On 04-Apr-2017 10:31 PM, "Dinesh. S S" <[email protected]> wrote:

🙏💐 *ಮನಸಿನ ಮಾತು*💐🙏

*DINESH.SS*

*ಆತ್ಮೀಯರೆ.......

ನಮ್ಮ ಬದುಕಿನಲ್ಲಿ *ಹುದ್ದೆ ಉದ್ಯೋಗ* ಕಂಡುಕೊಂಡ್ಮೇಲೆ,
*ನೂರೆಂಟು*  ಆಶೆ-ಆಕಾಂಕ್ಷೆಗಳನ್ನು ಕಟ್ಟಿಕೊಳ್ಳುತ್ತೇವೆ.
*ಕೆಲಸ*ಮಾಡುತ್ತಾ,ಮಾಡುತ್ತಾ ನಾವು ಮಾಡುವ *ಕೆಲಸ ಸಣ್ಣದಾಗುತ್ತದೆ*
ಬೇರೆಯವರು ಮಾಡುವ *ಹುದ್ದೆ ಶ್ರೇಷ್ಠ*ಎನಿಸಲು ಮನಸಿನಲಿ *ಲೆಕ್ಕ
ಹಾಕುತ್ತಿರುತ್ತೇವೆ*ಅಲ್ವಾ...?

*ಒಂದು ಕಥೆ ನೆನಪಾಗುತ್ತೆ.*

*ಲೇಖಕರು* ವಿದ್ವಾನ್ || ಕೆ.ಚಂದ್ರಶೇಖರ.

*ಸುಂದರವಾದ*ಎತ್ತರದ ಮರದ ಕೆಳಗೆ *ಹಚ್ಚನೆಯ* *ಹಸಿರು ತುಂಬಿದ ಹುಲ್ಲು* ಅಲ್ಲಿ ಎರಡು
*ಇಲಿಗಳು* ಮರದ ಬೇರನ್ನು ಕಡಿಯುತ್ತಾ ಇರುವಾಗ ಅಲ್ಲಿಯೇ *ಬೆಕ್ಕು* ಬರುವುದನ್ನು ಕಂಡು
*ಅಂಜಿ* ಇಲಿಯು ನಾನು *ಬೆಕ್ಕಾಗಿದ್ದರೆ* ಯಾರಿಗೆ ಅಂಜದೇ ಆರಾಮವಾಗಿ ಇರಬಹುದಲ್ಲಾ ಎಂದು
ಮನದಲಿ ಬಗೆಯುತ್ತಿರುವಾಗ *ಬೆಕ್ಕಾಗಿ ಮಾರ್ಪಟ್ಟಿತು*
ಬೆಕ್ಕಾಗಿ ಆರಾಮವಾಗಿ ಇದ್ದರೆ ಆಯ್ತು ಎನ್ನುವಷ್ಟರಲ್ಲಿ *ನಾಯಿ* ಅಟ್ಟಿಸಿಕೊಂಡು ಬರುತ್ತದೆ.
ನಾನು *ನಾಯಿ* ಆಗಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದಾಗ *ನಾಯಿ ಆಯಿತು*  ಖುಷಿಯಾಯಿತು.
*ಆನೆಯು* ನಾಯಿಯನ್ನು ಬೆನ್ನಟ್ಟಿಕೊಂಡು ಬಂದಾಗ *ಆನೆ*ಯಾಗಿದ್ದರೆ ಚೆನ್ನ ಎಂದಿತು
ಮರುಕ್ಷಣವೇ *ಆನೆ ಆಯಿತು*ನನ್ನಷ್ಟು ಬಲಶಾಲಿ ಯಾರು ಇಲ್ಲ ನನ್ನನ್ನೂ ಯಾರು ಕೊಲ್ಲಲಾರರು
ಎಂದು ಗರ್ವದಿಂದ ಹೆಮ್ಮೆ ಪಟ್ಟಿತು.
*ಸಿಂಹವು* ಆನೆಯನ್ನು ಬೆನ್ನಟ್ಟಿ ಕೊಂಡು ತಿನ್ನಲು ಬಂದಾಗ ಅಯ್ಯೋ! ನಾನು
*ಸಿಂಹವು*ಆಗಿದ್ದರೆ ಚೆನ್ನಾಗಿರತ್ತಿತ್ತು ಎಂದಾಕ್ಷಣ *ಸಿಂಹವಾಯಿತು,*ನಾನೇ *ಕಾಡಿನ ರಾಜ*
ನನ್ನನ್ನೂ ಯಾರು ಏನು ಮಾಡಲಾರರು ಎಂದು ಆನಂದ ಪಟ್ಟಿತು. *ಬೇಟೆಗಾರ* ಬಿಲ್ಲು ಬಾಣ
ತೆಗಿದುಕೊಂಡು ಬೆನ್ನಟ್ಟಿಕೊಂಡು ಬಂದಾಗ ಓಡಲು ಪ್ರಾರಂಭಿಸಿತು,
ಅಯ್ಯೋ *ಬೇಟಗಾರ*ನಾದರೆ ಚೆನ್ನಾಗಿರುತ್ತಿತ್ತು ಎಂದುಕೊಂಡಾಕ್ಷಣ *ಬೇಟಾರನಾಗಿ
ಮಾರ್ಪಟ್ಟಿತು*
ಬೇಟೆಗಾರನಾದ ಮೇಲೆ ಬೇಟೆ ಆಡಲು ಕಾಡೆಲ್ಲ *ಸುತ್ತಿ,ಸುತ್ತಿ*ಸುಸ್ತು ಆದರೂ, ಒಂದು ಪ್ರಾಣಿಯು
ಸಿಗಲೇ ಇಲ್ಲ. ಆಯಾಸಗೊಂಡು *ಎತ್ತರವಾದ ಸುಂದರವಾದ  ಮರದ* ಕೆಳಗೆ ಕುಂತು *ವಿಶ್ರಾಂತಿ*
ಪಡೆಯುತ್ತಿರು
ವಾಗ, ಎಷ್ಟು ಕಷ್ಟದ ಜೀವನ
ಇದು ಎಂದು, *ಮೇಲೆ* ನೋಡಿದಾಗ,
ಸುಂದರವಾದ *ಮರ* ಕಾಣಿಸುತ್ತದೆ,
*ಮರ*ವಾದರೆ ಬೇಟೆ ಆಡುವುದು,
ಹೊಟ್ಟೆ ತುಂಬಿಸಿಕೊಳ್ಳುವ ಕಷ್ಟ ತಪ್ಪುತ್ತದೆ ಎಂದು ವಿಚಾರ ಮಾಡಿ,
*ಮರ*ವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದಾಕ್ಷಣ *ಮರವಾಯಿತು.* ನಾನು ಇನ್ಮುಂದೆ
ಆರಾಮವಾಗಿ ಜೀವಿಸಬಹುವುದು *ಜೀವ ಭಯ* ಯಾರ ಹೆದರಿಕೆಯೂ ಇಲ್ಲ ಎಂದು *ಖುಷಿಪಟ್ಟು* ಕೆಳಗಡೆ
ನೋಡುತ್ತಿರುವಾಗ *ಇಲಿ*ಗಳು ಮರದ ಬೇರುಗಳನ್ನು *ಕಡಿಯುತ್ತಿದ್ದವು*
ಅಯ್ಯೋ..! ನನ್ನ ಬೇರುಗಳನ್ನು ಕಡಿದರೆ ನಾನು *ನೆಲಕ್ಕೆ* ಉರುಳಿ *ಒಣ ಕಟ್ಟಿಗೆಯಾಗಿ*
ಗೆದ್ದಲು ಹಿಡಿದು ಸತ್ತೋಗುತ್ತೇನೆ ಎಂದು ರೋದಿಸಿ ನಾನು *ಇಲಿ*ಆಗಿದ್ದರೆ
ಚೆನ್ನಾಗಿರುತ್ತಿತ್ತು ಎಂದಾಕ್ಷಣ *ಇಲಿ ಆಯಾಯಿತು.* ಆ ಇಲಿಗೆ *ನಿದ್ದೆಯಿಂದ* ಎಚ್ಚರವಾಯಿತು.
ಕನಸಿನಿಂದ ಹೊರಬಂದು ಯಾವುದೂ *ಶ್ರೇಷ್ಠ ಅಲ್ಲ*ನನ್ನ *ಬದುಕು,*ನನ್ನ ವೃತ್ತಿಯೇ *ಶ್ರೇಷ್ಠ*
ಎಂದು, *ಅರಿವಾಯಿತು.*

*ಆದ್ದರಿಂದ ನಾವೂ*  ಕೂಡಾ ಇರುವ ವೃತ್ತಿಯಲ್ಲಿ ತೃಪ್ತಿ ಪಡದೇ  *ಡಿ.ಸಿ.
ಆಗಬೇಕು,ತಹಶೀಲ್ದಾರ ಆಗಬೇಕು, ಇನ್ನೇನೋ ಅಧಿಕಾರಿ ಆಗಬೇಕು*ಅದು ಶ್ರೇಷ್ಠ. ಆಗ
*ಆರಾಮವಾಗಿರುತ್ತೇವೆ,*
ನನ್ನ ವೃತ್ತಿ *ನನ್ನ ಜೀವನ* ಸರಿಯಿಲ್ಲ ಎಂದು *ಮರುಗಿ ದುಃಖ*ಪಟ್ಟರೇ *ಇಲಿಯ* ಕನಸಿನಂತೆ
*ಅಲ್ವಾ..?*

*ಇದ್ದ ಬದುಕು ವೃತ್ತಿಯಲ್ಲಿಯೇ ತೃಪ್ತಿ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳೋಣ*

*ನಮ್ಮ ಬದುಕು, ನಮ್ಮ ವೃತ್ತಿಯೇ ಶ್ರೇಷ್ಠ ಎಂದು ಸಾರೋಣ*

*ಈ ಪ್ರಪಂಚಕ್ಕೆ*ನಾವು ಬಂದಿರುವುದು ನಾವು ಕಟ್ಟಿಕೊಂಡ *ಬದುಕಿನಲ್ಲಿ* ಸಂತೋಷದಿಂದ
*ಬದುಕುವುದಕ್ಕೆ .*
ಇಲ್ಲ ಸಲ್ಲದ *ಆಸೆಗಳಿಂದ ನಗು* ಮತ್ತು *ಸಂತೋಷವನ್ನೇ*ಮರೆತು ಹೋಗಿದ್ದೇವೆ.
*ಯಾರನ್ನು ನೋಡಿದರೂ ಗಂಟು ಮುಖ, ಮುಖದಲ್ಲಿ ದುಗುಡತೆ.*

ಬೇಡ ಸ್ನೇಹಿತರೇ ನಾವೇನು ಈ ಭೂಮಿ ಮೇಲೆ *ಸಾವಿರ ವರ್ಷ ಇರಲ್ಲ .*

*ನಗುವೇ ಜೀವನ*
*ನಗುವಂತಹ ಸನ್ನಿವೇಶ ಬಂದರೆ ಬಾಯ್ತುಂಬಾ ನಗ್ರಿ*

*ನಗಿಸಿರಿ.*

*ನಗ್ನಗ್ತಾ ಇರಿ........,*  ಸಹೋದರ ಸಹೋದರಿಯರೆ *MAHANTAGOUD T PATIL
SWCM.KSPSTA*💐💐🙏

--

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAM9uPa5F4Y5_X2iu6CJu50r-eKf7QaKRkhLqZbEVX91dj_Y7iQ%40mail.gmail.com.
For more options, visit https://groups.google.com/d/optout.

Reply via email to