ನನ್ನೊಳಗಿನ ಅವ್ವ ಸದಾ ಜಾಗೃತ

ಅಂದು ಎಂದಿನಂತೆ ಶಾಲೆ ನಡೆಯುತ್ತಿರಲಿಲ್ಲ. ಕಾರಣ ಶಾಲೆಯ ಅರ್ಧಕ್ಕಿಂತ ಹೆಚ್ಚು
ಶಿಕ್ಷಕರನ್ನು ತರಭೇತಿಗೆ ನಿಯೋಜಿಸಲಾಗಿತ್ತು. ನಾವು 4 ಮಂದಿ ಶಿಕ್ಷಕರು ಮಾತ್ರ ಶಾಲೆಯಲ್ಲಿ
ಇದ್ದೆವು. ಒಂಭತ್ತು ವಿಭಾಗಗಳನ್ನು ನಿಭಾಯಿಸುವುದರಲ್ಲೇ ಸಮಯ ಕಳೆಯುತ್ತಿತ್ತೇ ಹೊರತು ಪಾಠ
ಪ್ರವಚನಗಳು ಸಾಂಗವಾಗಿ ನಡೆಯುತ್ತಿರಲಿಲ್ಲ. ಮಧ್ಯಾಹ್ನದ ಊಟಕ್ಕೆ ಬಿಡುವ ಹೊತ್ತಿನಲ್ಲಿ
ಇಬ್ಬರು ಹುಡುಗರು ಹೊಡೆದಾಡಿಕೊಂಡು ಒಬ್ಬನ ತಲೆಗೆ ಪೆಟ್ಟು ಬಿದ್ದು ಕುಸಿದು ಬಿದ್ದಿದ್ದ.
ನನಗಂತೂ ಅವನ ಆಗಿನ ಸ್ಥಿತಿ ಕಂಡು ದುಃಖ ಒತ್ತರಿಸಿ ಬಂದು ತರಾತುರಿಯಲ್ಲೇ ಪ್ರಥಮ ಚಿಕಿತ್ಸೆ
ಮಾಡಿ ಆಸ್ಪತ್ರೆಗೆ ಸಾಗಿಸಿದೆ. ಅವತ್ತು ನನಗೆ ಆ ವಿದ್ಯಾರ್ಥಿಯದೇ ಚಿಂತೆಯಾಗಿತ್ತು.
ನನ್ನೊಳಗಿನ ತಾಯ್ತನದಿಂದಾಗಿ ಅವನ ಸ್ಥಿತಿಗೆ ಮರುಗಿ ನಿದ್ದೆ ಇಲ್ಲದೇ ಒದ್ದಾಡಿದೆ.

ಇಂಥ ಘಟನೆಗಳು ಶಾಲೆಯಲ್ಲಿ ಮರುಕಳಿಸಿದಾಗಲೆಲ್ಲ ನನ್ನೊಳಗಿನ ಅವ್ವ ಜಾಗೃತಳಾಗುತ್ತಾಳೆ. ಅವಳ
ಆರೈಕೆಯ ತದ್ರೂಪು ವಿದ್ಯಾರ್ಥಿಗಳಿಗೆ ವರ್ಗಾವಣೆಯಾಗುತ್ತದೆ. ಕರುಳ ಬಳ್ಳಿಯಲ್ಲದ ಮಕ್ಕಳಿಗೂ
ತೋರುವ ಶಿಕ್ಷಕರ ತಾಯ್ತನ ತನ್ನದೇ ಮಕ್ಕಳಿಗೆ ನೀಡುವುದಕ್ಕಿಂತ ಹೆಚ್ಚು ಪ್ರಾಶಸ್ತ್ಯ
ಪಡೆಯುತ್ತದೆ. ಅದಕ್ಕೆ ತಾನೆ ಮಕ್ಕಳಿಗೆ ಮೊದಲ ಗುರು 'ತಾಯಿ', ಎರಡನೇ ತಾಯಿ 'ಗುರು'
ಎನ್ನುವುದು.

ಬೆಳಿಗ್ಗೆಯಿಂದ ಸಂಜೆವರೆಗೂ ಶಾಲೆಯಲ್ಲಿ ಸಂಸಾರದ ಜಂಜಾಟವನ್ನೆಲ್ಲಾ ಮರೆತು ವಿದ್ಯಾರ್ಥಿಗಳೇ
ನಮ್ಮ ಮಕ್ಕಳೆಂದು ಅವರು ಕಲಿತಾಗ ಹಿಗ್ಗಿ, ಕಲಿಯದಿದ್ದಾಗ ಮತ್ತೊಮ್ಮೆ ಅರ್ಥೈಸಿ, ಅವರ
ನಡೆಗಳನ್ನು ತಿದ್ದಿ ತೀಡಿ ಏನೋ ಸಾಧಿಸಿದ ಭಾವದೊಂದಿಗೆ ಮನೆಗೆ ಹಿಂದಿರುಗುತ್ತೇವೆ. ಅವರವರ
ಮನೆಯಲ್ಲಿ ತಾಯಿ ಅವರ ಮಕ್ಕಳ ಆರೈಕೆ ಮಾಡುವಳೋ ಅದನ್ನೆಲ್ಲಾ ಶಾಲಾ ಅವಧಿಯಲ್ಲಿ ಶಿಕ್ಷಕರು
ಮಾಡುತ್ತಾರೆ. ಹೀಗಾಗಿ ಬೇರೆಲ್ಲಾ ಉದ್ಯೋಗಿಗಳಿಗಿಂತ ಶಿಕ್ಷಕರು ಮಾತೃ ಹೃದಯಿಯಾಗಿರುತ್ತಾರೆ.

ತಂದೆ ತಾಯನ್ನು ಹೊರತುಪಡಿಸಿ ಮಕ್ಕಳ ತಪ್ಪುಗಳನ್ನು ತಿದ್ದುವವರು ಯಾರಾದರೂ ಇದ್ದರೆ ಅದು
ಶಿಕ್ಷಕರು ಮಾತ್ರ. ಶಿಕ್ಷಕ ವೃತ್ತಿ ಪವಿತ್ರವೆಂದು ಹೇಳುವುದೇ ಇದಕ್ಕಾಗಿ. ಒಬ್ಬ ಶಿಕ್ಷಕ
ಹಲವು ರೂಪಗಳಲ್ಲಿ ಮಕ್ಕಳಿಗೆ ಕಲಿಸಲು ಸನ್ನದ್ಧನಾಗಿರುತ್ತಾನೆ. ಗೆಳೆಯನಾಗಿ, ಅಣ್ಣನಾಗಿ,
ವೈದ್ಯನಾಗಿ, ನ್ಯಾಯಾಧೀಶನಾಗಿ, ಗೂಢಾಚಾರನಾಗಿ ಅದೆಲ್ಲಕ್ಕೂ ಹೆಚ್ಚಾಗಿ ಅಮ್ಮನಾಗಿ ಕಾರ್ಯ
ನಿರ್ವಹಿಸುತ್ತಾನೆ. ಅಮ್ಮನ ಹೃದಯವಿದ್ದರೆ ಮಾತ್ರ ಮಕ್ಕಳಿಗೆ ಕಲಿಸುವ ಪ್ರಕ್ರಿಯೆ ಬಹಳ
ಸುಲಭವಾಗುತ್ತದೆ. ತಾಯ್ ಹೃದಯಿ ಶಿಕ್ಷಕರನ್ನೇ ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ. ಹಾಗೂ ಆ
ಶಿಕ್ಷಕರು ಬೋಧಿಸುವ ವಿಷಯಗಳನ್ನು ಬೇಗ ಕಲಿಯುತ್ತಾರೆ.

ಅಮ್ಮನ ಪ್ರೀತಿ ಉಂಡ ಯಾವ ಮಕ್ಕಳು ಅಮ್ಮನ ಆಸರೆಯನ್ನು ಇಷ್ಟಪಡುವುದಿಲ್ಲ ಹೇಳಿ? ಅಮ್ಮನ ಅಸಲಿ
ತಾಕತ್ತು ಇರುವುದೇ ನಿಷ್ಕಲ್ಮಷ ಪ್ರೀತಿಯಲ್ಲಿ. ಮಕ್ಕಳು ರಚ್ಚೆ ಹಿಡಿದರೂ, ಕೋಪಗೊಂಡರೂ
ಸಂತೈಸುವ ಕಲೆ ಅಮ್ಮನಿಗೆ ಕರಗತ ಹಾಗೆಯೇ ವಿವಿಧ ಬುದ್ಧಿಮಟ್ಟದ ಮಕ್ಕಳ ಗಮನ ಸೆಳೆದು
ಕಲಿಸುವಲ್ಲಿ ಶಿಕ್ಷಕರಿಗೆ ಕರಗತವಾಗುತ್ತದೆ. ಅಮ್ಮನಂತ ಶಿಕ್ಷಕ ವೃತ್ತಿ ಪಡೆದವರೆಲ್ಲರೂ
ಮಕ್ಕಳ ಪಾಲಿಗೆ 'ಎರಡನೇ ಅಮ್ಮ' ಎಂದರೆ ಅತಿಶಯೋಕ್ತಿ ಏನಲ್ಲ. ಅಮ್ಮನನ್ನು ಶಿಕ್ಷಕರ
ನೆಪದಲ್ಲಿ ಮಾತ್ರ ನೆನಪಿಸಿಕೊಂಡರೆ ಸಮುದ್ರವನ್ನು ಅಂಗೈಯಲ್ಲಿ ಹಿಡಿದು ತೋರಿಸಿದಂತೆ. ಅಸಲಿ
ಅಮ್ಮ ಎಂದರೆ ಒಡಲಲ್ಲಿ ವಿಶ್ವರೂಪ ಅಡಗಿಸಿಕೊಂಡಿರುವ ಮಾನವ ರೂಪದ ದೇವತೆ. Happy Mothers
Day

- ಶ್ರೀನಿವಾಸ ಡಿ. ಶೆಟ್ಟಿ
ಶಿಕ್ಷಕರು, ಬಿ ಎಸ್ ಎಸ್ ಸ ಪ ಪೂ ಕಾಲೇಜು
ಕೊಣನೂರು,ಅರಕಲಗೂಡು ತಾಲ್ಲೂಕು
ಹಾಸನ ಜಿಲ್ಲೆ 573 130
ದೂ : 8951261033

( ಇಂದಿನ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.)

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to