ಹೂ ಈಸ್ ಕನ್ಹಯ್ಯ (ಹೇಳದೇ ಉಳಿದ ಅಂಶಗಳು) ಸಿಂಹದಂತಹ ಸಾಧಕರ ಮಣ್ಣಿನಲ್ಲಿ ಜನಿಸಿದ ಸೂಲಂಗಿಗಳು ದೇಶ ವಿರೋಧಿ, ಭಾರತೀಯ ಸಂಸ್ಕೃತಿ ವಿರೋಧಿಗಳ ಕಾಖರ್ಾನೆಯಾಗುತ್ತಿರುವ ಜೆಎನ್ಯುನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿ, ಜಾಮೀನಿನ ಮೇಲೆ ಹೊರಬಂದಿರುವ ಪರಮಪೂಜ್ಯ ಕನ್ಹಯ್ಯನವರ ಕುರಿತು ನಿನ್ನೆ ಬರೆದ ಲೇಖನಕ್ಕೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಆದರೆ, ಇದಕ್ಕೆ ತಥಾಕತಿಥ ಮನಸ್ಥಿತಿಯ ಎಡಪಂಥೀಯರಿಂದ ಬಂದಿರುವ ಲೇಖನದ ವಿರುದ್ಧದ ಪ್ರತಿಕ್ರಿಯೆಗಳೇ ಹೂ ಈಸ್ ಕನ್ಹಯ್ಯ (ಹೇಳದೇ ಉಳಿದ ಅಂಶಗಳು) ಬರೆಯಲು ಪ್ರೇರಣೆ. ಧನ್ಯವಾದಗಳು ವಿರೋಧಿಗಳಿಗೆ..... ಈಗ ವಿಚಾರಕ್ಕೆ ಬರೋಣ... ಹಿಂದಿನ ಲೇಖನದಲ್ಲಿ ಉಲ್ಲೇಖಿಸಿದ ಹಾಗೆ ಕನ್ಹಯ್ಯ ತನ್ನನ್ನು ತಾನು ಒಂದು ಶಕ್ತಿ ಎಂದುಕೊಂಡಿರಬಹುದು. ಆದರೆ ಆ ರೀತಿ ಆತ ಅಂದುಕೊಳ್ಳಲು ಕಾರಣರಾರು ಎನ್ನುವುದನ್ನು ಲೇಖನದ ಆರಂಭದಲ್ಲೇ ಉಲ್ಲೇಖಿಸುವುದು ಸೂಕ್ತ ಎಂದುಕೊಳ್ಳುತ್ತೇನೆ. ಯಾವುದೇ ಒಬ್ಬ ವ್ಯಕ್ತಿ ಸಾಮಾಜಿಕವಾಗಿ ಬೆಳೆಯಲು ಸ್ವಸಾಮಥ್ರ್ಯ ಎಷ್ಟು ಕಾರಣವೋ, ಸಾಮಾಜಿಕ ಬೆಂಬಲವೂ ಅಷ್ಟೇ ಕಾರಣವಾಗುತ್ತದೆ. ಕನ್ಹಯ್ಯನ ವಿಚಾರವನ್ನು ನೋಡುವುದಾದರೆ, ಆತ ಪ್ರಧಾನಿ ನರೇಂದ್ರ ಮೋದಿ ಪರಿವಾರದ ಕಚೇರಿಯಲ್ಲಿ ಸೇವೆ ಸಲ್ಲಿಸಿದಷ್ಟು ವಯಸ್ಸನ್ನು ಕಂಡಿಲ್ಲ, ರಾಜಕೀಯ ಏನೆಂದು ತಿಳಿದುಕೊಂಡಿಲ್ಲದ ಅಪ್ರಬುದ್ದನೇ ಹೌದು. ತಾನು ಕಂಡುಕೊಂಡಿರುವ ಎಡಪಂಥೀಯ ವಿಚಾರಧಾರೆಯೇ ಸರಿಯಾದ್ದು ಎಂದು ನಂಬಿಕೊಂಡು ಪ್ರಧಾನಿಯವರನ್ನು, ಪರಿವಾರವನ್ನು ಹೀಗಳೆಯುತ್ತಾನೆ ಎಂದರೆ ಆತನಿಗೆ ಇನ್ನೆಷ್ಟು ಪಾಠಗಳಾಗಿರಬೇಡ, ಇನ್ನೆಷ್ಟು ವಿಚಾರಧಾರೆಗಳನ್ನು ಎಡಪಂಥೀಯರು ತುಂಬಿರಬೇಡ ಎನ್ನುವ ಅನುಮಾನ ನನ್ನದು. ಇರಲಿ. ಈಗ, ಕನ್ಹಯ್ಯ ತನ್ನನ್ನು ತಾನು ಒಂದು ಶಕ್ತ ಎಂದು ಭ್ರಮೆಯಲ್ಲಿ ತೇಲಲು ಕಾರಣ ಸೋಕಾಲ್ಡ್ ಸೆಕ್ಯುಲರ್ ಪಕ್ಷದ ಕಾಂಗಿಗಳು, ಎಡಪಂಥೀಯರು, ಬುಜೀಗಳು, ಪ್ರಪಗಳು ಹಾಗೂ ಕನ್ಹಯ್ಯನನ್ನು ಹೀರೋ ಎಂದು ಬಂಬಿಸುತ್ತಿರುವ ಕೆಲವು ಪೂವರ್ಾಗ್ರಹ ಪೀಡಿತ ಮಾಧ್ಯಮಗಳು ಕಾರಣ. ಪೂವರ್ಾಗ್ರಹ ಪೀಡಿತ ಮಾಧ್ಯಮ ಎಂದಾಕ್ಷಣ ತಟ್ಟನೆ ನೆನಪಾಗುವುದು ಶ್ರೇಷ್ಟ ಪತ್ರಕತರ್ೆ(?) ಬಖರ್ಾದತ್. ತಾವು ತಿಳಿದಿರುವುದನ್ನೇ ಸತ್ಯ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾ ಚಾನಲ್ನಲ್ಲಿ ಅರಚುವ ಇಂತಹ ಕೆಲವು ಪತ್ರಕರ್ತರಿಂದಾಗಿ, ಅವರು ನೀಡುವ ಬೆಂಬಲದಿಂದಾಗಿ ಕನ್ಹಯ್ಯರಂತಹವರು ರಾತ್ರೋರಾತ್ರಿ ಹೀರೋಗಳಾಗುತ್ತಾರೆ. ಪರಮಪೂಜ್ಯ ಕನ್ಹಯ್ಯನವರು ಜಾಮೀನು ಪಡೆದು ಜೈಲಿನಿಂದ ಹೊರ ಬಂದ ನಂತರ ಈ ಬಖರ್ಾದತ್ ಆತನನ್ನು ಭೇಟಿಯಾಗಿ ಮಾತನಾಡುತ್ತಾರೆ. ಕನ್ಹಯ್ಯ ಜೈಲಿಗೆ ಹೋಗಿ ಬಂದದ್ದು ಈ ದೇಶದ ಸಮಸ್ಯೆಗಾಗಿ ಹೋರಾಡಿಯೇ? ಅಲ್ಲ. ರಾಷ್ಟ್ರ ವಿರೋಧಿ ಹೇಳಿಕೆ ನೀಡಿ. ಅಂತಹ ಆರೋಪಿ ವ್ಯಕ್ತಿಯನ್ನು ಈ ಪತ್ರಕತರ್ೆ ಭೇಟಿಯಾಗಿ ಬೆಂಬಲ ನೀಡುತ್ತಾರೆ. ಆದರೆ, ಪಠಾನ್ಕೋಟ್ ದಾಳಿಯಲ್ಲಿ 6 ಗುಂಡುಗಳ ದೇಹದಲ್ಲಿ ಹೊಕ್ಕಿದ್ದರೂ ದೇಶಪ್ರೇಮ ಮೆರೆದ ಶೈಲೇಶ್ ಗೌರ್ ಜೀವನ್ಮರಣ ಹೋರಾಟ ನಡೆಸಿ, ಅದರಲ್ಲಿ ಜಯಶಾಲಿಯಾದರು. ಇದರಿಂದ ಚೇತರಿಸಿಕೊಂಡ ಗೌರ್ ಮತ್ತೆ ದೇಶ ಸೇವೆಗೆ ಸಿದ್ಧರಾಗಿ ವೀರತ್ವ ಹಾಗೂ ದೇಶಪ್ರೇಮ ಮೆರೆದಿದ್ದಾರೆ. ರಾಷ್ಟ್ರದ್ರೋಹದ ಆರೋಪದಲ್ಲಿ ಜೈಲಿಗೆ ಹೋದ ವ್ಯಕ್ತಿಯನ್ನು ಸಂದಶರ್ಿಸುವ ಈ ಪತ್ರಕತರ್ೆಗೆ, ಈ ದೇಶ ಪ್ರೇಮ ಮೆರೆದ ಧೀರ ಯೋಧನ ನೆನಪಾಗುವುದಿಲ್ಲ ಎಂದರೆ, ಇವರದ್ದು ಇನ್ನೆಂತಹ ನೀತಿಗೆಟ್ಟ ಮನಸ್ಥಿತಿಯಾಗಿರಬೇಕು. ಇನ್ನು ರಾಷ್ಟ್ರೀಯ ಮಾಧ್ಯಮದ ಪರಮಶ್ರೇಷ್ಟ ಪತ್ರಕರ್ತನೊಬ್ಬ ಕನ್ಹಯ್ಯನ ಕುರಿತು ವರದಿ ಮಾಡಲು ಆತನ ಮನೆಗೆ ತೆರಳಿದ್ದನಂತೆ. ಅಲ್ಲಿಂದ ಬಂದ ನಂತರ ಆತ ಹೇಳಿದ್ದೆನೆಂದರೆ, ಕನ್ಹಯ್ಯನ ಕುಟುಂಬ ಕಡುಬಡತನದಲ್ಲಿದೆ. ಅವರು ಎಷ್ಟು ಬಡವರು ಎಂದರೆ, ವರದಿ ಮಾಡಲು ತೆರಳಿದ್ದ ನನಗೆ ಚಹಾ ನೀಡಲೂ ಒಂದು ಒಳ್ಳೆಯ ಲೋಟ ಅವರ ಮನೆಯಲ್ಲಿ ಇರಲಿಲ್ಲ, ಅಷ್ಟು ಬಡವರು ಅವರು ಎಂದು. ಆದರೆ, ನನಗೆ ಮೂಡಿದ ಪ್ರಶ್ನೆ ಅಷ್ಟು ಕಡುಬಡವನಾ ಕನ್ಹಯ್ಯನಿಗೆ ನ್ಯಾಯಾಲಯದಲ್ಲಿ ವಾದ ಮಾಡಿದ ವಕೀಲರಿಗೆ ಹಣ ನೀಡಲು ಹೇಗೆ ಸಾಧ್ಯ. ಅಥವಾ ಆ ವಕೀಲ ಉಚಿತವಾಗಿ ವಾದ ಮಾಡಿದ್ದಾರೆಯೇ? ಮತ್ತೊಂದು ವಿಚಾರವೆಂದರೆ, ಕಡುಬಡವನಾದ ಕನ್ಹಯ್ಯನಿಗೆ, ಜಾಮೀನು ಪಡೆದು ಜೆಎನ್ಯುನಲ್ಲಿ ಭಾಷಣ ಮಾಡುವ ವೇಳೆ ಧರಿಸಿದ್ದ ಜಾಕೇಟ್ ಕೊಳ್ಳುವಷ್ಟು ಹಣವಿತ್ತೆ? ರಾಮ, ರಾಮ... ಇನ್ನುಳಿದಂತೆ, ಒಂದಷ್ಟು ತಥಾಕತಿಥ ಮಾಧ್ಯಮಗಳು ಕನ್ಹಯ್ಯ ಅದೇನೋ ದೇಶಕ್ಕಾಗಿ ಹೋರಾಡಿದ್ದಾನೆ ಎಂಬಂತೆ ಬಿಂಬಿಸುತ್ತಿರುವುದನ್ನು ನಾನೂ ಒಬ್ಬ ಪತ್ರಕರ್ತನಾಗಿ ಖೇದದಿಂದಲೇ ಹೇಳಬೇಕಿದೆ. ಜಾಮೀನು ಪಡೆದು ಹೊರಬಂದ ಕನ್ಹಯ್ಯ, ಮತ್ತೆ ಜೆಎನ್ಯುನಲ್ಲಿ ಭಾಷಣ ಮಾಡುತ್ತಾನೆ. ತನ್ನ ಅರೆಬೆಂದ ಬುದ್ದಿಯಿಂದ ಬಾಯಿಗೆ ಬಂದದ್ದನ್ನೇ ತಾನೊಬ್ಬ ಮಹಾನ್ ವ್ಯಕ್ತಿ ಎಂಬಂತೆ ಮಾತನಾಡಿದ ಆತ, ದೇಶದೊಳಗೆ ಸ್ವಾತಂತ್ರ್ಯ ಬೇಕು ಎನ್ನುತ್ತಾನೆ. ಆದರೆ, ಇದನ್ನು ಕೆಲವು ಮಾಧ್ಯಮಗಳ ವರದಿ ಮಾಡಿದ ಪರಿ ಹೇಗೆ? ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಮೂಲಕ ಕನ್ಹಯ್ಯ ಸ್ವಾತಂತ್ರ್ಯ ರಣಕಹಳೆಯನ್ನು ಮೊಳಗಿಸಿದರು ಎಂದು. ಅಲ್ಲ, ದೇಶದಲ್ಲೇನು ಅರಾಜಕತೆ ಸೃಷ್ಟಿಯಾಗಿದೆಯೇ? ಅಥವಾ ದೇಶವನ್ನು ವಿದೇಶಿಗರು ಬಂದು ಆಳುತ್ತಿದ್ದಾರೆಯೇ? ಅಥವಾ ನಮ್ಮಲ್ಲೇನು ಸವರ್ಾಧಿಕಾರಿ ಸಕರ್ಾರ ಅಸ್ಥಿತ್ವದಲ್ಲಿದ್ದು ಜನರೆಲ್ಲಾ ವಿಲವಿಲನೆ ಒದ್ದಾಡತ್ತಿದ್ದಾರೆಯೇ? ಇದಾವುದರ ವಾಸ್ತವವನ್ನು ಅರಿಯದೇ ಎಳಸುತನ ಪ್ರದಶರ್ಿಸಿ, ರಾಷ್ಟ್ರ ವಿರೋಧಿ ಹೇಳಿಕೆ ನೀಡಿದ ವ್ಯಕ್ತಯನ್ನು ಇವರೆಲ್ಲಾ ಸೇರಿಕೊಂಡು ಹೀರೋ ಮಾಡುತ್ತಾರೆ ಎಂದರೆ ಇವರನ್ನೆಲ್ಲಾ ಏನು ಮಾಡಬೇಕು? ಇದಕ್ಕಾಗಿಯೇ ಮೋದಿಯವರು ಹೇಳಿದ್ದು ಮಾಧ್ಯಮಗಳ ತೋರಿಸಿದ್ದಷ್ಟು ಮಾತ್ರವೇ ದೇಶವಲ್ಲ, ಪ್ರಪಂಚವಲ್ಲ ಎಂದು. ಎಳಸುಗಳಿಗೆ ಎಳಸುಗಳೇ ಜೋಡಿ: ಇನ್ನು ಕನ್ಹಯ್ಯ ಎಂಬ ವೀರ ಮಗನಿಗೆ ಅಣ್ಣನಾಗಿ ಬಂದ ಕಾಂಗಿಗಳ ಯುವರಾಜ ಬೇಷರತ್ ಬೆಂಬಲ ಘೋಷಿಸಿದ್ದಾರೆ. ಪಾಪ ಅನ್ನಿಸುತ್ತದೆ ಅವರನ್ನು ನೋಡಿದರೆ. ಪಾಪ ಯುವರಾಜರೇ ತಮ್ಮ ಪಕ್ಷವನ್ನು ಗೆಲ್ಲಿಸಲಾಗದೇ ಕೇವಲ 44 ಸ್ಥಾನಗಳನ್ನು ಪಡೆದು ಅಧಿಕೃತ ಪ್ರತಿಪಕ್ಷದ ಸ್ಥಾನಮಾನವನ್ನೂ ಪಡೆಯಲು ಸಾಧ್ಯವಾಗದೇ, ಕೊನೆಗೆ ನ್ಯಾಯಾಲಯದಿಂದಲೂ ತಿರಸ್ಕಾರಗೊಂಡಿದ್ದಾರೆ. ಇನ್ನು ಯುವರಾಜರ ಅವಾಂತರಗಳು ಒಂದೆರಡಲ್ಲ. ಅನರ್ಾಬ್ ಗೋಸ್ವಾಮಿಗೆ ನೀಡಿದ ಸಂದರ್ಶನದಿಂದ ಹಿಡಿದು, ಮೊನ್ನೆ ಮೊನ್ನೆ ಸಂಸತ್ ಭಾಷಣದವರೆಗೂ ಅವರು ನೀಡಿದ ಹಾಸ್ಯ ಮನೋರಂಜನೆಯನ್ನು ದೇಶವಾಸಿಗಳು ಮರೆಯುವಂತಿಲ್ಲ. ಇಂತಹ ಯುವರಾಜ ತನಗೆ ಬೆಂಬಲ ನೀಡಿದರೆ, ಆಜಾದಿ ಬೇಕು ಎಂದು ಕೂಗಿ ಆ ಯುವರಾಜದ ಕುಟುಂಬವನ್ನೇ ಪರೋಕ್ಷವಾಗಿ ಅಪಹಾಸ್ಯ ಮಾಡುವುದೇ? ಕೇಂದ್ರ ಸಕರ್ಾರವನ್ನು ಟೀಕಿಸುವ ಬರದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬೇಕು ಎಂದು ಕೂಗಿದರೆ, ಹಾಗಾದರೆ ನಮ್ಮ ಕುಟುಂಬ ನೇತೃತ್ವದ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಸುಳ್ಳೆ ಎಂದು ಯುವರಾಜ ಕಫ್ಯೂಸ್ ಆಗುವುದಿಲ್ಲವೇ. ನೀವು ಹೀಗೆ ಮಾಡಬಹುದೇ ಕನ್ಹಯ್ಯ ಕುಮಾರ್. ಇದರೊಂದಿಗೆ ನೋಡುವುದಾದರೆ, ಸಕ್ರಿಯ ರಾಜಕೀಯದಲ್ಲಿದ್ದೂ ಅಪ್ರಬುದ್ದತೆಯನ್ನು ಹಾಸುಹೊದ್ದುಕೊಂಡಿರುವ ರಾಹುಲ್ ಕನ್ಹಯ್ಯನನ್ನು ಬೆಂಬಲಿಸುತ್ತಾರೆ. ರಾತ್ರೋ ರಾತ್ರಿ ಅಣ್ಣ ಹಜಾರೆ ಸಿದ್ದಾಂತವನ್ನು ಗಾಳಿಗೆ ತೂರಿ ರಾಜಕೀಯ ಪ್ರವೇಶಿಸಿ ಮುಖ್ಯಮಂತ್ರಿಯಾದ ಕೇಜ್ರಿವಾಲ್ ಕನ್ಹಯ್ಯನ ಭಾಷಣವನ್ನು ಮೆಚ್ಚಿ ಟ್ವೀಟ್ ಮಾಡುತ್ತಾರೆ. ದೇಶದ ಬುದ್ಧಿಜೀವಿ(?)ಗಳು ಹೇಳಿಕೊಂಡವರು ನನ್ನ ಮಗ, ಅಣ್ಣ, ತಮ್ಮ ಎಂದು ಅಪ್ಪಿಕೊಳ್ಳುತ್ತಾರೆ. ಇವರೆಲ್ಲರಿಗೂ ನೇತಾರನಾಗುವುದು ಮತ್ತೆ ಅದೇ ಯುವರಾಜ. ಚೆನ್ನಾಗಿದೆ, ಅಪ್ರಬುದ್ಧರ ಕೂಟ, ಎಳಸುಗಳಿಗೆ ಎಳಸುಗಳೇ ಜೋಡಿ. ಮತ್ತೆ ಈ ಎಲ್ಲಾ ಎಳಸುಗಳು ಸೇರಿಕೊಂಡು ಸ್ವಾತಂತ್ರ್ಯ ಬೇಕು ಎಂದು ಕೇಳುತ್ತವೆ. ಊಫ್... ಇರಲಿ... ಇನ್ನು, ಕಾಂಗಿಗಳು, ಎಡಪಂಥೀಯರು ಹಾಗೂ ಮೋದಿ ವಿರೋಧಿಗಳು ಸೇರಿಕೊಂಡು ಕೇಂದ್ರ ಸಕರ್ಾರವನ್ನು ಹೀನಾಮಾನ ತರಾಟೆಗೆ ತೆಗೆದುಕೊಂಡಿದ್ದೀರಾ. ಆದರೆ, ಎರಡು ವರ್ಷವೂ ಅಧಿಕಾರವನ್ನು ಪೂರ್ಣಗೊಳಿಸ ಮೋದಿ ಸಕರ್ಾರದಿಂದ ಅದ್ಬುತ ನಿರೀಕ್ಷಿಸುವ ನೀವು ಅರವತ್ತು ವರ್ಷ ಏನನ್ನು ಮಾಡಿದ್ದೀರಿ ಎಂದು ಚಿಂತಿಸಿನೋಡಿ. ಅದಕ್ಕೂ ಮುನ್ನ ಈ ಪ್ರಶ್ನೆಗಳಿಗೆ ಉತ್ತರಿಸಿ. ಈ ಪ್ರಶ್ನೆಗಳಿಂದ ಆಜಾದಿ ಬೇಕು ಎಂದು ಅನಿಸಲಿಲ್ಲವೇ? ಇದರಿಂದ ಆಜಾದಿ ಬೇಕು ಎನಿಸಲಿಲ್ಲವೇ? ಪ್ರಶ್ನೆ 1. 60 ವರ್ಷ ನೀವು ದೇಶವನ್ನಾಳಿದ ಮೇಲು ನಿಮ್ಮ ಪ್ರಣಾಳಿಕೆಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ ಪ್ರಸ್ತಾಪವೇಕೆ? ಪ್ರಶ್ನೆ 2. ಸ್ವಾತಂತ್ರ್ಯದ ವೇಳೆ ದೇಶವನ್ನು ವಿಭಜಿಸುವ ಕಾರ್ಯ ಮಾಡಿದ್ದು ಯಾವ ಪಕ್ಷದ ಸಕರ್ಾರ? ಪ್ರಶ್ನೆ 3. ಇಂದಿನ ಕಾಶ್ಮೀರ ವಿವಾದ ಸೃಷ್ಠಿಯಾಗಲು ಕಾರಣಕರ್ತರಾರು? ಪ್ರಶ್ನೆ 4. ಭಾರತದ ಭೂಮಿಯನ್ನು ಚೀನಾ ವಶ ಪಡಿಸಿಕೊಂಡ ಯಾವ ಸಕರ್ಾರ ಅಧಿಕಾರದಲ್ಲಿತ್ತು? ಪ್ರಶ್ನೆ 5. ಭಾರತದ ಐದು ವೀರ ಸೇನಾನಿಗಗಳ ತಲೆಯನ್ನು ಪಾಕಿಗಳು ಕತ್ತರಿಸಿಕೊಂಡು ಹೋದಾಗ ಯಾರ ಸಕರ್ಾರ ಆಡಳಿತದಲ್ಲಿತ್ತು? ಪ್ರಶ್ನೆ 6. ಕಾಮನ್ವೆಲ್ತ್ ಕ್ರೀಡಾಕೂಟ ಹಗರಣದ ಮೂಲಕ ದೇಶದ ಮಾನವನ್ನು ಹರಾಜು ಹಾಕಿದ್ದು ಯಾರ ಸಕರ್ಾರ? ಪ್ರಶ್ನೆ 7. 2ಜಿ ಸ್ಪೆಕ್ಟ್ರಮ್ ಹಗರಣ ನಡೆದಿದ್ದು ಯಾರ ಸಕರ್ಾರದ ಅವಧಿಯಲ್ಲಿ? ಪ್ರಶ್ನೆ 8. ಈ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಸಿಖ್ ಸಮುದಾಯದ ಮರಣಮೃದಂಗ ನಡೆದಿದ್ದು ಯಾರ ವೈಭವದಲ್ಲಿ? ಪ್ರಶ್ನೆ 9. ಅಸ್ಸಾಂನಲ್ಲಿ ಹಿಂದೂಗಳ, ಕಾಶ್ಮೀರದಲ್ಲಿ ಪಂಡಿತರ ಮಾರಣ ಹೋಮ ನಡೆದಾಗ ಯಾರು ಆಡಳಿತ ನಡೆಸುತ್ತಿದ್ದರು? ಪ್ರಶ್ನೆ 10. ಭಾರತೀಯ ಮುದ್ರೆಯಿಂದ ಸತ್ಯಮೇವ ಜಯತೆಯನ್ನು ತೆಗೆದು ಹಾಕಿದ್ದು ಯಾರು? ಪ್ರಶ್ನೆ 11. ಮುಂಬೈ ದಾಳಿ ನಡೆದಾಗ ಯಾರ ಸಕರ್ಾರ ಅಧಿಕಾರದಲ್ಲಿತ್ತು? ಈ ಎಲ್ಲಾ ಹಗರಣ ಹಾಗೂ ಹತ್ಯಾಕಾಂಡಗಳು ನಡೆದಾಗ ದೇಶದಲ್ಲಿ ಆಜಾದಿ ಇತ್ತು ಎನಿಸಿತ್ತೆ ಮಿ. ಕನ್ಹಯ್ಯ? ನಿನ್ನೆ ಬರೆದ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ನವೀನ್ ಎಂಬ ಸ್ನೇಹಿತರೊಬ್ಬರು ಒಂದಷ್ಟು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಲೇಖನಕ್ಕೆ ಪೂರಕವಾಗಿ ಆ ಪ್ರಶ್ನೆಗಳನ್ನು ಇಲ್ಲ ಉಲ್ಲೇಖಿಸುತ್ತಿದ್ದೇನೆ: 1. ಕನ್ಹಯ್ಯನಿಗೆ ಈಗ 29 ವರ್ಷ. ಯಾವುದೇ ಪಿಎಚ್ಡಿ, ಎಂಬಿಬಿಎಸ್ ಸಾಮಾನ್ಯವಾಗಿ 29 ವರ್ಷದೊಳಗೆ ಮುಗಿದು ಹೋಗುತ್ತದೆ. ಆದರೆ ಕನ್ಹಯ್ಯ ಮಾತ್ರ ಇನ್ನೂ ವಿದ್ಯಾಥರ್ಿಯಾಗಿಯೇ ಇದ್ದಾನೆ. ಅದು ಹೇಗೆ ಸಾಧ್ಯ. ಆತನ ದಿನಗಳು ಮುಂದೆ ಹೋಗುತ್ತಿಲ್ಲವೇ? 2. ಮಧ್ಯಮ ವರ್ಗದ ವಿದ್ಯಾಥರ್ಿಗಳು ಸಾಮಾನ್ಯವಾಗಿ ಶಿಕ್ಷಣ ಮುಗಿಸಿ 25 ರಿಂದ 28 ವರ್ಷದೊಳಗೆ ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ಸೆಟ್ಲ್ ಆಗುತ್ತಾರೆ. ಆದರೆ ಕಡುಬಡತನದಲ್ಲಿರುವ ಕನ್ಹಯ್ಯ ಮಾತ್ರ 29 ವರ್ಷವಾದರೂ ಕೆಲಸಕ್ಕೆ ಸೇರುವುದಿಲ್ಲ, ದುಡಿಮೆ ಮಾಡುವುದಿಲ್ಲ ಎಂದರೆ ಆಶ್ಚರ್ಯವಲ್ಲವೇ? 3. ಕನ್ಹಯ್ಯನ ಜಾಮೀನು ಅಜರ್ಿ ಪ್ರಕರಣವನ್ನು ನಿಬಾಯಿಸಿದ್ದು ದೇಶದ ಪ್ರಖ್ಯಾತ ವಕೀಲ. ಆದರೆ, ಕಡುಬಡವನಾದ ಕನ್ಹಯ್ಯ ವಕೀಲರ ಸಂಭಾವನೆ ನೀಡಿದ್ದು ಹೇಗೆ? 4. ವಿದ್ಯಾಥರ್ಿ ವೇತನ, ವಿಶ್ವ ವಿದ್ಯಾಲಯಗಳಲ್ಲಿ ಓದುತ್ತಿರುವ ಬಡ ವಿದ್ಯಾಥರ್ಿಗಳಿಗೆ ವೆಚ್ಚ ಮಾಡುವ ಹಣ ನಾವು ಪಾವತಿಸಿದ ತೆರಿಗೆ ಮೊತ್ತ. ಆದರೆ, ರಾಜಕೀಯ ಮಾಡಿಕೊಂಡು ತಿರುಗಾಡುವ, ಹಾಸ್ಟೆಲ್ಗಳಲ್ಲಿ ಶಾಶ್ವತವಾಗಿ ಠಿಕಾಣಿ ಹೂಡಿರುವ ಇಂತಹವರಿಗಾಗಿ ನಮ್ಮ ತೆರಿಗೆ ಹಣವನ್ನು ವ್ಯಯಿಸಬೇಕೆ? 5. ವರದಿಯ ಪ್ರಕಾರ ಕನ್ಹಯ್ಯ ಬಿಹಾರ ಚುನಾವಣಾ ಪ್ರಚಾರಕ್ಕೆ ಮೂರು ತಿಂಗಳು ತೆರಳಿದ್ದ. ಅಂದರೆ ಆ ಮೂರು ತಿಂಗಳು ಅವನ ಶೈಕ್ಷಣಿಕತೆಯ ಕಥೆ ಏನಾಯಿತು? ವಿದ್ಯಾಥರ್ಿಗೆ ರಾಜಕೀಯವೇಕೆ? ಕೊನೆಯ ಮಾತು: ಕನ್ಹಯ್ಯ ವಿದ್ಯಾಥರ್ಿ, ಅದರಲ್ಲೂ ಬಡತನದಿಂದ ಬಂದ ವಿದ್ಯಾಥರ್ಿ, ಅದರಲ್ಲೂ ಆಜಾದಿ ಕೇಳುವ ವಿದ್ಯಾಥರ್ಿ, ಅದರಲ್ಲೂ ಸತ್ಯ, ನ್ಯಾಯಕ್ಕಾಗಿ ಹೋರಾಡುವ ವಿದ್ಯಾಥರ್ಿ, ಎಲ್ಲಕ್ಕಿಂತಲೂ ಸತ್ಯವನ್ನೇ ಉಸಿರಾಗಿಸಿಕೊಂಡಿರುವ ಸಂಶೋಧನಾ ವಿದ್ಯಾಥರ್ಿ. ಮತ್ತೊಮ್ಮೆ ಹೇಳುತ್ತೇನೆ ಸಂಶೋಧನಾ ವಿದ್ಯಾಥರ್ಿ ಅಂದರೆ ರಿಸಚರ್್ ಸ್ಕಾಲರ್(ಪಿಎಚ್ಡಿ ವಿದ್ಯಾಥರ್ಿ) ಆದರೆ: ಜೆಎನ್ಯು ವೆಬ್ಸೈಟ್ನಲ್ಲಿ ಮಾತ್ರ ಕನ್ಹಯ್ಯನ ಹೆಸರನ್ನು ಪ್ರಿ-ಪಿಎಚ್ಡಿ ವಿದ್ಯಾಥರ್ಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಏಕೆ ಎನ್ನುವುದೇ ಪ್ರಶ್ನೆ??? On 24 Mar 2016 20:15, "Basavaraja Naika H.D." <[email protected]> wrote:
> ಭಗವದ್ಗೀತೆ ಹೇಳುವವರೂ ಬಾಯಿಂದ , ಕೈಯಿಂದ ಈ ಮಾತು, ಈ ಕೃತ್ಯ > > ಆದರೆ ಕನ್ಹಯ್ಯ ಕೊನೆಗೆ ಈ ಮಾತು ಹೇಳಿದ್ದಾರೆ ಗಾಂಧಿವಾದ ನನ್ನ ತತ್ವ > On 24-Mar-2016 7:52 pm, "prajwal nayak" <[email protected]> wrote: > >> Good work >> On 24 Mar 2016 19:38, "Basavaraja Naika H.D." < >> [email protected]> wrote: >> >>> ಹೈದರಾಬಾದ್: ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೆಎನ್ಯುು ವಿದ್ಯಾರ್ಥಿ >>> ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮೇಲೆ ಚಪ್ಪಲಿ ಎಸೆದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. >>> ರಾಷ್ಟ್ರವಿರೋಧಿ ಘೊಷಣೆ ಕೂಗಿದ್ದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಕನ್ಹಯ್ಯಾ ಮೂರು ವಾರಗಳ >>> ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಸೆಮಿನಾರ್ನಲ್ಲಿ ಭಾಗವಹಿಸಲು ಹೈದರಾಬಾದ್ >>> ವಿಜಯವಾಡಕ್ಕೆ ಭೇಟಿ ನೀಡಿದ್ದನು. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ವೇಳೆ ಸಭಿಕರ ಕುಳಿತ >>> ಎರಡನೆಯ ಸಾಲಿನಲ್ಲಿದ್ದ ಯುವಕರ ಗುಂಪೊಂದು ಕನ್ಹಯ್ಯಾ ವಿರುದ್ಧ ಘೂಷಣೆಗಳನ್ನು ಕೂಗಿ ಚಪ್ಪಲಿ >>> ಎಸೆದಿದ್ದಾರೆ. ಇವರನ್ನು ನಂತರ ಪೊಲೀಸರು ಬಂಧಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಿದ >>> ಕನ್ಹಯ್ಯಾ ''ನೀವು ಏನು ಬೇಕಾದರೂ ಮಾಡಿಕೊಳ್ಳಿ. ಆದರೆ ಅವುಗಳಗೆ ಹೆದರುವವ ನಾನಲ್ಲ. >>> >>> http://dhunt.in/12iik >>> >>> via Dailyhunt >>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit >>> https://groups.google.com/d/msgid/socialsciencestf/CACwGsz4c5Ovvz-BCnSjzRYiykYabdHUr1e%3DeA-DLSeawqKEWcg%40mail.gmail.com >>> <https://groups.google.com/d/msgid/socialsciencestf/CACwGsz4c5Ovvz-BCnSjzRYiykYabdHUr1e%3DeA-DLSeawqKEWcg%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CALWUL%3D5YjYsn9p2pYjh5h-J7hMmEhSJObTUOmb6QJHPur6EXMA%40mail.gmail.com >> <https://groups.google.com/d/msgid/socialsciencestf/CALWUL%3D5YjYsn9p2pYjh5h-J7hMmEhSJObTUOmb6QJHPur6EXMA%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CACwGsz4dshb%3Dur-qncaMcUbohpV_deExo4g8rVUnE8LJ_d-CUw%40mail.gmail.com > <https://groups.google.com/d/msgid/socialsciencestf/CACwGsz4dshb%3Dur-qncaMcUbohpV_deExo4g8rVUnE8LJ_d-CUw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CALWUL%3D5fXt5j8rRSv61-jvTTXggS-4qjC6SqSGvmigsimU_2og%40mail.gmail.com. For more options, visit https://groups.google.com/d/optout.
