ಸೂಪರ್ ಗುರು, Mahadevappa Kundaragi GHS Avathi Chikkamagaluru Tq&Dist mob:9481216233
On 01-Mar-2019 9:36 PM, "GENIUS CSK" <[email protected]> wrote: > > ಆತ್ಮೀಯ ಶಿಕ್ಷಕ ಮಿತ್ರರೇ ಇಂದು ನಡೆದ ಸಮಾಜ ವಿಜ್ಞಾನ ವಿಷಯದ ರಾಜ್ಯ ಮಟ್ಟದ ಪೂರ್ವ > ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಒಮ್ಮೆ ಅವಲೋಕಿಸಿದಾಗ ಅದರಲ್ಲಿ ಅನೇಕ ದೋಷಗಳು ಕಂಡು > ಬಂದಿದೆ. ಇಂತಹ ದೋಷಗಳ ಕುರಿತು ಒಮ್ಮೆ ಕಣ್ಣಾಡಿಸೋಣ... > > 1. ಪಾಠಕ್ಕೆ ನಿಗದಿಪಡಿಸಿದ ಅಂಕಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ಉದಾಹರಣೆಗೆ ಇತಿಹಾಸದ > 6ನೇ ಅಧ್ಯಾಯ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಈ ಅಧ್ಯಾಯಕ್ಕೆ ಇಲಾಖೆಯು ಮೂರು > ಅಂಕಗಳನ್ನು ನಿಗದಿ ಪಡಿಸಿದೆ. ಆದರೆ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಈ > ಅಧ್ಯಾಯದಿಂದ ಕೇವಲ ಒಂದು ಅಂಕದ ಪ್ರಶ್ನೆ ಮಾತ್ರ ಕೇಳಲಾಗಿದೆ. ಇದಕ್ಕೆ ಬದಲಾಗಿ 7ನೇ ಅಧ್ಯಾಯ > ಭಾರತದ ಸ್ವಾತಂತ್ರ್ಯ ಹೋರಾಟದ ಅಧ್ಯಾಯಕ್ಕೆ 2 ಅಂಕವನ್ನು ನಿಗದಿಪಡಿಸಲಾಗಿದೆ. ಆದರೆ ಈ > ಪ್ರಶ್ನೆ ಪತ್ರಿಕೆಯಲ್ಲಿ ಒಂದು ಅಂಕದ 2 ಪ್ರಶ್ನೆಗಳನ್ನು ಮತ್ತು 2 ಅಂಕದ ಒಂದು > ಪ್ರಶ್ನೆಯನ್ನು ಒಳಗೊಂಡಂತೆ 4ಅಂಕಕ್ಕೆ ಕೇಳಲಾಗಿದೆ. > ಅದೇ ರೀತಿ ಭೂಗೋಳ ವಿಜ್ಞಾನದ 2ನೇ ಅಧ್ಯಾಯಕ್ಕೆ 2 ಅಂಕಗಳು ನಿಗದಿಯಾಗಿದೆ. ಆದರೆ > ಪ್ರಶ್ನೆಪತ್ರಿಕೆಯಲ್ಲಿ ಎರಡು ಅಂಕದ ಒಂದು ಪ್ರಶ್ನೆ ಹಾಗೂ ನಕ್ಷೆಯು ಸೇರಿದಂತೆ ಮೂರು > ಅಂಕಕ್ಕೆ ಪ್ರಶ್ನೆಗಳನ್ನು ಕೇಳಲಾಗಿದೆ. ಭೂಗೋಳದ 4ನೇ ಅಧ್ಯಾಯಕ್ಕೆ ಒಂದು ಅಂಕ > ನಿಗದಿಯಾಗಿದೆ. ಆದರೆ ಪ್ರಶ್ನೆ ಪತ್ರಿಕೆಯಲ್ಲಿ ಪಾಠಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ > ಬಂದಿರುವುದಿಲ್ಲ. ಅದೇ ರೀತಿ 8ನೇ ಅಧ್ಯಾಯ ಕ್ಕೆ ಎರಡು ಅಂಕವನ್ನು ನಿಗದಿ ಮಾಡಲಾಗಿದೆ ಆದರೆ > ಈ ಅಧ್ಯಾಯದಿಂದ ಕೇವಲ ಒಂದು ಅಂಕದ ಪ್ರಶ್ನೆ ಮಾತ್ರ ಕೇಳಲಾಗಿದೆ. ಹಾಗೆ ಮುಂದುವರೆದು > ಒಂಬತ್ತನೇ ಅಧ್ಯಾಯ 3 ಅಂಕ ನಿಗದಿ ಮಾಡಲಾಗಿದೆ ಆದರೆ ಈ ಅಧ್ಯಾಯದಲ್ಲಿ ಎರಡು ಅಂಕದ 2 > ಪ್ರಶ್ನೆಗಳನ್ನು ಪ್ರಶ್ನೆಗಳನ್ನು ಕೇಳಲಾಗಿದೆ. > > 2. ಇದೊಂದು ಅಪೂರ್ಣ ಪ್ರಶ್ನೆ ಪತ್ರಿಕೆಯಾಗಿದೆ. ಏಕೆಂದರೆ ಮೂರು ಅಂಕದ ಆರು > ಪ್ರಶ್ನೆಗಳಿಗೆ ಅಥವಾ ಪ್ರಶ್ನೆಗಳು ಹಾಗೂ ಎರಡು ಅಂಕದ ಒಂದು ಪ್ರಶ್ನೆಗೆ ಅಥವಾ ಪ್ರಶ್ನೆ > ನೀಡುವುದರ ಮೂಲಕ ಒಟ್ಟು 100 ಅಂಕಕ್ಕೆ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ. > ಆದರೆ ಈ ಪ್ರಶ್ನೆ ಪತ್ರಿಕೆಯಲ್ಲಿ ಎರಡು ಅಂಕದ ಯಾವುದೇ ಪ್ರಶ್ನೆಗೆ ಅಥವಾ ಪ್ರಶ್ನೆಯನ್ನು > ನೀಡಿರುವುದಿಲ್ಲ. ಹಾಗಾಗಿ ಈ ಪ್ರಶ್ನೆ ಪತ್ರಿಕೆಯು 100 ಅಂಕ ಬದಲಾಗಿ 98 ಅಂಕಗಳಿಗೆ > ತೆಗೆದಿರುವ ಪ್ರಶ್ನೆ ಪತ್ರಿಕೆ ಅಂದರೆ ಇದೊಂದು ಅಪೂರ್ಣ ಪ್ರಶ್ನೆ ಪತ್ರಿಕೆಯಾಗಿದೆ. > > 3. ದೋಷಪೂರಿತ ಪ್ರಶ್ನೆಗಳು. ಈ ಪ್ರಶ್ನೆ ಪತ್ರಿಕೆಯಲ್ಲಿ ನಾವು ಅನೇಕ ದೋಷಪೂರಿತ > ಪ್ರಶ್ನೆಗಳನ್ನು ಗುರುತಿಸಬಹುದಾಗಿದೆ. ಉದಾಹರಣೆಗೆ ಪೂರ್ವ ಕರಾವಳಿ ಮತ್ತಪಶ್ಚಿಮ ಕರಾವಳಿಯ > ಬಂದರುಗಳನ್ನು ವಿಂಗಡಿಸಿ ಬರೆಯಿರಿ ಎಂಬುದಾಗಿ 4 ಬಂದರಗಳನ್ನು ನೀಡಲಾಗಿದೆ. ಆದರೆ ಅದರಲ್ಲಿ > ಒಂದು ಮಾತ್ರ ಪೂರ್ವ ಕರಾವಳಿಗೆ ಸೇರಿದ್ದು ಉಳಿದ ಮೂರು ಪಶ್ಚಿಮ ಕರಾವಳಿ ಸೇರಿವೆ. ಯಾವುದೇ > ಎರಡು ಬಂದರುಗಳನ್ನು ವರ್ಗೀಕರಿಸಿ ಬರೆದರೂ ಅಂಕ ನೀಡುವುದು ಅನಿವಾರ್ಯವಾಗುತ್ತದೆ. > ಅದೇ ರೀತಿ ಬಹು ಆಯ್ಕೆ ಪ್ರಶ್ನೆಯಲ್ಲಿ ಶೀತಲ ಸಮರದ ಕಾಲದಲ್ಲಿ ಶಸ್ತ್ರಾಸ್ತ್ರ ಪೈಪೋಟಿ > ಯಿಂದ ಮುಖ್ಯ ಪರಿಣಾಮವೆಂದರೆ ಎಂಬುದಾಗಿ ಪ್ರಶ್ನೆಯನ್ನು ಕೊಟ್ಟು ಅದಕ್ಕೆ ಉತ್ತರವಾಗಿ > ಅಮೆರಿಕ ಜಗತ್ತಿನ ಏಕಮಾತ್ರ ಶಕ್ತಿಯುತ ರಾಷ್ಟ್ರವಾಗಿ ತಲೆಯೆತ್ತಿತು ಎಂಬುದಾಗಿ ಉತ್ತರ > ನೀಡಲಾಗಿದೆ. ಆದರೆ ಅಮೆರಿಕ ಜಗತ್ತಿನ ಏಕಮಾತ್ರ ರಾಷ್ಟ್ರವಾಗಿ ತಲೆ ಎತ್ತಿದ್ದು > ಶಸ್ತ್ರಾಸ್ತ್ರ ಪೈಪೋಟಿಯಿಂದ ಅಲ್ಲ ಬದಲಾಗಿ ರಷ್ಯಾದ ವಿಘಟನೆ ಎಂಬುದಾಗಿ ಹೇಳಬಹುದು. > > 4. ಅದೇ ರೀತಿ ನಕ್ಷೆ. ನಕ್ಷೆಯನ್ನು ಕೇಳುವಾಗ ಕೆಲವು ನಿಯಮಗಳನ್ನು ಪಾಲಿಸಬೇಕೆಂದು ಕೇಳಲು > ಪಟ್ಟಿದ್ದೇನೆ.ಆದರೆ ಈ ಬಾರಿ ಪ್ರಶ್ನೆ ಪತ್ರಿಕೆಯಲ್ಲಿ ದಾವಣಗೆರೆ ಎಂಬ ಸ್ಥಳವನ್ನು > ಗುರುತಿಸಲು ಕೇಳಲಾಗಿದೆ. ನನಗೆ ತಿಳಿದಂತೆ ಯಾವುದೇ ಅಧ್ಯಾಯದಲ್ಲಿ ದಾವಣಗೆರೆಯ > ಪ್ರಸ್ತಾಪವನ್ನು ನಾನು ನೋಡಿರುವುದಿಲ್ಲ. > > ಮುಖ್ಯ ಗುರುಗಳ ಸಂಘಕ್ಕೆ ಈ ಮೂಲಕ ಕೇಳಿಕೊಳ್ಳುವುದೇನೆಂದರೆ ಪೂರ್ವ ಸಿದ್ಧತಾ > ಪರೀಕ್ಷೆಗಳು ಮಕ್ಕಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸಿ ವಾರ್ಷಿಕ ಪರೀಕ್ಷೆಗೆ > ಸಿದ್ಧಗೊಳಿಸುವಂತಿರಬೇಕೆ ಹೊರತು ಅವರನ್ನು ಮತ್ತಷ್ಟು ಗೊಂದಲಕ್ಕೆ ಈಡು ಮಾಡಿ ಪರೀಕ್ಷೆಯ > ಭಯದಿಂದ ಬಳಲುವಂತೆ ಮಾಡುವಂತಿರಬಾರದು. ಈ ಬಾರಿ ಹೊಸ ಪಠ್ಯ ಪುಸ್ತಕವನ್ನು ಪರಿಚಯಿಸಿದ್ದು > ಮಕ್ಕಳನ್ನು ಪರೀಕ್ಷೆಗೆ ಸಿದ್ಧಪಡಿಸುವುದು ಶಿಕ್ಷಕರಿಗೆ ಒಂದು ಸವಾಲಾಗಿದೆ. ಅಂತಹುದರಲ್ಲಿ > ಇಂತಹ ದೋಷಪೂರಿತ ಪ್ರಶ್ನೆ ಪತ್ರಿಕೆಗಳು ಮಕ್ಕಳನ್ನು ಮತ್ತು ಶಿಕ್ಷಕರನ್ನು ಮತ್ತಷ್ಟು > ಗೊಂದಲಗಳಿಗೆ ಈಡು ಮಾಡುವಂತಿದೆ. ಆದುದರಿಂದ ಇಂತಹ ಗೊಂದಲಗಳು ಪುನರಾವರ್ತನೆಯಾಗದಂತೆ > ಕ್ರಮವಹಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. > > ಧನ್ಯವಾದಗಳೊಂದಿಗೆ > ಸಂತೋಷ್ ಕುಮಾರ್ .ಸಿ > ಸಹಶಿಕ್ಷಕರು > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout.
