಿ ಕೊಳ್ಳುವುದರಲ್ಲೇ ಬದುಕು ಕಳೆದು ಹೋಗುತ್ತಿತ್ತೇ ಹೊರತು ಶಿಖರಾಗ್ರವನ್ನು > ತಲುಪುವುದು ಸಾಧ್ಯವಾಗುತ್ತಿರಲಿಲ್ಲ. ನಾವೇನಾದರೂ ಹೀಗಿದ್ದೇವೆಯೇ? > > ಸಮಾಜವನ್ನು, ಜನತೆಯನ್ನು ಉದ್ಧರಿಸಲೋಸುಗ, ಆಧ್ಯಾತ್ಮಿಕತೆಯನ್ನು ಪರಿಚಯಿಸಲೋಸುಗ ಹಲವು > ಮತ-ಧರ್ಮಗಳು, ಧರ್ಮಪ್ರಚಾರಕರು, ಗುರು ಪೀಠಗಳು ಹುಟ್ಟಿಕೊಂಡಿವೆ. ಪುರಾಣ ಗ್ರಂಥಗಳೂ > ಹಲವಿವೆ. ಎಲ್ಲ ಮತ-ಧರ್ಮಗಳೂ ಬೇರೆ ಬೇರೆ ರೀತಿಯಲ್ಲಿ ದೇವರ ಬಗ್ಗೆ , ದೇವರ ಮಹಿಮೆಯ > ಬಗ್ಗೆ ವಿವರಿಸುತ್ತದೆ. ಎಲ್ಲಾ ಅಭಿಪ್ರಾಯಗಳನ್ನು ಆಲಿಸುತ್ತಾ, ಎಲ್ಲವನ್ನು ಗೌರವಿಸುತ್ತಾ, > ನಮ್ಮ ಆಂತರ್ಯಕ್ಕೆ ಸರಿ ಎನಿಸುವ ಮತ- ಧರ್ಮವನ್ನು ಆಯ್ದುಕೊಂಡು ಅನುಸರಿಸ ಬೇಕು. > ಪ್ರತಿಯೊಂದು ಮತ-ಧರ್ಮಗಳು ಪ್ರತಿಪಾದಿಸುವ ತತ್ವಗಳನ್ನು , ಅದರ ಸಾರ ಸರ್ವಸ್ವವನ್ನು ಅಂತೆಯೇ > ಸ್ವೀಕರಿಸುವುದಲ್ಲ. ಯಾರದೋ ಅಭಿಪ್ರಾಯಕ್ಕೆ ತಕ್ಕಂತೆ ನಡೆಯುವುದೂ ಸರಿಯಲ್ಲ. ಅಂಧಾನುಕರಣೆ > ಸಲ್ಲದು. ಆ ತತ್ವವನ್ನು ನಮ್ಮ ವಿವೇಚನೆಯೊಳಗಿಟ್ಟು ಪರೀಕ್ಷಿಸ ಬೇಕು. ತನ್ಮೂಲಕ ನಮಗದು > ಒಪ್ಪಿತವಾಗ ಬೇಕು. ಮೂಢನಂಬಿಕೆಗಳನ್ನು, ಅಕಾರಣವಾದ ಆಚರಣೆಗಳನ್ನು ಮೀರಿದ ಉದಾತ್ತ > ನಿಲುವನ್ನಷ್ಟೇ ನಾವು ಗಮನಿಸ ಬೇಕು. ಹೀಗೆ ಸ್ವೀಕೃತವಾದ ಜೀವನ ತತ್ವಕ್ಕೆ ನಾವು ಸದಾ > ಬದ್ಧರಾಗಿಯೇ ಇರಬೇಕು ಮತ್ತು ಈ ರೀತಿ ಆರಿಸಿಕೊಂಡ ದಾರಿಯು, ನಿರ್ವಿಕಾರನೂ, ನಿರ್ಗುಣನೂ ಆದ > ಭಗವಂತನನ್ನು ಸೇರುತ್ತದೆ ಎಂಬ ಅಚಲ ನಂಬಿಕೆ ನಮ್ಮನ್ನು ಔನ್ನತ್ಯಕ್ಕೆ ಏರಿಸುತ್ತದೆ. > > ಹಾಗಾಗಿ ಬದುಕಿಗೊಂದು ಕ್ರಮವನ್ನು, ಮನಸಿಗೊಂದು ನಂಬಿಕೆಯನ್ನು , ರಕ್ಷಣಾತ್ಮಕ ಭಾವವನ್ನು > ನೀಡುವ ಮತ-ಧರ್ಮಗಳನ್ನು ನಮ್ಮ ನಮ್ಮ ಅರಿವಿನ ಬೆಳಕಲ್ಲಿ, ಮನಸ್ಸಿಗೆ ಒಪ್ಪುವಂತೆ > ಅನುಸರಿಸೋಣ. ನಂಬಿಕೆಯ ನೆಲೆಯಲ್ಲಿ ಬದುಕನ್ನು ಬಂಧುರವಾಗಿಸೋಣ. ಎಲ್ಲಾ ತತ್ವಗಳ ಬೆಳಕನ್ನು > ಕಾಣುತ್ತಾ, ಒಳಿತನ್ನು ಸ್ವೀಕರಿಸುತ್ತಾ ಜೊತೆಯಾಗಿ ಬಾಳೋಣ. > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
