💫 ಆಶಾವಾದದ ಸಕಾರಾತ್ಮಕ ಚಿಂತನೆ ಅಗತ್ಯ💫

ಶಿಕ್ಷಣವೆಂದರೆ ಮಾನವನ ಬದುಕನ್ನು ರೂಪಿಸುವ ಕಲೆ. ಮಕ್ಕಳು ಬೆಳಗ್ಗೆ ಮನೆಯಿಂದ ಶಾಲೆಗೆ
ಹೋದರೆ, ಸಂಜೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಾರೆ. ಬೆಳಗ್ಗೆ 10.00ರಿಂದ ಸಂಜೆ
5.00ರವರೆಗೆ ಶಾಲೆಯಲ್ಲಿದ್ದು ಸುಮಾರು ಏಳು ಗಂಟೆಗಳಷ್ಟು ಕಾಲ ಮಕ್ಕಳ ಮೇಲೆ ಶಾಲೆ ಮತ್ತು
ಶಿಕ್ಷಕರ ಪ್ರಭಾವ ಬೀಳುತ್ತದೆ. ಆದರೆ ಉಳಿದ 17 ಗಂಟೆಗಳ ಕಾಲ ಮಕ್ಕಳ ಮೇಲೆ ಮನೆಯವರು ಮತ್ತು
ಸಮಾಜ ಪ್ರಭಾವ ಬೀರುತ್ತದೆ.

ಸನಿವಾಸ ಪದ್ಧತಿಯ ಶಿಕ್ಷಣ-ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಕಡೆಗೆ
ಶಿಕ್ಷಕರು ವಿಶೇಷ ಗಮನ ಕೊಡಲು ಸಾಧ್ಯವಾಗುತ್ತದೆ. ಪ್ರಾಚೀನ ಕಾಲದಲ್ಲಿ ಇದ್ದ ಗುರುಕುಲಗಳು
ಇಂದಿನ ಸನಿವಾಸ-ಮಾದರಿಯವುಗಳೆನ್ನಬಹುದು. ಇವುಗಳಲ್ಲಿ ರಾಜ-ಮಹಾರಾಜರ ಮಕ್ಕಳೂ, ಜನಸಾಮಾನ್ಯರ
ಮಕ್ಕಳೂ ಅಧ್ಯಯನ ಮಾಡುತ್ತಿದ್ದರು. ಅಂಥ ಗುರುಕುಲವೊಂದರಲ್ಲಿ ರಾಜಕುಮಾರರ ವ್ಯಕ್ತಿತ್ವವನ್ನು
ಗುರುತಿಸಿ ಪರೀಕ್ಷಿಸುವ ಒಂದು ಸ್ವಾರಸ್ಯಕರ ಪ್ರಸಂಗ ಹೀಗಿದೆ:

ಮಗಧ ರಾಜ್ಯದ ರಾಜನಾದ ಶೂರಸೇನನ ಅವಳಿ ರಾಜಕುಮಾರರು ಗುರುಕುಲದಲ್ಲಿ ಅಧ್ಯಯನ
ಮಾಡುತ್ತಿದ್ದರು. 'ಇವರಿಬ್ಬರ ಪೈಕಿ ಮುಂದಕ್ಕೆ ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಲು ಸೂಕ್ತ
ವ್ಯಕ್ತಿ ಯಾರು ?' ಎಂದು ರಾಜನು ಗುರುವಿನೊಡನೆ ಏಕಾಂತದಲ್ಲಿ ಪ್ರಶ್ನಿಸಿದ. ಗುರು ಈ
ಪ್ರಶ್ನೆಗೆ ಉತ್ತರಿಸಲು ಅಸಮರ್ಥರಾದರು. ಏಕೆಂದರೆ ಶಿಕ್ಷಣದಲ್ಲಿ, ಪ್ರಾಯದಲ್ಲಿ,
ಗುಣನಡತೆಯಲ್ಲಿ ಇಬ್ಬರೂ ಸಮಾನರಾಗಿದ್ದರು. ಇವರಿಬ್ಬರ ಪೈಕಿ ಯಾರು ಹೆಚ್ಚಿನ
ಅರ್ಹತೆಯುಳ್ಳವನು ? ಎಂಬುದನ್ನು ಪರೀಕ್ಷಿಸಲು ಗುರು ಒಂದು ಉಪಾಯ ಹೇಳಿಕೊಟ್ಟರು. ಅಂತೆಯೇ
ರಾಜನು ತನ್ನ ಇಬ್ಬರು ಪುತ್ರರಿಗೂ ಎರಡು ದೊಡ್ಡ ಚೀಲಗಳಲ್ಲಿ ಧಾನ್ಯದ ಹೊಟ್ಟು ತುಂಬಿಸಿ
ಉಡುಗೊರೆಯಾಗಿ ಕೊಟ್ಟು ಹೋದನು.

ಗುರುವು ರಾಜಕುಮಾರರ ಕೊಠಡಿಗಳ ಬಳಿ ಹೋಗಿ ಅವರ ಪ್ರತಿಕ್ರಿಯೆಗಳನ್ನು ಗಮನಿಸಿದರು. ಮೊದಲನೇ
ರಾಜಕುಮಾರ ಸಿಟ್ಟಿನಿಂದ ಹೇಳುತ್ತಿದ್ದ- 'ನಮ್ಮ ತಂದೆಯವರು ನನಗೆ ಧಾನ್ಯದ ಹೊಟ್ಟು ತುಂಬಿದ
ಚೀಲ ನೀಡಿ ಅಪಮಾನ ಮಾಡಿದ್ದಾರೆ. ಇದಕ್ಕೆ ಬೆಂಕಿ ಹಚ್ಚಿ ಬಿಡಬೇಕೆನಿಸುತ್ತದೆ. ಎರಡನೇ
ರಾಜಕುಮಾರನ ಕೊಠಡಿ ಬಳಿ ಹೋದರೆ, ಆತ ಸಂತಸದಿಂದ ಕುಣಿಯುತ್ತಿದ್ದ- 'ಇಂದು ನಮ್ಮ ಅಪ್ಪಾಜಿ
ಧಾನ್ಯದ ಹೊಟ್ಟು ಕಳಿಸಿದ್ದಾರೆ. ನಾಳೆ ಹಸುಗಳನ್ನು ಕಳಿಸುತ್ತಾರೆ. ನಾವೆಲ್ಲ ಹಸು
ಸಾಕಣೆಯಿಂದ ದಷ್ಟ-ಪುಷ್ಟರಾಗಿ ಆರೋಗ್ಯವಂತರಾಗಬಹುದು. 'ಈ ಮಾತನ್ನು ಕೇಳಿದ ಗುರುವು
ಸಕಾರಾತ್ಮಕ ಚಿಂತನೆಯುಳ್ಳ ಎರಡನೇ ರಾಜಕುಮಾರನೇ ಸಿಂಹಾಸನಕ್ಕೆ ಸೂಕ್ತ ಉತ್ತರಾಧಿಕಾರಿಯೆಂದು
ರಾಜನಿಗೆ ವರದಿ ಮಾಡಿದರು. ರಾಜನಿಗೂ ಸೂಕ್ತ ಆಯ್ಕೆಯಿಂದ ಸಂತೋಷವಾಯಿತು.

ಇಲ್ಲಿ ಇಡೀ ಮಾನವ ಸಮಾಜಕ್ಕೆ ಮಾರ್ಗದರ್ಶನ ನೀಡುವಂಥ ಒಂದು ಸಂದೇಶವಿದೆ. ಯಾವುದು ಒಂದು
ಸಂದರ್ಭದಲ್ಲಿ ನಿರಾಶಾದಾಯಕವಾದ ನಕಾರಾತ್ಮಿಕ- ಚಿಂತನೆಗಳಿಂದ ಪ್ರಯೋಜನವಿಲ್ಲ. ಸಮಸ್ಯೆಗಳು
ಬಂದಾಗ ಓಡಿ ಹೋಗುವ ಬದಲು, ಆಶಾವಾದಿಗಳಾಗಿ ಸಕಾರಾತ್ಮಕ ಚಿಂತನೆಗಳ ಮಾರ್ಗವನ್ನು
ಅವಲಂಬಿಸುವುದರಿಂದ ಸಮಸ್ಯೆಗಳ ನಿವಾರಣೆ ಸಾಧ್ಯ.

ಬನ್ನಿ ಗೆಳೆಯರೆ, ಆಶಾವಾದದ ಸಕಾರಾತ್ಮಕ ಚಿಂತನೆಗಳಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸೋಣ.

-ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAKoy2JxWf%2BKLmEu77CpBcyhu4R2iGVTOktO-G4aMwx4D%2B%3DevTA%40mail.gmail.com.
For more options, visit https://groups.google.com/d/optout.

Reply via email to