ಗುಣಾತ್ಮಕ ಶಿಕ್ಷಣ ಮತ್ತು ಇಂದಿನ ಶಿಕ್ಷಣ ವ್ಯವಸ್ಥೆ ಗೆ ಬೆಲೆ ಬೇಕು,ಮೌಲ್ಯ ಉಳಿಯಬೇಕು
ಅನ್ನುವದಾದರೆ..ಒಂದರಿಂದ ೮ ನೇ ತರಗತಿಯವರಿಗಿನ ಕಡ್ಡಾಯ ಉತ್ತೀರ್ಣ ಪದ್ದತಿ ರದ್ದಾಗಬೇಕು...
ಶಿಕ್ಷಣ ಪಡೆಯುವದು ಮೂಲಭೂತ ಹಕ್ಕು  ನಿಜ ಆದರೆ ...ಗುಣಾತ್ಮಕ ವಲ್ಲದ .ಹೆಸರಿಗೆ ಮಾತ್ರ
ಶಿಕ್ಷಣ ಆಗಬಾರದು...ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನಿರ್ಧಾರ ಸರಿಯಿದೆ..

ಒಂದು ಆತ್ಮಾವಲೋಕನ ಮಾಡಿಕೊಳ್ಳೊಣ..ನಮ್ಮ ಹತ್ತು ವರ್ಷದ ಸೇವೆಯಲ್ಲಿ ಮೊದಲ ಎರಡು ಮೂರು
ವರ್ಷದಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಕಲಿಸಿದ ಅನುಭವ ಮತ್ತು ಇತ್ತೀಚಿನ ಕೆಲವು ವರ್ಷಗಳ
ಅನುಭವ... ಮೂಲ ಪರಿಕಲ್ಪಣಾನೆಗಳ ಕೊರತೆ ಮತ್ತು ಗುಣಾತ್ಮಕ ತೆಯ ಮಟ್ಟ ಕುಂದುತ್ತಿರುವದು
ಕಾಣುತ್ತೇವೆ...ಮುಂದೆ ಇದು ಹೀಗೆ ಮುಂದುವರೆದರೆ......ಅಷ್ಟೇ..
On 21 Oct 2016 8:40 a.m., "Basavaraja Naika H.D." <
[email protected]> wrote:

> *ಕೃಪಾಂಕದ ಪಾಸ್‌ಗೆ ಬ್ರೇಕ್ : ಶಿಕ್ಷಣ ಕಾನೂನು ಮಾರ್ಪಾಟಿಗೆ ಕೇಂದ್ರದ ಹೆಜ್ಜೆ*
> ಸಂಜೆವಾಣಿ ಸುದ್ಧಿ ವಿಭಾಗ
> 20 Oct 2016,
> (Mallikarjun Hulasur)
>
> ನವದೆಹಲಿ, ಅ. ೨೦- ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸಲು ಕೇಂದ್ರ
> ಸರಕಾರ ತೀರ್ಮಾನಿಸಿದೆ. ಹೀಗಾಗಿ ಎಂಟನೇ ತರಗತಿವರೆಗೆ ವಿದ್ಯಾರ್ಥಿಗಳು ಅನುತ್ತೀರ್ಣರಾದಲ್ಲಿ
> ಅವರು ಮಾರನೇ ವರ್ಷವೂ ಅದೇ ತರಗತಿಯಲ್ಲಿ ಮುಂದುವರಿಯಬೇಕಾಗುವುದು.
> ಈ ಹಿಂದಿನ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ ಸರಕಾರವು ಶಿಕ್ಷಣದ ಹಕ್ಕು ಕಾಯಿದೆಗೆ
> ತಿದ್ದುಪಡಿಯೊಂದನ್ನು ಅಳವಡಿಸಿತ್ತು. *ತಿದ್ದುಪಡಿಯ ರೀತ್ಯಾ ಎಂಟನೇ ತರಗತಿವರೆಗೆ
> ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡಿದ್ದರೂ ಕೂಡ ಅವರನ್ನು ಮುಂದಿನ ತರಗತಿಗೆ
> ತೇರ್ಗಡೆ ಮಾಡಬೇಕಾಗಿತ್ತು.*
> ಐದನೇ ತರಗತಿಯ ನಂತರ ಪರೀಕ್ಷೆ ಆಧಾರಿತ ತೇರ್ಗಡೆ ಕ್ರಮವನ್ನು ಮತ್ತೆ ಜಾರಿಗೊಳಿಸುವ
> ಉದ್ದೇಶದಿಂದ ಶಿಕ್ಷಣ ಹಕ್ಕಿನ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಬಯಸಿದೆ.
>
> * ಯುಪಿಎ ಕೊಡುಗೆ ಶಿಕ್ಷಣ ಹಕ್ಕು ಕಾಯಿದೆ ತಿದ್ದುಪಡಿಗೆ ಪ್ರಸ್ತಾಪ.
> * ಪ್ರಸಕ್ತ ಕಾಯಿದೆಯಿಂದ ಶಿಕ್ಷಣ ಗುಣಮಟ್ಟ ಕುಸಿತಕ್ಕೆ ತಿದ್ದುಪಡಿ.
> * ಪ್ರಸ್ತುತ ಕಾಯಿದೆ ಪ್ರಕಾರ 5-8 ತರಗತಿವರೆಗೆ ಎಲ್ಲರೂ ಪಾಸ್.
> * ಕೇಂದ್ರದ ಉದ್ದೇಶಿತ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯಗಳ ಒಲವು.
> * ಹಾಲಿ ಕಾಯಿದೆಯಿಂದ ಶಿಕ್ಷಣ ಗುಣಮಟ್ಟಕ್ಕೆ ಧಕ್ಕೆ ಅಭಿಮತ.
> * ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ.
> (Mallikarju Hulasur)
>
> ಶಿಕ್ಷಣದ ಹಕ್ಕು ಕುರಿತಂತೆ ಇರುವ ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸುವ ವಿಚಾರದಲ್ಲಿ
> ಎಲ್ಲ ರಾಜ್ಯ ಸರಕಾರಗಳು ಕೂಡ ಒಲವು ವ್ಯಕ್ತಪಡಿಸಿವೆ ಎಂದು ಕೇಂದ್ರ ಸರಕಾರವು ಹೇಳಿಕೊಂಡಿದೆ.
> ಈ ಉದ್ದೇಶಕ್ಕಾಗಿ ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಖಾತೆಯು ಮಸೂದೆಯೊಂದನ್ನು
> ರೂಪಿಸಬೇಕಾಗಿದೆ. ಹೊಸ ಮಸೂದೆಯಲ್ಲಿ, ಶಾಲೆಗಳಲ್ಲಿ ಮತ್ತೆ ವಾರ್ಷಿಕ ಪರೀಕ್ಷೆ ಆಧಾರಿತ
> ತೇರ್ಗಡೆ ಪದ್ಧತಿಗೆ ಮರು ಜೀವ ದೊರೆಯುವುದು. ಇಲಾಖೆಯ ಮೂಲಗಳ ಪ್ರಕಾರ ರಾಜ್ಯ ಸರಕಾರಗಳೂ ಕೂಡ
> ಇಂಥ ಬದಲಾವಣೆಗೆ ಒಲವು ವ್ಯಕ್ತಪಡಿಸಿವೆ.
>
> ಮುಂದಿನ ತಿಂಗಳು ನವೆಂಬರ್ ಹದಿನಾರರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ
> ಅಧಿವೇಶನದಲ್ಲಿ ಶಿಕ್ಷಣ ಹಕ್ಕು ತಿದ್ದುಪಡಿ ಮಸೂದೆಯನ್ನು ಮಂಡಿಸುವ ನಿರೀಕ್ಷೆ ಇದೆ.
> ಈ ಹಿಂದಿನ ಕೇಂದ್ರ ಸರಕಾರದಲ್ಲಿ ಕಪಿಲ್ ಸಿಬಾಲ್ ಅವರು ಖಾತೆಯ ಸಚಿವರಾಗಿದ್ದ ಸಂದರ್ಭದಲ್ಲಿ
> ಶಿಕ್ಷಣಕ್ಕಾಗಿ ಹಕ್ಕು ಕಾಯಿದೆಯನ್ನು ಜಾರಿಗೊಳಿಸಲಾಗಿತ್ತು.
>
> ಆಗ ಶಿಕ್ಷಣಕ್ಕೆ ಸಂಬಂಧಿಸಿದ ಸರಕಾರೇತರ ಸಂಸ್ಥೆಗಳು ಹಾಗೂ ಸೋನಿಯಾಗಾಂಧಿ ನೇತೃತ್ವದ
> ರಾಷ್ಟ್ರೀಯ ಸಲಹಾ ಮಂಡಳಿ ಇಂಥ ಕಾಯಿದೆಯ ಅಸ್ತಿತ್ವಕ್ಕೆ ಪ್ರಬಲವಾಗಿ ಪ್ರತಿಪಾದಿಸಿದ್ದವು.
> ವಿದ್ಯಾರ್ಥಿಗಳನ್ನು ಒಂದೇ ತರಗತಿಯಲ್ಲಿ ಕೂಡಿಡಬಾರದು ಎಂಬ ಧೋರಣೆಯೇ ತಪ್ಪು. ಇದರಿಂದಾಗಿ
> ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕ್ರಮದಲ್ಲಿ ಯಾವ ರೀತಿಯ ಪ್ರಯೋಜನ ಹೊಂದಿದರು
> ಎಂದು ಅರಿಯಲು ಸಾಧ್ಯವಾಗುವುದಿಲ್ಲ.
> ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಕೂಡ ಅಂಥ ಸರಕಾರಗಳು ಈ ಪದ್ಧತಿಯನ್ನು
> ವಿರೋಧಿಸಿವೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಿದೆ
> ಎಂಬುದು ಅವುಗಳ ಭಾವನೆ ಎಂದು ಅಧಿಕೃತ ಮೂಲಗಳ ಹೇಳಿಕೆ.
>
> ಒಂದೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಹಾಕಬಾರದೆಂಬ ತಪ್ಪು ನೀತಿಯ ಕೆಟ್ಟ
> ಪರಿಣಾಮವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಇಂಥ ಕಡೆಗಳಲ್ಲಿ ಶಾಲೆಗಳಲ್ಲಿ
> ಮುಖ್ಯ ಉದ್ದೇಶ ಮಧ್ಯಾಹ್ನದ ಭೋಜನವಾಗಿದೆ. ಶಿಕ್ಷಕರೂ ಕೂಡ ಗುಣಮಟ್ಟದ ಶಿಕ್ಷಣ ಒದಗಿಸುವ
> ನಿಟ್ಟಿನಲ್ಲಿ ಯಾವುದೇ ರೀತಿಯ ಪ್ರಯತ್ನಗಳನ್ನು ತೋರುತ್ತಿಲ್ಲ ಎಂದು ಅಧಿಕೃತ ಮೂಲಗಳು ವಿಷಾದ
> ವ್ಯಕ್ತಪಡಿಸಿವೆ.
>
> ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿ ತರುವ ವಿಚಾರದಲ್ಲಿ ಕೇಂದ್ರ ಮಾನವ ಸಂಪನ್ಮೂಲಗಳ
> ಅಭಿವೃದ್ಧಿ ಖಾತೆ ಸಚಿವರಾದ ಪ್ರಕಾಶ್ ಜಾವೇಡ್ಕರ್ ಅವರು ಈಗಾಗಲೇ ಬಹುತೇಕ ರಾಜ್ಯಗಳ
> ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
> ಮುಖ್ಯಮಂತ್ರಿಗಳೂ ಕೂಡ ಈ ನಿಟ್ಟಿನಲ್ಲಿ ತಮ್ಮ ಬೆಂಬಲ ತೋರಿದ್ದಾರೆ. ರಾಜಕೀಯವಾಗಿ ಕಾಯಿದೆ
> ತಿದ್ದುಪಡಿಗೆ ಒಮ್ಮತ ಮೂಡಿದ್ದರೂ ಸಾಮಾಜಿಕ ವಲಯಗಳಲ್ಲಿ ಕೆಲ ಮಟ್ಟಿಗೆ ವಿರೋಧ ಇದೆ.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CACwGsz5P8tLh2DRecWo3%
> 2BpNDJECynUAY64qNBMLEungthXNq3Q%40mail.gmail.com
> <https://groups.google.com/d/msgid/socialsciencestf/CACwGsz5P8tLh2DRecWo3%2BpNDJECynUAY64qNBMLEungthXNq3Q%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAFwfYrhOOsARXFZbvhnh4d0%3DS5FHPHDVfCOc%3DZBW2RAy8ru7VA%40mail.gmail.com.
For more options, visit https://groups.google.com/d/optout.

Reply via email to